ವಿಶ್ವಾದ್ಯಂತ ಲಾಕ್ಡೌನ್ ವೇಳೆ ಅನೇಕ ರೀತಿಯ ಅಪರಾಧ ಪ್ರಕರಣಗಳು ಸದ್ದು ಮಾಡುತ್ತಿವೆ. ಜನರು ಮನೆಯಲ್ಲೇ ಉಳಿದಿರುವುದರಿಂದ ಅನೇಕ ರೀತಿಯ ಹಿಂಸಾತ್ಮಕ ಘಟನೆಗಳು ಬೆಳಕಿಗೆ ಬರುತ್ತಿವೆ. ಹೀಗಿರುವಾಗ ಕ್ಯಾಲಿಫೋರ್ನಿಯಾದಲ್ಲಿ ಬೆಳಕಿಗೆ ಬಂದ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಇಲ್ಲಿ ಮನೆಯೊಂದರಲ್ಲಿ ತೊಂಭತ್ತು ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ದೇಹದ ಅನೇಕ ಭಾಗಗಳು ಹಾಗೂ ಮಾಂಸ ನಾಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಮಹಿಳೆಯನ್ನು ಕೊಂದು ಇದನ್ನು ಬೇಯಿಸಿ ತಿಂದಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಜನರಲ್ಲಿ ಆತಂಕ ಮನೆ ಮಾಡಿದೆ.
International Jun 3, 2020, 6:28 PM IST
ಮೂರು ಹಂತದಲ್ಲಿ ಶಾಲೆ ಆರಂಭಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಜುಲೈ 01ರಿಂದ 4ರಿಂದ 7ನೇ ತರಗತಿ, ಜುಲೈ 15ರಿಂದ 1ರಿಂದ 3ನೇ ತರಗತಿ ಹಾಗೂ 8ರಿಂದ ಹತ್ತನೇ ತರಗತಿ. ಇನ್ನು ಜುಲೈ 20ರಿಂದ ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಸರ್ಕಾರ ಚಿಂತಿಸಿದೆ.
ಆದರೆ ಸರ್ಕಾರದ ಈ ನಿರ್ಧಾರಕ್ಕೆ ಪೋಷಕರಿಂದ ಈಗಾಗಲೇ ವಿರೋಧಗಳು ವ್ಯಕ್ತವಾಗಿವೆ. ಮಕ್ಕಳ ಆರೋಗ್ಯದ ಕಾಳಜಿಯ ಕುರಿತಂತೆ ಪೋಷಕರು ಸುವರ್ಣ ನ್ಯೂಸ್ನಲ್ಲಿ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
state Jun 3, 2020, 4:38 PM IST
ಬೆಂಗಳೂರು(ಜೂ.03): ಕೊರೋನಾ ವೈರಸ್ ಹಾವಳಿಯಿಂದ ವಿಶ್ವಾದ್ಯಂತ ಜನರ ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಜನರ ರಕ್ಷಣೆಗೆ ಸರ್ಕಾರಗ ಇನ್ನಿಲ್ಲದ ಕಸರತ್ತನ್ನು ಮಾಡುತ್ತಿವೆ. ಅದರೂ ಕೂಡ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಕೋವಿಡ್ ರಕ್ಷಣೆಗೆ ಸರ್ಕಾರದ ಜೊತೆಗೆ ಪ್ರತಿಪಕ್ಷಗಳೂ ಕೂಡ ಕೈಜೋಡಿಸಬೇಕು.ಈ ನಿಟ್ಟಿನಲ್ಲಿ ಪ್ರತಿಪಕ್ಷ ಜೆಡಿಎಸ್ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸಾಥ್ ನೀಡಿದ್ದಾರೆ.
Karnataka Districts Jun 3, 2020, 2:35 PM IST
ಇಂದು ಬಾಲಿವುಡ್ನ ಶೆಹನ್ಶಾ, ಸ್ಟಾರ್ಗಳ ಸ್ಟಾರ್ ಅಮಿತಾಭ್ ಬಚ್ಚನ್ ಮತ್ತ ಜಯಾ ಬಚ್ಚನ್ ದಾಂಪತ್ಯಕ್ಕೆ ಭರ್ತಿ ೪೭ ವರ್ಷ. ೧೯೭೩ರ ಇದೇ ದಿನ ಈ ಯುವಜೋಡಿ ದಾಂಪತ್ಯಕ್ಕೆ ಹೊಸ್ತಿಲು ದಾಟಿ ಅಡಿಯಿಟ್ಟಿತ್ತು. ಈ ಜೋಡಿಯ ಮದುವೆಯ ಕತೆಯನ್ನು ಸ್ವತಃ ಅಮಿತಾಭ್ ಬಚ್ಚನ್ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಇಂದು ಬೆಳಗ್ಗೆಯೇ ಹಂಚಿಕೊಂಡಿದ್ದಾರೆ.
