userpic
user icon
0 Min read

ಶಿವಣ್ಣನ ಮದ್ವೆ ದಿನ ರಾಜ್​ಕುಮಾರ್​ ಹೋಟೆಲ್​ನಲ್ಲಿ ಊಟ ಮಾಡಿದ್ರಂತೆ! ​ಘಟನೆ ವಿವರಿಸಿದ ಸುಧಾರಾಣಿ

On the day of Shivarajkumars wedding Dr Rajkumar had lunch at hotel says Sudharani suc
Sudharani

Synopsis

ಶಿವರಾಜ್ ಕುಮಾರ್​ ಅವರ ಮದುವೆ ದಿನ ಡಾ.ರಾಜ್​ಕುಮಾರ್​ ಮದುವೆಯಲ್ಲಿ ಊಟ ಮಾಡದೇ ಹೋಟೆಲ್​ನಲ್ಲಿ ಮಾಡಿದ್ರಂತೆ. ಕಾರಣ ರಿವೀಲ್ ಮಾಡಿದ್ದಾರೆ ನಟಿ ಸುಧಾರಾಣಿ.
 

ನಿನ್ನೆ ಅಂದ್ರೆ ಏಪ್ರಿಲ್​ 24 ಕನ್ನಡದ ವರನಟ ಡಾ.ರಾಜ್​ಕುಮಾರ್​ ಅವರ 96ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಹಲವಾರು ತಾರೆಯರು ನಟನ ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಟಿ ಸುಧಾರಾಣಿ ಅವರು ಡಾ.ರಾಜ್​ಕುಮಾರ್​ ಜೊತೆಗಿನ ಹಲವಾರು ವಿಷಯಗಳ ಬಗ್ಗೆ ತಿಳಿಸಿದ್ದಾರೆ. ಅಷ್ಟಕ್ಕೂ ಸುಧಾರಾಣಿ ಅವರನ್ನು ಸ್ಯಾಂಡಲ್​ವುಡ್​ ನಾಯಕಿಯನ್ನಾಗಿ ಮಾಡಿದ್ದೇ ರಾಜ್​ಕುಮಾರ್​ ಅವರು. ಆದ್ದರಿಂದ ಅವರ ಫ್ಯಾಮಿಲಿ ಜೊತೆಗೆ ಸುಧಾರಾಣಿ ಅವರ ಒಡನಾಟ ಬಹು ವರ್ಷಗಳಿಂದಲೂ ಇದೆ. ಇದೀಗ ಅವರು ಶಿವರಾಜ್​ ಕುಮಾರ್​ ಅವರ ಮದುವೆಯ ಬಗ್ಗೆ ಶೇರ್​ ಮಾಡಿಕೊಂಡಿದ್ದಾರೆ. 

ಶಿವರಾಜ್​ ಕುಮಾರ್​ ಮತ್ತು ಗೀತಾ ಅವರ ಮದುವೆಯಾಗಿದ್ದು 1986 ಮೇ 19ರಂದು.  ಬೆಂಗಳೂರಿನ ಅರಮನೆ ಮೈದಾನದಲ್ಲಿ ಶಿವರಾಜ್ ಕುಮಾರ್ ಹಾಗೂ ಗೀತಾ ಅವರ ಅದ್ದೂರಿ ವಿವಾಹ ನೆರವೇರಿತ್ತು. ಹೇಳಿ ಕೇಳಿ ಡಾ.ರಾಜ್​ ಕುಟುಂಬದ ಮದುವೆ. ಜೊತೆಗೆ ಅತ್ತ ಬಂಗಾರಪ್ಪನ ಪುತ್ರಿ ಬೇರೆ. ಎರಡೂ ಕಡೆಯಿಂದ ಬಂದ ಜನರ ಸಂಖ್ಯೆ ಮಿತಿ ಮೀರಿ ಹೋಗಿತ್ತು. ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಬಂದಿದ್ದರು. ಖುದ್ದು ರಾಜ್​ಕುಮಾರ್​ ಅವರೇ ಮಗನ ಮದುವೆಯಲ್ಲಿ ಊಟ ಮಾಡದೇ ಹೋಟೆಲ್​ನಲ್ಲಿ ಊಟ ಮಾಡಿದರಂತೆ. ಅವರ ಜೊತೆಗೆ ಸುಧಾರಾಣಿನೂ ಹೋಗಿದ್ದರಂತೆ! ಅಷ್ಟಕ್ಕೂ ಆಗಿದ್ದು ಏನೆಂದರೆ, ಆ ಜನಜಂಗುಳಿಯಲ್ಲಿ ಖುದ್ದು ರಾಜ್​ಕುಮಾರ್​ ಅವರಿಗೇ ಊಟ ಸಿಗಲಿಲ್ಲವೆನ್ನುವ ಕುತೂಹಲದ ವಿಷಯವನ್ನು ಸುಧಾರಾಣಿ ರಿವೀಲ್​ ಮಾಡಿದ್ದಾರೆ. ಈ ಮದುವೆಯಲ್ಲಿ ಬಂಗಾರಪ್ಪನವರ ಕುಟುಂಬದರಿಗೂ ಊಟ ಸಿಕ್ಕಿರಲಿಲ್ಲ. ಎಲ್ಲರೂ ಕೊನೆಗೆ ಜನಾರ್ದನ ಹೋಟೆಲ್​ನಲ್ಲಿ ಊಟ ಮಾಡಿದ್ದರು. ಇದೇ ವಿಷಯವನ್ನು ಸುಧಾರಾಣಿ ಈಗ ಹೇಳಿದ್ದಾರೆ. 

