Actor Diganth Health Bulletin; ನಟ ದಿಗಂತ್ ಹೆಲ್ತ್ ಬುಲೆಟಿನ್ ಬಿಡುಗಡೆ
ಸ್ಪೋರ್ಟ್ಸ್ ಇಂಜುರಿಯಿಂದ ಬಳಲುತ್ತಿರುವ ನಟ ದಿಗಂತ್ಗೆ ಆಪರೇಷನ್ ಮಾಡಿ ಆಗಿದ್ದು, ಅವರ ಹೆಲ್ತ್ ಬುಲೆಟಿನ್ ಅನ್ನು ಆಸ್ಪತ್ರೆ ಬಿಡುಗಡೆ ಮಾಡಿದೆ.
ಬೆಂಗಳೂರು (ಜೂನ್ 21): ಗೋವಾದಲ್ಲಿ (Goa) ಸಮ್ಮರ್ ಸಾಲ್ಟ್ ಮಾಡಲು ಹೋಗಿ ಕುತ್ತಿಗೆ ಮತ್ತು ಬೆನ್ನಿಗೆ ತೀವ್ರ ಪೆಟ್ಟು ಮಾಡಿಕೊಂಡು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಸ್ಯಾಂಡಲ್ವುಡ್ ನಟ ದಿಗಂತ್ (Diganth) ಅವರ ಹೆಲ್ತ್ ಬುಲೆಟಿನ್ ಅನ್ನು ಆಸ್ಪತ್ರೆ ಬಿಡುಗಡೆ ಮಾಡಿದೆ. ಸ್ಪೋರ್ಟ್ಸ್ ಇಂಜುರಿಯಿಂದ ಬಳಲುತ್ತಿರುವ ನಟನಿಗೆ ಚಿಕಿತ್ಸೆ ಮುಂದುವರೆದಿದೆ.
ಈಗಾಗಲೇ ದಿಗಂತ್ಗೆ ಆಪರೇಷನ್ ಮಾಡಿ ಮುಗಿಸಿರೋ ವೈದ್ಯರು ಸದ್ಯ ಅಬ್ಸರ್ವೇಷನ್ ನಲ್ಲಿಟ್ಟಿದ್ದಾರೆ. ಬೆಳಗ್ಗೆ 10ಗಂಟೆವರೆಗೂ ವೈದ್ಯರು ಅಬ್ಸರ್ವೇಷನ್ ನಲ್ಲಿಡಲಿದ್ದಾರೆ. ನಟ ದಿಗಂತ ಔಟ್ ಆಫ್ ಡೇಂಜರ್ ಇದ್ದು, ಬೆಳಗ್ಗೆ ಹತ್ತು ಗಂಟೆ ನಂತರ ಎರಡನೇ ಹೆಲ್ತ್ ಬುಲೇಟಿನ್ ರಿಲೀಸ್ ಮಾಡಲಿದ್ದೇವೆ ಎಂದು ಮಣಿಪಾಲ್ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಹೆಲ್ತ್ ಬುಲಿಟಿನ್ ನಲ್ಲಿ ತಿಳಿಸಲಾಗಿದೆ.
ಹಳ್ಳಿ ಹುಡುಗನಾಗಿ ಬೇರೆ ಭಾಷೆಯಲ್ಲಿ ಸಿನಿಮಾ ಸಿಗುತ್ತಿರುವುದೇ ಖುಷಿ: ಪೃಥ್ವಿ
ಜೂನ್ 20 ರಂದು ಮಧ್ಯಾಹ್ನ ಗೋವಾದಲ್ಲಿ ಈ ಘಟನೆ ಸಂಭಿವಿಸಿದೆ. ಜೂನ್ 21ರಂದು ಹೆಚ್ಚಿನ ಚಿಕಿತ್ಸೆಗಾಗಿ ದಿಗಂತ್ ಅವರನ್ನು ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಕರೆ ತಂದು ಮಣಿಪಾಲ್ ನಲ್ಲಿ ದಾಖಲಿಸಲಾಗಿದೆ. ಗೋವಾ ಆಸ್ಪತ್ರೆಯ ವೈದ್ಯರು ಆಪರೇಷನ್ ಮಾಡಬೇಕೆಂದು ಸೂಚಿಸಿದ್ದರು. ಆದರೆ ಅಲ್ಲಿ ಬೇಕಾದ ಸೌಲಭ್ಯ ಇಲ್ಲದ ಕಾರಣ ಬೆಂಗಳೂರಿಗೆ ಕರೆತರಲಾಗಿದೆ. ವಿದ್ಯಾಧರ್ ವೈದ್ಯರ ತಂಡದಿಂದ ದಿಗಂತ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ದಿಂಗತ್ ಜೊತೆ ಆಸ್ಪತ್ರೆಯಲ್ಲಿ ಕುಟುಂಬದವರು ಇದ್ದಾರೆ. ಪತ್ನಿ ಐಂದ್ರಿತಾ ರೇ ಹಾಗೂ ಅವರ ತಂದೆ-ತಾಯಿ ಮತ್ತು ದಿಂಗತ್ ತಂದೆ ತಾಯಿ ಆಸ್ಪತ್ರೆಯಲ್ಲಿದ್ದಾರೆ. ಇನ್ನು ನಿರ್ದೇಶಕ ಯೋಗರಾಜ್ ಭಟ್ ಆಸ್ಪತ್ರೆಗೆ ಭೇಟಿ ನೀಡಿ ದಿಗಂತ್ ಆರೋಗ್ಯ ವಿಚಾರಿಸಿದ್ದಾರೆ.
