Asianet Suvarna News Asianet Suvarna News

ಕನ್ನಡ ಸ್ವಲ್ಪ ಗೊತ್ತು ಎನ್ನುವವರು ಚಿತ್ರರಂಗ ಹರಾಜು ಹಾಕುತ್ತಿದ್ದಾರೆ; ಕನ್ನಡಿಗರಿಗೆ ಜಗ್ಗೇಶ್‌ ಸಲಾಂ

ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಡ್ರಗ್ ಮಾಫಿಯಾ ವಿಚಾರದ ಬಗ್ಗೆ ನಟ ಜಗ್ಗೇಶ್‌ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಇದೀಗ ಕನ್ನಡದ ಹೆಣ್ಣು ಮಕ್ಕಳ ಮೇಲಿರುವ ಗೌರವವನ್ನು ವ್ಯಕ್ತ ಪಡಿಸಿದ್ದಾರೆ.

actor jaggesh stands for Karnataka based Kannada actress
Author
Bangalore, First Published Sep 7, 2020, 4:57 PM IST

ಕನ್ನಡ ಚಿತ್ರರಂಗದ ಹಿರಿಯ ನಟ ಜಗ್ಗೇಶ್‌ ಏನೇ ಹೇಳಿದರೂ ವೇದ  ವಾಕ್ಯದಂತೆ ಇಂದಿನ ಯುವ ನಟ ನಟಿಯರು ಚಾಚು ತಪ್ಪದೆ ಪಾಲಿಸುತ್ತಾರೆ. ಜಗ್ಗಣ್ಣನ ಸಲಹೆ ಪಡೆದುಕೊಂಡು ತಮ್ಮ ಕೆಲಸವನ್ನು ಮುಂದುವರೆಸುತ್ತಾರೆ. ಚಂದನವಕ್ಕೆ ಡ್ರಗ್ಸ್ ನಂಟು ಇರುವ ವಿಚಾರ ಕೇಳಿ ಅಸಮಾಧಾನ ವ್ಯಕ್ತ ಪಡಿಸಿದ್ದ ಜಗ್ಗೇಶ್ ಇದೀಗ ಕನ್ನಡದ ಹೆಣ್ಣು ಮಕ್ಕಳನ್ನು ಹೊಗಳಿದ್ದಾರೆ. 

actor jaggesh stands for Karnataka based Kannada actress

'ಬಿಜೆಪಿ ಬೈದಿದ್ದ ಯುವಕ' ಶೇರ್ ಮಾಡಿಕೊಂಡಿದ್ದ ಜಗ್ಗೇಶ್‌ಗೆ ಸಂಕಷ್ಟ 

ಜಗ್ಗೇಶ್ ಟ್ಟೀಟ್:

'ಕನ್ನಡ ಚಿತ್ರರಂಗದ ನಲ್ಮೆಯ ಕನ್ನಡದ ಹೆಣ್ಣು ಮಕ್ಕಳು ನಮ್ಮತನ ಉಳಿಸಿಕೊಂಡು ನಮ್ಮ ಕಾಲದಿಂದ ಬದುಕಿದ್ದಾರೆ ಪಾಪ! ಕನ್ನಡ್ ಸ್ವಲ್ಪ ಗೊತ್ತಿದೆ ಎನ್ನುತ್ತಾ ಉತ್ತರದಿಂದ ಬಂದು ನಮ್ಮವರ ಮೋಡಿ ಮಾಡಿದವರೆ ನಮ್ಮ ಚಿತ್ರರಂಗದ ಮಾನ ಹರಾಜು ಹಾಕುತ್ತಿರುವುದು. ಇನ್ನು ಮೇಲಾದರು ನಮ್ಮವರು ನಮ್ಮವರಿಗೆ ಜೈ ಅನ್ನುವ! ಕನ್ನಡದವರು ಕನ್ನಡಿಗರಿಗೆ ಕೈ ಎತ್ತಿ ಸಾಕು' ಎಂದು ಬರೆದುಕೊಂಡು ನಮಸ್ಕರಿಸುವ ಎಮೋಜಿ ಪಕ್ಕದಲ್ಲಿ ಹಾಕಿದ್ದಾರೆ.

 

ಅಷ್ಟೆ ಅಲ್ಲದೆ ತಾವು ಚಿತ್ರರಂಗದಲ್ಲಿ ನಡೆದು ಬಂದ ಪ್ರಾಮಾಣಿಕ ಬದುಕಿನ ಬಗ್ಗೆ ಬರೆದುಕೊಂಡಿದ್ದಾರೆ. '1980 ನವೆಂಬರ್‌ 17ಕ್ಕೆ ಚಿತ್ರರಂಗಕ್ಕೆ  ಬಂದವ ನಾನು ಭಯದಿಂದ ಬೆಳದು ದಡ್ಡ ಮುಟ್ಟಿರುವೆ. ಹೈ ಸ್ಟೀಡ್‌ ಕೈ ಬಿಟ್ಟು ಗಾಡಿ ಓಡಿಸದವರು.  ಅರ್ಧ ರಾತ್ರೀಲಿ ಛತ್ರಿ ಹಿಡಿದವರು ಒಂದೇ ರಾತ್ರಿ ಬೆಟ್ಟ ಹತ್ತಿ ಹಳ್ಳಕ್ಕೆ ಬಿದ್ದವರು. ಏಷ್ಟೆ ಬೆಳೆದರು ತಲೆ ಬಾಗಿ ಬಾಳಿದವರು ನೋಡಿ ಬದುಕು ಕಲಿತವ ನಾನು. ದೇವರ ಕೈ ಹಿಡಿದರೆ ಮಹಾರಾಜ ಕೈ ಬಿಟ್ರೆ ಬಿಕ್ಷುಕ. ನಶ್ವರ ಜಗತ್ತು  ಎಚ್ಚರ' ಎಂದಿದ್ದಾರೆ.

ಸಂಯುಕ್ತಾ ಹೆಗ್ಡೆ ಪರ ನಿಂತ ಜಗ್ಗೇಶ್; ಕವಿತಾ ರೆಡ್ಡಿಗೆ ಟಾಂಗ್? 

 

ನಟ ಜಗ್ಗೇಶ್ ಹೇಳುತ್ತಿರುವ ಮಾತು ನೂರಕ್ಕೆ ನೂರು ಸತ್ಯ. ಮೊದಲು ನಮ್ಮ ಕನ್ನಡದ ಹೆಣ್ಣು ಮಕ್ಕಳಿಗೆ ಅವಕಾಶ ನೀಡಿ, ಅವರಿಗೂ ಪ್ರೋತ್ಸಾಹಿಸೋಣ.

Follow Us:
Download App:
  • android
  • ios