ಬೆಂಗಳೂರಿನಲ್ಲಿ, ಬಿಂದುಶ್ರೀ ಎಂಬ ಮಹಿಳೆ ತನ್ನ ಗಂಡ ಶ್ರೀಕಾಂತ್ಗೆ ಮಕ್ಕಳು ಬೇಡವೆಂದು ಕಿರುಕುಳ ನೀಡುತ್ತಿದ್ದಾಳೆ. ಸೌಂದರ್ಯ ಹಾಳಾಗುವುದೆಂಬ ಕಾರಣಕ್ಕೆ ಸಂಸಾರಕ್ಕೆ ಆಕೆ ಒಪ್ಪುತ್ತಿಲ್ಲ. ತಾಳಿ, ಕಾಲುಂಗುರ ಧರಿಸಲು ನಿರಾಕರಿಸಿದ್ದಾಳೆ. ಇದರಿಂದ ಬೇಸತ್ತ ಶ್ರೀಕಾಂತ್, ಹೆಂಡತಿಯ ವಿರುದ್ಧ ವಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ. ಈ ಘಟನೆ ಟೆಕ್ಕಿ ಅತುಲ್ ಆತ್ಮಹತ್ಯೆ ಪ್ರಕರಣವನ್ನು ನೆನಪಿಸುತ್ತದೆ.
ಬೆಂಗಳೂರು (ಮಾ.19): ನಾನು ನಿನ್ನ ಜೊತೆ ಮದುವೆ ಮಾಡಿಕೊಳ್ಳುವುದಕ್ಕೆ ಮಾತ್ರ ಒಪ್ಪಿಗೆ ಕೊಟ್ಟಿರುವುದು, ಮಕ್ಕಳನ್ನು ಮಾಡಿಕೊಳ್ಳೋದಕ್ಕೆ ನನ್ನ ಒಪ್ಪಿಗೆಯಿಲ್ಲ. ನೀನು ಮಕ್ಕಳು ಬೇಕೆಂದು ಸಂಸಾರ ಮಾಡಿದರೆ ನನ್ನ ಸೌಂದರ್ಯ ಹಾಳಾಗುತ್ತದೆ ಎಂದು ಗಂಡನಿಗೆ ಕಿರುಕುಳ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗಂಡನ ದೇಹದ ವಿವಿಧೆಡೆ ಗಾಯಗಳಾಗಿದ್ದು, ಹೆಂಡತಿ ವಿರುದ್ಧ ಗಂಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಬೆಂಗಳೂರಿನಲ್ಲಿ ಹೆಂಡತಿಯ ದೌರ್ಜನ್ಯಕ್ಕೆ ಅತುಲ್ ಸಂತೋಷ್ ಸಾವಿಗೀಡಾದ ಪ್ರಕರಣ ದೇಶದಾದ್ಯಂತ ಭಾರೀ ಸದ್ದು ಮಾಡಿತ್ತು. ಇದರ ಬೆನ್ನಲ್ಲಿಯೇ ಮತ್ತೊಂದು ಘಟನೆಯಲ್ಲಿ ಮಹಿಳೆಯೊಬ್ಬರು ತನ್ನ ಗಂಡನೊಂದಿಗೆ ಮಕ್ಕಳು ಮಾಡಿಕೊಳ್ಳುವುದು ಬೇಡವೆಂದು ಕಿರುಕುಳ ನೀಡಿದ ಘಟನೆ ನಡೆದಿದೆ. ನನಗೆ ಮದುವೆ ಬೇಕು, ಆದರೆ ಸಂಸಾರ ಬೇಡ. ಸಂಸಾರ ಆರಂಭಿಸಿ ಮಕ್ಕಳನ್ನು ಮಾಡಿಕೊಂಡರೆ ನನ್ನ ಸೌಂದರ್ಯ ಹಾಳಾಗುತ್ತದೆ. ನನ್ನನ್ನು ಮುಟ್ಟಬೇಡ ನನ್ನ ಬ್ಯೂಟಿ ಹಾಳಾಗತ್ತದೆ. ನಮಗೆ ಮಕ್ಕಳು ಬೇಡ ದತ್ತು ಮಕ್ಕಳನ್ನು ಸಾಕೋಣ ಎಂದು ಹೇಳಿದ್ದಾಳೆ.
ನನಗೆ ಇವಾಗ ಮಕ್ಕಳು ಬೇಡವೇ ಬೇಡ. ಬೇಕಾದರೆ, 60 ವರ್ಷದ ನಂತರ ಮಕ್ಕಳು ಮಾಡಿಕೊಳ್ಳೋಣ. ಒಂದು ವೇಳೆ ಈಗ ನೀನು ನನಗೆ ಡಿವೋರ್ಸ್ ಕೊಡಬೇಕು ಎಂದರೂ 45 ಲಕ್ಷ ರೂ. ಹಣವನ್ನು ಕೊಡು ಎಂದು ಹೆಂಡತಿ ಬಿಂದುಶ್ರಿ ಎಂಬಾಕೆ ಗಂಡ ಶ್ರೀಕಾಂತ್ಗೆ ಕಿರುಕುಳ ನೀಡಿದ್ದಾರೆ. ಈ ಶ್ರೀಕಾಂತನ ಕಥೆ ಇತ್ತೀಚೆಗೆ ಹೆಂಡತಿಯ ಕಿರುಕುಳದಿಂದ ಬೇಸತ್ತು ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾದ ಟೆಕ್ಕಿ ಅತುಲ್ ಸುಭಾಷ್ ಕೇಸ್ ನೆನಪಿಗೆ ಬರುತ್ತದೆ.
