ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್’ನಲ್ಲಿ ಟೀಂ ಇಂಡಿಯಾ ಮೂರನೇ ದಿನವೂ ಬಿಗಿ ಹಿಡಿತ ಸಾಧಿಸಿದೆ. ಸಿಡ್ನಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್’ನ ಮೂರನೇ ದಿನದಂತ್ಯಕ್ಕೆ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 236 ರನ್ ಬಾರಿಸಿದ್ದು, ಇನ್ನೂ 386 ರನ್’ಗಳ ಹಿನ್ನಡೆಯಲ್ಲಿದೆ.

ಸಿಡ್ನಿ[ಜ.05]: ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್’ನಲ್ಲಿ ಟೀಂ ಇಂಡಿಯಾ ಮೂರನೇ ದಿನವೂ ಬಿಗಿ ಹಿಡಿತ ಸಾಧಿಸಿದೆ. ಸಿಡ್ನಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್’ನ ಮೂರನೇ ದಿನದಂತ್ಯಕ್ಕೆ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 236 ರನ್ ಬಾರಿಸಿದ್ದು, ಇನ್ನೂ 386 ರನ್’ಗಳ ಹಿನ್ನಡೆಯಲ್ಲಿದೆ.

ಸಿಡ್ನಿ ಟೆಸ್ಟ್: ಸೋಲಿನ ಸುಳಿಗೆ ಸಿಲುಕಿದ ಆಸ್ಟ್ರೇಲಿಯಾಗೆ ಮಳೆ ಆಸರೆ!

ಒಂದು ಕಾಲದಲ್ಲಿ ಜಗತ್ತಿನ ಯಾವ ಮೂಲೆಯಲ್ಲಿ ಕ್ರಿಕೆಟ್ ಟೂರ್ನಿ ನಡೆದರೂ ಚಾಂಪಿಯನ್ ಆಗಿ ಹೊರಹೊಮ್ಮುತ್ತಿದ್ದ ಕಾಂಗರೂಗಳ ಪಡೆ ಇದೀಗ ತವರಿನಲ್ಲೂ ಗೆಲ್ಲಲೂ ತಡಕಾಡುತ್ತಿದೆ. ಏಕದಿನ ಕ್ರಿಕೆಟ್’ನಲ್ಲಿ 5 ಬಾರಿ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿರುವ ಆಸಿಸ್ ಇದೀಗ ಮೊದಲ ಬಾರಿಗೆ ತನ್ನ ನೆಲದಲ್ಲೇ ಭಾರತ ಎದುರು ಸರಣಿ ಸೋಲಿನತ್ತ ಮುಖ ಮಾಡಿದೆ.

ಧೋನಿಗಿಂತ ಹೆಚ್ಚು ಸೆಂಚುರಿ ಸಿಡಿಸಲಿದ್ದಾರೆ ಪಂತ್: ಪಾಂಟಿಂಗ್ ಭವಿಷ್ಯ!

ಮೂರನೇ ದಿನದಂತ್ಯದ ವೇಳೆಗೆ ಪೀಟರ್ ಹ್ಯಾಂಡ್ಸ್’ಕಂಬ್ 28 ಹಾಗೂ ಪ್ಯಾಟ್ ಕಮ್ಮಿನ್ಸ್ 25 ರನ್ ಬಾರಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕೊನೆಯ 15 ಓವರ್’ಗಳ ಆಟವನ್ನು ಮಳೆ ಬಲಿಪಡೆದಿದ್ದರಿಂದ ಆಸಿಸ್ ಆಲೌಟ್ ಭೀತಿಯಿಂದ ಪಾರಾಯಿತು. ಆಸ್ಟ್ರೇಲಿಯಾದ ಪ್ರತಿಭಾನ್ವಿತ ಬ್ಯಾಟ್ಸ್’ಮನ್ ಶಾನ್ ಮಾರ್ಷ್ ಸರಣಿಯುದ್ಧಕ್ಕೂ ಪದೇ-ಪದೇ ಫೇಲ್ ಆಗುತ್ತಿದ್ದು, ಇನ್ನೊಂದು ಅವಕಾಶ ಸಿಗಲಿ ಎಂದು ದೇವರ ಮೊರೆ ಹೋಗಿದ್ದಾರೆ ಅಭಿಮಾನಿಯೊಬ್ಬ ಕಾಲೆಳೆದಿದ್ದಾನೆ. 

ಆಸಿಸ್‌ನಲ್ಲಿ ಅಬ್ಬರಿಸುತ್ತಿರುವ ಪೂಜಾರಗೆ ಬಿಸಿಸಿಐನಿಂದ ಬಂಪರ್ ಗಿಫ್ಟ್

ಮೂರನೇ ದಿನದಾಟ ಕಂಡ ಟ್ವಿಟರಿಗರು ಏನಂದ್ರು ಅಂತ ನೀವೇ ಒಮ್ಮೆ ನೋಡಿಬಿಡಿ...

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…