ಸಾಯುವುದು ಸುಲಭ. ಆದರೆ ಮನುಷ್ಯ ಬದುಕಿದ್ದಾಗ ಬೆಸೆದಿರುವಂಥಾ ಸಂಬಂಧಗಳನ್ನು ದೂರ ಮಾಡುವುದು ಕಷ್ಟ. ಆಕೆಯೇನೋ ಸಾಯುವ ನಿರ್ಧಾರ ಮಾಡಿ ನದಿಗೆ ಹಾರಿಯಾಗಿತ್ತು. ಆದರೆ ತನ್ನ ಒಡತಿ ಈಗ ಬರುತ್ತಾಳೆ, ಮತ್ತೆ ಬರುತ್ತಾಳೆ ಎಂದು ಆ ಸಾಕು ನಾಯಿ ಅಲ್ಲೇ ಕಾದು ಕುಳಿತಿತ್ತು. ಈ ಹೃದಯ ವಿದ್ರಾವಕ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಮರಾವತಿ: ಜೀವನ ಅಂದ್ಮೇಲೆ ಕಷ್ಟಗಳು, ಸಮಸ್ಯೆಗಳು ಬಂದೇ ಬರುತ್ತವೆ. ಕೆಲವರು ಇದನ್ನೆಲ್ಲಾ ಎದುರಿಸಿ ಮುಂದೆ ಸಾಗಿದರೆ ಇನ್ನು ಕೆಲವರು ಸಮಸ್ಯೆಗಳನ್ನು ಎದುರಿಸಲಾಗದೆ ಜೀವನಕ್ಕೆ ವಿಮುಖರಾಗುತ್ತಾರೆ. ಆತ್ಮಹತ್ಯೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ. ಸಾಯುವುದು ಸುಲಭ. ಆದರೆ ಮನುಷ್ಯ ಬದುಕಿದ್ದಾಗ ಬೆಸೆದಿರುವಂಥಾ ಸಂಬಂಧಗಳನ್ನು ದೂರ ಮಾಡುವುದು ಕಷ್ಟ. ಸಾಯುವುದು ಕೆಲವೇ ಸೆಕೆಂಡು ಅಥವಾ ನಿಮಿಷಗಳ ಕೆಲಸ ಅಷ್ಟೆ. ಆದರೆ ಜೀವನದಲ್ಲಿ ಅಲ್ಲಿಯವರೆಗೆ ಬಾಂಧವ್ಯದಿಂದ ಜೊತೆಗೆ ಬಂದವರ ಪಾಡೇನು. ಸತ್ತವರೇನೋ ಹೋಗಾಯಿತು. ಬದುಕಿದ್ದವರು ಒದ್ದಾಡಬೇಕು.

Add Asianetnews Kannada as a Preferred SourcegooglePreferred

ಆಕೆಯೇನೋ ಸಾಯುವ ನಿರ್ಧಾರ ಮಾಡಿ ನದಿಗೆ ಹಾರಿಯಾಗಿತ್ತು. ಆದರೆ ತನ್ನ ಒಡತಿ ಈಗ ಬರುತ್ತಾಳೆ, ಮತ್ತೆ ಬರುತ್ತಾಳೆ ಎಂದು ಆ ಸಾಕು ನಾಯಿ (Pet Dog) ಅಲ್ಲೇ ಕಾದು ಕುಳಿತಿತ್ತು. ಈ ಹೃದಯ ವಿದ್ರಾವಕ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಾವು ಓದೋದು ಹೀಗೆ ಅಂತ ರೀಲ್ ಪೋಸ್ಟ್ ಮಾಡಿದ್ರೆ ಎಲ್ಲ ಮಕ್ಕಳೂ ಇದು ನಾವೇ ಅನ್ನೋದಾ?

ಒಡತಿಗಾಗಿ ಪಾದರಕ್ಷೆ ಬಳಿ ಕಾದು ಕುಳಿತ ಶ್ವಾನ
ಆಂಧ್ರಪ್ರದೇಶದ ಅಂಬೇಡ್ಕರ್ ಕೋನಸೀಮಾ ಜಿಲ್ಲೆಯಲ್ಲಿ ಗೋದಾವರಿ ನದಿಗೆ ಹಾರಿದ ಸಾಕು ನಾಯಿಯೊಂದು ರಾತ್ರಿ ತನ್ನ ಮಾಲೀಕರಿಗಾಗಿ ಕಾಯುತ್ತಲೇ ಇತ್ತು. ಸಾಕು ನಾಯಿ ತನ್ನ ಮಾಲೀಕರ ಪಾದರಕ್ಷೆ (Slippers) ಬಳಿ ನಿಂತಿರುವ ಹೃದಯವಿದ್ರಾವಕ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ನಾಯಿ ಆಕೆ ನದಿಗೆ (River) ಹಾರಿದಾಗಿನಿಂದಲೂ ಅಲ್ಲಿಯೇ ಮಲಗಿತ್ತು. ಆಕೆ ಮರಳಿ ಬರುವುದನ್ನೇ ಕಾಯುತ್ತಿತ್ತು.

