userpic
user icon
0 Min read

ಮೈಸೂರಲ್ಲಿ ಜನನ, ಪ್ಯಾರಿಸ್‌ನಲ್ಲಿ ಪ್ರೇಮ; ಬೆಂಜ್ ಕಾರು ಕೊಡಿಸದ್ದಕ್ಕೆ ತಾಳಿ ಕಟ್ಟದೆ ಓಡಿಹೋದ ಅಳಿಮಯ್ಯ!

Born in Mysuru fell in love in Paris son in law ran away without tying mangalsutra to daughter sat

Synopsis

ಮೈಸೂರಿನಲ್ಲಿ ಹುಟ್ಟಿ ಬೆಳೆದ ಸ್ನೇಹಿತರು, ಫ್ರಾನ್ಸ್‌ನಲ್ಲಿ ಪ್ರೇಮ, ಪ್ರಣಯ ಮಾಡಿದ ಜೋಡಿ ಮದುವೆಗೆ ಸಜ್ಜಾಗಿತ್ತು. ಆದರೆ, ವರ ವರದಕ್ಷಿಣೆ ಕೇಳಿದ್ದಕ್ಕೆ ಮಾವ ಕೊಡಲು ನಿರಾಕರಿಸಿದ್ದಕ್ಕೆ ಮಂಟಪದಿಂದಲೇ ಕಾಲ್ಕಿತ್ತಿದ್ದಾನೆ. ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು (ಮಾ.05): ಇಬ್ಬರೂ ಹುಟ್ಟಿದ್ದು, ಬೆಳೆದಿದ್ದ, ಓದಿದ್ದು ಮೈಸೂರಲ್ಲಿ. ಆದ್ರೆ, ಕೆಲಸ ಮಾಡೋದಕ್ಕೆ ಹೋಗಿದ್ದು, ಪ್ರೀತಿ ಮಾಡಿದ್ದು ಫ್ರಾನ್ಸ್‌ನಲ್ಲಿ. ಇದೀಗ ಇಬ್ಬರ ಮನೆಯವರನ್ನು ಒಪ್ಪಿಸಿ ಮದುವೆ ಮಾಡಿಕೊಳ್ಳುವಾಗ ಭರ್ಜರಿ ವರದಕ್ಷಿಣೆಯನ್ನು ಕೇಳಿದ್ದಾನೆ. 50 ಲಕ್ಷ ರೂ. ಕ್ಯಾಶ್, 1/2 ಕೆಜಿ ಚಿನ್ನ ಹಾಗೂ ಬೆಂಜ್ ಕಾರಿಗೆ ಡಿಮ್ಯಾಂಡ್ ಮಾಡಿದ್ದಾನೆ. ಆದರೆ, ಮಾವ ತಾನು ಯಾವುದನ್ನೂ ಕೊಡೊಲ್ಲ ಎಂದಿದ್ದಕ್ಕೆ ತಾಳಿ ಕಟ್ಟುವುದನ್ನು ಬಿಟ್ಟು ಪರಾರಿ ಆಗಿದ್ದಾನೆ.

