ಕೈ-ತೆನೆ ದೋಸ್ತಿ ಎದುರು ಮಂಡಿಯೂರಿದ ಬಿಜೆಪಿ- Live Updates

Karnataka by election 2018 results update live blog

ಬಿಜೆಪಿ ಭದ್ರ ಕೋಟೆ ಬಳ್ಳಾರಿಯಲ್ಲಿಯೇ ಶ್ರೀರಾಮುಲುಗೆ ಡಿಕೆಶಿ ಡಿಚ್ಚಿ ಹೊಡೆದಿದ್ದು ಹೇಗೆ?
ಮಂಡ್ಯದಲ್ಲಿ ಸೋತರೂ ಬಿಜೆಪಿ ಅಭ್ಯರ್ಥಿಯ ದಾಖಲೆ ಏನು?
ನಿರೀಕ್ಷೆಯಂತೆ ನಿರಾಯಾಸವಾಗಿ ಗೆದ್ದ ಅನಿತಾ ಕುಮಾರಸ್ವಾಮಿ
ಶಿವಮೊಗ್ಗದಲ್ಲಿ ಕಷ್ಟ ಪಟ್ಟು ಗೆಲುವಿನ ಹಾದಿಯಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ
ಜಮಖಂಡಿಯಲ್ಲಿ ವರ್ಕ್ ಔಟ್ ಆದ ಅನುಕಂಪದ ಅಲೆ...ಇಲ್ಲಿದೆ ಸಂಪೂರ್ಣ ಮಾಹಿತಿ

1:57 PM IST

ರಾಜ್ಯದಲ್ಲಿ ಬಿಜೆಪಿ ಇಲ್ಲದಂತೆ ಮಾಡುತ್ತೇವೆ: ದಿನೇಶ್ ಗುಂಡೂರಾವ್

1:52 PM IST

ಕಾಂಗ್ರೆಸ್ ಬೆಂಬಲ ಗೆಲುವಿಗೆ ಕಾರಣ: ಅನಿತಾ

ರಾಮನಗರ ಉಪ ಚುನಾವಣೆ ಯಲ್ಲಿ ಭರ್ಜರಿ ಗೆಲುವು ತಂದಿರುವುದು ತುಂಬಾ ಸಂತಸ ತಂದಿದೆ. ಇಡೀ ರಾಜ್ಯದಲ್ಲೇ ಇಷ್ಟು ದೊಡ್ಡ ಅಂತರದಲ್ಲಿ ಗೆದ್ದ ಉದಾಹರಣೆ ಇಲ್ಲ. ಕ್ಷೇತ್ರದ ಜನತೆ ನಮ್ಮ ಕುಟುಂಬದ ಮೇಲೆ ಮೊದಲಿನಿಂದಲೂ ಇಟ್ಟಿರುವ ಅಭಿಮಾನದಿಂದ ಈ ಗೆಲುವು ಸಿಕ್ಕಿದೆ. ಕಾಂಗ್ರೆಸ್ ಬೆಂಬಲ ನೀಡಿದ್ದು ಬಾರಿ ಅಂತರದ ಗೆಲುವಿಗೆ ಕಾರಣ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುತ್ತೇವೆ.ರಾಮನಗರವನ್ನು  ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇನೆ. 
-ಅನಿತಾ ಕುಮಾರಸ್ವಾಮಿ, ರಾಮನಗರ ಹೊಸ ಶಾಸಕಿ

1:38 PM IST

ಉಪ ಚುನಾವಣೆ ಫಲಿತಾಂಶ ಬಿಜೆಪಿಗೊಂದು ಪಾಠ: ಸಿ.ಟಿ.ರವಿ

ಇನ್ನೂ ಉಪ ಚುನಾವಣೆ ಫಲಿತಾಂಶದ ಘೋಷಣೆಗೂ ಮುನ್ನವೇ ಮಂಡ್ಯದಲ್ಲಿ ಬಿಜೆಪಿ ಸೋಲುಪ್ಪಿಕೊಂಡಿದ್ದ ಚಿಕ್ಕಮಗಳೂರು ಶಾಸಕರ ಸಿ.ಟಿ.ರವಿ ಈಗ ಪ್ರತಿಕ್ರಿಯೆಸಿದ್ದು ಹೀಗೆ.

 

1:35 PM IST

ಬಿಜೆಪಿ ಪಾಠ ಕಲಿಯಲಿದು ಸಕಾಲ: ಪೂಜಾರಿ

ಶಿವಮೊಗ್ಗ, ಬಳ್ಳಾರಿ, ಜಮಖಂಡಿ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ನಿರೀಕ್ಷೆಯನ್ನೂ ಮೀರಿ‌ ಕಾಂಗ್ರೇಸ್- ಜೆಡಿಎಸ್ ಗೆಲುವು ಸಾಧಿಸಿದೆ. ಬಳ್ಳಾರಿಯಲ್ಲಿ ಡಿಕೆಶಿ ನೇತೃತ್ವದಲ್ಲಿ ಹಣದ ಹೊಳೆ ಹರಿಸಿದ್ದಾರೆ. ಹಣದ ದಂಧೆಯನ್ನು ತಡೆಯದಿದ್ದರೆ  ಏರುಪೇರಾಗುತ್ತೆ ಅನ್ನೋ ಆತಂಕ ಇತ್ತು. ಆಳುವ ಪಕ್ಷ ತನ್ನೆಲ್ಲಾ ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ಶಿವಮೊಗ್ಗದ ಗೆಲುವು ಸಂತೋಷ ನೀಡಿದೆ. ನಮ್ಮ ಪಕ್ಷಕ್ಕೆ ಆತ್ಮಾವಲೋಕನ ಮಾಡಲು ಸಕಾಲ. ತಳಮಟ್ಟದಿಂದಲೇ ಪಕ್ಷವನ್ನು ಗಟ್ಟಿಗೊಳಿಸಬೇಕಾಗಿದೆ. ಬಿಜೆಪಿ ಮುಂದಿನ ಪಾರ್ಲಿಮೆಂಟ್ ಚುನಾವಣೆ ಯಲ್ಲಿ ಹೆಚ್ವು ಸ್ಥಾನ ಗೆಲ್ಲುತ್ತೆ.

- ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ವಿಪಕ್ಷ ನಾಯಕ
 

1:28 PM IST

ಗಣಿ ನಾಡಲ್ಲಿ ಧೂಳೀಪಟವಾದ ಕಮಲ

ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಮುನ್ನವೇ ಬಿಜೆಪಿ ಗೆದ್ದಾಗಿದೆ ಎಂದು ಬೀಗುತ್ತಿದ್ದ ಪಕ್ಷಕ್ಕೆ ಬಿಗ್ ಶಾಕ್ ಬಳ್ಳಾರಿ ಫಲಿತಾಂಶ.

