Asianet Suvarna News Asianet Suvarna News

ಕೊರೋನಾ ಗೆದ್ದ ರಾಜ್ಯದ ಮೊದಲ ಶತಾಯುಷಿ: ಮನೆ​ಯಲ್ಲೇ ಚಿಕಿ​ತ್ಸೆ ಪಡೆದು 100ರ ವೃದ್ಧೆ ಗುಣಮುಖ

ಕೊರೋನಾ ಮಹಾ​ಮಾ​ರಿಗೆ ಹಿರಿಯ ಜೀವ​ಗಳೇ ಹೆಚ್ಚಿನ ಸಂಖ್ಯೆ​ಯಲ್ಲಿ ಬಲಿ​ಯಾ​ಗು​ತ್ತಿ​ರುವ ಈ ಹೊತ್ತಿ​ನಲ್ಲಿ ಇಲ್ಲೊಬ್ಬ ಶತಾ​ಯುಷಿ ಮಹಿ​ಳೆ​ಯೊ​ಬ್ಬರು ಮನೆ​ಯಲ್ಲೇ ಚಿಕಿತ್ಸೆ ಪಡೆ​ದು ಸೋಂಕಿಗೆ ಸೆಡ್ಡು ಹೊಡೆದು ಗುಣ​ಮು​ಖ​ರಾ​ಗಿ​ದ್ದಾ​ರೆ. ಈ ಮೂಲಕ ಕೊರೋನಾ ಗೆದ್ದ ರಾಜ್ಯದ ಮೊದಲ ಶತಾ​ಯುಷಿ ಎನಿಸಿ​ಕೊಂಡಿ​ದ್ದಾ​ರೆ.

100 year old grandma recovers from covid19 in Ballari taking treatment at home
Author
Bangalore, First Published Jul 24, 2020, 7:21 AM IST

ಹೂವಿನಹಡಗಲಿ(ಜು.24): ಕೊರೋನಾ ಮಹಾ​ಮಾ​ರಿಗೆ ಹಿರಿಯ ಜೀವ​ಗಳೇ ಹೆಚ್ಚಿನ ಸಂಖ್ಯೆ​ಯಲ್ಲಿ ಬಲಿ​ಯಾ​ಗು​ತ್ತಿ​ರುವ ಈ ಹೊತ್ತಿ​ನಲ್ಲಿ ಇಲ್ಲೊಬ್ಬ ಶತಾ​ಯುಷಿ ಮಹಿ​ಳೆ​ಯೊ​ಬ್ಬರು ಮನೆ​ಯಲ್ಲೇ ಚಿಕಿತ್ಸೆ ಪಡೆ​ದು ಸೋಂಕಿಗೆ ಸೆಡ್ಡು ಹೊಡೆದು ಗುಣ​ಮು​ಖ​ರಾ​ಗಿ​ದ್ದಾ​ರೆ. ಈ ಮೂಲಕ ಕೊರೋನಾ ಗೆದ್ದ ರಾಜ್ಯದ ಮೊದಲ ಶತಾ​ಯುಷಿ ಎನಿಸಿ​ಕೊಂಡಿ​ದ್ದಾ​ರೆ.

ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ಪಟ್ಟಣದ ಹಾಲಮ್ಮ (100) ಕೊರೋನಾ ಗೆದ್ದು ಬಂದಿರುವ ಶತಾಯುಷಿ. ಸೋಂಕಿ​ನಿಂದ ಚೇತ​ರಿ​ಸಿ​ಕೊಂಡಿ​ರುವ ಈ ಹಿರಿ​ಯ​ಜ್ಜಿ ಸದ್ಯ ಮಾಮೂ​ಲಿ​ಯಂತಾ​ಗಿ​ದ್ದಾರೆ. ‘ನಾನು ಈ ಸೋಂಕಿಗೆ ಭಯ​ಪ​ಟ್ಟಿಲ್ಲ, ಇದು ಮಾರ​ಣಾಂತಿಕ ಕಾಯಿಲೆ ಅಲ್ಲ. ಯಾರೂ ಭಯ​ಪ​ಡ​ಬೇಡಿ’ ಎಂದು ಇತ​ರ​ರಿಗೆ ಧೈರ್ಯ​ವನ್ನೂ ಹೇಳಿ​ದ್ದಾ​ರೆ.