Yoga Day; ಯೋಗ ಫೋಟೋ ಶೇರ್ ಮಾಡಿದ ಅನುಷ್ಕಾ ಶರ್ಮಾ
ಗೋವಾ ಸಮುದ್ರ ತೀರದಲ್ಲಿ ಸಮ್ಮರ್ ಸಾಲ್ಟ್ ಹೊಡೆಯಲು ಹೋಗೆ ದಿಗಂತ್ ಆಯತಪ್ಪಿ ಬಿದ್ದು ಕುತ್ತಿಗೆ ಮತ್ತು ಬೆನ್ನಿಗೆ ಬಲವಾಗಿ ಪೆಟ್ಟು ಬಿದ್ದಿದೆ. ದಿಂಗತ್ ಪತ್ನಿ ಐಂದ್ರಿತಾ (Aindrita ray) ಜೊತೆ ಇತ್ತೀಚಿಗಷ್ಟೆ ಗೋವಾ ಪ್ರವಾಸಕ್ಕೆ ತೆರಳಿದ್ದರು. ಸದಾ ಟ್ರಿಪ್, ಸೈಕ್ಲಿಂಗ್ ಅಂತ ದಿಂಗತ್ ದಂಪತಿ ಓಡಾಡುತ್ತಿದ್ದರು. ಈ ಬಾರಿ ಗೋವಾಗೆ ವೀಕೆಂಡ್ ಟ್ರಿಪ್ ಹೋಗಿದ್ದರು. ಈ ವೇಳೆ ದಿಗಂತ್ ಬಲವಾದ ಪೆಟ್ಟು ಮಾಡಿಕೊಂಡಿದ್ದಾರೆ.
ಈ ಬಗ್ಗೆ ದಿಗಂತ್ ತಾಯಿ ಮಲ್ಲಿಕಾ ಮಾತನಾಡಿ, 'ದಿಗಂತ್ ಪತ್ನಿ ಜೊತೆ ಗೋವಾಗೆ ತೆರಳಿದ್ದರು. ದಿಗಂತ್ ಜೊತೆ ಮಾತನಾಡಿದೆ. ಕುತ್ತಿಗೆಗೆ ಏಟಾಗಿದೆ ಏನು ಆಗಿಲ್ಲ ಗಾಬರಿ ಆಗಬೇಡ ಅಂತ ಹೇಳಿದ ಎಂದಿದ್ದಾರೆ.
ನಟಿ ವೇದಿಕಾಗೆ ಕೊರೋನಾ ಪಾಸಿಟಿವ್; ಹೈ ಫೀವರ್ ಮೈ ಕೈ ನೋವು ಎಂದ ಚೆಲುವೆ
ದಿಗಂತ್ ಸಿನಿಮಾ ವಿಚಾರಕ್ಕೆ ಬರುವುದಾರೆ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ದಿಗಂತ್ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ (kshamisi nimma katheyalli hanavilla) ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಇದೀಗ ದಿಗಂತ್ ಬಳಿ ಮಾರಿಗೋಲ್ಡ್ (Marigold), ಎಡಗೈ ಅಪಘಾತಕ್ಕೆ ಕಾರಣ, ಗಾಳಿಪಟ-2 (Galipata 2) ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.