ಇದನ್ನೂ ಓದಿ: ಮಗಳೆಂದರೆ ಪ್ರಾಣ, ಆರಾಧ್ಯ ಹೊಗಳಿಕೆಗೆ ಕರಗಿದ ಮಾಜಿ ವಿಶ್ವ ಸುಂದರಿ
ಶ್ರೀಕಾಂತ ಮತ್ತು ಬಿಂದುಶ್ರೀಗೆ ಕಳೆದ ಎರಡು ವರ್ಷಗಳ ಹಿಂದೆ ಮದಿವೆಯಾಗಿದೆ. ಹನಿಮೂನ್ಗೆಂದು ಭಾರತದ ವಿವಿಧ ಪ್ರದೇಶಗಳಿಗೆ ಹೋಗಿ ಬಂದಿದ್ದಾರೆ. ಕಾಶ್ಮೀರಕ್ಕೂ ಹೋಗಿ ಬಂದಿರುವ ಜೋಡಿಯ ನಡುವೆ ಇನ್ನೂ ಮಕ್ಕಳು ಮಾಡಿಕೊಳ್ಳುವ ಸಂಸಾರವೇ ನಡೆದಿಲ್ಲವಂತೆ. ಗಂಡನೇ ಬಲವಂತವಾಗಿ ಮುಟ್ಟಿದರೆ ಡೆಟ್ ನೋಟ್ ಬರೆದಿಟ್ಟು ಸಾಯುತ್ತೀನಿ ಎಂದು ಹೆಂಡತಿ ಬಿಂದುಶ್ರಿ ಬ್ಲಾಕ್ಮೇಲ್ ಮಾಡಿದ್ದಾಳಂತೆ. ಇದೀಗ ಹೆಂಡತಿಯ ಈ ವರತನೆಯಿಂದ ಗಂಡ ಬೇಸತ್ತು ಹೋಗಿದ್ದಾನಂತೆ. ಮನೆಯವರು ಮದುವೆಯಾಗಿ 2 ವರ್ಷ ಆಯ್ತು, ಮಕ್ಕಳು ಯಾವಾಗ ಮಾಡಿಕೊಳ್ತೀರಿ ಎಂದು ಕೇಳುವ ಹಿರಿಯರಿಗೆ ಉತ್ತರ ಕೊಡಲಾಗದೇ ಶ್ರೀಕಾಂತ ಪರದಾಡುತ್ತಿದ್ದಾನೆ.

ಇನ್ನು ಬಿಂದುಶ್ರೀ ಮದುವೆ ಮಾಡಿಕೊಳ್ಳಲು ಶ್ರೀಕಾಂತ ಲಕ್ಷಾಂತರ ರೂ. ಹಣ ಖರ್ಚು ಮಾಡಿದ್ದಾನೆ. ಲಕ್ಷಾಂತರ ರೂ. ಮೌಲ್ಯದ ಚಿನ್ನದ ಒಡೆಗಳನ್ನು ಮಾಡಿಸಿಕೊಟ್ಟಿದ್ದಾನೆ. ಆದರೆ, ಇದೀಗ ಹೆಂಡತಿ ಬಿಂದುಶ್ರೀ ತಾಳಿ ಹಾಕಲ್ಲ, ಕಾಲು ಉಂಗುರ ಹಾಕಲ್ಲ ಎಂದು ಪಟ್ಟು ಹಿಡಿದಿದ್ದಾಳೆ. ಜೊತೆಗೆ ತಾಳಿ, ಕಾಲುಂಗುರ ಹಾಕಲೇಬೇಕು ಅಂತ ಎಲ್ಲಿಯೂ ನಿಯಮಗಳಿಲ್ಲ ಎಂದು ಹೆಂಡತಿ ಹೇಳುತ್ತಿದ್ದಾಳೆ. ಈಕೆಯ ನಡುವಳಿಕೆಯಿಂದ ಗಂಡ ಶ್ರೀಕಾಂತ್ ಬೇಸತ್ತು ಹೋಗಿದ್ದಾನೆ. ಇತ್ತ ಮದುವೆಯ ಖುಷಿಯು ಇಲ್ಲದೇ ಸೊರಗಿದ್ದಾನೆ.
ಇದನ್ನೂ ಓದಿ: ಮಗಳ ಹುಟ್ಟುಹಬ್ಬಕ್ಕೆ ಬಂದ ಮರ್ಚಂಟ್ ನೇವಿ ಅಧಿಕಾರಿ ಕತೆ ಮುಗಿಸಿದ ಪತ್ನಿ, ಆಕೆಯ ಪ್ರಿಯಕರ
ಗಂಡ-ಹೆಂಡತಿ ಆಗಿದ್ದೀವಿ ಸಂಸಾರಕ್ಕಾದರೂ ಒಪ್ಪಿಕೊಳ್ಳುವಂತೆ ಕೇಳಿದರೆ, ನೀನು ಯಾರ ಪಕ್ಕನಾದರೂ ಹೋಗಿ ಮಲಗಿಕೋ.. ಆದರೆ, ನನ್ನ ಬಳಿ ಮಾತ್ರ ಬರಬೇಡಾ ಎನ್ನುತ್ತಿದ್ದಾಳಂತೆ. ಇದರಿಂದ ತೀವ್ರ ಬೇಸತ್ತ ಗಂಡ ಶ್ರೀಕಾಂತ ಸದ್ಯ ಹೆಂಡತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಮಲ್ಲೇಶ್ವರಂ ಬಳಿಯ ವಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಶ್ರೀಕಾಂತ್ ದೂರು ನೀಡಿದ್ದು, ಪೊಲೀಸರು ಎನ್ಸಿಆರ್ ದಾಖಲು ಮಾಡಿದ್ದಾರೆ.