1:21 PM IST

ಉಪ ಸಮರ ಫಲಿತಾಂಶ: ಮೈತ್ರಿಗೆ ಸಿಕ್ಕ ಗೆಲುವು

ಕೈ ಮತ್ತು ಜೆಡಿಎಸ್ ಮೈತ್ರಿ ಸರಕಾರ ಆರು ತಿಂಗಳಿಂದ ಸರ್ಕಾರ ನಡೆಸುತ್ತಿದೆ. ಜಮಖಂಡಿ ಯಲ್ಲಿ ಕಳೆದ ಬಾರಿ ಕೇವಲ 2 ಸಾವಿರ ಮತದಿಂದ ಗೆದ್ದಿದ್ದೆವು. ಈ ಬಾರಿ ಗೆಲುವಿನ ಅಂತರ 40 ಸಾವಿರ ದಾಟಿದೆ. ಇದು ಕಾಂಗ್ರೆಸ್, ಜೆಡಿಎಸ್ ಸರ್ಕಾರಕ್ಕೆ ಸಿಕ್ಕ ಜನಾದೇಶ. ಇದು ಸಮ್ಮಿಶ್ರ ಸರ್ಕಾರಕ್ಕೆ ಸಿಕ್ಕ ಮಾರ್ಕ್ಸ್. 
- ಕೆ.ಸಿ ವೇಣುಗೋಪಾಲ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ

1:03 PM IST

ಸಿದ್ದರಾಮಯ್ಯ ನೇತೃತ್ವದ ಒಗ್ಗಟ್ಟಿಗೆ ಗೆಲವು

ಇದು ಸಿದ್ಧರಾಮಯ್ಯ ನೇತ್ರತ್ವದಲ್ಲಿ ಒಗ್ಗಟ್ಟಿನಿಂದ ಬಂದ ಗೆಲವು. ಪರಮೇಶ್ವರ್ ಅವರ ಚುನಾವಣಾ ಉಸ್ತುವಾರಿಯೂ ಈ ಗೆಲುವಿಗೆ ಕಾರಣ. ಕಾಂಗ್ರೆಸ್‌ನ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳು. ಜಮಖಂಡಿಯ ಸಿದ್ದುನ್ಯಾಮಗೌಡರ ಅಭಿವೃದ್ಧಿ ಕೆಲಸದಿಂದ ಅವರ ಮಗ ಗೆಲುವು ಸಾಧಿಸಿದ್ದಾರೆ. ಬಿಜೆಪಿಯವರು ವಿರೋಧ ಪಕ್ಷದ ಸ್ಥಾನದಲ್ಲಿದ್ದಾರೆ, ಅವರ ವ್ಯರ್ಥ ಪ್ರಯತ್ನವನ್ನ ನಿಲ್ಲಿಸಲಿ. ವಿರೋಧ ಪಕ್ಷದಲ್ಲಿದ್ದು ಬಿಜೆಪಿ ಕಾರ್ಯನಿರ್ವಹಿಸಲಿ.
- ಎಂ.ಬಿ.ಪಾಟೀಲ್, ಕಾಂಗ್ರೆಸ್ ಮುಖಂಡ
 

12:43 PM IST

ಮೈತ್ರಿ ಸರಕಾರದ ಗೆಲವಿದು: H. ವಿಶ್ವನಾಥ್

ಕರ್ನಾಟಕದ ಕಿರುಸಮರ ಮುಗಿದಿದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಗೆ ಮತದಾರ ಆಶೀರ್ವದಿಸಿದ್ದಾರೆ. ಮೈತ್ರಿ ಸರ್ಕಾರದ ಕಾರ್ಯಚಟುವಟಿಕೆಗೆ ರಾಜ್ಯದ ಜನ ಖುಷಿಪಟ್ಟಿದ್ದಾರೆ. ಕುಮಾರಸ್ವಾಮಿ ಯವರಿಗೆ ರಾಜ್ಯದ ಜನ್ರ ಬೆಂಬಲ ಸಿಕ್ಕಿದೆ. ದೇವೇಗೌಡ್ರ ಚಾಣಕ್ಯ ನಡುವಳಿಕೆಯಿಂದ ಗೆಲುವು ಸಾಧಿಸಿದೆ. ಗೌಡ್ರು ಬಳ್ಳಾರಿಯಲ್ಲಿ ನಡೆಸಿದ ಭಾಷಣ ಬಳ್ಳಾರಿ ಜನರ ಕಣ್ಣು ತೆರೆಸಿತ್ತು.ಇದ್ರ ಜೊತೆಗೆ ಡಿಕೆಶಿ, ಸಿದ್ದರಾಮಯ್ಯ ಎಲ್ಲರ ಶ್ರಮ ಒಗ್ಗೂಡಿ ಮೈತ್ರಿಗೆ ಗೆಲುವು ಸಿಕ್ಕಿದೆ.

- ಎಚ್.ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ

12:19 PM IST

ರಾಮನಗರಕ್ಕೆ ಮೊದಲ ಮಹಿಳಾ ಶಾಸಕಿ

ನಿರೀಕ್ಷೆಯಂತೆ ರಾಮನಗರದ ವಿಧಾನಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಗೆಲ್ಲುವುದು ಬಹುತೇಕ ಖಚಿತವಾಗಿದೆ.

20ನೇ ಸುತ್ತು ಕೊನೆ ಸುತ್ತು ಮುಗಿಯುವ ಹೊತ್ತಿಗೆ ಅಭ್ಯರ್ಥಿಗಳು ಪಡೆದ ಮತಗಳು...
ಅನಿತಾ ಕುಮಾರಸ್ವಾಮಿ -125043
ಬಿಜೆಪಿ : 15906
ಅಂತರ : 109137
ನೋಟಾ: 2909

11:40 AM IST

ಸೋಲಿಗೆ ನಾನೇ ಹೊಣೆ: ಶ್ರೀರಾಮುಲು

ಬಳ್ಳಾರಿಯಲ್ಲಿ ಅನಿರೀಕ್ಷಿತ ಫಲಿತಾಂಶ ಹೊರ ಬಿದಿದ್ದು, ಬಿಜೆಪಿ ಅಭ್ಯರ್ಥ ಸೋಲಿಗೆ ಶ್ರೀರಾಮುಲು ಅವರೇ ಹೊಣೆ ಹೊತ್ತಿದ್ದಾರೆ.

11:24 AM IST

ಬಳ್ಳಾರಿಯಲ್ಲಿ ಕೈಗೆ ಗೆಲವು: ಶ್ರೀರಾಮುಲುಗೆ ಥ್ಯಾಂಕ್ಸ್ ಎಂದ ಡಿಕೆಶಿ

ಶಿವಮೊಗ್ಗಕ್ಕೆ ಬರಬೇಕು ಅಂತ ನಿನ್ನೆಯಿಂದ ಕರೆಬರುತ್ತಿದೆ. ಇವತ್ತು ಬಳ್ಳಾರಿಗೆ ಹೋಗಬೇಕೋ, ಬೇಡವೋ ಎಂದು ತೀರ್ಮಾನಿಸುತ್ತೇನೆ. ರಾಜಕಾರಣದಲ್ಲಿ ಕೊನೆ ಸುತ್ತಿನಲ್ಲಿ ಏನು ಬೇಕಾದ್ರೂ ಆಗಬಹುದು. ಯಾಕಂದ್ರೆ ನನಗೆ ಅನುಭವ ಇದೆ. ನನಗೆ ಬಳ್ಳಾರಿ ಚುನಾವಣೆ ಜವಾಬ್ದಾರಿ ಸಿಕ್ಕಿತ್ತು. ನನಗೆ ಅನೇಕ ಟೀಕೆ ಟಿಪ್ಪಣಿಗಳನ್ನೂ ಮಾಡಿದ್ದರು. ಮೂವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಶ್ರೀರಾಮುಲು ಅಣ್ಣನಿಗೆ ಮೊದಲಿಗೆ ಧನ್ಯವಾದ. ಈ ಚುನಾವಣೆ ಉತ್ತಮ ರೀತಿ ನಡೆಯಲು ಸಹಕರಿಸಿದ್ದಾರೆ. ನಮ್ಮಿಂದ ಕಾರ್ಯಕರ್ತರಿಗೆ ಯಾವುದೇ ತೊಂದರೆ ಆಗಬಾರದು. ಶಾಂತಕ್ಕ ಕೂಡ ಬಹಳ ಸೌಮ್ಯವಾಗಿ ಮತಯಾಚಿಸಿದ್ದಾರೆ.  ಪಕ್ಷ ಭೇದ, ಜಾತಿ ಧರ್ಮ ಬಿಟ್ಟು ಮತದಾರರು ಸಹಕಾರ ನೀಡಿದ್ದಾರೆ. ಉಗ್ರಪ್ಪ ಅವರು ಪಾರ್ಲಿಮೆಂಟ್ ನಲ್ಲಿ ಉತ್ತಮ ಕೆಲಸ ಮಾಡಲಿದ್ದಾರೆ.  ನಾನು ಗೆದ್ದಿದ್ದೇನೆ ಎಂದು ನಾನು ಹಿಗ್ಗಲ್ಲ. 5 ತಿಂಗಳ ಚುನಾವಣೆ ಆದರೂ ನಾವು ಅದನ್ನು ಎದುರಿಸಬೇಕು.

