Asianet Suvarna News Asianet Suvarna News

10 ಕೇಸ್ ಹಾಕಿದರೂ ಹೆದರೋ ಜಾಯಮಾನ ನನ್ನದಲ್ಲ: ರೇವಣ್ಣ

ದಸರಾ ಹಬ್ಬದ ವೇಳೆಗೆ ಜಿಲ್ಲೆ ಹಾಗೂ ತಾಲೂಕು ಸಮಿತಿಗಳಲ್ಲಿ ಬದಲಾವಣೆ ಮಾಡುವ ಮೂಲಕ ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷದ ಜವಾಬ್ದಾರಿ ಸಚಿವ ಸಂಘಟನೆಯ ನೀಡಲಾಗುವುದು. ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರು ಅಭಿವೃದ್ಧಿಗೆ ಆದ್ಯತೆ ನೀಡಿದ ಪರಿಣಾಮವಾಗಿ ಇಂದಿಗೂ ರಾಜ್ಯದಲ್ಲಿ ಜೆಡಿಎಸ್ ಜೀವಂತವಾಗಿದೆ ಎಂದ ಮಾಜಿ ಎಚ್.ಡಿ ರೇವಣ್ಣ 

new era of the JDS will begin soon Says Former Minister HD Revanna grg
Author
First Published Sep 18, 2024, 10:47 AM IST | Last Updated Sep 18, 2024, 10:47 AM IST

ಮಾಗಡಿ(ಸೆ.18): ಸಕಲೇಶಪುರ ಜಾತ್ಯತೀತ ಜನತಾದಳದ ಹೊಸ ಶಕೆ ಶೀಘ್ರವೇ ಆರಂಭವಾಗಲಿದೆ. ನಮ್ಮನ್ನು ರಾಜಕೀಯವಾಗಿ ಹಣಿಯಲು ಯಾರಿಂದಲು ಸಾಧ್ಯವಿಲ್ಲ. ನನ್ನ ವಿರುದ್ಧ ಇನ್ನೂ 10 ಕೇಸ್ ಹಾಕಿದರೂ ಹೆದರುವ ಜಾಯಮಾನ ನನ್ನದಲ್ಲ. ಇದಕ್ಕೆಲ್ಲ ಮುಂದಿನ ದಿನಗಳಲ್ಲಿ ಉತ್ತರ ದೊರೆಯಲಿದೆ ಎಂದು ಮಾಜಿ ಎಚ್.ಡಿ ರೇವಣ್ಣ ಹೇಳಿದ್ದಾರೆ. 

ಮಂಗಳವಾರ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಪಕ್ಷ ಸಂಕಷ್ಟದಲ್ಲಿದ್ದರು ಕಾರ್ಯಕರ್ತರು ತಮ್ಮ ಮೇಲೆ ತೋರುತ್ತಿರುವ ಅಭಿಮಾನಕ್ಕೆ ನಾನುಋಣಿಯಾಗಿದ್ದೇನೆ. ಈ ಹಿಂದಿನದನ್ನು ಶಕೆ ಮರೆತು ಮುಂದೆ ಹೆಜ್ಜೆ ಇಡಬೇಕಿದ್ದು, ರಾಜ್ಯದ 31 ಜಿಲ್ಲೆಗಳಲ್ಲೂ ಪಕ್ಷದ ಸಂಘಟನೆಗಾಗಿ ಕೆಲಸ ನಡೆಯಲಿದೆ ಎಂದು ತಿಳಿಸಿದ್ದಾರೆ.

ಸಿಎಂ ಸೀಟು ಖಾಲಿ ಇದ್ರೆ ಟವಲ್ ಹಾಕಬಹುದು, ಆದ್ರೆ ಜಾಗ ಖಾಲಿ ಇಲ್ಲ: ಸಚಿವ ಕೆ.ಎನ್.ರಾಜಣ್ಣ

ದಸರಾ ಹಬ್ಬದ ವೇಳೆಗೆ ಜಿಲ್ಲೆ ಹಾಗೂ ತಾಲೂಕು ಸಮಿತಿಗಳಲ್ಲಿ ಬದಲಾವಣೆ ಮಾಡುವ ಮೂಲಕ ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷದ ಜವಾಬ್ದಾರಿ ಸಚಿವ ಸಂಘಟನೆಯ ನೀಡಲಾಗುವುದು. ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರು ಅಭಿವೃದ್ಧಿಗೆ ಆದ್ಯತೆ ನೀಡಿದ ಪರಿಣಾಮವಾಗಿ ಇಂದಿಗೂ ರಾಜ್ಯದಲ್ಲಿ ಜೆಡಿಎಸ್ ಜೀವಂತವಾಗಿದೆ ಎಂದು ಅವರು ಹೇಳಿದರು.

Latest Videos
Follow Us:
Download App:
  • android
  • ios