ಕರ್ನಾಟಕಕ್ಕೆ ಕೊರೊನಾ ಕಾಲಿಟ್ಟು 100 ದಿನಗಳು ಪೂರೈಸಿವೆ. ಕರ್ನಾಟಕದಲ್ಲಿ ಇಲ್ಲಿಯವರೆಗೆ ನಾಲ್ಕೂವರೆ ಲಕ್ಷ ಟೆಸ್ಟ್ ಮಾಡಲಾಗಿದೆ. ರಾಜ್ಯದಲ್ಲಿ 7213 ಜನರಿಗೆ ಕೊರೊನಾ ಪಾಸಿಟೀವ್ ಬಂದಿದೆ. 4140 ಜನ ರೋಗಿಗಳು ಗುಣಮುಖರಾಗಿದ್ದಾರೆ. 100 ದಿನದಲ್ಲಿ 88 ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ 35 ಮಂದಿ ಸಾವನ್ನಪ್ಪಿದ್ದಾರೆ. ಕೋವಿಡ್ 19 ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!
state Jun 16, 2020, 12:56 PM IST
ಲಾಕ್ಡೌನ್ ನಿಯಮವನ್ನೂ ಮೀರಿ ಶಾಸಕ ಪಿ ಟಿ ಪರಮೇಶ್ವರ್ ನಾಯ್ಕ್ ಮಗನ ಅದ್ಧೂರಿ ಮದುವೆ ಮಾಡಲಾಗಿದ್ದು, ಈ ಆರೋಪದಡಿಯಲ್ಲಿ ಕೇಸ್ ದಾಖಲಾಗುವ ಸಾಧ್ಯತೆ ಇದೆ. ಪರಮೇಶ್ವರ್ ನಾಯ್ಕ್, ಪಿ ಟಿ ಭರತ್ ವಿರುದ್ಧ ಇಂದು ಎಫ್ಐಆರ್ ದಾಖಲಾಗುವ ಸಾಧ್ಯತೆ ಇದೆ. ನಿನ್ನೆ ಅರಸೀಕೆರೆ ಠಾಣೆಯಲ್ಲಿ ತಹಶೀಲ್ದಾರ್ ನಾಗವೇಣಿ ದೂರು ದಾಖಲಿಸಿಕೊಂಡಿದ್ದಾರೆ. ಶಾಸಕರಿಗೆ ನೊಟೀಸ್ ಜಾರಿಗೊಳಿಸುವಂತೆ ಡಿಸಿ ಆದೇಶ ನೀಡಿದ್ದಾರೆ. ಮಗ ಭರತ್ ಮದುವೆಗೆ ತಾಲ್ಲೂಕು ಆಡಳಿತದ ಅನುಮತಿ ಪಡೆದಿದ್ದರು. ಆದರೆ ಲಾಕ್ಡೌನ್ ನಿಯಮ ಮೀರಿ ಮದುವೆಯಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದಾರೆ.
state Jun 16, 2020, 12:36 PM IST
ಚೀನಾಕ್ಕೆ ಮತ್ತೆ ಕೊರೋನಾ ಭೀತಿ: ಸಮೂಹ ಹಂತದ ಪರೀಕ್ಷೆ ಶುರು| ಕ್ಸಿನ್ಫಾಡಿ ಮಾರುಕಟ್ಟೆಗೆ ಭೇಟಿ ನೀಡಿದ 29000 ಜನರರಿಗೆ ಪರೀಕ್ಷೆ
International Jun 16, 2020, 12:03 PM IST
ನಮೋ ಅನ್ಲಾಕ್ 2.0?| ಇಂದು, ನಾಳೆ ಸಿಎಂಗಳ ಜತೆ ಮೋದಿ ಸಂವಾದ| ಕೊರೋನಾ ನಿಯಂತ್ರಣ, ಲಾಕ್ಡೌನ್ ಸಡಿಲಿಕೆ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮಾತುಕತೆ| ನಾಳೆ ಸಭೆಯಲ್ಲಿ ಯಡಿಯೂರಪ್ಪ ಭಾಗಿ| ಏನು ನಿರ್ಧಾರ ಆಗುತ್ತೆ? ಭಾರೀ ಕುತೂಹಲ
India Jun 16, 2020, 10:32 AM IST
ಜೂನ್ 25ರಿಂದ ಆರಂಭವಾಗುವ ಎಸ್ಎಲ್ಎಲ್ಸಿ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 14,034 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಜಿಲ್ಲೆಯ 507 ವಿದ್ಯಾರ್ಥಿಗಳು ಬೇರೆ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅದೇ ರೀತಿ 82 ಬೇರೆ ಜಿಲ್ಲೆಯ ವಿದ್ಯಾರ್ಥಿಗಳು ನಮ್ಮ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
Karnataka Districts Jun 16, 2020, 8:35 AM IST
ಕೊರೋನಾ ಭೀತಿ ಹಿನ್ನೆಲ್ಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಸಿನಿಮಾ ಶೂಟಿಂಗ್ಗೆ ಇದೀಗ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಇದರಿಂದ ರಾಜ್ಯ ಸರ್ಕಾರದ ಮಹತ್ವದ ಅದೇಶವನ್ನು ಚಿತ್ರರಂಗ ಸ್ವಾಗತಿಸಿದೆ. ಈ ಮೂಲಕ ಸ್ಯಾಂಡಲ್ವುಡ್ನಲ್ಲಿ ಶೂಟಿಂಗ್ ಸಂಭ್ರಮ ಜೋರಾಗಿದೆ.