-ಡಿ.ಕೆ.ಶಿವಕುಮಾರ್

11:12 AM IST

ಹಣ ದರ್ಬಳಕೆ ಮಾಡಿಕೊಂಡು ಗೆಲವು

ಮೈತ್ರಿ ಸರ್ಕಾರದ ಹಣ ಬಲ, ಅಧಿಕಾರದ ದುರುಪಯೋಗದಿಂದ ಕಾಂಗ್ರೆಸ್- ಜೆಡಿಎಸ್ ಗೆದ್ದಿದೆ. ಜನರ ತೀರ್ಪು ನಾವು ಸ್ವಾಗತಿಸುತ್ತೇವೆ. ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಾಗುವುದು ಈ ಹಿಂದೆ ಗುಂಡ್ಲುಪೇಟೆ ಹಾಗೂ 
ನಂಜನಗೂಡು ಫಲಿತಾಂಶಗಳು ಏನಾಯ್ತು? ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು. ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಯಾವ ಸರ್ಕಾರ ಅಧಿಕಾರದಲ್ಲಿರುತ್ತೋ ಅವರು ಅಧಿಕಾರ, ಹಣ ದುರ್ಬಳಕೆ ಮಾಡಿಕೊಂಡ ಗೆಲ್ಲುವುದು ಸಹಜ. ಈ ಫಲಿತಾಂಶ ಸಾರ್ವತ್ರಿಕ ಚುನಾವಣೆಯಲ್ಲಿ ಉಲ್ಟಾ ಆಗಲಿದೆ. ಫಲಿತಾಂಶದಿಂದ ಸಾರ್ವತ್ರಿಕ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜಮಖಂಡಿಯಲ್ಲಿ ಇವಿಎಂ ಮಷಿನ್ ಗಳನ್ನ ಖಾಸಗಿ ವಾಹನಗಳಲ್ಲಿ ಸಾಗಿಸಲಾಗಿದೆ.ಈ ಬಗ್ಗೆ ಬಿಜೆಪಿ ಆಯೋಗಕ್ಕೆ ದೂರು ನೀಡಿದೆ.ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಪ್ರಚಾರ ಮಾಡಿದ್ದೇವೆ.

- ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ

11:10 AM IST

ಶಿವಮೊಗ್ಗದಲ್ಲಿ ಹಣ ಬಲದ್ದೇ ಆಟ

ಪಂಚ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮನೆಗೆ ಸಚಿವ ಹೆಚ್ ಡಿ ರೇವಣ್ಣ ಭೇಟಿ ನೀಡಿದ್ದಾರೆ.

ನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಇದು ಸಹಜವಾಗಿ ಜನರ ತೀರ್ಪು ಮೈತ್ರಿ ಪಕ್ಷದ ಪರ ಇರೋದನ್ನು ತೋರಿಸಿದೆ.  ಶಿವಮೊಗ್ಗದಲ್ಲಿ ಹಣ ಬಲ ವರ್ಕೌಟ್ ಆಗಿದೆ ಅಷ್ಟೆ. ಕುಮಾರಸ್ವಾಮಿ ಒಳ್ಳೆ ಆಡಳಿತ ಕೊಟ್ಟಿದ್ದಾರೆ. ಅದಕ್ಕೆ ಜನರ ತೀರ್ಪು ಇದಾಗಿದೆ. ಇನ್ನಾದ್ರೂ ಸಂಪೂರ್ಣ ಸಾಲಮನ್ನಕ್ಕೆ ಕೇಂದ್ರ ಸಹಕಾರ ನೀಡಬೇಕು.

- ಎಚ್.ಡಿ.ರೇವಣ್ಣ

11:03 AM IST

ಬಳ್ಳಾರಿಯರಲ್ಲಿ ಜನಾರ್ದನ ರೆಡ್ಡಿಗೆ ಜನರೇ ಶಾಪ ನೀಡಿದ್ದಾರೆ

ಬಳ್ಳಾರಿಯ ಜನತಾ ಜನಾರ್ಧನರಿಗೆ ಧನ್ಯವಾದಗಳು.

ಜನಾರ್ಧನ ರೆಡ್ಡಿಯವರ ಅಮಾನವೀಯ ನಡೆ-ನುಡಿಗೆ ಬಳ್ಳಾರಿ ಜನರೇ ಶಾಪ ನೀಡಿದ್ದಾರೆ.@INCKarnataka

— Siddaramaiah (@siddaramaiah) November 6, 2018

ಜಮಖಂಡಿ ವಿಧಾನಸಭಾ ಉಪಚುನಾವಣೆಯಲ್ಲಿ ಜಯಗಳಿಸಿರುವ ಆನಂದ ನ್ಯಾಮಗೌಡ ಅವರಿಗೆ ಅಭಿನಂದನೆಗಳು. ಪಕ್ಷದ ಜಯಕ್ಕಾಗಿ ಶ್ರಮಿಸಿದ ನಾಯಕರು ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳು. ನಮ್ಮ ಅಭ್ಯರ್ಥಿಯನ್ನು ಆಶೀರ್ವದಿಸಿದ ಕ್ಷೇತ್ರದ ಮತದಾರರಿಗೆ ಕೃತಜ್ಞತೆಗಳು. #Jamakhandi @INCKarnataka

— Siddaramaiah (@siddaramaiah) November 6, 2018

10:43 AM IST

ಬಳ್ಳಾರಿ ಅರ್ಥಪೂರ್ಣ ದೀಪಾವಳಿ

ಬಳ್ಳಾರಿಯಲ್ಲಿ ನರಕಚತುರ್ದಶಿಯ ಅರ್ಥಪೂರ್ಣ ಆಚರಣೆ.
ಕತ್ತಲೆಯಿಂದ ಬೆಳಕಿನ ಕಡೆಗೆ ಜನಪಯಣ.

ನಾಡಬಾಂಧವರಿಗೆ
ದೀಪಾವಳಿಯ ಶುಭಾಶಯಗಳು.@INCKarnataka

— Siddaramaiah (@siddaramaiah) November 6, 2018

10:39 AM IST

ರಾಮನಗರದಲ್ಲಿ ಅನಿತಾಗೆ ಸುಲಭದ ಜಯ

10:30 AM IST

ಮಂಡ್ಯ: ಹಬ್ಬದ ಸಂಭ್ರಮದಲ್ಲಿ ವಿಜಯೋತ್ಸವಕ್ಕಿಲ್ಲ ಜನ

ಮಂಡ್ಯ ಲೋಕಸಭಾ ಬೈ ಎಲೆಕ್ಷನ್. ನಿರೀಕ್ಷೆಯಂತೆ ಜೆಡಿಎಸ್ ಭರ್ಜರಿ ಗೆಲುವು ಸಾಧಿಸಿದೆ. ಗೆಲುವಿನ ಸಂಭ್ರಮ ನಡೆಸಲು ಬಾರದ ಒಬ್ಬೇ ಒಬ್ಬ ಕಾರ್ಯಕರ್ತ. ಕೌಂಟಿಂಗ್ ಸೆಂಟರ್ ಸಂಪೂರ್ಣ ಬಣ ಬಣ. ಮತದಾನಕ್ಕೆ ನಿರುತ್ಸಾಹ ತೋರಿದಂತೆ, ಮತ ಎಣಿಕೆ ಕೇಂದ್ರದ ಬಳಿಯೂ ಬಾರದ ಕಾರ್ಯಕರ್ತರು.

