userpic
user icon
0 Min read

ಕಾಲು ಮುಟ್ಟಿ ನಮಸ್ಕರಿಸಲು ಸುಧಾರಾಣಿಗೆ ಬಿಡಲೇ ಇಲ್ಲ ಅಣ್ಣಾವ್ರು; ಅಷ್ಟೊಂದು ಕೋಪವಿತ್ತಾ?

dr rajkumar did not allowed sudharani to touch the feet

Synopsis

ನಟಿ ಸುಧಾರಾಣಿಯವರು ಡಾ ರಾಜ್‌ಕುಮಾರ್ ಅವರೊಂದಿದೆ 'ದೇವತಾ ಮನುಷ್ಯ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮಗಳ ಪಾತ್ರದಲ್ಲಿ ನಟಿ ಸುಧಾರಾಣಿ ಮಿಂಚಿದ್ದರೆ ಅಪ್ಪನ ಪಾತ್ರದಲ್ಲಿ ಡಾ ರಾಜ್‌ಕುಮಾರ್ ಅವರದು ಎಂದಿನಂತೆ ಮನಮುಟ್ಟುವ ಅಭಿನಯ. ಇಂಥ..

ಡಾ ರಾಜ್‌ಕುಮಾರ್ (Dr Rajkumar) ಅವರು ಮೇರು ನಟ ಮಾತ್ರ ಆಗಿರಲಿಲ್ಲ, ಅವರ ವ್ಯಕ್ತಿತ್ವ ಹಾಗೂ ನಡೆ-ನುಡಿ ಕೂಡ ತುಂಬಾ ವಿಶಿಷ್ಠ ಹಾಗೂ ಮೇಲ್ಮಟ್ಟದಲ್ಲಿತ್ತು. ಈ ಮಾತಿಗೆ ಸಾಕಷ್ಟು ಉದಾಹರಣೆಗಳು ದೊರಕಿವೆ. ಸಿನಿಮಾದಲ್ಲಿ ಬಗೆಬಗೆಯ ಪಾತ್ರ ಮಾಡುತ್ತಿದ್ದ ಡಾ ರಾಜ್‌ಕುಮಾರ್ ಅವರದು ನಿಜ ಜೀವನದಲ್ಲಿ ತುಂಬಾ ಸರಳ ಹಾಗೂ ಮಾನವೀಯತೆ ಮೇಳೈಸಿದ ವ್ಯಕ್ತಿತ್ವ. ಈಗಿರುವ ಅನೇಕ ಹಿರಿಯ ನಟನಟಿಯರು ಡಾ ರಾಜ್‌ಕುಮಾರ್ ಜೊತೆಗೆ ತಮಗಿದ್ದ ಅವಿನಾಭಾವ ಸಂಬಂಧ ಹಾಗೂ ಅವರ ಮೇರು ವ್ಯಕ್ತಿತ್ವದ ಗುಣಗಳ ಬಗ್ಗೆ ಆಗಾಗ ಸಂದರ್ಶನಗಳಲ್ಲಿ ಹೇಳುತ್ತಾರೆ. ಅಣ್ಣಾವ್ರನ್ನು ಸ್ವತಃ ನೋಡಲಾಗದಿದ್ದ ಅದೆಷ್ಟೋ ಜನರು ಅವರ ಬಗ್ಗೆ ಕೇಳಿಯೇ ಕೈ ಮುಗಿಯುತ್ತಾರೆ. 

ಇನ್ನು ನಟಿ ಸುಧಾರಾಣಿಯ (Sudharani) ಬಗ್ಗೆ ಬಹಳಷ್ಟು ಜನರಿಗೆ ಗೊತ್ತು. ಅವರು ಡಾ ರಾಜ್‌ಕುಮಾರ್ ಅವರ ವಜ್ರೇಶ್ವರಿ ಬ್ಯಾನರ್‌ ಮೂಲಕವೇ ಸಿನಿಮಾರಂಗಕ್ಕೆ ನಾಯಕಿಯಾಗಿ ಕಾಲಿಟ್ಟವರು. ಶಿವರಾಜ್‌ಕುಮಾರ್ ನಟನೆ, ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣದ 'ಆನಂದ್' ಚಿತ್ರದ ಮೂಲಕ ಸುಧಾರಾಣಿಯವರು ಕನ್ನಡ ಚಿತ್ರರಂಗಕ್ಕೆ ಬಂದವರು. ಅದಕ್ಕೂ ಮೊದಲು ಅವರು ಅನೇಕ ಚಿತ್ರಗಳಲ್ಲಿ ಬಾಲಕಲಾವಿದೆಯಾಗಿ ನಟಿಸಿದ್ದರು. ಸುಧಾರಾಣಿ ಅವರಿಗೆ ಡಾ ರಾಜ್‌ಕುಮಾರ್ ಹಾಗೂ ಅವರ ಕುಟುಂಬದ ಜೊತೆ ಆಗಲೂ ಈಗಲೂ ಒಳ್ಳೆಯ ಸಂಬಂಧವಿದೆ. 

