ಸುಧಾ ಮೂರ್ತಿಯವರು ಯಶಸ್ವಿ ಉದ್ಯಮಿ ಮತ್ತು ಬಿಲಿಯನೇರ್ ಆಗಿರುವ ಜತೆಗೇ, ಸುಂದರವಾದ ಕುಟುಂಬವನ್ನು ಕಟ್ಟಿಕೊಂಡಿದ್ದಾರೆ. ಸುಖಿ ದಾಂಪತ್ಯಕ್ಕೆ ಅವರು ನೀಡಿದ ಎವರ್ಗ್ರೀನ್ 8 ಸಲಹೆಗಳು ಇಲ್ಲಿವೆ.
ಸುಧಾ ಮೂರ್ತಿ ಇನ್ಫೋಸಿಸ್ ಫೌಂಡೇಶನ್ನ ಮುಖ್ಯಸ್ಥರಾಗಿದ್ದು, ಬಿಲಿಯನೇರ್ ಆಗಿದ್ದರೂ ಸುಂದರವಾದ ಫ್ಯಾಮಿಲಿಯನ್ನೂ ಕಟ್ಟಿಕೊಂಡವರು. ಓದು, ಬರಹ ಮೊದಲಾದವುಗಳ ಜತೆಗೇ ಗಂಡ- ಮಕ್ಕಳನ್ನೂ ಸಂಭಾಳಿಸಿ, ಒಳ್ಳೆಯ ಬದುಕನ್ನು ಕಟ್ಟಿದರು. ಇಬ್ಬರು ಮಕ್ಕಳೂ ಉನ್ನತ ಹಂತಕ್ಕೆ ಏರಿದರು. ಗಂಡ ನಾರಾಯಣಮೂರ್ತಿ ಸದಾ ಕಾಲ ಬ್ಯುಸಿನೆಸ್ ಎನ್ನುತ್ತ ಇದ್ದರೂ ಬೇಸರಿಸದೆ ಉತ್ತಮ ಸಂಸಾರ ಕಟ್ಟಿದರು. ಅಂಥ ಸುಧಾ ಮೂರ್ತಿ, ಸುಖ ಸಂಸಾರ ಅಥವಾ ಹೊಂದಾಣಿಕೆಯ ದಾಂಪತ್ಯದ ಬಗ್ಗೆ ಅಲ್ಲಿ ಇಲ್ಲಿ ಆಡಿದ ಕೆಲ ಮಾತುಗಳು ಇಲ್ಲಿವೆ.
1) ಸಮಾನತೆ ಎಂಬುದು ಉತ್ತಮ ದಾಂಪತ್ಯದ ಲಕ್ಷಣ ಎಂಬುದು ನಿಜವೇ ಆದರೂ ಕೆಲವರು ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿ, ಪ್ರತಿಯೊಂದನ್ನೂ ಇದೇ ಆಧಾರದಲ್ಲಿ ಅಳೆದು ತೂಗಿ ದಾಂಪತ್ಯದ ಅಂದಗೆಡಿಸುವರು. ಪ್ರತಿಯೊಂದನ್ನೂ ಹೀಗೇ ಆಗಬೇಕು ಎಂಬ ಒಡಂಬಡಿಕೆಯ ರೂಪದಲ್ಲಿ ದಾಂಪತ್ಯದಲ್ಲಿ ಮುನ್ನಡೆಯಲಿಚ್ಛಿಸಿದರೆ ಅಲ್ಲಿ ಖಂಡಿತ ಸಂಬಂಧವೊಂದು ಹಳಸಿಹೋಗುವ ಸಾಧ್ಯತೆಗಳಿವೆ. ದಾಂಪತ್ಯದಲ್ಲಿ ಇಬ್ಬರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತು ಪ್ರೀತಿಯಿಂದಲೇ ಅವುಗಳನ್ನು ನಿರ್ವಹಿಸಬೇಕಾದ್ದು ಅಗತ್ಯ. ಪ್ರತಿಯೊಂದನ್ನೂ ೫೦:೫೦ರ ಆಧಾರದಲ್ಲಿ ಹಂಚಿಕೊಂಡು ತೀರಾ ಖಡಕ್ ಲೆಕ್ಕಾಚಾರದ ನಿರ್ವಹಣೆ ಇಲ್ಲಿ ಸಾಧ್ಯವಿಲ್ಲ.
2) ಇಬ್ಬರ ನಡುವೆ ಸ್ಪರ್ಧೆಯೇರ್ಪಟ್ಟರೆ ಉಳಿಗಾಲವಿಲ್ಲ. ಇದು ಕೊನೆಗೆ ಸರಿ ತಪ್ಪುಗಳ ದ್ವಂದ್ವದಲ್ಲೇ ಕೊನೆಯಾಗುತ್ತದೆ. ಪರಿಸ್ಥಿತಿಗಳು ಬದಲಾಗುತ್ತವೆ. ಇಬ್ಬರೂ ಪರಿಸ್ಥಿತಿಯ ಅನುಗುಣವಾಗಿ ಬದಲಾಗುವುದು, ತಮ್ಮ ಆದ್ಯತೆ ಜವಾಬ್ದಾರಿಗಳನ್ನರಿತು ಮುನ್ನಡೆಯುವುದಷ್ಟೆ ಮುಖ್ಯವಾಗುತ್ತದೆ.