10:21 AM IST

ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಗೆಲವು

9:41 AM IST

ಶಾಂತರಿಗಿಂತ ಉಗ್ರಪ್ಪಗೆ ಮುನ್ನಡೆ

#KarnatakaByElection2018: Congress' VS Ugrappa leading over BJP's J Shantha by 64000 votes in Bellary parliamentary seat after counting of votes for Round 4.

— ANI (@ANI) November 6, 2018

9:40 AM IST

ಬಳ್ಳಾರಿಯಲ್ಲಿಯೂ ಬಿಜಿಪಿಗಿಲ್ಲ ಮಣೆ

ಬಿಜೆಪಿ ಭದ್ರಕೋಟೆಯಾದ, ಗಣಿ ನಾಡು ಬಳ್ಳಾರಿಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಮುನ್ನಡೆ ಸಾಧಿಸುತ್ತಿದ್ದಾರೆ.

9:18 AM IST

ಜಮಖಂಡಿ: ಇವಿಎಂ ದುರುಪಯೋಗ ಆರೋಪ

9:16 AM IST

ಸಿಎಂಗೆ ಶಿವಮೊಗ್ಗದ್ದೇ ಟೆನ್ಷನ್

ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಗೆಲ್ಲುವುದು ಗ್ಯಾರಂಟಿ. ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಗೆಲವುದು ಬಹುತೇಕ ಖಚಿತ. ಬಳ್ಳಾರಿ ಹಾಗೂ ಜಮಖಂಡಿಯಲ್ಲಿ ಸ್ಪರ್ಧಿಸಿರುವುದು ಕಾಂಗ್ರೆಸ್ ಅಭ್ಯರ್ಥಿ. ಶಿವಮೊಗ್ಗದಲ್ಲೊಂದು ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಗೆದ್ದರೆ ಸಾಕೆನ್ನುವ ಆತಂಕದಲ್ಲಿದ್ದಾರೆ, ಸಿಎಂ.

9:08 AM IST

ಶಿವಮೊಗ್ಗದಲ್ಲಿ ರಾಘವೇಂದ್ರ ಮುನ್ನಡೆ

ಅತ್ಯಂತ ಕುತೂಹಲ ಕೆರಳಿಸಿರುವ ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಧು ಬಂಗಾರಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ. ಒಂದು ಸುತ್ತಿನಲ್ಲಿ ರಾಘವೇಂದ್ರ ಮುಂದೆ ಇದ್ದರೆ, ಮತ್ತೊಂದು ಸುತ್ತಿನಲ್ಲಿ ಮಧು ಹೆಚ್ಚಿನ ಮತ ಪಡೆಯುತ್ತಿದ್ದಾರೆ.

9:04 AM IST

ಗೆಲವು ನಮ್ಮದೇ: ಉಗ್ರಪ್ಪ

ಬಳ್ಳಾರಿ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು. ಈ ಚುನಾವಣೆಯಲ್ಲಿ ನಾನೇ ಗೆಲುವು ಸಾಧಿಸುತ್ತೇನೆ ಅನ್ನೋ ವಿಶ್ವಾಸ ಇದೆ. ನೂರಕ್ಕೆ ನೂರರಷ್ಟು ಗೆಲುವು ನಮ್ಮದೆ. ಜನರು ಪ್ರಬುದ್ಧರು ಇದ್ದಾರೆ. ಮತದಾರರು ಹಿಂದಿನ ಅಭಿವೃದ್ಧಿ ನೋಡಿ ನಮಗೆ ಮತಹಾಕಿದ್ದಾರೆ.
-ಉಗ್ರಪ್ಪ, ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ
 

8:57 AM IST

ಎಲ್ಲೆಡೆ ಬಿರುಸಿನ ಕೌಂಟಿಂಗ್

Karnataka: Counting of votes is underway for #KarnatakaByElection2018. Visuals from a counting station in Bellary. pic.twitter.com/CDvEBxQNjm

— ANI (@ANI) November 6, 2018

8:55 AM IST

ಬಳ್ಳಾರಿ: ಉಗ್ರಪ್ಪ ಅವರಿಗೆ 10 ಸಾವಿರ ಮತಗಳ ಮುನ್ನಡೆ

ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ ಎಸ್ ಉಗ್ರಪ್ಪಗೆ ಭಾರೀ ಮುನ್ನಡೆ. ಸುಮಾರು 10 ಸಾವಿರ ಮತಗಳಿಂದ ಮುನ್ನಡೆ ಕಾಯ್ದುಕೊಂಡ ಉಗ್ರಪ್ಪ.

8:51 AM IST

ಜಮಖಂಡಿ: ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ

ಜಮಖಂಡಿ 2ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಮುನ್ನಡೆ ಸಾಧಿಸಿದ್ದಾರೆ.

8:49 AM IST

ಬಳ್ಳಾರಿಯಲ್ಲಿ ಕಾಂಗ್ರೆಸ್‌ಗೆ ಮುನ್ನಡೆ

ಬಳ್ಳಾರಿಯಲ್ಲಿ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ವಿ ಎಸ್ ಉಗ್ರಪ್ಪ ಮುನ್ನಡೆ ಸಾಧಿಸಿದ್ದಾರೆ.

8:39 AM IST

ಮಂಡ್ಯ: ಮತ ಎಣಿಕೆ ಕೇಂದ್ರದತ್ತ ಸುಳಿಯದ ಕಾರ್ಯಕರ್ತರು

ಮತ ಎಣಿಕೆ ಶುರುವಾದರೂ ಕೇಂದ್ರದತ್ತ ಸುಳಿಯದ ಕಾರ್ಯಕರ್ತರು.  ಮತ ಎಣಿಕೆ ಕೇಂದ್ರದ ಸುತ್ತ ಭಾರಿ ಭದ್ರತೆ.  ಮತ ಎಣಿಕೆ ಕೇಂದ್ರದ ಮುಂಭಾಗ ಮೂರು ಹಂತದ ಭದ್ರತೆ. ಕಾರ್ಯಕರ್ತರನ್ನು ಕಾಲೇಜು ಕಾಂಪೌಂಡ್ ಹೊರಭಾಗದಲ್ಲಿ ನಿಲ್ಲಿಸಿರುವ ಪೊಲೀಸರು. ಮಂಡ್ಯದ ಸರ್ಕಾರಿ ಮಹಾವಿದ್ಯಾಲಯದಲ್ಲಿ ನಡೆಯುತ್ತಿದೆ ಎಣಿಕೆ ಕಾರ್ಯ.

8:26 AM IST

ಬಿ.ವೈ ರಾಘವೇಂದ್ರಗೆ 34 ಮತಗಳ ಮುನ್ನಡೆ

ಶಿವಮೊಗ್ಗದಲ್ಲಿ ಅಂಚೆ ಮತಗಳ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರಗೆ 34 ಮತಗಳ ಮುನ್ನಡೆ ಸಾಧಿಸಿದ್ದಾರೆ.