Superhit Pair: ಇಲ್ನೋಡಿ.. '4.50'ರಲ್ಲೇ ಅದೆಂಥಾ ಕಮಾಲ್ ಮಾಡಿದ್ರು ಶಿವರಾಜ್‌ಕುಮಾರ್-ಸುಧಾರಾಣಿ ಜೋಡಿ!

ನಟಿ ಸುಧಾರಾಣಿಯವರು ಡಾ ರಾಜ್‌ಕುಮಾರ್ ಅವರೊಂದಿದೆ 'ದೇವತಾ ಮನುಷ್ಯ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮಗಳ ಪಾತ್ರದಲ್ಲಿ ನಟಿ ಸುಧಾರಾಣಿ ಮಿಂಚಿದ್ದರೆ ಅಪ್ಪನ ಪಾತ್ರದಲ್ಲಿ ಡಾ ರಾಜ್‌ಕುಮಾರ್ ಅವರದು ಎಂದಿನಂತೆ ಮನಮುಟ್ಟುವ ಅಭಿನಯ. ಇಂಥ ಸುಧಾರಾಣಿಗೆ ಡಾ ರಾಜ್‌ಕುಮಾರ್ ಅವರು ಕಾಲುಮುಟ್ಟಿ ನಮಸ್ಕರಿಸಲು ಒಮ್ಮೆ ಬಿಡಲೇ ಇಲ್ಲ ಎಂಬುದು ಅಚ್ಚರಿಯ ಸಂಗತಿಯಾದರೂ ಸತ್ಯ. ಡಾ ರಾಜ್‌ಕುಮಾರ್ ಅವರನ್ನು ಎಲ್ಲಿಯೇ ನೋಡಿದರೂ ನಟಿ ಸುಧಾರಾಣಿಯವರು ಕಾಲು ಮುಟ್ಟಿ ನಮಸ್ಕರಿಸುತ್ತಿದ್ದರು. ಆದರೆ, ಆವತ್ತೊಂದಿನ ಅದು ಸಾಧ್ಯವಾಗಲೇ ಇಲ್ಲ. 

ಅಣ್ಣಾವ್ರು ಸುಧಾರಾಣಿಯನ್ನು ಮಗಳಂತೆ ನೋಡುತ್ತಿದ್ದರು, ಅವರಿಬ್ಬರ ಕುಟುಂಬಗಳೂ ಕೂಡ ತುಂಬಾ ಅನ್ಯೋನ್ಯವಾಗಿದೆ. ಹಾಗಿದ್ದರೂ ಡಾ ರಾಜ್‌ಕುಮಾರ್ ಅವರು ತಮ್ಮ ಪಾದ ಮುಟ್ಟಿ ನಮಸ್ಕರಿಸಲು ಸುಧಾರಾಣಿಗೆ ಬಿಡಿಲಿಲ್ಲ ಅಂದ್ರೆ? ಅಣ್ಣಾವ್ರಿಗೆ ಸುಧಾ ಮೇಲೆ ಅಷ್ಟೊಂದು ಕೋಪ ಯಾಕಿತ್ತು? ಅಂತೆಲ್ಲಾ ಯೋಚನೆ ಮಾಡ್ಬೇಡಿ.. ಆಗಿರೋ ಮ್ಯಾಟರ್ ಇದು.. 

ನಾನು ಸೀತೆ, ಯಶ್ ರಾವಣ ಆದ್ರೆ ಪ್ರೇಕ್ಷಕರು ಒಪ್ಪುತ್ತಿರಲಿಲ್ಲ: KGF ನಟಿ ನಟಿ ಶ್ರೀನಿಧಿ ಶೆಟ್ಟಿ!

