Asianet Suvarna News Asianet Suvarna News

ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು?ಜಿಟಿ ದೇವೇಗೌಡ ಭಾಷಣಕ್ಕೆ ದಂಗಾದ ಬಿಜೆಪಿ-ಜೆಡಿಎಸ್!

ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಜಿಟಿ ದೇವೇಗೌಡ, ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡ ಜಿಟಿಡಿ, ಸಿದ್ದರಾಮಯ್ಯ ವಿರುದ್ಧ ಸಾಕ್ಷ್ಯ ನಾಶ ಆರೋಪ, ಕುಮಾರಸ್ವಾಮಿ ವಿರುದ್ಧ ದಾಖಲಾಯ್ತು ದೂರು ಸೇರಿದಂತೆ ಇಂದಿನ ಇಡೀ ದಿನದ ಪ್ರಮಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

First Published Oct 3, 2024, 11:17 PM IST | Last Updated Oct 3, 2024, 11:17 PM IST

ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಜೆಡಿಎಸ್ ನಾಯಕ ಜಿಟಿ ದೇವೇಗೌಡ ಮಾಡಿದ ಭಾಷಣ ಕಾಂಗ್ರೆಸ್ ನಾಯಕರಲ್ಲಿ ಹೊಸ ಹುರುಪು ತಂದಿದೆ. ಸಿದ್ದರಾಮಯ್ಯ ಯಾಕೆ ರಾಜೀನಾಮೆ ನೀಡಬೇಕು? FIR ಅಂದರೆ ರಾಜೀನಾಮೆ ನೀಡಬೇಕಾ? ಯಾವ ಕಾನೂನಿನಲ್ಲಿದೆ ಇದು ತೋರಿಸಿ ಎಂದು ಜಿಟಿ ದೇವೇಗೌಡ ಭಾಷಣ ಮಾಡಿದ್ದಾರೆ. ಈ ಮಾತಗಳು ಸಿದ್ದರಾಮಯ್ಯ ಆತ್ಮವಿಶ್ವಾಸ ಹೆಚ್ಚಿಸಿತ್ತು. ಇತ್ತ ಜೆಡಿಎಸ್ ಹಾಗೂ ಬಿಜೆಪಿ ನಾಯಕರಿಗೆ ಇರಿಸು ಮುರಿಸಾಗಿದೆ.