'ಹಾಲಲ್ಲಾದರೂ ಹಾಕು' ಶೂಟಿಂಗ್​ನಲ್ಲಿ ರಾಜ್​ ಆ ನೋಟ ಬೀರಿದಾಗ ನಡೆದಿತ್ತು ಪವಾಡ: ಸುಧಾರಾಣಿ ಅನುಭವ ಕೇಳಿ...
   
ಈ ಹಿಂದೆ ಸುಧಾರಾಣಿ ಅವರು, ಡಾ.ರಾಜ್​ಕುಮಾರ್​ ಅವರ ಜೊತೆಗೆ ನಟಿಸಿರುವ ಚಿತ್ರಗಳ ಬಗ್ಗೆ ಮಾತನಾಡಿದ್ದರು.  1988ರಲ್ಲಿ ಬಿಡುಗಡೆಯಾದ ದೇವತಾ ಮನುಷ್ಯ ಚಿತ್ರದ ಬಗ್ಗೆ ಮಾತನಾಡಿದ್ದರು. ಇದರಲ್ಲಿ ಸುಧಾರಾಣಿ ಅವರು ರಾಜ್​ ಅವರ ಮಗಳಾಗಿ ನಟಿಸಿದ್ದರು. ಆಗಿನ್ನೂ ಸುಧಾರಾಣಿ ಅವರಿಗೆ 15 ವರ್ಷ. ಅಂಥ ಮೇರು ನಟನ ಜೊತೆ ನಟನೆ ಮಾಡುವುದು ಎಂದರೆ ಸುಲಭದ ಮಾತೆ? ಅವರ ಮಗಳಾಗಿ ನಟಿಸುವಾಗಲೂ ಅಪ್ಪನಿಗೆ ಸಮನಾಗಿ ನಟಿಸಲೇಬೇಕು ಎನ್ನುವ ಛಲ ಸುಧಾರಾಣಿ ಅವರದ್ದು. ಆದರೆ, ಡಾ.ರಾಜ್​ ಎದುರು ನಟಿಸುವುದು ಕೇಳಿದರೆನೇ  ಎಂಥ ನಟರೇ ಭಯಪಡುತ್ತಿದ್ದರು. ತಮ್ಮ ಸಹನಟರನ್ನು ರಾಜ್​ಕುಮಾರ್​ ಅವರು ಅದೆಷ್ಟು ಆತ್ಮೀಯವಾಗಿ ನೋಡಿಕೊಳ್ಳುತ್ತಿದ್ದರು, ಅದೆಷ್ಟು ಪ್ರೀತಿಸುತ್ತಿದ್ದರು, ಶೂಟಿಂಗ್​ ಸಮಯದಲ್ಲಿ ಅದೆಷ್ಟು ರೀತಿಯಲ್ಲಿ ಕಾಳಜಿ ವಹಿಸುತ್ತಿದ್ದರು ಎನ್ನುವುದನ್ನು ಇದಾಗಲೇ ಹಲವಾರು ಮಂದಿ ಮಾತನಾಡಿದ್ದಾರೆ. ಆದರೆ, ಆ ಸಮಯದಲ್ಲಿ ಸುಧಾರಾಣಿ ಅವರಿಗೆ ತುಂಬಾ ಭಯವಾಗಿ ಹೋಗಿತ್ತಂತೆ.

ಕೊನೆಗೆ ಅಪ್ಪಾಜಿಯವರೇ ಹೇಗೆ ತಮ್ಮನ್ನು ಸಮಾಧಾನ ಮಾಡಿದರು ಎಂದು ನಟಿ ಹೇಳಿದ್ದರು. ಹೊರಗಡೆ ಸಕತ್​ ತಮಾಷೆ ಮಾಡುತ್ತಿದ್ದ ರಾಜ್​ಕುಮಾರ್​ ಅವರು ಬಣ್ಣ ಹಚ್ಚಿ ಶೂಟಿಂಗ್​ನಲ್ಲಿ ಪಾತ್ರಧಾರಿಯಾದಾಗ, ಸಂಪೂರ್ಣ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಂಡಿದ್ದನ್ನು ನೋಡಿ ನಾನು ಶಾಕ್​ಗೆ ಒಳಗಾಗಿ ಹೋದೆ ಎಂದಿದ್ದರು ಸುಧಾರಾಣಿ. ಹೊರಗೆ ನೋಡಿದ್ದ ಅಪ್ಪಾಜಿಯೇ ಬೇರೆ, ಇಲ್ಲಿ ನೋಡ್ತಿರೋ ಅಪ್ಪಾಜಿಯೇ ಬೇರೆ. ಆ ಪಾತ್ರದಲ್ಲಿ ಅಪ್ಪಾಜಿ ಮೈಮರೆತುಹೋಗಿದ್ದರು, ಅವರೇ ಆ ಪಾತ್ರವಾಗಿಬಿಟ್ಟಿದ್ದರು, ಅವರನ್ನು ನೋಡುತ್ತಿದ್ದಂತೆಯೇ ಮೊದಲೇ ಹೆದರಿದ್ದ ನನಗೆ ಇನ್ನಷ್ಟು ಭಯ ಆಗೋಯ್ತು ಎಂದು ನೆನಪಿಸಿಕೊಂಡಿದ್ದರು. 

'ಮಂತ್ರಾಲಯ ಮಹಾತ್ಮೆ' ಚಿತ್ರ ಕೊನೆಗೂ ರಾಜ್​ ನೋಡ್ಲೇ ಇಲ್ಲ- ಡಬ್​ ಮಾಡುವಾಗ್ಲೂ ಕಣ್ಣು ಮುಚ್ಚಿದ್ರು! ಕಾರಣ ರಿವೀಲ್​ 

Latest Videos