3) ಸಂಗಾತಿ ಪ್ರತಿ ಬಾರಿಯೂ ತನ್ನನ್ನು ಅರಿತು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದು ಪ್ರತಿಯೊಬ್ಬರ ಆಸೆ. ಆದರೆ, ಇದು ಇಬ್ಬರಲ್ಲೂ ಇರುವುದು ತಪ್ಪಲ್ಲ. ಆದರೆ ಕೆಲವೊಮ್ಮೆ ಪರಿಸ್ಥಿತಿಗಳು, ಒತ್ತಡಗಳು ಹೀಗಿರಲು ಬಿಡುವುದಿಲ್ಲ. ಪ್ರತಿ ಬಾರಿಯೂ ಸಂಗಾತಿ ಮನದಲ್ಲಿ ಏನಿದೆ ಅಂತ ಅರಿತುಕೊಳ್ಳುವುದೂ ಅಷ್ಟು ಸುಲಭವಲ್ಲ. ಏನನ್ನೂ ಹೇಳಿಕೊಳ್ಳದೆ ಇದ್ದರೆ ಇದು ಸುಲಭವೂ ಅಲ್ಲ. ಹಾಗಾಗಿ ಮನಸ್ಸು ಬಿಚ್ಚಿ ಮಾತಾಡುವುದು ಬಹಳ ಮುಖ್ಯ.
4) ಪರಿಸ್ಥಿತಿ ಬಿಗಡಾಯಿಸಿದರೆ, ಸಂಬಂಧ ಹಳಸುತ್ತಿದೆ ಎನಿಸಿದರೆ, ಅದನ್ನು ಹಾಗೆಯೇ ಬಿಡುವುದು ಒಳ್ಳೆಯದಲ್ಲ. ಇಬ್ಬರೂ ಇದನ್ನು ಸರಿಪಡಿಸಲು ಪ್ರಯತ್ನಿಸಬೇಕಾಗುತ್ತದೆ. ಅಗತ್ಯ ಬಿದ್ದರೆ, ಕೌನ್ಸೆಲಿಂಗ್ ಪಡೆದುಕೊಳ್ಳುವುದು ತಪ್ಪಲ್ಲ. ಸಂವಹನ ಸಂಸಾರದಲ್ಲಿ ಅತೀ ಅಗತ್ಯ. ಒಂದೊಳ್ಳೆ ಸಂಬಂಧ ವರ್ಕೌಟ್ ಆಗಬೇಕೆಂದರೆ, ಮಾತು ಕೀಲಿಕೈ. ಹಾಗಾಗಿ, ಇಬ್ಬರು ಕೂತು ಆಡಲಾಗದ ಮಾತುಗಳೂ ಕೂಡಾ ತಜ್ಙರ ಸಮ್ಮುಖದಲ್ಲಿ ಬಗೆಹರಿದು ಸಮಸ್ಯೆ ಬಗೆಹರಿದು ದಾರಿ ಸುಗಮವಾಗಬಹುದು.
5) ಯಾವುದೇ ವಿಚಾರದಲ್ಲಿ ವಾದ ಸಲ್ಲ. ಇನ್ನೊಬ್ಬರ ಸ್ಥಾನದಲ್ಲಿ ನಿಂತು ಅವರಿರುವ ಪರಿಸ್ಥಿತಿಯನ್ನು ಅರಿತುಕೊಳ್ಳಲು ಪ್ರಯತ್ನಿಸುವುದು ಆರೋಗ್ಯಕರ ಸಂಬಂಧವೊಂದು ಚಿರಸ್ಥಾಯಿಯಾಗಿ ಉಳಿಯಬಹುದು.
6) ಪ್ರತಿ ದಾಂಪತ್ಯದ ಮುಂದೆಯೂ ಒಂದು ಗುರಿಯಿರುತ್ತದೆ. ಒಂದು ಕುಟುಂಬವಾಗಿ ಹೇಗೆ ಮುಂದುವರಿಯಬೇಕು, ಏನನ್ನು ಸಾಧಿಸಬೇಕು, ಪಡೆಯಬೇಕು ಎಂಬುದರ ಬಗ್ಗೆ ಒಮ್ಮತವಿರಲಿ. ಇಬ್ಬರೂ ಪ್ರಾಮಾಣಿಕವಾಗಿ ಈ ನಿಟ್ಟಿನಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದಾದ ವಾತಾವರಣವಿರಲಿ. ಪರಿಸ್ಥಿತಿಗೆ ಅನುಗುಣವಾಗಿ ಇಬ್ಬರೂ ಮುಂದುವರಿವ ಗುಣವಿರಲಿ.
