Asianet Suvarna News Asianet Suvarna News

ನಾನು ಹಿಂದೂ ವಿರೋಧಿಯಲ್ಲ: ಬಿಜೆಪಿ, ಜೆಡಿಎಸ್‌ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ನಾನು ಹಿಂದೂ ವಿರೋಧಿ ಅಲ್ಲ. ನನ್ನನ್ನು ಸುಮ್ಮನೆ ಹಿಂದೂ ವಿರೋಧಿ ಎಂಬಂತೆ ಬಿಂಬಿ​ಸಿ​ದ್ದಾರೆ. ಅವ​ನ್ಯಾ​ವನೋ ಸಿ.ಟಿ.ರವಿ ಅಂತ ಒಬ್ಬ ಇದ್ದಾನೆ, ಕೆಲ​ಸಕ್ಕೆ ಬಾರ​ದ​ವನು. ಅವನು ನನ್ನ ಹೆಸ​ರನ್ನು ಸಿದ್ರಾ​ಮುಲ್ಲಾ ಖಾನ್‌ ಅಂತ ಕರೆ​ಯು​ತ್ತಾನೆ. 

Congress Leader Siddaramaiah Slams On BJP And JDS At Ramanagara gvd
Author
First Published Jan 30, 2023, 8:42 PM IST

ರಾಮ​ನ​ಗರ (ಜ.30): ನಾನು ಹಿಂದೂ ವಿರೋಧಿ ಅಲ್ಲ. ನನ್ನನ್ನು ಸುಮ್ಮನೆ ಹಿಂದೂ ವಿರೋಧಿ ಎಂಬಂತೆ ಬಿಂಬಿ​ಸಿ​ದ್ದಾರೆ. ಅವ​ನ್ಯಾ​ವನೋ ಸಿ.ಟಿ.ರವಿ ಅಂತ ಒಬ್ಬ ಇದ್ದಾನೆ, ಕೆಲ​ಸಕ್ಕೆ ಬಾರ​ದ​ವನು. ಅವನು ನನ್ನ ಹೆಸ​ರನ್ನು ಸಿದ್ರಾ​ಮುಲ್ಲಾ ಖಾನ್‌ ಅಂತ ಕರೆ​ಯು​ತ್ತಾನೆ. ನಮ್ಮ ಮನೆ ದೇವರು ಸಿದ್ದ​ರಾ​ಮೇ​ಶ್ವರ, ನಮ್ಮ ಊರ ಹೆಸರು ಸಿದ್ದ​ರಾ​ಮನಹುಂಡಿ. ಅದಕ್ಕೆ ನಮ್ಮಪ್ಪ ಸಿದ್ದ​ರಾ​ಮಯ್ಯ ಅಂತ ಹೆಸ​ರಿ​ಟ್ಟಿ​ದ್ದಾರೆ. ನಾನೂ ಅಪ್ಪಟ ಹಿಂದೂ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿ​ದ​ರು.

ಮಹಾ​ತ್ಮ​ಗಾಂಧಿ ಕೂಡ ಅಪ್ಪಟ ಹಿಂದೂ ಆಗಿ​ದ್ದ​ವರು. ಹಿಂದೂ ಮುಸ್ಲಿಂರು ಭ್ರಾತೃತ್ವ, ಸಾಮ​ರ​ಸ್ಯ​ದಿಂದ ಇರ​ಬೇ​ಕೆಂದು ಗಾಂಧೀಜಿ ಹೋರಾಟ ಮಾಡು​ತ್ತಿ​ದ್ದರು. ಈ ಕಾರ​ಣ​ಕ್ಕಾಗಿ ಅವ​ರನ್ನು ಕೊಂದು ಹಾಕಿ​ದೀರಿ. ಆ ಮಹಾನ್‌ ವ್ಯಕ್ತಿ​ಯನ್ನು ಕೊಲೆ ಮಾಡಿದ ಗೋಡ್ಸೆ​ಯನ್ನು ಪೂಜಿಸುತ್ತೀರಿ. ನಿಮಗೆ ನಾಚಿಕೆ ಆಗು​ವು​ದಿ​ಲ್ಲವೇ ಎಂದು ವಾಗ್ದಾ​ಳಿ ನಡೆ​ಸಿದರು. ಬಿಜೆ​ಪಿ​ಯ​ವರು ಸ್ವಾಮಿ ವಿವೇ​ಕಾ​ನಂದರ ಜನ್ಮದಿನ ಆಚರಿ​ಸು​ತ್ತಿ​ದ್ದಾರೆ. ಆದರೆ, ಅವರು ಯಾರು ಮನು​ವಾದ ಹಾಗೂ ಪುರೋ​ಹಿತ ಶಾಹಿ ಆಚ​ರಣೆ ಮಾಡು​ತ್ತಾರೊ ಅದು ದೇಶಕ್ಕೆ ಶಾಪವೆಂದು ಹೇಳಿ​ದ್ದರು. ಅವರ ಮಾತು​ಗ​ಳಿಂದಲು ಬಿಜೆ​ಪಿ​ಯ​ವ​ರಿಗೆ ಜ್ಞಾನೋದಯ ಆಗಿಲ್ಲ. 