ಕೊರೋನಾ ಗೆದ್ದ 110 ವರ್ಷದ ವೃದ್ಧೆಯನ್ನು ಬಹಿಷ್ಕರಿದ ಗ್ರಾಮಸ್ಥರು

10 ದಿನ ಚಿಕಿ​ತ್ಸೆ: ಸ್ಟೇಟ್‌ ಬ್ಯಾಂಕ್‌ ಇಂಡಿ​ಯಾದಲ್ಲಿ ಉದ್ಯೋ​ಗಿ​ಯಾ​ಗಿ​ರು​ವ ಇವರ ಪುತ್ರನಿಗೆ ಜು.3 ರಂದು ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಳ್ಳಾರಿ ಕೋವಿಡ್‌ ಆಸ್ಪತ್ರೆಗೆ ದಾಖ​ಲಿ​ಸ​ಲಾ​ಗಿತ್ತು. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ತಾಯಿ ಹಾಲಮ್ಮ, ಪತ್ನಿ ಮತ್ತು ಮಗನನ್ನು ಮನೆಯಲ್ಲೇ ಹೋಂ ಕ್ವಾರಂಟೈನ್‌ ಮಾಡಲಾಗಿತ್ತು. ಹಾಲಮ್ಮ ಸೇರಿ ಮೂವ​ರಿಗೂ ಆಗಾಗ ಜ್ವರ, ತಲೆನೋವು ಮತ್ತು ವಾಂತಿ ಆಗುತ್ತಿತ್ತು. ಇದನ್ನು ಗಮನಿಸಿದ ಹಡಗಲಿ ಕೋವಿಡ್‌ ಆಸ್ಪತ್ರೆಯ ಸಿಬ್ಬಂದಿ ಜು.10ರಂದು ಇವರ ಗಂಟಲು ದ್ರವ ಪಡೆ​ದು ಪರೀಕ್ಷೆಗೆ ಕಳುಹಿಸಿದ್ದರು. ಜು.16ರಂದು ಎಲ್ಲ​ರಿ​ಗೂ ಕೊರೋನಾ ದೃಢಪಟ್ಟಿತ್ತು.

99 ವರ್ಷದ ಮಹಿಳಾ ಕೊರೋನಾ ರೋಗಿ ಚೇತರಿಕೆ!

ಮನೆ​ಯಲ್ಲೇ ಚಿಕಿ​ತ್ಸೆ: ಹಾಲಮ್ಮ ಮತ್ತು ಕುಟುಂಬದ ಉಳಿದಿಬ್ಬರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಹಡಗಲಿ ಕೋವಿಡ್‌ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ನಿತ್ಯ ಇವರ ಮನೆಗೆ ಭೇಟಿ ನೀಡಿ 10 ದಿನ ಚಿಕಿತ್ಸೆ ನೀಡಿದ್ದಾರೆ. ಎಲ್ಲರೂ ಚಿಕಿತ್ಸೆ ಸ್ಪಂದಿಸುವ ಜತೆಗೆ ಸೋಂಕಿ​ನಿಂದ ಜು.23ರಂದು ಮುಕ್ತವಾಗಿದ್ದಾರೆ. ಇತ್ತ ಅಜ್ಜಿಯ ಮಗ ಕೂಡಾ ಆಸ್ಪತ್ರೆಯಿಂದ ಗುರುವಾರ ಬಿಡುಗಡೆಯಾಗಿದ್ದಾರೆ.

ವಿಜಯಪುರ: ಡೆಡ್ಲಿ ಕೊರೋನಾದಿಂದ ಹೋರಾಡಿ ಗೆದ್ದ 90 ವರ್ಷ ಮೀರಿದ ವೃದ್ಧೆಯರು..!