Cine World Jun 3, 2020, 2:34 PM IST
ಕೊರೋನಾ ಸೃಷ್ಟಿಸಿದ ಆತಂಕ, ಅಭದ್ರತೆಯಿಂದ ಕಂಗಾಲಾಗಿರುವ ರಾಜ್ಯದ ವಲಸಿಗರ ನೆರವಿಗೆ ಸೆಲ್ಕೋ ಫೌಂಡೇಶನ್ ಮುಂದಾಗಿದೆ.
state Jun 3, 2020, 2:06 PM IST
ಮೊಬೈಲ್ ಕಂಪನಿಗಳನ್ನು ಸೆಳೆಯಲು 50 ಸಾವಿರ ಕೋಟಿ ರು. ಪ್ರೋತ್ಸಾಹ| ಈ ಯೋಜನೆಗೆ ಸರ್ಕಾರ ಮಂಗಳವಾರ ಅರ್ಜಿ ಆಹ್ವಾನ| ಪ್ರಸ್ತುತ ಭಾರತ ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ತಯಾರಿಕಾ ದೇಶ
BUSINESS Jun 3, 2020, 1:53 PM IST
ಮಾಜಿ ವಿಸ್ವಸುಂದರಿ ಸುಶ್ಮಿತಾ ಸೇನ್ ಲಾಕ್ಡೌನ್ ಸಮಯದಲ್ಲಿ ಏನ್ಮಾಡ್ತಿದ್ದಾರೆ ನೋಡಿ.. ! ಬಾಯ್ಫ್ರೆಂಡ್ ಜೊತೆ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ. ವರ್ಕೌಟ್ ಮಾಡುತ್ತಿದ್ದಾರೆ. ಈ ಜೋಡಿ ಒಟ್ಟಿಗೆ ರೊಮ್ಯಾಂಟಿಕ್ ಆಗಿ ವರ್ಕೌಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
Cine World Jun 3, 2020, 1:18 PM IST
ಬೆಂಗಳೂರು(ಜೂ.03): ಮಾರಕ ಕೊರೋನಾ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್ಡೌನ್ ಜಾರಿ ಮಾಡಿತ್ತು. ಈ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಚಿಕನ್, ಮಟನ್, ಫಿಶ್, ಪಾನಿಪುರಿ ಅಂಗಡಿ ನಡೆಸುತ್ತಿದ್ದವರ ನೆರವಿಗೆ ಹುಚ್ಚ ವೆಂಕಟ್ ಧಾವಿಸಿದ್ದಾರೆ. ದುಡಿಯಲು ದುಡಿಮೆಯಿಲ್ಲದೆ ಕೈಯಲ್ಲಿ ದುಡ್ಡಿಲ್ಲದೆ ಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡುವ ಮೂಲಕ ಹುಚ್ಚ ವೆಂಕಟ್ ಮಾನವೀಯತೆ ಮೆರೆದಿದ್ದಾರೆ.
state Jun 3, 2020, 12:59 PM IST
ಈ ಲಾಕ್ಡೌನ್ ವ್ಯವಸ್ಥೆಯಲ್ಲಿ ಆನ್ಲೈನ್ ಹಾಗೂ ಪ್ರೈವೇಟ್ ವೆಡ್ಡಿಂಗ್ಗಳು ಟ್ರೆಂಡ್ ಆಗುತ್ತಿವೆ. ಇದನ್ನು ಈ ಸಂದರ್ಭ ನಮಗೆ ಕಲಿಸಿದ ಪಾಠವಾಗಿ ತೆಗೆದುಕೊಂಡು, ಕೊರೋನಾ ಲಾಕ್ಡೌನ್ ಮುಗಿದ ಬಳಿಕವೂ ಈ ಸರಳ ವಿವಾಹಗಳನ್ನು ಮುಂದುವರಿಸಿಕೊಂಡು ಹೋಗುವ ಪರಿಪಾಠ ಬೆಳೆಸಿಕೊಳ್ಳಬೇಕು.
relationship Jun 3, 2020, 12:56 PM IST
ಕಣ್ಸನ್ನೆ ಹುಡುಗಿ, ಮಲಯಾಳಿ ಕುಟ್ಟಿ ಪ್ರಿಯಾ ವಾರಿಯರ್ ರಾತ್ರಿ ಬೆಳಗಾಗುವುದರೊಳಗೆ ಸಿಕ್ಕಾಪಟ್ಟೆ ಫೇಮಸ್ ಆದ ಚೆಲುವೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ ಬೆಡಗಿ. ಲಾಕ್ಡೌನ್ ಸಮಯದಲ್ಲಿ ಇದ್ದಕ್ಕಿದ್ದಂತೆ ಸೋಷಿಯಲ್ ಮೀಡಿಯಾದಿಂದ ಗಾಯಬ್ ಆಗಿದ್ದರು.