ಕೈ ಮುಗಿದು ಪ್ರಾರ್ಥಿಸುವೆ, ಬಾಲ​ಕೃಷ್ಣರ ಸೋಲಿಸಬೇಡಿ: ಸಿದ್ದ​ರಾ​ಮಯ್ಯ

ಮನು​ವಾದ ಪಾಲಿ​ಸುವ ಹಾಗೂ ಗೋಡ್ಸೆ​ಯನ್ನು ಆರಾ​ಧಿ​ಸುವ ಬಿಜೆಪಿಯೊಂದಿಗೆ ಸೇರಿ ಜೆಡಿ​ಎಸ್‌ನವರು ಸರ್ಕಾರ ರಚನೆ ಮಾಡಲು ಹೋಗು​ತ್ತಾರೆ. ಅವ​ರಿಗೆ ಸ್ವಲ್ಪ​ವಾ​ದರು ನಾಚಿಕೆ ಮಾನ ಮರ್ಯಾದೆ ಇದೆಯೇ ಎಂದು ಪ್ರಶ್ನಿ​ಸಿ​ದ​ರು. ನಮ್ಮ ಸಂವಿ​ಧಾನ ಮನುಷ್ಯ ಮನು​ಷ್ಯ​ನನ್ನು ಪ್ರೀತಿ​ಸುವ, ಸಹಿ​ಷ್ಣುತೆ, ಸಹ​ಬಾಳ್ವೆಯನ್ನು ಹೇಳು​ತ್ತದೆ. ಜಾತಿ - ಧರ್ಮ ವ್ಯವಸ್ಥೆ ದೇವರು ಮಾಡಿ​ದ್ದಲ್ಲ, ಅದನ್ನು ಮನುಷ್ಯ ತನ್ನ ಸ್ವಾರ್ಥ​ಕ್ಕಾಗಿ ಮಾಡಿ​ಕೊಂಡಿ​ದ್ದಾನೆ. ಒಂದು ಜಾತಿ ಧರ್ಮದಲ್ಲಿ ಹುಟ್ಟಿದ ಕಾರ​ಣಕ್ಕೆ ಅದನ್ನು ಪಾಲನೆ ಮಾಡು​ತ್ತಿ​ದ್ದೇವೆ. ಮನು​ಷ್ಯತ್ವ ದ್ವೇಷಿ​ಸು​ವುದು ಅಮಾ​ನ​ವೀ​ಯ​ವಾ​ದದ್ದು. ಯಾರನ್ನೂ ದ್ವೇಷಿ​ಸ​ಬಾ​ರದು ಎಂದು ಸಿದ್ದ​ರಾ​ಮಯ್ಯ ಕಿವಿ​ಮಾತು ಹೇಳಿ​ದರು.

ಅಲ್ಪ​ಸಂಖ್ಯಾ​ತ​ರಿ​ಗಾ​ಗಿ 10 ಸಾವಿರ ಕೋಟಿ ಅನು​ದಾನ: ರಾಜ್ಯ​ದಲ್ಲಿ ಕಾಂಗ್ರೆಸ್‌ ಪಕ್ಷ ಅಧಿ​ಕಾ​ರಕ್ಕೆ ಬಂದಲ್ಲಿ ಅಲ್ಪ​ಸಂಖ್ಯಾ​ತರ ಶ್ರೇಯೋಭಿ​ವೃ​ದ್ಧಿ​ಗಾಗಿ 10 ಸಾವಿರ ಕೋಟಿ ಅನು​ದಾನ ಮೀಸ​ಲಿ​ಡು​ವು​ದಾಗಿ ಮಾಜಿ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಘೋಷಣೆ ಮಾಡಿ​ದರು. ನಾನು ಮುಖ್ಯ​ಮಂತ್ರಿ ಆಗಿ​ದ್ದಾಗ ಅಲ್ಪ​ಸಂಖ್ಯಾ​ತರ ಅಭಿ​ವೃ​ದ್ಧಿ​ಗಾಗಿ 3150 ಕೋಟಿ ರುಪಾಯಿ ಮೀಸ​ಲಿ​ಡ​ಲಾ​ಗಿತ್ತು. ಆನಂತರ ಬಿಜೆಪಿ ಸರ್ಕಾರ ಅನುದಾ​ನ​ವನ್ನು ಕಡಿ​ತ​ಗೊ​ಳಿ​ಸಿದೆ. 

