‘ರಾಗ’ ಮತ್ತು ‘ಪರಸಂಗ’ ಸಿನಿಮಾಗಳಿಂದ. ಯಾಕೆಂದರೆ ‘ರಾಗ’ ಸಿನಿಮಾ ನಂತರ ನನ್ನ ಎಲ್ಲರು ನಿರ್ಮಾಪಕ, ಹೀರೋ ಅಂದುಕೊಂಡರು. ಹೀಗಾಗಿ ನನಗೆ ಪಾತ್ರಗಳು ಬರಲೇ ಇಲ್ಲ ಎಂದು ಸಂದರ್ಶನದಲ್ಲಿ ನಟ ಮಿತ್ರ ಹೇಳಿದರು.

* ಈಗ ಮತ್ತೆ ಬೇಡಿಕೆಯ ನಟರಾಗುತ್ತಿದ್ದೀರಿ?

ಅದಕ್ಕೆ ಕಾರಣ ‘ಕರಾವಳಿ’ ಸಿನಿಮಾ. ಈ ಚಿತ್ರದಲ್ಲಿ ನಾನು ಮಾಡಿದ ಮಹಾಬಲ ಪಾತ್ರ ನನ್ನ ಜೀವನಕ್ಕೆ ಮತ್ತೆ ಬಲ ತುಂಬಿದೆ. ಈ ಚಿತ್ರಕ್ಕೆ ನಾನು ಎರಡು ವರ್ಷ ಮೀಸಲಿಟ್ಟಿದ್ದೆ. ಸಿನಿಮಾ ನೋಡಿದ ಎಲ್ಲರಿಗೂ ಮಹಾಬಲನ ಪಾತ್ರ ಇಷ್ಟವಾಗಿದೆ.

* ಬೇಡಿಕೆಯಲ್ಲಿದ್ದ ನಟ ನೀವು, ಯಾಕೆ ಅವಕಾಶಗಳಿಲ್ಲದೆ ಹೋಗಿದ್ದು?

‘ರಾಗ’ ಮತ್ತು ‘ಪರಸಂಗ’ ಸಿನಿಮಾಗಳಿಂದ. ಯಾಕೆಂದರೆ ‘ರಾಗ’ ಸಿನಿಮಾ ನಂತರ ನನ್ನ ಎಲ್ಲರು ನಿರ್ಮಾಪಕ, ಹೀರೋ ಅಂದುಕೊಂಡರು. ಹೀಗಾಗಿ ನನಗೆ ಪಾತ್ರಗಳು ಬರಲೇ ಇಲ್ಲ. ಎಂಟು ವರ್ಷ ಖಾಲಿ ಕೂರಬೇಕಾಯಿತು.

* ನಿಮ್ಮ ಈ ಅಜ್ಞಾತ ವಾಸವನ್ನು ಮುಕ್ತ ಮಾಡಿದ್ದು ಕರಾವಳಿ ಚಿತ್ರನಾ?

‘ಕರಾವಳಿ’ಗೂ ಮುನ್ನ ಬಂದಿದ್ದು ಸಂತೋಷ್ ಆನಂದ್ ರಾಮ್ ನಿರ್ದೇಶನದ, ಜಗ್ಗೇಶ್‌ ನಟನೆಯ ‘ರಾಘವೇಂದ್ರ ಸ್ಟೋರ್ಸ್‌’ ಸಿನಿಮಾ. ಈ ಚಿತ್ರದಲ್ಲಿ ನಾನು ಮಾಡಿದ ಕೋಕಿಲ ಪಾತ್ರ ತುಂಬಾ ಚೆನ್ನಾಗಿತ್ತು. ಆದರೆ, ಸಿನಿಮಾ ಕಮರ್ಷಿಯಲ್ಲಾಗಿ ವರ್ಕ್‌ ಆಗಲಿಲ್ಲ. ಹೀಗಾಗಿ ನನ್ನ ಪಾತ್ರವೂ ಯಾರಿಗೂ ಗೊತ್ತಾಗಲಿಲ್ಲ.

* ಕರಾವಳಿ ಚಿತ್ರದ ನಂತರ ಬಂದ ಚಿತ್ರಗಳೆಷ್ಟು?

ಈ ಸಿನಿಮಾ ಲುಕ್ಕಿನ ನಂತರ ಲ್ಯಾಂಡ್‌ ಲಾರ್ಡ್‌, ಮಿ.ಜಾಕ್‌, ಲಕ್ಷ್ಮೀಪುತ್ರ, ಕರಳೆ ಹಾಗೂ ಮಹಾನ್‌ ಚಿತ್ರಗಳು. ಈ ಚಿತ್ರಗಳಲ್ಲಿ ಶಿವಯ್ಯ, ಮಂಡೇಲ ಹೀಗೆ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಿದ್ದೇನೆ.

* ಮುಂದಿನ ಸಿನಿಮಾಗಳು?

ಆಗಲೇ ಹೇಳಿದಂತೆ ‘ಮಿ.ಜಾಕ್‌’, ‘ಲಕ್ಷ್ಮೀಪುತ್ರ’, ‘ಕರಳೆ’ ಚಿತ್ರಗಳ ಶೂಟಿಂಗ್‌ ಮುಗಿಸಿದ್ದೇನೆ. ಬೇರೆ ಹೊಸ ಸಿನಿಮಾಗಳಿಗೆ ಕಾಯುತ್ತಿದ್ದೇನೆ. ಯಾವುದೇ ರೀತಿಯ ಪಾತ್ರಗಳು ಬಂದರೆ ಮಾಡುತ್ತೇನೆ.