News Jun 15, 2020, 9:19 PM IST
ಕೊರೋನಾ ವೈರಸ್ ತಡೆಯಲು ಜನತಾ ಕರ್ಫ್ಯೂ, ಲಾಕ್ಡೌನ್, ಅನ್ಲಾಕ್ ಸೇರಿದಂತೆ ಬಹುತೇಕ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ವೈರಸ್ ದಿನದಿಂದ ದಿನಕ್ಕೆ ಹಬ್ಬುತ್ತಿದೆ. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹೊಸ್ ಪ್ಲಾನ್ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ಕೊರೋನಾ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ.
India Jun 15, 2020, 5:41 PM IST
ಚೆನ್ನೈ ನಲ್ಲಿ ಮತ್ತೆ ಲಾಕ್ ಡೌನ್| ತಮಿಳುನಾಡು ಸಿಎಂ ಘೋಷಣೆ| ಜೂನ್ 19 ರಿಂದ 30 ರ ತನಕ ಲಾಕ್ ಡೌನ್| ಗರಿಷ್ಠ ಷರತ್ತುಗಳು ವಿಧಿಸಿ ಲಾಕ್ ಡೌನ್
India Jun 15, 2020, 5:01 PM IST
ಲಾಕ್ಡೌನ್ ಬಗ್ಗೆ ಒಂದಷ್ಟು ಗೊಂದಲಗಳಿತ್ತು. ಹಾಗಂತೆ, ಹೀಗಂತೆ ಎಂಬ ಊಹಾಪೋಹಗಳು ಹರಿದಾಡುತ್ತಿತ್ತು. ಈ ಬಗ್ಗೆ ಕೊನೆಗೂ ಸಿಎಂ ಸ್ಪಷ್ಟನೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಜಾರಿ ಇಲ್ಲ. ವೀಕೆಂಡ್ ಕೂಡಾ ಲಾಕ್ಡೌನ್ ಇರುವುದಿಲ್ಲ ಎಂದು ಸಿಎಂ ಲಾಕ್ಡೌನ್ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಜೊತೆಗೆ ರಾಜ್ಯದಲ್ಲಿ ಮತ್ತೆ ಕರ್ಫ್ಯೂ ಕೂಡಾ ಜಾರಿ ಮಾಡುವ ಚಿಂತನೆ ಇಲ್ಲ. ಲಾಕ್ಡೌನ್ನ್ನು ಇನ್ನಷ್ಟು ಸಡಿಲಿಕೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ನಾಳೆ ಪ್ರಧಾನಿ ಮೋದಿ ಜೊತೆ ಸಂವಾದದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಿದ್ದೇವೆ.
state Jun 15, 2020, 5:01 PM IST
ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಸಡಿಲಿಸಲಾಗಿದ್ದ ಮೀನುಗಾರಿಕೆ ಅವಧಿ ಭಾನುವಾರಕ್ಕೆ ಕೊನೆಗೊಂಡಿದೆ. ಜೂ.15ರಿಂದ ಜುಲೈ 31ರ ವರೆಗೆ ಸಮುದ್ರ ಮೀನುಗಾರಿಕೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.
