ನೈಜ ಘಟನೆಗಳ ಕಿರುಚಿತ್ರ. ನಟ ಯತಿರಾಜ್ ಕಿರುಚಿತ್ರಗಳು ಸೂಪರ್ ಡೂಪರ್...

ಪತ್ರಕರ್ತ, ನಟ ಯತಿರಾಜ್‌ ಕೊರೋನಾ ಸಂಕಷ್ಟಶುರುವಾದ 18 ಕಿರು ಚಿತ್ರಗಳನ್ನು ನಿರ್ದೇಶಿಸಿ ನಟಿಸಿದ್ದಾರೆ. ಕಲಾವಿದ ಹೆಸರಿನ ಅಭಿನಯ ತರಬೇತಿ ಸಂಸ್ಥೆ ಮೂಲಕ ಈ ಚಿತ್ರಗಳನ್ನು ರೂಪಿಸಿದ್ದು, ಇದೀಗ ‘ಆರಾಧ್ಯ’ ಹೆಸರಿನ 18ನೇ ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಲ್ಮೆಟ್ ಮಹತ್ವ ಸಾರುವ ಮೈಂಡ್ ಇಟ್ ಕಿರುಚಿತ್ರ!

‘ಕಾಡಿದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅದನ್ನು ಸಿನಿಮಾ ಮೂಲಕ ಹೇಳಬೇಕು ಎಂದು ಯೋಚನೆ ಮಾಡಿದ ಪ್ರಯತ್ನದ ಫಲವೇ ಈ ಕಿರುಚಿತ್ರಗಳು. ಪ್ರತಿಯೊಂದು ಕಿರುಚಿತ್ರಕ್ಕೂ ನೈಜ ಘಟನೆಗಳೇ ಸ್ಫೂರ್ತಿ ಮತ್ತು ಆಧಾರ. ಈ ಪೈಕಿ ಆರಾಧ್ಯ ಕಿರುಚಿತ್ರ ನನಗೆ ಹೆಚ್ಚು ಕಾಡಿದೆ’ ಎನ್ನುತ್ತಾರೆ ಯತಿರಾಜ್‌. ಬೇಬಿ ಆರಾಧ್ಯ, ಅಂಜಲಿ, ಶಾಂತಕುಮಾರ್‌ ‘ಆರಾಧ್ಯ’ ಚಿತ್ರದಲ್ಲಿ ನಟಿಸಿದ್ದು, ಜೀವನ್‌ ಛಾಯಾಗ್ರಾಹಣ ಮಾಡಿದ್ದಾರೆ.