ಹೌದು, ತಾಳಿ ಕಟ್ಟುವ ಶುಭವೇಳ ವರನೇ ಮಂಟಪದಿಂದ ಕಾಲ್ಕಿತ್ತಿದ್ದಾನೆ. ಮೆಹಂದಿ, ಹಳದಿ ಶಾಸ್ತ್ರ ಮುಗಿಸಿ ಮದುವೆ ದಿನ ಪರಾರಿಯಾಗಿದ್ದಾನೆ. ಮೈಸೂರಿನಲ್ಲಿ ಸ್ನೇಹ, ಪ್ಯಾರಿಸ್‌ನಲ್ಲಿ ಪ್ರೇಮ-ಪ್ರಣಯ ಹಾಗೂ ಸುತ್ತಾಟ ಮಾಡಿದ್ದಾರೆ. ನಂತರ ಮನೆಯವರನ್ನು ಒಪ್ಪಿಸಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಆದರೆ, ಇದೀಗ ಯುವಕ ಮದುವೆ ಹಿಂದಿನ ರಾತ್ರಿ ಕಲ್ಯಾಣಮಂಟಪದಿಂದ ಓಡಿ ಹೋಗಿದ್ದಾನೆ. ಮದುವೆ ಓಡಿಹೋದ ವರನ ವಿರುದ್ಧ ವಧುವಿನ ತಂದೆ ದೂರು ನೀಡಿದ್ದಾರೆ. ವಧುವವಿನ ತಂದೆ ಬಳಿ ಬಂದು 50 ಲಕ್ಷ ನಗದು, ಅರ್ಧ ಕೆಜಿ ಚಿನ್ನ, ಬೆಂಜ್ ಕಾರಿಗೆ ಡಿಮ್ಯಾಂಡ್ ಮಾಡಿದ್ದಾನೆ. ಆದರೆ, ಮಾವ ಕೊಡಲ್ಲ ಎಂದಿದ್ದಕ್ಕೆ ಹೇಳದೆ-ಕೇಳದೆ ವರನ ಕಡೆಯವರು ಪರಾರಿ ಆಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ವರ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ.

ಮೈಸೂರಿನ ಕೇಂದ್ರಿಯ ವಿದ್ಯಾಲಯದಲ್ಲಿ ಓದುತ್ತಿದ್ದಾಗ ಇಬ್ಬರೂ ಕ್ಲಾಸ್‌ಮೇಟ್ ಆಗಿದ್ದರು. ಯುವಕ ಹಾಗೂ ಸಂತ್ರಸ್ತೆ ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಬಿಇ ಬಳಿಕ ಎಂಎಸ್ ಮುಗಿಸಿದ ಯುವತಿ ಫ್ರಾನ್ಸ್ ನಲ್ಲಿ ಕೆಲಸಕ್ಕೆ‌ ಸೇರಿದ್ದಳು. ಇದೀಗ ಪರಾರಿ ಆಗಿರುವ ಯುವಕ ಕೂಡ ಪ್ಯಾರೀಸ್‌ನಲ್ಲಿ ಕೆಲಸಕ್ಕೆ ಸೇರಿದ್ದನು. ಇಬ್ಬರ ಸ್ನೇಹ ಬಳಿಕ ಪ್ರೀತಿ ತಿರುಗಿ ಪ್ಯಾರೀಸ್‌ನಲ್ಲಿ ಪ್ರಣಯ ಪಕ್ಷಿಗಳಂತೆ ಸುತ್ತಾಡಿದ್ದಾರೆ. ನಂತರ, ಇಬ್ಬರು ಮನೆಯವರ ಒಪ್ಪಿಸಿ ಕಳೆದ‌ ಜುಲೈನಲ್ಲಿ ಎಂಗೇಜ್ಮೆಂಟ್ ಆಗಿದ್ದಾರೆ. ಕುಟುಂಬಸ್ಥರು ಫೆ.2ರಂದು ಮದುವೆ ಫಿಕ್ಸ್ ಮಾಡಿದ್ದರು.

ಇದನ್ನೂ ಓದಿ: ಮದುವೆಯಾದ 3 ದಿನಕ್ಕೆ ಹಾರ್ಟ್ ಅಟ್ಯಾಕ್‌ಗೆ ಬಲಿಯಾದ ಟೆಕ್ಕಿ; ಮಂಡ್ಯದ ಗಂಡು ಶಶಾಂಕ್ ಇನ್ನಿಲ್ಲ!