Karnataka Districts Jun 15, 2020, 4:18 PM IST
ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸುಮಾರು ಎರಡೂವರೆ ತಿಂಗಳುಗಳ ಕಾಲ ಮುಚ್ಚಲ್ಪಟ್ಟಿದ್ದ ಜಿಲ್ಲೆಯ ರೆಸಾರ್ಟ್, ರೆಸ್ಟೋರೆಂಟ್, ಲಾಡ್ಜ್ಗಳನ್ನು ತೆರೆಯಲು ಅನುಮತಿ ನೀಡಿ ಸರ್ಕಾರ ಕಳೆದವಾರವಷ್ಟೇ ಆದೇಶ ಹೊರಡಿಸಿತ್ತು. ಆದರೆ ಒಂದು ವಾರ ಕಳೆದರೂ ಜಿಲ್ಲೆಯಲ್ಲಿ ಶೇ.90 ರಷ್ಟುರೆಸಾರ್ಟ್ಗಳು ಆರಂಭವಾಗಿಲ್ಲ.
Karnataka Districts Jun 15, 2020, 3:45 PM IST
ಇದೇ ಜೂನ್ 16, 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ರಾಜ್ಯಗಳ ಸಿಎಂ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಎಸ್ ಯಡಿಯೂರಪ್ಪ ಅವರು ಕೋವಿಡ್ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಸುಮಾರು ಎರಡು ಗಂಟೆಗಳ ಕಾಲ ಸುದೀರ್ಘವಾಗಿ ಸಭೆ ನಡೆದಿದ್ದು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಾಂಶಸಗಳು ಈ ಕೆಳಗಿನಂತಿವೆ.
state Jun 15, 2020, 3:23 PM IST
ನವೆಂಬರ್ ಮಧ್ಯ ಭಾಗದಲ್ಲಿ ದೇಶದಲ್ಲಿ ಕೊರೊನಾ ವೈರಸ್ ತನ್ನ ಗರಿಷ್ಠ ಮಟ್ಟವನ್ನು ತಲುಪಲಿದೆ ಎಂದು ಕೇಂದ್ರ ಸರ್ಕಾರದ ಸಂಸ್ಥೆಯೊಂದು ರಚಿಸಿದ್ದ ಅಧ್ಯಯನ ತಂಡವೊಂದು ವರದಿ ನೀಡಿದೆ. ಈ ವರದಿ ಆತಂಕ ಹೆಚ್ಚಾಗಲು ಕಾರಣವಾಗಿದೆ. ಏತನ್ಮಧ್ಯೆ ಇನ್ನೊಂದು ಆಘಾತಕಾರಿ ವಿಚಾರ ಹೊರ ಬಿದ್ದಿದೆ.
India Jun 15, 2020, 12:00 PM IST
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಕಂದಮ್ಮನ ಆಪರೇಷನ್ ಸಕ್ಸಸ್ ಆಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಮಗುವಿನ ಚಿಕಿತ್ಸೆಗೆಂದು ರಾಯಚೂರಿನ ಗೋಪಾಲ್ ದಂಪತಿ ಆಗಮಿಸಿದ್ದರು. 2 ವಾರದ ಹಿಂದೆ ಇಂದಿರಾಗಾಂಧಿ ಆಸ್ಪತ್ರೆಗೆ ಮಗುವನ್ನು ದಾಖಲು ಮಾಡಲಾಗಿತ್ತು. ಇದೀಗ ಖುಷಿಯ ವಿಚಾರ ಏನೆಂದರೆ ಮಗುವಿನ ಆಪರೇಷನ್ ಸಕ್ಸಸ್ ಆಗಿದೆ.
state Jun 15, 2020, 11:32 AM IST
ಕೊರೋನಾ ಲಾಕ್ಡೌನ್ ಅನ್ಲಾಕ್ ಆಗಿ ವಾರ ಕಳೆದರೂ ಜಿಲ್ಲೆಯಲ್ಲಿ ಜನಜೀವನ ಇನ್ನೂ ಪೂರ್ತಿ ಅನ್ಲಾಕ್ ಆಗಿಲ್ಲ. ಬಹುತೇಕ ಎಲ್ಲ ಆರ್ಥಿಕ ಚಟುವಟಿಕೆಗಳು ಆರಂಭವಾಗಿವೆ, ಆದರೆ ಆರ್ಥಿಕವಾಗಿ ಕಂಗೆಟ್ಟಿರುವ ಜನರು ಮಾತ್ರ ಚಟುವಟಿಕೆಯಲ್ಲಿ ತೊಡಗುವುದಕ್ಕೆ ಹಿಂಜರಿಯುತ್ತಿದ್ದಾರೆ.
Karnataka Districts Jun 15, 2020, 11:02 AM IST