ಅಂದು ಡಾ ರಾಜ್‌ಕುಮಾರ್ ಅವರು ಯಾವುದೋ ಕೆಲಸದ ಮೇಲೆ ಕಂಠಿರವ ಸ್ಟೂಡಿಯೋಗೆ ಬಂದಿದ್ದರು. ಅಲ್ಲಿ 'ಶಬರಿಮಲೆ ಸ್ವಾಮಿ ಅಯ್ಯಪ್ಪ' ಚಿತ್ರದ ಶೂಟಿಂಗ್ ನಡೆಯುತ್ತಿತ್ತು. 'ಶಂಕರ ಶಶಿಧರ..' ಹಾಡಿನ್ನು ಚಿತ್ರೀಕರಣ ಮಾಡಿಕೊಳ್ಳಲಾಗುತ್ತಿತ್ತು. ಸುಧಾರಾಣಿ ಪಾರ್ವತಿಯ ಗೆಟಪ್‌ನಲ್ಲಿ ಇದ್ದರು, ನಟ ಶ್ರೀಧರ್ ಅವರು ಶಿವನಾಗಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಅಪ್ಪಾಜಿ ಡಾ ರಾಜ್‌ಕುಮಾರ್ ಅವರನ್ನು ನೋಡಿದ್ದೇ ತಡ, ನಟಿ ಸುಧಾರಾಣಿಯವರು ತಕ್ಷಣ ಓಡೋಡಿ ಬಂದು ಅಣ್ಣಾವ್ರ ಕಾಲಿಗೆ ನಮಸ್ಕರಿಸಲು ನೋಡಿದರು. ಜೊತೆಯಲ್ಲಿದ್ದ ಶ್ರೀಧರ್ ಕೂಡ ನಮಸ್ಕರಿಸಲು ಬಂದರು. ಆದರೆ ಡಾ ರಾಜ್‌ಕುಮಾರ್ ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ. 

ಶಿವ-ಪಾರ್ವತಿ ಪಾತ್ರ ಮಾಡುತ್ತಿದ್ದ ಕಾರಣಕ್ಕೆ ಡಾ ರಾಜ್‌ಕುಮಾರ್ ಅವರು ಅವರಿಬ್ಬರೂ ತಮಗೆ ನಮಸ್ಕರಿಸಲು ಬಿಡಲೇ ಇಲ್ಲ. ಈ ಬಗ್ಗೆ ಹೇಳಿಕೊಂಡಿರುವ ಸುಧಾರಾಣಿ, 'ಈ ತರಹವೂ ಇದ್ದರು ಅಪ್ಪಾಜಿ. ಅವರಿಂದ ಕಲಿತಿದ್ದು ತುಂಬಾ ಇದೆ. ನಾನು ಅಂತಲ್ಲ, ಹಲವರು ಹಲವು ರೀತಿಯಲ್ಲಿ ಅವರಿಂದ ಬಹಳಷ್ಟು ಕಲಿತಿರಬಹುದು, ಕಲಿಯುವಂಥಾದ್ದು ಅವರಲ್ಲಿ ತುಂಬಾ ವಿಷಯಗಳಿತ್ತು' ಎಂದಿದ್ದಾರೆ. ಅಂದು ಸುಧಾರಾಣಿ ಹಾಗೂ ಶ್ರೀಧರ್ ಜೊತೆಯಲ್ಲಿದ್ದ ಅನೇಕರು ಡಾ ರಾಜ್‌ಕುಮಾರ್ ಅವರಈ ನಡೆ ನೋಡಿ ಅಚ್ಚರಿಗೊಂಡಿದ್ದರು. ಜೊತೆಗೆ, ಅವರ ಮೇಲಿನ ಗೌರವ ಕೂಡ ಹೆಚ್ಚಾಗಿತ್ತು. 

ನಾನು ಪಾಕಿಸ್ತಾನಿ ಅಲ್ಲ, ಸುಳ್ಳು ಹರಡಬೇಡಿ; ಪ್ರಭಾಸ್ ಚಿತ್ರದ ನಾಯಕಿ ಇಮಾನ್ವಿ ಇಸ್ಮಾಯಿಲ್ ಪೋಸ್ಟ್!

Latest Videos