8:10 AM IST

ಅಂಚೆ ಮತಗಳ ಎಣಿಕೆ ಆರಂಭ: ಅನಿತಾ ಕುಮಾರಸ್ವಾಮಿ ಮುನ್ನಡೆ

ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಂಚೆ ಮತಗಳ ಎಣಿಕೆ ಆರಂಭವಾಗಿದ್ದು, ಆರಂಭದಿಂದಲೇ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

7:56 AM IST

ಮಂಡ್ಯ ಲೋಕಸಭಾ ಮತ ಏಣಿಕೆಯ ಸ್ಟ್ರಾಂಗ್ ರೂಂ‌ ಓಪನ್

ಮಂಡ್ಯ ಸರ್ಕಾರಿ ಸ್ವಾಯತ್ತ ಕಾಲೇಜಿನಲ್ಲಿರುವ ಮತ ಏಣಿಕೆಯ ಸ್ಟ್ರಾಂಗ್ ರೂಂ‌ ಓಪನ್ ಮಾಡಲಾಗಿದೆ. ಮಂಡ್ಯ ಸರ್ಕಾರಿ ಸ್ವಾಯತ್ತ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು,  ಜಿಲ್ಲಾಧಿಕಾರಿ ಎನ್.ಮಂಜುಶ್ರಿ ಮತ ಏಣಿಕಾ ಕೇಂದ್ರದ ಬಳಿ ಆಗಮಿಸಿ ಸ್ಟ್ರಾಂಗ್ ರೂಂ ಪರಿಶೀಲಿಸಿದರು.

7:35 AM IST

ಮನೆದೇವರ ಮೊರೆ ಹೋದ ಬಿ.ವೈ ರಾಘವೇಂದ್ರ

ಶಿವಮೊಗ್ಗ ಲೋಕಸಭೆ ಉಪ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಮತ ಎಣಿಕೆ ಕೇಂದ್ರಕ್ಕೆ ಶಿವಮೊಗ್ಗಕ್ಕೆ ಹೊರಡುವ ಮೊದಲು ಶಿಕಾರಿಪುರದ ಶ್ರೀ ಹುಚ್ಚೂರಾಯ ಸ್ವಾಮಿ ಹಾಗೂ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಪತ್ನಿ ತೇಜಸ್ವಿನಿಯೊಂದಿಗೆ ಭೇಟಿ  ನೀಡಿ ದೇವರ ದರ್ಶನ ಪಡೆದರು.

 

ಪಂಚ ತೀರ್ಪು ಯಾರಿಗೆ ವರ... ಯಾರಿಗೆ ಶಾಪ..?

7:13 AM IST

ಜಮಖಂಡಿ: ಮತ ಎಣಿಕೆದತ್ತ ಅಧಿಕಾರಿಗಳ ತಂಡ

ಜಮಖಂಡಿ ವಿಧಾನಸಭೆ ಉಪಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಜಮಖಂಡಿ ನಗರದ ಮಿನಿ ವಿಧಾನಸೌಧದತ್ತ  ಅಧಿಕಾರಿಗಳ ತಂಡ ಆಗಮಿಸಿದೆ. ಮತ ಎಣಿಕೆಗೆ ಸಕಲ‌ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್​ ಏರ್ಪಡಿಸಲಾಗಿದೆ. 

12:00 AM IST

ಜಮಖಂಡಿಯ ಮಿನಿವಿಧಾನಸೌಧದಲ್ಲಿರುವ ಸ್ಟ್ರಾಂಗ್ ರೂಮ್ ಓಪನ್

ಚುನಾವಣಾಧಿಕಾರಿ ಇಕ್ರಂ ಶರೀಫ್ ನೇತೃತ್ವದಲ್ಲಿ ಜಮಖಂಡಿಯ ಮಿನಿವಿಧಾನಸೌಧದಲ್ಲಿರುವ ಸ್ಟ್ರಾಂಗ್ ರೂಮ್ ಓಪನ್  ಮಾಡಲಾಗಿದೆ.

1:52 PM IST:

ರಾಮನಗರ ಉಪ ಚುನಾವಣೆ ಯಲ್ಲಿ ಭರ್ಜರಿ ಗೆಲುವು ತಂದಿರುವುದು ತುಂಬಾ ಸಂತಸ ತಂದಿದೆ. ಇಡೀ ರಾಜ್ಯದಲ್ಲೇ ಇಷ್ಟು ದೊಡ್ಡ ಅಂತರದಲ್ಲಿ ಗೆದ್ದ ಉದಾಹರಣೆ ಇಲ್ಲ. ಕ್ಷೇತ್ರದ ಜನತೆ ನಮ್ಮ ಕುಟುಂಬದ ಮೇಲೆ ಮೊದಲಿನಿಂದಲೂ ಇಟ್ಟಿರುವ ಅಭಿಮಾನದಿಂದ ಈ ಗೆಲುವು ಸಿಕ್ಕಿದೆ. ಕಾಂಗ್ರೆಸ್ ಬೆಂಬಲ ನೀಡಿದ್ದು ಬಾರಿ ಅಂತರದ ಗೆಲುವಿಗೆ ಕಾರಣ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುತ್ತೇವೆ.ರಾಮನಗರವನ್ನು  ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇನೆ. 
-ಅನಿತಾ ಕುಮಾರಸ್ವಾಮಿ, ರಾಮನಗರ ಹೊಸ ಶಾಸಕಿ

1:39 PM IST:

ಇನ್ನೂ ಉಪ ಚುನಾವಣೆ ಫಲಿತಾಂಶದ ಘೋಷಣೆಗೂ ಮುನ್ನವೇ ಮಂಡ್ಯದಲ್ಲಿ ಬಿಜೆಪಿ ಸೋಲುಪ್ಪಿಕೊಂಡಿದ್ದ ಚಿಕ್ಕಮಗಳೂರು ಶಾಸಕರ ಸಿ.ಟಿ.ರವಿ ಈಗ ಪ್ರತಿಕ್ರಿಯೆಸಿದ್ದು ಹೀಗೆ.

 

1:35 PM IST:

ಶಿವಮೊಗ್ಗ, ಬಳ್ಳಾರಿ, ಜಮಖಂಡಿ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ನಿರೀಕ್ಷೆಯನ್ನೂ ಮೀರಿ‌ ಕಾಂಗ್ರೇಸ್- ಜೆಡಿಎಸ್ ಗೆಲುವು ಸಾಧಿಸಿದೆ. ಬಳ್ಳಾರಿಯಲ್ಲಿ ಡಿಕೆಶಿ ನೇತೃತ್ವದಲ್ಲಿ ಹಣದ ಹೊಳೆ ಹರಿಸಿದ್ದಾರೆ. ಹಣದ ದಂಧೆಯನ್ನು ತಡೆಯದಿದ್ದರೆ  ಏರುಪೇರಾಗುತ್ತೆ ಅನ್ನೋ ಆತಂಕ ಇತ್ತು. ಆಳುವ ಪಕ್ಷ ತನ್ನೆಲ್ಲಾ ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ಶಿವಮೊಗ್ಗದ ಗೆಲುವು ಸಂತೋಷ ನೀಡಿದೆ. ನಮ್ಮ ಪಕ್ಷಕ್ಕೆ ಆತ್ಮಾವಲೋಕನ ಮಾಡಲು ಸಕಾಲ. ತಳಮಟ್ಟದಿಂದಲೇ ಪಕ್ಷವನ್ನು ಗಟ್ಟಿಗೊಳಿಸಬೇಕಾಗಿದೆ. ಬಿಜೆಪಿ ಮುಂದಿನ ಪಾರ್ಲಿಮೆಂಟ್ ಚುನಾವಣೆ ಯಲ್ಲಿ ಹೆಚ್ವು ಸ್ಥಾನ ಗೆಲ್ಲುತ್ತೆ.

- ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ವಿಪಕ್ಷ ನಾಯಕ
 

1:28 PM IST:

ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಮುನ್ನವೇ ಬಿಜೆಪಿ ಗೆದ್ದಾಗಿದೆ ಎಂದು ಬೀಗುತ್ತಿದ್ದ ಪಕ್ಷಕ್ಕೆ ಬಿಗ್ ಶಾಕ್ ಬಳ್ಳಾರಿ ಫಲಿತಾಂಶ.

