Asianet Suvarna News Asianet Suvarna News

ಸ್ಯಾಂಡಲ್​ವುಡ್​ನಲ್ಲಿ ಗಟ್ಟಿಮೇಳ: ಅರ್ಜುನ್​ ಸರ್ಜಾ ಪುತ್ರಿಯನ್ನು ವರಿಸಲಿರುವ ನಟ ಯಾರು?

ಖ್ಯಾತ ಬಹುಭಾಷಾ ನಟ ಅರ್ಜುನ್​ ಸರ್ಜಾ ಪುತ್ರಿಯ ಮದುವೆ ನಟನ ಜೊತೆ ಫಿಕ್ಸ್​ ಆಗಿದೆ. ಆ ನಟ ಯಾರು?
 

Arjun Sarjas daughter Aishwarya to marry a comedian suc
Author
First Published Jun 26, 2023, 10:47 AM IST

ಸಿನಿ ಇಂಡಸ್ಟ್ರಿಯಲ್ಲಿ ಕಳೆದ ಎರಡು ವರ್ಷಗಳಿಂದ  ಮದುವೆ, ಮಕ್ಕಳ ಪರ್ವ ಶುರುವಾಗಿದೆ. ಬಾಲಿವುಡ್​ ಸೇರಿದಂತೆ ಬಹುತೇಕ ಎಲ್ಲಾ ಭಾಷೆಗಳ ತಾರೆಯರು ಇಲ್ಲವೇ ಅವರ ಮಕ್ಕಳ ಅದ್ಧೂರಿ ಮದುವೆ ನಡೆದಿದೆ. ಈಗ ಅದರ ಸಾಲಿಗೆ ಸೇರುತ್ತಿರುವವರು ಟಾಲಿವುಡ್, ಸ್ಯಾಂಡಲ್​ವುಡ್​​ ನಟಿ ಐಶ್ವರ್ಯಾ. ಇವರನ್ನು ಐಶ್ವರ್ಯಾ ಎನ್ನುವುದಕ್ಕಿಂತ ಹೆಚ್ಚಾಗಿ ಬಹುಭಾಷಾ ನಟ ಅರ್ಜುನ್ ಸರ್ಜಾ (Arjun Sarja) ಪುತ್ರಿ ಎಂದೇ ಗುರುತಿಸಿದರೆ ಹೆಚ್ಚು ಸೂಕ್ತ.  ಕೆಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಐಶ್ವರ್ಯಾ ಅವರು ಶೀಘ್ರದಲ್ಲಿಯೇ  ಹಸೆಮಣೆ ಏರಲಿದ್ದಾರೆ. ತಮಿಳಿನ ಜನಪ್ರಿಯ ಹಾಸ್ಯ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ರಾಮಯ್ಯ ಜೊತೆ ಐಶ್ವರ್ಯಾ ಮದುವೆ ಶೀಘ್ರದಲ್ಲೇ ನಡೆಯಲಿದೆ ಎಂಬ ಸುದ್ದಿ ತಮಿಳು ಮಾಧ್ಯಮಗಳಲ್ಲಿ ಹಬ್ಬಿದೆ.

ಅಂದಹಾಗೆ, ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಹೆಚ್ಚಿಗೆ ಚಿತ್ರಗಳಲ್ಲಿ ನಟಿಸಿಲ್ಲವಾದರೂ ಇವರು ಖ್ಯಾತಿ ಪಡೆದಿದ್ದಾರೆ. ಸ್ಟಾರ್​ ಕಿಡ್​ ಆಗಿದ್ದರಿಂದ ಸಹಜವಾಗಿ ಕೀರ್ತಿ ಹೆಚ್ಚಿದೆ. ಇವರು 2013 ರಲ್ಲಿ ವಿಶಾಲ್ ನಟನೆಯ ಪತ್ತು ಯಾನೈ ಸಿನಿಮಾ ಮೂಲಕ ಟಾಲಿವುಡ್​ಗೆ ಎಂಟ್ರಿ ಕೊಟ್ಟರು. ಇದರ ಬಳಿಕ ಹಲವು ವರ್ಷ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೆ 2018ರಲ್ಲಿ ಕನ್ನಡದ ಪ್ರೇಮ ಬರಹ ಸಿನಿಮಾದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿಯೂ ಕಾಣಿಸಿಕೊಂಡರು. ಕುತೂಹಲದ ಸಂಗತಿ ಎಂದರೆ, ಈ ಸಿನಿಮಾವನ್ನು ಐಶ್ವರ್ಯಾರ ತಂದೆ ಅರ್ಜುನ್ ಸರ್ಜಾ ಅವರೇ ನಿರ್ದೇಶನ ಮಾಡಿದ್ದರು. ಕನ್ನಡದ ಪ್ರೇಮ ಬರಹ ಸಿನಿಮಾವನ್ನು ತಮಿಳಿನಲ್ಲಿ ಸೊಲ್ಲಿವಿಡಾವಾ ಹೆಸರಿನಲ್ಲಿ ಕೆಲ ದೃಶ್ಯಗಳನ್ನು ಮರುಚಿತ್ರೀಕರಿಸಿ ಬಿಡುಗಡೆ ಮಾಡಲಾಗಿತ್ತು. ಎರಡೂ ಭಷೆಗಳಲ್ಲಿ ಸಿನಿಮಾ ಮ್ಯಾಜಿಕ್ ಮಾಡಲು ವಿಫಲವಾಯಿತು. ಆ ನಂತರ ಐಶ್ವರ್ಯಾಗೆ ಹೆಚ್ಚಿನ ಅವಕಾಶಗಳು ಲಭಿಸಲಿಲ್ಲ. ಆದರೆ ಇವರ ಹೆಸರು ಕನ್ನಡದಲ್ಲಿಯೂ ಗಟ್ಟಿಯಾಗಿ ನಿಂತಿದೆ. 