ಇದಾದ ನಂತರ ಮದುವೆ ಮಾಡಿಕೊಡಲು ಒಪ್ಪಿಕೊಮಡಿದ್ದ ಯುವತಿಯ ತಂದೆ ಬೆಂಗಳೂರಿನ ಗಾಂಧಿನಗರದ ನಂದಿ ಕ್ಲಬ್ ಅನ್ನು ಬುಕ್ ಮಾಡಿದ್ದರು. ಜನವರಿ 28ರಿಂದಲೇ ಶುರುವಾಗಿದ್ದ ಮದುವೆ ಕಾರ್ಯಕ್ರಮ ಶುರುವಾಗಿದ್ದವು. 1ನೇ ತಾರೀಕು ಮೆಹಂದಿ ಹಾಗೂ ಹಳದಿ ಶಾಸ್ತ್ರ ಕೂಡ ಮುಗಿದಿತ್ತು. ಆಗ ಯುವತಿಯ ತಂದೆ ಬಳಿ ಬಂದ ಯುವಕ ತನಗೆ ವರದಕ್ಷಿಣೆಯಾಗಿ 50 ಲಕ್ಷ ನಗದು, ಅರ್ಧ ಕೆಜಿ ಚಿನ್ನ ಹಾಗೂ ಬೆಂಜ್ ಕಾರು ಕೂಡುವಂತೆ ಡಿಮ್ಯಾಂಡ್ ಮಾಡಿದ್ದಾನೆ. ವರನ ತಂದೆ, ತಾಯಿ, ಸಂಬಂಧಿಯೋರ್ವರು ಬಂದು ವರದಕ್ಷಿಣೆ ಕೇಳಿದ್ದಾಗಿ ವಧುವಿನ ತಂದೆ ಆರೋಪ ಮಾಡಿದ್ದಾರೆ.

ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಆಗಿದೆ. ಅಷ್ಟೊಂದು ಡಿಮ್ಯಾಂಡ್ ಮಾಡಿದರೆ ಕೊಡಲು ಆಗಲ್ಲ ಎಂದ ವಧುವಿನ ತಂದೆ ಹೇಳಿದ್ದಾರೆ. ಅಷ್ಟು ಹೇಳ್ತಿದ್ದಂತೆ ರಾತ್ರೋ ರಾತ್ರಿ ವರ ಹಾಗೂ ಆತನ ಕಡೆಯವರು ಗಂಟುಮೂಟೆ‌ ಕಟ್ಟಿಕೊಂಡು ಮದುವೆ ಮಂಟಪದಿಂದ ಪರಾರಿ ಆಗಿದ್ದಾರೆ. ಮದುವೆ ಶಾಸ್ತ್ರಕ್ಕೆ ಬೆಳಗ್ಗೆ ವರನನ್ನು ಕರೆಯಲು ಹೋದಾಗ ಯಾರು ಇಲ್ಲದ್ದು ಗೊತ್ತಾಗಿ ದೂರು ಕೊಡಲಾಗಿದೆ. ಇದರಿಂದ ಶಾಕ್‌ಗೆ ಒಳಗಾದ ಯುವತಿ ತಂದೆ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಇನ್ನು ಯುವತಿಯನ್ನ ಮದುವೆಗೂ ಮುನ್ನ ಲೈಗಿಂಕವಾಗಿ ಬಳಸಿಕೊಂಡಿದ್ದಾನೆ ಎಂದು ಆರೋಪವನ್ನೂ ಮಾಡಲಾಗಿದೆ.

ಇದನ್ನೂ ಓದಿ: ನಮ್ಮಜ್ಜಿ ಅಕೌಂಟ್‌ನಲ್ಲಿ ₹80 ಲಕ್ಷ ಇದೆ ಎಂದಿದ್ದಷ್ಟೇ..! ಅಜ್ಜಿ ಹಣ, ಬಾಲಕಿ ಮಾನ ಎರಡೂ ಹೋಯ್ತು!

ಯುವತಿಯ ತಂದೆ ಕೊಟ್ಟ ದೂರಿನಲ್ಲಿ ವರದಕ್ಷಿಣೆ ಮಾತ್ರವಲ್ಲದೇ ಯುವತಿಯನ್ನ ಬಲವಂತವಾಗಿ ಲೈಗಿಂಕವಾಗಿ ಬಳಸಿಕೊಂಡಿದ್ದಾನೆ ಎಂದು ಉಲ್ಲೇಖ ಮಾಡಲಾಗಿದೆ. ಇದೀಗ ಯುವತಿ ತಂದೆ‌ಯ ದೂರಿನ‌ ಅನ್ವಯ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. 

Latest Videos