1:21 PM IST:

ಕೈ ಮತ್ತು ಜೆಡಿಎಸ್ ಮೈತ್ರಿ ಸರಕಾರ ಆರು ತಿಂಗಳಿಂದ ಸರ್ಕಾರ ನಡೆಸುತ್ತಿದೆ. ಜಮಖಂಡಿ ಯಲ್ಲಿ ಕಳೆದ ಬಾರಿ ಕೇವಲ 2 ಸಾವಿರ ಮತದಿಂದ ಗೆದ್ದಿದ್ದೆವು. ಈ ಬಾರಿ ಗೆಲುವಿನ ಅಂತರ 40 ಸಾವಿರ ದಾಟಿದೆ. ಇದು ಕಾಂಗ್ರೆಸ್, ಜೆಡಿಎಸ್ ಸರ್ಕಾರಕ್ಕೆ ಸಿಕ್ಕ ಜನಾದೇಶ. ಇದು ಸಮ್ಮಿಶ್ರ ಸರ್ಕಾರಕ್ಕೆ ಸಿಕ್ಕ ಮಾರ್ಕ್ಸ್. 
- ಕೆ.ಸಿ ವೇಣುಗೋಪಾಲ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ

1:03 PM IST:

ಇದು ಸಿದ್ಧರಾಮಯ್ಯ ನೇತ್ರತ್ವದಲ್ಲಿ ಒಗ್ಗಟ್ಟಿನಿಂದ ಬಂದ ಗೆಲವು. ಪರಮೇಶ್ವರ್ ಅವರ ಚುನಾವಣಾ ಉಸ್ತುವಾರಿಯೂ ಈ ಗೆಲುವಿಗೆ ಕಾರಣ. ಕಾಂಗ್ರೆಸ್‌ನ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳು. ಜಮಖಂಡಿಯ ಸಿದ್ದುನ್ಯಾಮಗೌಡರ ಅಭಿವೃದ್ಧಿ ಕೆಲಸದಿಂದ ಅವರ ಮಗ ಗೆಲುವು ಸಾಧಿಸಿದ್ದಾರೆ. ಬಿಜೆಪಿಯವರು ವಿರೋಧ ಪಕ್ಷದ ಸ್ಥಾನದಲ್ಲಿದ್ದಾರೆ, ಅವರ ವ್ಯರ್ಥ ಪ್ರಯತ್ನವನ್ನ ನಿಲ್ಲಿಸಲಿ. ವಿರೋಧ ಪಕ್ಷದಲ್ಲಿದ್ದು ಬಿಜೆಪಿ ಕಾರ್ಯನಿರ್ವಹಿಸಲಿ.
- ಎಂ.ಬಿ.ಪಾಟೀಲ್, ಕಾಂಗ್ರೆಸ್ ಮುಖಂಡ
 

12:43 PM IST:

ಕರ್ನಾಟಕದ ಕಿರುಸಮರ ಮುಗಿದಿದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಗೆ ಮತದಾರ ಆಶೀರ್ವದಿಸಿದ್ದಾರೆ. ಮೈತ್ರಿ ಸರ್ಕಾರದ ಕಾರ್ಯಚಟುವಟಿಕೆಗೆ ರಾಜ್ಯದ ಜನ ಖುಷಿಪಟ್ಟಿದ್ದಾರೆ. ಕುಮಾರಸ್ವಾಮಿ ಯವರಿಗೆ ರಾಜ್ಯದ ಜನ್ರ ಬೆಂಬಲ ಸಿಕ್ಕಿದೆ. ದೇವೇಗೌಡ್ರ ಚಾಣಕ್ಯ ನಡುವಳಿಕೆಯಿಂದ ಗೆಲುವು ಸಾಧಿಸಿದೆ. ಗೌಡ್ರು ಬಳ್ಳಾರಿಯಲ್ಲಿ ನಡೆಸಿದ ಭಾಷಣ ಬಳ್ಳಾರಿ ಜನರ ಕಣ್ಣು ತೆರೆಸಿತ್ತು.ಇದ್ರ ಜೊತೆಗೆ ಡಿಕೆಶಿ, ಸಿದ್ದರಾಮಯ್ಯ ಎಲ್ಲರ ಶ್ರಮ ಒಗ್ಗೂಡಿ ಮೈತ್ರಿಗೆ ಗೆಲುವು ಸಿಕ್ಕಿದೆ.

- ಎಚ್.ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ

12:20 PM IST:

ನಿರೀಕ್ಷೆಯಂತೆ ರಾಮನಗರದ ವಿಧಾನಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಗೆಲ್ಲುವುದು ಬಹುತೇಕ ಖಚಿತವಾಗಿದೆ.

20ನೇ ಸುತ್ತು ಕೊನೆ ಸುತ್ತು ಮುಗಿಯುವ ಹೊತ್ತಿಗೆ ಅಭ್ಯರ್ಥಿಗಳು ಪಡೆದ ಮತಗಳು...
ಅನಿತಾ ಕುಮಾರಸ್ವಾಮಿ -125043
ಬಿಜೆಪಿ : 15906
ಅಂತರ : 109137
ನೋಟಾ: 2909

11:40 AM IST:

ಬಳ್ಳಾರಿಯಲ್ಲಿ ಅನಿರೀಕ್ಷಿತ ಫಲಿತಾಂಶ ಹೊರ ಬಿದಿದ್ದು, ಬಿಜೆಪಿ ಅಭ್ಯರ್ಥ ಸೋಲಿಗೆ ಶ್ರೀರಾಮುಲು ಅವರೇ ಹೊಣೆ ಹೊತ್ತಿದ್ದಾರೆ.

11:25 AM IST:

ಶಿವಮೊಗ್ಗಕ್ಕೆ ಬರಬೇಕು ಅಂತ ನಿನ್ನೆಯಿಂದ ಕರೆಬರುತ್ತಿದೆ. ಇವತ್ತು ಬಳ್ಳಾರಿಗೆ ಹೋಗಬೇಕೋ, ಬೇಡವೋ ಎಂದು ತೀರ್ಮಾನಿಸುತ್ತೇನೆ. ರಾಜಕಾರಣದಲ್ಲಿ ಕೊನೆ ಸುತ್ತಿನಲ್ಲಿ ಏನು ಬೇಕಾದ್ರೂ ಆಗಬಹುದು. ಯಾಕಂದ್ರೆ ನನಗೆ ಅನುಭವ ಇದೆ. ನನಗೆ ಬಳ್ಳಾರಿ ಚುನಾವಣೆ ಜವಾಬ್ದಾರಿ ಸಿಕ್ಕಿತ್ತು. ನನಗೆ ಅನೇಕ ಟೀಕೆ ಟಿಪ್ಪಣಿಗಳನ್ನೂ ಮಾಡಿದ್ದರು. ಮೂವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಶ್ರೀರಾಮುಲು ಅಣ್ಣನಿಗೆ ಮೊದಲಿಗೆ ಧನ್ಯವಾದ. ಈ ಚುನಾವಣೆ ಉತ್ತಮ ರೀತಿ ನಡೆಯಲು ಸಹಕರಿಸಿದ್ದಾರೆ. ನಮ್ಮಿಂದ ಕಾರ್ಯಕರ್ತರಿಗೆ ಯಾವುದೇ ತೊಂದರೆ ಆಗಬಾರದು. ಶಾಂತಕ್ಕ ಕೂಡ ಬಹಳ ಸೌಮ್ಯವಾಗಿ ಮತಯಾಚಿಸಿದ್ದಾರೆ.  ಪಕ್ಷ ಭೇದ, ಜಾತಿ ಧರ್ಮ ಬಿಟ್ಟು ಮತದಾರರು ಸಹಕಾರ ನೀಡಿದ್ದಾರೆ. ಉಗ್ರಪ್ಪ ಅವರು ಪಾರ್ಲಿಮೆಂಟ್ ನಲ್ಲಿ ಉತ್ತಮ ಕೆಲಸ ಮಾಡಲಿದ್ದಾರೆ.  ನಾನು ಗೆದ್ದಿದ್ದೇನೆ ಎಂದು ನಾನು ಹಿಗ್ಗಲ್ಲ. 5 ತಿಂಗಳ ಚುನಾವಣೆ ಆದರೂ ನಾವು ಅದನ್ನು ಎದುರಿಸಬೇಕು.

-ಡಿ.ಕೆ.ಶಿವಕುಮಾರ್

11:12 AM IST:

ಮೈತ್ರಿ ಸರ್ಕಾರದ ಹಣ ಬಲ, ಅಧಿಕಾರದ ದುರುಪಯೋಗದಿಂದ ಕಾಂಗ್ರೆಸ್- ಜೆಡಿಎಸ್ ಗೆದ್ದಿದೆ. ಜನರ ತೀರ್ಪು ನಾವು ಸ್ವಾಗತಿಸುತ್ತೇವೆ. ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಾಗುವುದು ಈ ಹಿಂದೆ ಗುಂಡ್ಲುಪೇಟೆ ಹಾಗೂ 
ನಂಜನಗೂಡು ಫಲಿತಾಂಶಗಳು ಏನಾಯ್ತು? ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು. ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಯಾವ ಸರ್ಕಾರ ಅಧಿಕಾರದಲ್ಲಿರುತ್ತೋ ಅವರು ಅಧಿಕಾರ, ಹಣ ದುರ್ಬಳಕೆ ಮಾಡಿಕೊಂಡ ಗೆಲ್ಲುವುದು ಸಹಜ. ಈ ಫಲಿತಾಂಶ ಸಾರ್ವತ್ರಿಕ ಚುನಾವಣೆಯಲ್ಲಿ ಉಲ್ಟಾ ಆಗಲಿದೆ. ಫಲಿತಾಂಶದಿಂದ ಸಾರ್ವತ್ರಿಕ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜಮಖಂಡಿಯಲ್ಲಿ ಇವಿಎಂ ಮಷಿನ್ ಗಳನ್ನ ಖಾಸಗಿ ವಾಹನಗಳಲ್ಲಿ ಸಾಗಿಸಲಾಗಿದೆ.ಈ ಬಗ್ಗೆ ಬಿಜೆಪಿ ಆಯೋಗಕ್ಕೆ ದೂರು ನೀಡಿದೆ.ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಪ್ರಚಾರ ಮಾಡಿದ್ದೇವೆ.

- ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ

11:10 AM IST:

ಪಂಚ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮನೆಗೆ ಸಚಿವ ಹೆಚ್ ಡಿ ರೇವಣ್ಣ ಭೇಟಿ ನೀಡಿದ್ದಾರೆ.

ನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಇದು ಸಹಜವಾಗಿ ಜನರ ತೀರ್ಪು ಮೈತ್ರಿ ಪಕ್ಷದ ಪರ ಇರೋದನ್ನು ತೋರಿಸಿದೆ.  ಶಿವಮೊಗ್ಗದಲ್ಲಿ ಹಣ ಬಲ ವರ್ಕೌಟ್ ಆಗಿದೆ ಅಷ್ಟೆ. ಕುಮಾರಸ್ವಾಮಿ ಒಳ್ಳೆ ಆಡಳಿತ ಕೊಟ್ಟಿದ್ದಾರೆ. ಅದಕ್ಕೆ ಜನರ ತೀರ್ಪು ಇದಾಗಿದೆ. ಇನ್ನಾದ್ರೂ ಸಂಪೂರ್ಣ ಸಾಲಮನ್ನಕ್ಕೆ ಕೇಂದ್ರ ಸಹಕಾರ ನೀಡಬೇಕು.

- ಎಚ್.ಡಿ.ರೇವಣ್ಣ

11:03 AM IST:

ಬಳ್ಳಾರಿಯ ಜನತಾ ಜನಾರ್ಧನರಿಗೆ ಧನ್ಯವಾದಗಳು.

ಜನಾರ್ಧನ ರೆಡ್ಡಿಯವರ ಅಮಾನವೀಯ ನಡೆ-ನುಡಿಗೆ ಬಳ್ಳಾರಿ ಜನರೇ ಶಾಪ ನೀಡಿದ್ದಾರೆ.@INCKarnataka

— Siddaramaiah (@siddaramaiah) November 6, 2018

ಜಮಖಂಡಿ ವಿಧಾನಸಭಾ ಉಪಚುನಾವಣೆಯಲ್ಲಿ ಜಯಗಳಿಸಿರುವ ಆನಂದ ನ್ಯಾಮಗೌಡ ಅವರಿಗೆ ಅಭಿನಂದನೆಗಳು. ಪಕ್ಷದ ಜಯಕ್ಕಾಗಿ ಶ್ರಮಿಸಿದ ನಾಯಕರು ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳು. ನಮ್ಮ ಅಭ್ಯರ್ಥಿಯನ್ನು ಆಶೀರ್ವದಿಸಿದ ಕ್ಷೇತ್ರದ ಮತದಾರರಿಗೆ ಕೃತಜ್ಞತೆಗಳು. #Jamakhandi @INCKarnataka

— Siddaramaiah (@siddaramaiah) November 6, 2018

10:43 AM IST:

ಬಳ್ಳಾರಿಯಲ್ಲಿ ನರಕಚತುರ್ದಶಿಯ ಅರ್ಥಪೂರ್ಣ ಆಚರಣೆ.
ಕತ್ತಲೆಯಿಂದ ಬೆಳಕಿನ ಕಡೆಗೆ ಜನಪಯಣ.

ನಾಡಬಾಂಧವರಿಗೆ
ದೀಪಾವಳಿಯ ಶುಭಾಶಯಗಳು.@INCKarnataka

— Siddaramaiah (@siddaramaiah) November 6, 2018

10:30 AM IST:

ಮಂಡ್ಯ ಲೋಕಸಭಾ ಬೈ ಎಲೆಕ್ಷನ್. ನಿರೀಕ್ಷೆಯಂತೆ ಜೆಡಿಎಸ್ ಭರ್ಜರಿ ಗೆಲುವು ಸಾಧಿಸಿದೆ. ಗೆಲುವಿನ ಸಂಭ್ರಮ ನಡೆಸಲು ಬಾರದ ಒಬ್ಬೇ ಒಬ್ಬ ಕಾರ್ಯಕರ್ತ. ಕೌಂಟಿಂಗ್ ಸೆಂಟರ್ ಸಂಪೂರ್ಣ ಬಣ ಬಣ. ಮತದಾನಕ್ಕೆ ನಿರುತ್ಸಾಹ ತೋರಿದಂತೆ, ಮತ ಎಣಿಕೆ ಕೇಂದ್ರದ ಬಳಿಯೂ ಬಾರದ ಕಾರ್ಯಕರ್ತರು.

9:41 AM IST:

#KarnatakaByElection2018: Congress' VS Ugrappa leading over BJP's J Shantha by 64000 votes in Bellary parliamentary seat after counting of votes for Round 4.

— ANI (@ANI) November 6, 2018

9:40 AM IST:

ಬಿಜೆಪಿ ಭದ್ರಕೋಟೆಯಾದ, ಗಣಿ ನಾಡು ಬಳ್ಳಾರಿಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಮುನ್ನಡೆ ಸಾಧಿಸುತ್ತಿದ್ದಾರೆ.