22 ವರ್ಷದ ಮಹಿಳೆಯೊಬ್ಬರು ಯಾನಂ ಮತ್ತು ಯದುರ್ಲಂಕಾ ನಡುವಿನ ಜಿಎಂಸಿ ಬಾಲಯೋಗಿ ಸೇತುವೆಯಿಂದ ನದಿಗೆ ಹಾರಿದ್ದಾರೆ. ಸೇತುವೆ ಮೇಲೆ ಮುದ್ದಿನ ಜೊತೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆ (Woman) ಇದ್ದಕ್ಕಿದ್ದಂತೆ ನದಿಗೆ ಹಾರಿದ್ದಾರೆ. ಸೂರ್ಯಾಸ್ತವನ್ನು ಆನಂದಿಸಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಈ ಪ್ರದೇಶಕ್ಕೆ ಸೇರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ದಾರಿಹೋಕರು ಈ ಬಗ್ಗೆ ಮಾಹಿತಿ ನೀಡಿದ ನಂತರ, ದೋಣಿಯಲ್ಲಿದ್ದ ಮೀನುಗಾರರು ಅವಳನ್ನು ಉಳಿಸಲು ಪ್ರಯತ್ನಿಸಿದರು ಆದರೆ ಅವಳು ಬಲವಾದ ಪ್ರವಾಹದಲ್ಲಿ ಕೊಚ್ಚಿಹೋದಳು. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದನ್ನು ತಿಳಿಯದೆ ಸಾಕು ನಾಯಿ ಆಕೆಯ ಚಪ್ಪಲಿಯ ಬಳಿ ಕಾಯುತ್ತಲೇ ಇತ್ತು.

ಬಲವಂತವಾಗಿ ಸ್ವೀಟ್ ತಿನ್ನಿಸಿದ ವರ, ಮುಖಕ್ಕೆ ಉಗುಳಿ, ಕಾಲಿನಿಂದ ತುಳಿದು ರಂಪಾಟ ಮಾಡಿದ ವಧು!

ಸೇತುವೆಯ ಉದ್ದಕ್ಕೂ ಓಡಾಡುತ್ತಾ, ಆಕೆಯ ಬರುವಿಕೆಗಾಗಿ ಎದುರು ನೋಡುತ್ತಿದ್ದ ನಾಯಿಯ ವರ್ತನೆ ಸಂಜೆ ವಾಕಿಂಗ್ ಮಾಡುವವರಿಗೆ ಹೃದಯ ವಿದ್ರಾವಕವಾಗಿತ್ತು. ನಾಯಿ ಅವಳಿಗಾಗಿ ಗಂಟೆಗಟ್ಟಲೆ ಕಾದಿತ್ತು ಮತ್ತು ಅವಳು ಬಂದು ಅವನನ್ನು ಕರೆದುಕೊಂಡು ಹೋಗುತ್ತಾಳೆ ಎಂದು ಆಶಿಸುತ್ತಾ ಅಲ್ಲಿಯೇ ಮಲಗಿತ್ತು. ಅದು ತನ್ನ ಮಾಲೀಕರ ಪಾದರಕ್ಷೆಗಳ ಬಳಿ ಕುಳಿತುಕೊಳ್ಳುತ್ತಾ ಆಕೆಯನ್ನೇ ಎದುರು ನೋಡುತ್ತಿತ್ತು. ರಾತ್ರಿಯಿಡೀ ಕಾದು ಅಲ್ಲೇ ಮಲಗಿತು. ಮತ್ತು, ಸೋಮವಾರ ಬೆಳಿಗ್ಗೆ, ಮಹಿಳೆಯ ತಾಯಿಯೊಂದಿಗೆ ಹೊರಟುಹೋಯಿತು.

ಮಹಿಳೆಯನ್ನು ಯಾನಂ ಫೆರಿ ರಸ್ತೆ ನಿವಾಸಿ ಮಂಡಂಗಿ ಕಾಂಚನಾ (22) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಯಾನಂ ಪೊಲೀಸರು ತಿಳಿಸಿದ್ದಾರೆ. ಯಾನಂ ಆಂಧ್ರಪ್ರದೇಶದೊಳಗಿರುವ ಪುದುಚೇರಿಯ ಕೇಂದ್ರಾಡಳಿತ ಪ್ರದೇಶವಾಗಿದೆ.

Scroll to load tweet…