ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ‘ತೌಕ್ಟೆ’ ಚಂಡಮಾರುತದಿಂದ ರಾಜ್ಯದ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
state May 16, 2021, 10:11 AM IST
ಕರಾವಳಿಗೆ ಶನಿವಾರ ಅಪ್ಪಳಿಸಿದ ತೌಕ್ಟೆ ಚಂಡಮಾರುತದ ಅಟ್ಟಹಾಸಕ್ಕೆ ಮಂಗಳೂರಿನ ಅರಬ್ಬಿ ಸಮುದ್ರದಲ್ಲಿ ಮೂರು ಪ್ರತ್ಯೇಕ ದುರಂತ ಸಂಭವಿಸಿದ್ದು ಅದರಲ್ಲಿದ್ದ 8 ಮಂದಿಯಲ್ಲಿ ಒಬ್ಬರು ಮೃತಪಟ್ಟು ಐವರು ನಾಪತ್ತೆಯಾಗಿದ್ದಾರೆ. ಪವಾಡ ಸದೃಶ್ಯವೆಂಬಂತೆ ಲೈಫ್ ಜಾಕೆಟ್ ಧರಿಸಿದ್ದ ಇಬ್ಬರು 50 ಕಿ.ಮೀ. ದೂರದ ಉಡುಪಿ ಬಳಿ ಸುರಕ್ಷಿತವಾಗಿ ದಡ ಸೇರಿದ್ದಾರೆ. ಪಶ್ಚಿಮಬಂಗಾಳದ ಮೊಮಿರುಲ್ ಮುಲ್ಲಾ( 34), ಕರೀಮುಲ್ಲಾ ಶೇಕ್ (24) ಬದುಕಿ ಬಂದವರು.
Karnataka Districts May 16, 2021, 9:30 AM IST
ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಸರ್ಕಾರ ಸೆಮಿ ಲಾಕ್ಡೌನ್ ಜಾರಿಗೊಳಿಸಿ ಇಷ್ಟು ದಿನಗಳಾದರೂ ರಸ್ತೆಗಳಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಗಿತ್ತು. ಆದರೆ ತೌಕ್ಟೆ ಚಂಡಮಾರುತ ಶನಿವಾರ ಚಿತ್ರಣವನ್ನೇ ಬದಲಿಸಿದ್ದರಿಂದ ರಾಜ್ಯದ ಏಳೆಂಟು ಜಿಲ್ಲೆಗಳಲ್ಲಿ ಜನ ರಸ್ತೆಗಿಳಿಯಲು ಮನಸ್ಸನ್ನೇ ಮಾಡಲಿಲ್ಲ. ಇನ್ನುಳಿದಂತೆ ಬಹುತೇಕ ಜಿಲ್ಲೆಗಳಲ್ಲೂ ಅಗತ್ಯ ವಸ್ತುಗಳನ್ನು ಖರೀದಿಸಿ 10 ಗಂಟೆ ವೇಳೆ ಮನೆ ಸೇರಿಕೊಂಡಿದ್ದರಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಜನ ಸಂಚಾರ, ವಾಹನ ಸಂಚಾರ ಬಹುತೇಕ ವಿರಳವಾಗಿತ್ತು.
state May 16, 2021, 7:39 AM IST
ಕೊರೋನಾ ವೈರಸ್ ಹೊಡೆತಕ್ಕೆ ಭಾರತ ನಲುಗಿದೆ. ಪರಿಣಾಮ ಬಹುತೇಕ ರಾಜ್ಯಗಳಲ್ಲಿ ಲಾಕ್ಡೌನ್ ಜಾರಿಯಾಗಿದೆ. ಇದು ಕೈಗಾರಿಕೆ, ಆಟೋಮೊಬೈಲ್, ಕೃಷಿ, ಶಿಕ್ಷಣ, ಉದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳ ವ್ಯವಹಾರಗಳು ಸ್ಥಗಿತಗೊಂಡಿದೆ. ಕಳೆದ ವರ್ಷದ ಕೊರೋನಾ ಹೊಡೆತಿಂದ ಚೇತರಿಸಿಕೊಳ್ಳೋ ಮುನ್ನವೇ ಇದೀಗ ಮತ್ತೊಂದು ಹಿನ್ನಡೆ ಅನುಭವಿಸಿದೆ. ಪರಿಣಾಮ ಭಾರತದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಕರ್ನಾಟಕದಲ್ಲಿ ಕೊರೋನಾ, ತೌಕ್ಟೆ ಚಂಡಮಾರುತ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ಇಲ್ಲಿದೆ ನೋಡಿ
India May 15, 2021, 11:09 PM IST
* ಕರ್ನಾಟಕದ ಕೆಲ ಭಾಗಗಳಿಗೂ ಅಪ್ಪಳಿಸಿದ ತೌಕ್ಟೆ ಚಂಡಮಾರುತ
* ಈಗಾಗಲೇ ಹವಾಮಾನ ಇಲಾಖೆಯಿಂದ ಎಚ್ಚರಿಕೆ
*ರೈಲ್ವೇ ಸಂಚಾರದ ಮೇಲೂ ತೌಕ್ಟೆ ಚಂಡಮಾರುತ ಪರಿಣಾಮ
state May 15, 2021, 9:51 PM IST
ತೌಕ್ಟೆ ಚಂಡಮಾರುತದ ಪರಿಣಾಮ ಮಂಗಳೂರು ತಲುಪಿದೆ. ಉಡುಪಿಯಲ್ಲೂ ನಿರಂತರವಾಗಿ ತುಂತುರು ಮಳೆಯಾಗುತ್ತಿದೆ. ಈ ಸಂದರ್ಭ ಮೀನುಗಾರರು ಕಡಲಿಗಿಳಿಯದಂತೆ ಎಚ್ಚರ ನೀಡಲಾಗಿದೆ.
Karnataka Districts May 15, 2021, 5:13 PM IST
India May 15, 2021, 4:57 PM IST
* ಕರ್ನಾಟಕ, 4 ರಾಜ್ಯಕ್ಕೆ ಇಂದು ತೌಕ್ಟೆಸೈಕ್ಲೋನ್
* ರಾಜ್ಯದ ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ
* ಗಂಟೆಗೆ 175 ಕಿ.ಮೀ. ವೇಗದಲ್ಲಿ ಗಾಳಿಯಬ್ಬರ
India May 15, 2021, 7:41 AM IST
ಕೊರೋನಾ ಅಬ್ಬರದ ನಡುವೆ ಚಂಡಮಾರುತದ ಆರ್ಭಟ ಶುರುವಾಗಿದೆ. . ಈ ಚಂಡಮಾರುತಕ್ಕೆ ತೌಕ್ತೇ ಎಂದು ಹೆಸರಿಡಲಾಗಿದ್ದು, ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ. ಉಡುಪಿ ಸಮುದ್ರ ತೀರದಲ್ಲಿ ಎಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ತೌಕ್ತೇ ಚಂಡಮಾರುತದ ಹಿನ್ನೆಲೆಯಲ್ಲಿ ಕರ್ನಾಟಕ, ಕೇರಳ ಸೇರಿದಂತೆ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದುಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Karnataka Districts May 14, 2021, 9:25 PM IST
state May 13, 2021, 12:25 PM IST