9:16 AM IST:

ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಗೆಲ್ಲುವುದು ಗ್ಯಾರಂಟಿ. ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಗೆಲವುದು ಬಹುತೇಕ ಖಚಿತ. ಬಳ್ಳಾರಿ ಹಾಗೂ ಜಮಖಂಡಿಯಲ್ಲಿ ಸ್ಪರ್ಧಿಸಿರುವುದು ಕಾಂಗ್ರೆಸ್ ಅಭ್ಯರ್ಥಿ. ಶಿವಮೊಗ್ಗದಲ್ಲೊಂದು ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಗೆದ್ದರೆ ಸಾಕೆನ್ನುವ ಆತಂಕದಲ್ಲಿದ್ದಾರೆ, ಸಿಎಂ.

9:08 AM IST:

ಅತ್ಯಂತ ಕುತೂಹಲ ಕೆರಳಿಸಿರುವ ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಧು ಬಂಗಾರಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ. ಒಂದು ಸುತ್ತಿನಲ್ಲಿ ರಾಘವೇಂದ್ರ ಮುಂದೆ ಇದ್ದರೆ, ಮತ್ತೊಂದು ಸುತ್ತಿನಲ್ಲಿ ಮಧು ಹೆಚ್ಚಿನ ಮತ ಪಡೆಯುತ್ತಿದ್ದಾರೆ.

9:04 AM IST:

ಬಳ್ಳಾರಿ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು. ಈ ಚುನಾವಣೆಯಲ್ಲಿ ನಾನೇ ಗೆಲುವು ಸಾಧಿಸುತ್ತೇನೆ ಅನ್ನೋ ವಿಶ್ವಾಸ ಇದೆ. ನೂರಕ್ಕೆ ನೂರರಷ್ಟು ಗೆಲುವು ನಮ್ಮದೆ. ಜನರು ಪ್ರಬುದ್ಧರು ಇದ್ದಾರೆ. ಮತದಾರರು ಹಿಂದಿನ ಅಭಿವೃದ್ಧಿ ನೋಡಿ ನಮಗೆ ಮತಹಾಕಿದ್ದಾರೆ.
-ಉಗ್ರಪ್ಪ, ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ
 

8:58 AM IST:

Karnataka: Counting of votes is underway for #KarnatakaByElection2018. Visuals from a counting station in Bellary. pic.twitter.com/CDvEBxQNjm

— ANI (@ANI) November 6, 2018

8:55 AM IST:

ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ ಎಸ್ ಉಗ್ರಪ್ಪಗೆ ಭಾರೀ ಮುನ್ನಡೆ. ಸುಮಾರು 10 ಸಾವಿರ ಮತಗಳಿಂದ ಮುನ್ನಡೆ ಕಾಯ್ದುಕೊಂಡ ಉಗ್ರಪ್ಪ.

8:51 AM IST:

ಜಮಖಂಡಿ 2ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಮುನ್ನಡೆ ಸಾಧಿಸಿದ್ದಾರೆ.

8:49 AM IST:

ಬಳ್ಳಾರಿಯಲ್ಲಿ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ವಿ ಎಸ್ ಉಗ್ರಪ್ಪ ಮುನ್ನಡೆ ಸಾಧಿಸಿದ್ದಾರೆ.

8:40 AM IST:

ಮತ ಎಣಿಕೆ ಶುರುವಾದರೂ ಕೇಂದ್ರದತ್ತ ಸುಳಿಯದ ಕಾರ್ಯಕರ್ತರು.  ಮತ ಎಣಿಕೆ ಕೇಂದ್ರದ ಸುತ್ತ ಭಾರಿ ಭದ್ರತೆ.  ಮತ ಎಣಿಕೆ ಕೇಂದ್ರದ ಮುಂಭಾಗ ಮೂರು ಹಂತದ ಭದ್ರತೆ. ಕಾರ್ಯಕರ್ತರನ್ನು ಕಾಲೇಜು ಕಾಂಪೌಂಡ್ ಹೊರಭಾಗದಲ್ಲಿ ನಿಲ್ಲಿಸಿರುವ ಪೊಲೀಸರು. ಮಂಡ್ಯದ ಸರ್ಕಾರಿ ಮಹಾವಿದ್ಯಾಲಯದಲ್ಲಿ ನಡೆಯುತ್ತಿದೆ ಎಣಿಕೆ ಕಾರ್ಯ.

8:26 AM IST:

ಶಿವಮೊಗ್ಗದಲ್ಲಿ ಅಂಚೆ ಮತಗಳ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರಗೆ 34 ಮತಗಳ ಮುನ್ನಡೆ ಸಾಧಿಸಿದ್ದಾರೆ.

8:19 AM IST:

ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಂಚೆ ಮತಗಳ ಎಣಿಕೆ ಆರಂಭವಾಗಿದ್ದು, ಆರಂಭದಿಂದಲೇ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

7:56 AM IST:

ಮಂಡ್ಯ ಸರ್ಕಾರಿ ಸ್ವಾಯತ್ತ ಕಾಲೇಜಿನಲ್ಲಿರುವ ಮತ ಏಣಿಕೆಯ ಸ್ಟ್ರಾಂಗ್ ರೂಂ‌ ಓಪನ್ ಮಾಡಲಾಗಿದೆ. ಮಂಡ್ಯ ಸರ್ಕಾರಿ ಸ್ವಾಯತ್ತ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು,  ಜಿಲ್ಲಾಧಿಕಾರಿ ಎನ್.ಮಂಜುಶ್ರಿ ಮತ ಏಣಿಕಾ ಕೇಂದ್ರದ ಬಳಿ ಆಗಮಿಸಿ ಸ್ಟ್ರಾಂಗ್ ರೂಂ ಪರಿಶೀಲಿಸಿದರು.

8:19 AM IST:

ಶಿವಮೊಗ್ಗ ಲೋಕಸಭೆ ಉಪ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಮತ ಎಣಿಕೆ ಕೇಂದ್ರಕ್ಕೆ ಶಿವಮೊಗ್ಗಕ್ಕೆ ಹೊರಡುವ ಮೊದಲು ಶಿಕಾರಿಪುರದ ಶ್ರೀ ಹುಚ್ಚೂರಾಯ ಸ್ವಾಮಿ ಹಾಗೂ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಪತ್ನಿ ತೇಜಸ್ವಿನಿಯೊಂದಿಗೆ ಭೇಟಿ  ನೀಡಿ ದೇವರ ದರ್ಶನ ಪಡೆದರು.

 

ಪಂಚ ತೀರ್ಪು ಯಾರಿಗೆ ವರ... ಯಾರಿಗೆ ಶಾಪ..?

7:42 AM IST:

ಜಮಖಂಡಿ ವಿಧಾನಸಭೆ ಉಪಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಜಮಖಂಡಿ ನಗರದ ಮಿನಿ ವಿಧಾನಸೌಧದತ್ತ  ಅಧಿಕಾರಿಗಳ ತಂಡ ಆಗಮಿಸಿದೆ. ಮತ ಎಣಿಕೆಗೆ ಸಕಲ‌ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್​ ಏರ್ಪಡಿಸಲಾಗಿದೆ. 

7:32 AM IST:

ಚುನಾವಣಾಧಿಕಾರಿ ಇಕ್ರಂ ಶರೀಫ್ ನೇತೃತ್ವದಲ್ಲಿ ಜಮಖಂಡಿಯ ಮಿನಿವಿಧಾನಸೌಧದಲ್ಲಿರುವ ಸ್ಟ್ರಾಂಗ್ ರೂಮ್ ಓಪನ್  ಮಾಡಲಾಗಿದೆ.