7) ಕೆಲವಾದರೂ ಆಸಕ್ತಿಗಳು ಇಬ್ಬರದ್ದೂ ಒಂದೇ ಆಗಿದ್ದಲ್ಲಿ, ಸಂಬಂಧ ಚೆನ್ನಾಗಿರುತ್ತದೆ ಎಂಬುದನ್ನು ಶೇ.೬೦ರಷ್ಟು ಮಂದಿ ನಂಬುತ್ತಾರೆ. ಒಂದೇ ತರದ ಆಸಕ್ತಿಗಳು ಇಬ್ಬರಲ್ಲೂ ಇಲ್ಲದಿದ್ದಲ್ಲಿ ದಾಂಪತ್ಯ ಖಂಡಿತ ಏಕತಾನತೆಯನ್ನು ಹುಟ್ಟುಹಾಕುತ್ತದೆ. ಲವಲವಿಕೆ ಕಳೆದುಕೊಳ್ಳುತ್ತದೆ. ಆಸಕ್ತಿಗಳು ಬೇರೆ ಬೇರೆ ಇದ್ದರೂ ಇಬ್ಬರ ಆಸಕ್ತಿಗಳ ಮೇಲೂ ಒಬ್ಬರಿಗೊಬ್ಬರು ಗೌರವ ಹೊಂದಿರಬೇಕು. ತಮಾಷೆ, ಉಡಾಫೆ ಸಂಬಂಧದಲ್ಲಿ ಬಿರುಕು ಮೂಡಿಸಬಹುದು. ಸಂಗಾತಿ ತನ್ನಿಷ್ಟದ ಸಂಗತಿಗಳ ಬಗ್ಗೆ ಮಾತನಾಡುವಾಗ ಕಿವಿಗೊಡಿ. ಅವಕ್ಕೂ ಸಮಯ ನೀಡಿ. ಮಾತಿಗೆ ಕಿವಿಯಾಗುವುದೂ ಪ್ರೋತ್ಸಾಹವೇ. ಕುರುಡು ನಂಬಿಕೆಗಳಿಂದ ಸಂಗಾತಿಯ ಆಸಕ್ತಿಯನ್ನು ಬಲಿಕೊಡಬೇಡಿ.
ಕೋಟ್ಯಾಧಿಪತಿಗಳಾಗಿದ್ದರೂ ತಮ್ಮ ಮಕ್ಕಳಿಗಾಗಿ ತಾವೇ ಅಡುಗೆ ಮಾಡ್ತಾರಂತೆ ವಿರಾಟ್ -ಅನುಷ್ಕಾ!
8) ಮಗು ಹುಟ್ಟಿದ ತಕ್ಷಣ ಎಲ್ಲ ಸರಿಯಾಗಿಬಿಡುತ್ತದೆ ಎಂಬುದೊಂದು ದೊಡ್ಡ ಸುಳ್ಳು ನಂಬಿಕೆ. ಮಗುವೊಂದರ ಆಗಮನ ಇಬ್ಬರ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆಯೆಂಬುದು ನಿಜವೇ. ಆದರೆ, ಇದು ಚೆನ್ನಾಗಿದ್ದ ಸಂಬಂಧಕ್ಕೆ ಮಾತ್ರ ಅನ್ವಯಿಸುತ್ತದೆ. ಚೆನ್ನಾಗಿದ್ದ ಸಂಬಂಧ ಮಗುವೊಂದರ ಆಗಮನದೊಂದಿಗೆ ಮತ್ತಷ್ಟು ಒಲವನ್ನು ಸುರಿದುಕೊಂಡು ಸಮೃದ್ಧವಾಗುತ್ತದೆ. ಆದರೆ, ಮೊದಲೇ ಸಂಸಾರ ಹದಗೆಟ್ಟಿದ್ದರೆ, ಮಗು ಮ್ಯಾಜಿಕ್ ಮಾಡಿ ಸರಿ ಮಾಡುವುದಿಲ್ಲ. ಇಲ್ಲಿ ಇಬ್ಬರ ಪ್ರಯತ್ನ, ಈ ಸಂದರ್ಭ ತಾವೇನು ಮಾಡಬೇಕು ಎಂಬುದನ್ನು ಅರಿತು ನಡೆಯುವುದರ ಮೇಲೆ ನಿಂತಿದೆ. ಇಬ್ಬರಿಗೂ ತಾವೆಷ್ಟು ಇಲ್ಲಿ ಸಮಯ ನೀಡಬೇಕು ಎಂಬುದೂ ಗೊತ್ತಿರಬೇಕು.
ಗಂಡ ಹೆಂಡತಿ ಮಲಗೋ ಬೆಡ್ರೂಮ್ನಲ್ಲಿ ಇದು ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು


