ಕೊರೋನಾ ಸಂಕಷ್ಟಉಂಟು ಮಾಡಿದ್ದ ಲಾಕ್ಡೌನ್ ಕಾರಣಕ್ಕೆ ಬಿಡುಗಡೆಯಾಗಿದ್ದ ಒಂದಿಷ್ಟುಚಿತ್ರಗಳನ್ನು ಚಿತ್ರಮಂದಿರದಿಂದ ವಾಪಸ್ಸು ತೆಗೆಸಲಾಗಿತ್ತು. ಹೀಗೆ ಲಾಕ್ಡೌನ್ಗೂ ಮೊದಲು ತೆರೆಕಂಡು, ಮೆಚ್ಚುಗೆ ಮಾತುಗಳನ್ನು ಗಳಿಸಿಕೊಂಡಿದ್ದ ಸಿನಿಮಾಗಳು ಲಾಕ್ಡೌನ್ ನಂತರ ಮರು ಬಿಡುಗಡೆಗೆ ಸಜ್ಜಾಗುತ್ತಿವೆ.
Sandalwood Jun 10, 2020, 4:03 PM IST
ಕೊರೋನಾ ಶುರುವಾದಾಗ ಅತಿ ಹೆಚ್ಚು ಸೋಂಕು ಹರಡುವ ಭಯ ಇದ್ದಿದ್ದು ಜನಸಾಂದ್ರತೆ ಜಾಸ್ತಿ ಇರುವ ಉತ್ತರ ಪ್ರದೇಶದಲ್ಲಿ. ಆದರೆ ಸೋಂಕು ಹರಡುವುದನ್ನು ತಡೆದು ಸಮರ್ಥವಾಗಿ ನಿಭಾಯಿಸಿದ್ದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಯೋಗಿ ಬಗ್ಗೆ ವಿರೋಧಿಗಳಿಂದ ಕೂಡ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಯೋಗಿ ಆದಿತ್ಯನಾಥ್ ಜೊತೆಗೆ ‘ಕನ್ನಡಪ್ರಭ’ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.
India Jun 10, 2020, 3:44 PM IST
ಕೊರೋನಾ ವೈರಸ್ ಹಾಗೂ ಲಾಕ್ಡೌನ್ ಕಾರಣ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ವೇತನ ಕಡಿತ, ವ್ಯಾಪಾರ-ವಹಿವಾಟು ಕುಂಠಿತ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿದೆ. ಇದರ ನಡುವೆ ಕಾರು ಮಾರಾಟ ಉತ್ತೇಜಿಸಲು ಬಹುತೇಕ ಎಲ್ಲಾ ಆಟೋಮೊಬೈಲ್ ಕಂಪನಿಗಳು ಸಾಲ ಸೌಲಭ್ಯ, ಇಎಂಐ ಸೇರಿದಂತೆ ಹಲವು ಆಫರ್ ಘೋಷಿಸುತ್ತಿದೆ. ಇದೀಗ ಹೊಂಡಾ ಕೇವಲ 999 ರೂಪಾಯಿ ಇಎಂಐ ಹಾಗೂ ಸುಲಭ ಸಾಲ ಆಫರ್ ನೀಡಿದೆ. ಈ ಕುರಿತ ವಿವರ ಇಲ್ಲಿದೆ.
Automobile Jun 10, 2020, 2:44 PM IST
ಇವರು ಚಿಕ್ಕ ವಯಸ್ಸಿನಲ್ಲಿಯೇ ಜನ ಸೇವೆಗೆ ಪಣತೊಟ್ಟ ಜನನಾಯಕ. ಇವರೆಂದರೆ ಇಡೀ ಊರಿಗೆ ಅಚ್ಚುಮೆಚ್ಚು. ಪ್ರೀತಿಯಿಂದ 'ಅಪ್ಪು' ಎನ್ನುತ್ತಾರೆ. ಇವರೇ ಕಲಬುರಗಿ ದಕ್ಷಿಣ ವಿಧಾನಸಭಾ ಮತ ಕ್ಷೇತ್ರದ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್.
state Jun 10, 2020, 1:20 PM IST
ಹೊನ್ನಾಳಿ ಕ್ಷೇತ್ರದ ಗ್ರಾಮಗಳಲ್ಲಿ ಶಾಸಕರು ಬಂದಿದ್ದಾರೆ. ಎಲ್ಲರೂ ಗ್ರಾಮದ ದೇವಸ್ಥಾನ ಬಳಿ ಬನ್ನಿ ಎಂಬುದಾಗಿ ಹೇಳಿ, ಜನರ ಗುಂಪು ಸೇರಿಸಿ, ಸಾಮಾನ್ಯ ಜ್ಞಾನವೇ ಇಲ್ಲದವರಂತೆ ವರ್ತಿಸುತ್ತಿರುವುದು ಬಿಜೆಪಿಯವರು. ಕೊರೋನಾ ಜಾಗೃತಿ ಮೂಡಿಸುವ ಬದಲಿಗೆ ಸಂಕಷ್ಟದ ಪರಿಸ್ಥಿತಿಯಲ್ಲೂ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಟೀಕಿಸಿದರು.
Karnataka Districts Jun 10, 2020, 11:33 AM IST
ವೀರಶೈವ ಪಂಚಪೀಠಗಳಲ್ಲಿ ಪ್ರಥಮ ಪೀಠವಾದ ರಂಭಾಪುರಿ ಪೀಠದಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಈ ಹಿಂದಿನಂತೆ ಎಲ್ಲ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ. ಶ್ರೀ ಪೀಠದ ಪುರೋಹಿತ ವರ್ಗದವರು ಪೀಠದ ಎಲ್ಲ ದೇವಾಲಯಗಳಲ್ಲೂ ಪೂಜಾ ವಿಧಿವಿಧಾನಗಳನ್ನು ಆರಂಭಿಸಿದರು.
Karnataka Districts Jun 10, 2020, 9:19 AM IST
ಕೊರೋನಾ ಲಾಕ್ ಡೌನ್ ನಿಂದಾಗಿ ಈ ವರ್ಷದ ಶೈಕ್ಷಣಿಕ ವರ್ಷದಲ್ಲಿ ಶಾಲಾರಂಭ ವಿಳಂಬವಾಗಲಿದ್ದು, ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಶಾಲಾ ಪಠ್ಯವನ್ನು ಕಡಿಮೆ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
Karnataka Districts Jun 10, 2020, 7:57 AM IST
ಕೊರೋನಾ ಲಾಕ್ಡೌನ್ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಅವಧಿಗಿಂತ ಮೊದಲೇ ಹೊಸ ಅಡಕೆಯ ಬೆಲೆ ಹೆಚ್ಚಿಸಲಾಗಿದೆ. ಬೆಳೆಗಾರರ ಹಿತದೃಷ್ಟಿಯಿಂದ ಅಡಕೆ ಮಾರುಕಟ್ಟೆಯಲ್ಲಿ ಸ್ಥಿರ ಧಾರಣೆಗೆ ಆದ್ಯತೆ ನೀಡಲಾಗುವುದು ಎಂದು ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದ್ದಾರೆ.
Karnataka Districts Jun 10, 2020, 7:45 AM IST
ದಕ್ಷಿಣ ಕನ್ನಡ, ಹಾಗೂ ಕೊಡಗು ಜಿಲ್ಲೆಗಳ ಪ್ರಮುಖ ದೇವಸ್ಥಾನಗಳಲ್ಲಿ ಲಾಕ್ಡೌನ್ ಸಡಿಲದ 2ನೇ ದಿನ ಮಂಗಳವಾರ ಭಕ್ತರ ದಟ್ಟಣೆ ತುಸು ಕಡಿಮೆಯಾಗಿದೆ. ಧರ್ಮಸ್ಥಳದಲ್ಲಿ ಮಂಗಳವಾರ ಸುಮಾರು ಆರು ಸಾವಿರ ಭಕ್ತರು ಮಂಗಳವಾರ ಪ್ರಸಾದ ಭೋಜನೆ ಸ್ವೀಕರಿಸಿದ್ದಾರೆ.
Karnataka Districts Jun 10, 2020, 7:18 AM IST
ಕೊರೊನಾ ಲಾಕ್ಡೌನ್ ಮುಗಿದು ಶಾಲೆಗಳನ್ನು ಪುನಾರಂಭಿಸುವ ಬಗ್ಗೆ ಚರ್ಚೆ ಶುರುವಾಗಿದೆ. ಕೊರೋನಾ ಪಾಸಿಟೀವ್ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲೆಗಳನ್ನು ಸದ್ಯದಲ್ಲೇ ಪ್ರಾರಂಭಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
state Jun 9, 2020, 4:23 PM IST
ಕೊರೋನಾ ವೈರಸ್, ಲಾಕ್ಡೌನ್ ಕಾರಣ ದಿಂದ ಭಾರತದ ಆಟೋಮೊಬೈಲ್ ಇಂಡಸ್ಟ್ರಿ ಸರಿಸುಮಾರು 2 ತಿಂಗಳು ಹೆಚ್ಚು ಕಾಲ ಸ್ಥಗಿತಗೊಂಡಿದ್ದು. ಇದೀಗ ಉತ್ಪಾದನೆ ಆರಂಭವಾಗಿದೆ. ಆದರೆ ಬೇಡಿಕೆ ಹೆಚ್ಚಾಗಿಲ್ಲ. ಚೇತರಿಕೆ ಕಾಣುವ ಭರವಸೆಯೊಂದಿಗೆ ಆಟೋಮೊಬೈಲ್ ಇಂಡಸ್ಟ್ರಿ ವಾಹನ ನಿರ್ಮಾಣ ಮಾಡುತ್ತಿದೆ. ಆದರೆ ಬೇಡಿಕೆ ಇದೇ ರೀತಿ ಇದ್ದರೆ ಉದ್ಯೋಗ ಕಡಿತಕ್ಕೆ ಮುಂದಾಗಲಿದೆ ಎಂದು ACMA ಎಚ್ಚರಿಕೆ ನೀಡಿದೆ.
Automobile Jun 9, 2020, 4:02 PM IST
'ಪಾರ್ಲೆ-ಜಿ' ಬಿಸ್ಕೆಟ್ ಅದೆಷ್ಟು ಮಾರಾಟವಾಗಿದೆ ಎಂದರೆ ಇದು ಕಳೆದ 82 ವರ್ಷದ ದಾಖಲೆಯನ್ನೇ ಮುರಿದಿದೆ. ಕೇವಲ ಐದು ರೂಪಾಯಿಗೆ ಸಿಗುವ ಪಾರ್ಲೆ-ಜಿ ಪ್ಯಾಕೆಟ್ ನೂರಾರು, ಸಾವಿರಾರು ಕಿ. ಮೀ ದೂರ ಕಾಲ್ನಡಿಗೆಯಲ್ಲೇ ಪ್ರಯಾಣಿಸಿದ ಕಾರ್ಮಿಕರ ಹಸಿವು ನೀಗಿಸಿದೆ.
India Jun 9, 2020, 3:35 PM IST
ಕೊರೊನಾ ಲಾಕ್ಡೌನ್ನಿಂದ ಕಳೆದ 75 ದಿನಗಳಿಂದ ಭಕ್ತರಿಗೆ ದರ್ಶನ ನೀಡದ ದೇವಾಲಯಗಳು ಜೂ. 08 ರಿಂದ ತೆರೆದಿವೆ. ದೇವರ ದರ್ಶನ ಭಾಗ್ಯ ನಮ್ಮದಾಗಲಿ ಅಂತ ಭಕ್ತರು ಆಗಮಿಸುತ್ತಿದ್ದಾರೆ. ಹಿಂದೂಗಳ ಪವಿತ್ರ ಶ್ರದ್ಧಾ ಕೇಂದ್ರವಾದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಚಾಮುಂಡಿ ಬೆಟ್ಟದಲ್ಲಿ ಮೊದಲ ದಿನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಭಕ್ತ ಸಮೂಹ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರೆ ಉಳಿದಂತೆ ಬಹುತೇಕ ದೇವಸ್ಥಾನಗಳು ಭಕ್ತರಿಲ್ಲದೇ ಭಣಗುಡುತ್ತಿತ್ತು.
state Jun 9, 2020, 3:27 PM IST
ಲಾಕ್ಡೌನ್ ಸಡಿಲಿಕೆ ಮಾಡಿದ ಕಾರಣ ಬಹುತೇಕ ಎಲ್ಲಾ ಕಚೇರಿಗಳು, ಉದ್ಯಮಗಳು ಆರಂಭಗೊಂಡಿದೆ. ಸುದೀರ್ಘ ದಿನಗಳ ಬಳಿಕ ತನ್ನ ಕಚೇರಿಗೆ BMW ಕಾರಿನ ಮೂಲಕ ಪ್ರಯಾಣ ಆರಂಭಿಸಿದ ಉದ್ಯಮಿ, ಕೊನೆಗೆ ಆಫೀಸ್ ತಲುಪಿದ್ದು ಎತ್ತಿನ ಗಾಡಿ ಮೂಲಕ. ಈ ರೋಚಕ ಸ್ಟೋರಿ ಇಲ್ಲಿದೆ.
Automobile Jun 9, 2020, 2:53 PM IST
ರಾಜ್ಯದಲ್ಲಿ ನಿನ್ನೆಯಿಂದ ಧಾರ್ಮಿಕ ಕೇಂದ್ರಗಳು ಓಪನ್ ಆಗಿವೆ. ಎರಡೂವರೆ ತಿಂಗಳ ಬಳಿಕ ದೇಗುಲಗಳಲ್ಲಿ ಗಂಟೆ ಶಬ್ಧ ಕೇಳಿಸತೊಡಗಿದೆ. 35 ಸಾವಿರ ಮುಜರಾಯಿ ದೇಗುಲಗಳು ಮತ್ತೆ ಓಪನ್ ಆಗಿವೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅನ್ನದಾಸೋಹ ಆರಂಭವಾಗಿದೆ. ದೇಗುಲ ಅಷ್ಟೇ ಅಲ್ಲ, ಚರ್ಚ್, ಮಸೀದಿಗಳಲ್ಲೂ ಪ್ರಾರ್ಥನೆ ಶುರುವಾಗಿದೆ. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮಲ್ಲೇಶ್ವರಂನ ಗಂಗಮ್ಮ ದೇವಾಲಯದಿಂದ ನಮ್ಮ ಪ್ರತಿನಿಧಿ ವರದಿ ನೀಡಿದ್ದಾರೆ. ಇಲ್ಲಿದೆ ನೋಡಿ..!
state Jun 9, 2020, 1:01 PM IST