'ಬಿಜೆಪಿ ಬೈದಿದ್ದ ಯುವಕ' ಶೇರ್ ಮಾಡಿಕೊಂಡಿದ್ದ ಜಗ್ಗೇಶ್ಗೆ ಸಂಕಷ್ಟ
ನಟ ಜಗ್ಗೇಶ್ ವಿರುದ್ದ ಸೈಬರ್ ಠಾಣೆಗೆ ದೂರು/ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಉಸ್ತುವಾರಿ ಸಂದೀಪ್ ರಿಂದ ದೂರು/ ನನ್ನ ಗೌರವಕ್ಕೆ ಧಕ್ಕೆಯಾಗಿದೆ/ ಜಗ್ಗೇಶ್ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದರು.
ಬೆಂಗಳೂರು(ಜು. 06) ನವರಸ ನಾಯಕ ಜಗ್ಗೇಶ್ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಂಗ್ರೆಸ್ ಐಟಿ ಸೇಲ್ ನ ಉಸ್ತುವಾರಿ ಸಂದೀಪ್ ಅನಬೇರು ದೂರು ನೀಡಿದ್ದಾರೆ.
ಕಾಂಗ್ರೆಸ್ ಸೋಷಿಯಲ್ ಮೀಡಿಯಾ ದ ಉಸ್ತುವಾರಿಯಿ ಸಂದೀಪ್ ದೂರು ನೀಡಿದ್ದಾರೆ. ಮಾತನಾಡಿದ್ದ ಯುವಕ ಬಿಜೆಪಿಯನ್ನು ತೆಗಳಿದ್ದ. ಬೆಂಗಳೂರು ಬಿಟ್ಟು ಊರಿಗೆ ತೆರಳುತ್ತಿದ್ದ ಯುವಕ ಮೋದಿ ಮತ್ತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದ.
ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಸಿಇಒ ವಾಸುದೇವ್ ಮಯ್ಯ ಆತ್ಮಹತ್ಯೆ
ಇದಾದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಆ ವ್ಯಕ್ತಿ ಸಂದೀಪ್ ಎಂದು ಬಿಂಬಿತವಾಗಿತ್ತು. ಬಿಜೆಪಿಯವರು ನನ್ನ ಫೋಟೋ ಎಡಿಟ್ ಮಾಡಿ ನನ್ನ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ ಎಂದು ಸಂದೀಪ್ ದೂರು ನೀಡಿದ್ದಾರೆ.
ನಟ ಜಗ್ಗೇಶ್ ಸಹ ಈ ಪೋಟೋ ಹಂಚಿಕೊಂಡಿದ್ದರು. ಇದರಿಂದ ತನ್ನ ಗೌರವಕ್ಕೆ ಧಕ್ಕೆಯಾಗಿದೆ ಅಂತ ಸಂದೀಪ್ ದೂರು ದಾಖಲಿಸಿದ್ದಾರೆ.