ಮೊದಲ ಶತಾ​ಯು​ಷಿ: ಬೆಂಗಳೂರಿನ ಕುಮಾ​ರ​ಸ್ವಾಮಿ ಲೇಔಟ್‌ ನಿವಾ​ಸಿ​ಯಾ​ಗಿ​ರುವ 99 ವರ್ಷದ ಅಜ್ಜಿ ಕೂಡ ಕೊರೋನಾ ಸೋಂಕಿನಿಂದ ಇತ್ತೀ​ಚೆ​ಗೆ ಗುಣ​ಮು​ಖ​ರಾಗಿದ್ದರು. ಇಷ್ಟೇ ಅಲ್ಲದೆ, ಚಿತ್ರದುರ್ಗದಲ್ಲಿ 96 ವರ್ಷದ ಅಜ್ಜಿ, ಬಳ್ಳಾರಿ ಕೋವಿಡ್‌ ಆಸ್ಪತ್ರೆಯಲ್ಲಿ 93 ವರ್ಷದ ವೃದ್ಧೆಯೊಬ್ಬರು ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಆಗಿದ್ದಾ​ರೆ. ಮುಂಬೈ​ನಲ್ಲಿ 101 ವರ್ಷದ ಹಿರಿ​ಯಜ್ಜ ಅರ್ಜುನ ನರಿಂಗ್ರೇ​ಕ​ರ್‌ ಅವರು ಕೋವಿಡ್‌ ಗೆದ್ದು ಬಂದು ಭರ​ವಸೆ ಮೂಡಿ​ಸಿ​ದ್ದ​ರು. ಈ ರೀತಿ ಹಿರಿಯ ಜೀವಿ​ಗಳು ಕೋವಿ​ಡ್‌ಗೆ ಸೆಡ್ಡು ಹೊಡೆದು ಗುಣ​ಮು​ಖ​ರಾ​ಗು​ತ್ತಿ​ರು​ವುದು ಆತಂಕದ ಈ ಹೊತ್ತಿ​ನಲ್ಲಿ ಹೊಸ ಭರ​ವಸೆ ಮೂಡಿ​ಸಿ​ದೆ.

ಕೊರೋನಾ ಗೆದ್ದ 107ರ ವೃದ್ಧೆ..! ಕೋವಿಡ್‌-19ನಿಂದ ಚೇತರಿಸಿದ ದೇಶದ ಅತಿ ಹಿರಿಯ ವ್ಯಕ್ತಿ

ಕೊರೋನಾ ಸೋಂಕಿತ ಅಜ್ಜಿ ಶತಾಯುಷಿಯಾಗಿದ್ದರೂ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದರು, ವೈದ್ಯರ ಸಲಹೆಯಂತೆ ಎಲ್ಲ ನಿಯಮಗಳ ಪಾಲನೆ ಮಾಡುತ್ತಿದ್ದರು. ಮನೆ​‌ ಚಿಕಿತ್ಸೆ ಪಡೆ​ಯು​ತ್ತಿ​ದ್ದರೂ ಸೋಂಕಿನ ಕುರಿತು ಅವ​ರಿಗೆ ಯಾವುದೇ ಭಯ ಇರ​ಲಿ​ಲ್ಲ ಎಂದು ಕೋವಿಡ್‌ ಆಸ್ಪತ್ರೆ ಹೂವಿನಹಡಗಲಿ ಆರ್‌.ಬಿ.ಎಸ್‌.ಕೆ. ವೈದ್ಯ ಡಾ.ಗೀತಾ ತಿಳಿಸಿದ್ದಾರೆ.

ಮಾರಣಾಂತಿಕ ಕಾಯಿಲೆ ಅಲ್ಲ

ಕೊರೋನಾ ಬಂದಿದೆ ಎಂದು ನಾನು ಭಯ ಪಟ್ಟಿಲ್ಲ. ಇದೊಂದು ಮಾರಣಾಂತಿಕ ಕಾಯಿಲೆ ಅಲ್ಲ. ನಿತ್ಯ ಅನ್ನ, ಸಾಂಬಾರು, ಗಂಜಿ ಹಾಗೂ ಸೇಬು ಹಣ್ಣು ನಮ್ಮ ಆಹಾರವಾಗಿತ್ತು. ಜತೆಗೆ ವೈದ್ಯರು ನೀಡುವ ಮಾತ್ರೆ ಮತ್ತು ಲಸಿಕೆಗೆ ಸ್ಪಂದಿಸಿದ್ದರಿಂದ ನಾನು ಕೊರೋನಾ ಮುಕ್ತಳಾಗಿದ್ದೇನೆ ಎಂದು ಗುಣಮುಖರಾದ ವೃದ್ಧೆ ಹಾಲಮ್ಮ ತಿಳಿಸಿದ್ದಾರೆ.

Follow Us:
Download App:
  • android
  • ios