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಮದುವೆ?; ತಮಿಳು ಹಾಸ್ಯ ನಟನ ಪುತ್ರನ ಜೊತೆ ಸಂಬಂಧ!

ಉಮಾಪತಿ ರಾಮಯ್ಯ ಹಾಗೂ ಐಶ್ವರ್ಯಾ (Aishwarya Arjun) ಇಬ್ಬರು ಹಲವು ದಿನಗಳಿಂದ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ.  ಇಬ್ಬರ ಪ್ರೀತಿಗೆ ಕುಟುಂಬದವರು ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.   ಇಬ್ಬರ ಕುಟುಂಬಸ್ಥರಿಂದ  ಮದುವೆ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ ಸುದ್ದಿ ಖಚಿತವಾಗಿರುವುದಾಗಿ ಹಲವು ತಮಿಳು ಮಾಧ್ಯಮಗಳು ವರದಿ ಮಾಡಿವೆ. ತಮಿಳು ಚಿತ್ರರಂಗದ ಕೆಲವು ಹಿರಿಯ ಪತ್ರಕರ್ತರು ರಾಮಯ್ಯ ಕುಟುಂಬದ ಆಪ್ತರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ಬಳಿಕೆ ವಿಷಯ ಬೆಳಕಿಗೆ ಬಂದಿದೆ.

 ತಂಬಿ ರಾಮಯ್ಯ ತಮಿಳಿನ ಜನಪ್ರಿಯ ಹಾಸ್ಯನಟರಾಗಿದ್ದು 1999 ರಿಂದ ಈಗಿನ ವರೆಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇವರು ರಾಷ್ಟ್ರಪ್ರಶಸ್ತಿ ವಿಜೇತ ನಟ ಕೂಡ. ಇದೀಗ ಅವರ ಪುತ್ರ ಉಮಾಪತಿ ರಾಮಯ್ಯ ಸಹ ನಟರಾಗಿದ್ದು, ತಮಿಳಿನ ಕೆಲವು ಸಿನಿಮಾಗಳಲ್ಲಿ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ.  ಉಮಾಪತಿ ರಾಮಯ್ಯ ಈ ವರೆಗೆ ನಾಲ್ಕು ಸಿನಿಮಾಗಳಲ್ಲಿ ಮಾತ್ರವೇ ನಟಿಸಿದ್ದಾರೆ. 2017ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಉಮಾಪತಿ ಆಗಿನಿಂದ ವರ್ಷಕ್ಕೆ ಒಂದರಂತೆ ಸಿನಿಮಾಗಳನ್ನು ಮಾಡುತ್ತಾ ಬರುತ್ತಿದ್ದಾರೆ. 2020ರಲ್ಲಿ ಉಮಾಪತಿಯ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. 2022 ರಲ್ಲಿ ದೇವದಾಸ್ (Devdas) ಹೆಸರಿನ ಸಿನಿಮಾ ಕೈಗೆತ್ತಿಕೊಂಡಿದ್ದು ಈ ವರೆಗೆ ಆ ಸಿನಿಮಾ ಬಿಡುಗಡೆ ಆಗಿಲ್ಲ.

ನಟಿ ಜ್ಯೋತಿಕಾ ವೇಟ್​ಲಾಸ್​ ಗುಟ್ಟು ರಟ್ಟು: ವಿಡಿಯೋ ನೋಡಿ ಅಬ್ಬಬ್ಬಾ ಎಂದ ಫ್ಯಾನ್ಸ್​

ಅರ್ಜುನ್ ಸರ್ಜಾ ತಮ್ಮ ಪುತ್ರಿ ಐಶ್ವರ್ಯಾ (Aishwarya Sarja) ಅವರನ್ನು ನಾಯಕಿಯನ್ನಾಗಿಸಿ ತೆಲುಗು ಮತ್ತು ತಮಿಳು ಸಿನಿಮಾ ನಿರ್ದೇಶನ ಮಾಡುತ್ತಿದ್ದರು. ಇದಕ್ಕೆ ತೆಲುಗಿನ ಖ್ಯಾತ ನಟರೊಬ್ಬರು ನಾಯಕರಾಗಿ ಆಯ್ಕೆಯಾಗಿ, ಸಿನಿಮಾದ ಮುಹೂರ್ತ ಕೂಡ ನಡೆದಿತ್ತು. ಆದರೆ ಕಾರಣಾಂತರಗಳಿಂದ ನಾಯಕ ನಟ ಆ ಸಿನಿಮಾದಿಂದ ಹೊರ ಬಂದಿದ್ದರು. ಅದೇ ಚಿತ್ರಕ್ಕೆ ಈಗ ನಾಯಕರಾಗಿ ನಿರಂಜನ್ ಆಯ್ಕೆಯಾಗಿದ್ದಾರೆ. ಈ ಸಿನಿಮಾದಲ್ಲಿ ನಿರಂಜನ್‌ಗೆ ನಾಯಕಿಯಾಗಿ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ನಟಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ. 

Follow Us:
Download App:
  • android
  • ios