Cine World Jun 3, 2020, 12:55 PM IST
ಬಿ. ಎಸ್. ಯಡಿಯೂರಪ್ಪ ಹೋಂ ಕ್ವಾರೆಂಟೈನ್ ಉಲ್ಲಂಘಿಸಿದವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ. 14 ದಿನಗಳ ಹೋಂ ಕ್ವಾರೆಂಟೈನ್ ಉಲ್ಲಂಘಿಸಿದವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.
state Jun 3, 2020, 12:19 PM IST
ಪ್ರಿನ್ ಮಹೇಶ್ ಬಾಬು ಕನ್ನಡದಲ್ಲೂ ಅಪಾರ ಪ್ರಮಾಣದ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ಸ್ಟಾಗ್ರಾಮ್ ಆಕ್ಟೀವ್ ಅಗಿರುವ ಪ್ರಿನ್ಸ್ ಲಾಕ್ಡೌನ್ ಸಮಯದಲ್ಲಿ ಅಭಿಮಾನಿಗಳ ಜೊತೆ ಇಂಟರ್ಯಾಕ್ಷನ್ ನಡೆಸಿದ್ದಾರೆ. ಆಗ ಅಭಿಮಾನಿಯೊಬ್ಬ, 'ನಿಮ್ಮ ಫೇವರೇಟ್ ನಟಿ ಸಮಂತಾನಾ? ರಶ್ಮಿಕಾನಾ? ಎಂದು ಕೇಳಿದ್ದಾರೆ. ಆಗ ಪ್ರಿನ್ಸ್ ಕೊಟ್ಟಿರುವ ಉತ್ತರ ಸಖತ್ತಾಗಿದೆ. ಸಮಂತಾ, ರಶ್ಮಿಕಾ ಇಬ್ಬರೂ ಚಿತ್ರರಂಗದಲ್ಲಿ ಹೆಸರು ಮಾಡಿದವರು. ಒಳ್ಳೊಳ್ಳೆ ಸಿನಿಮಾಗಳನ್ನು ಕೊಟ್ಟಿದ್ದಾರೆ. ಹಾಗಾದರೆ ಪ್ರಿನ್ಸ್ ಫೇವರೇಟ್ ನಟಿ ಯಾರು? ಅವರೇ ಹೇಳ್ತಾರೆ ನೋಡಿ..!
Cine World Jun 3, 2020, 11:58 AM IST
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ನೇತೃತ್ವದ ನಡೆದ ಸಭೆಯ ಬಳಿಕ ಶಿಕ್ಷಕರು ಸಿದ್ದರಾಗುವಂತೆ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ. ಇದರ ಜೊತೆಗೆ ಶಾಲೆ ತೆರೆಯುವ ಮುನ್ನ SDMC ಸಭೆ ಕರೆದು ಶಾಲೆ ತೆರೆಯುವ ಬಗ್ಗೆ ಪೋಷಕರೊಂದಿಗೆ ಚರ್ಚಿಸಿ ಎಂದು ಸೂಚನೆ ನೀಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
state Jun 3, 2020, 11:37 AM IST
ಆನ್ಲೈನ್ ತರಗತಿಗೆ ಹಾಜರಾಗಲು ಸ್ಮಾರ್ಟ್ ಫೋನ್ ಇಲ್ಲ| ಮನೆಯಲ್ಲಿರುವ ಟಿವಿ ಕೂಡ ಕೆಟ್ಟು ಹೋಗಿದೆ| ದಲಿತ ಕುಟುಂಬದ 9ನೇ ತರಗತಿ ವಿದ್ಯಾರ್ಥಿನಿ ಬೆಂಕಿ ಹಚ್ಚಿ ಆತ್ಮಹತ್ಯೆ
India Jun 3, 2020, 11:34 AM IST
ನೃತ್ಯಂಟೈನ್ನಿಂದ ಸ್ಪೂರ್ತಿ ಪಡೆದ ಆಳ್ವಾಸ್ ಧೀಂಕಿಟ ಯಕ್ಷಗಾನ ತಂಡ ಯಕ್ಷಂಟೈನ್ನ ಮೂಲಕ ಪರದೆಯ ಮೇಲೆ ಬಂದಿದ್ದಾರೆ. ಯಕ್ಷ + ಕ್ವಾರೆಂಟೈನ್, ‘ಯಕ್ಷಂಟೈನ್’ ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿ ಆದಿತ್ಯ ಅಂಬಲಪಾಡಿ ಹಾಗೂ ಪ್ರಥ್ವೀಶ ಪರ್ಕಳ ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದಿದೆ. ಇದು ಒಟ್ಟು ನಾಲ್ಕು ಆವೃತ್ತಿಯಲ್ಲಿ ಮೂಡಿಬರಲಿದೆ.
Karnataka Districts Jun 3, 2020, 11:28 AM IST