ರಾಜ್ಯ​ದಲ್ಲಿ ಶೇಕಡ 14ರಷ್ಟು ಅಲ್ಪ​ಸಂಖ್ಯಾ​ತ​ರಿದ್ದು, ಅವ​ರಿ​ಗಾಗಿ 10 ಸಾವಿರ ಕೋಟಿ ಮೀಸ​ಲಿ​ಡು​ತ್ತೇವೆ ಎಂದು ಹೇಳಿದರು. ಮಾಜಿ ಸಚಿವ ಜಮೀರ್‌ ಅಹ​ಮದ್‌ ಖಾನ್‌ ಮಾತನಾಡಿ, ಅಲ್ಪ​ಸಂಖ್ಯಾ​ತರ ಅಭಿ​ವೃ​ದ್ಧಿ​ಗೆ 400 ಕೋಟಿ ರು.ಗ​ಳಿದ್ದ ಅನು​ದಾನ ಪ್ರಮಾ​ಣ​ವನ್ನು ಸಿದ್ದ​ರಾ​ಮಯ್ಯನವರು ಮುಖ್ಯ​ಮಂತ್ರಿ​ಗ​ಳಾ​ಗಿ​ದ್ದಾಗ 3150 ರು.ಗ​ಳಿಗೆ ಹೆಚ್ಚಿ​ಸಿ​ದರು. ಮೈತ್ರಿ ಸರ್ಕಾ​ರ​ದಲ್ಲಿ ಕುಮಾ​ರ​ಸ್ವಾ​ಮಿ​ರ​ವರು 1200 ಕೋಟಿ, ಆನಂತರ ಬಿಜೆಪಿ ಸರ್ಕಾರ 600 ಕೋಟಿ ರು.ಗ​ಳಿಗೆ ಸೀಮಿ​ತ​ಗೊ​ಳಿ​ಸಿದೆ ಎಂದು ಗಮನ ಸೆಳೆ​ದರು. ಇದಕ್ಕೆ ತಮ್ಮ ಭಾಷ​ಣ​ದಲ್ಲಿ ಪ್ರತಿ​ಕ್ರಿ​ಯಿ​ಸಿದ ಸಿದ್ದ​ರಾ​ಮ​ಯ್ಯ, ಕಾಂಗ್ರೆಸ್‌ ಪಕ್ಷ ಅಧಿ​ಕಾ​ರಕ್ಕೆ ಬಂದ ಮೇಲೆ ಅಲ್ಪ​ಸಂಖ್ಯಾ​ತರ ಅನು​ದಾ​ನ​ವನ್ನು 10 ಸಾವಿರ ಕೋಟಿ ರು.ಗ​ಳಿಗೆ ಹೆಚ್ಚಳ ಮಾಡುವು​ದಾಗಿ ಭರ​ವಸೆ ನೀಡಿ​ದ​ರು. 

ನನ್ನ ಹೆಣವೂ ಬಿಜೆಪಿ, ಆರೆಸ್ಸೆಸ್‌ಗೆ ಹೋಗಲ್ಲ: ಸಿದ್ದ​ರಾ​ಮಯ್ಯ

ಈಗಾ​ಗಲೇ ಕಾಂಗ್ರೆಸ್‌ ಪಕ್ಷ ಪ್ರತಿ ಕುಟುಂಬಕ್ಕೆ 200 ಯುನಿಟ್‌ ವಿದ್ಯುತ್‌, 10 ಕೆಜಿ ಅಕ್ಕಿ, ಮಹಿ​ಳೆ​ಯ​ರಿಗೆ 2 ಸಾವಿರ ಹಾಗೂ ಲೀಟರ್‌ ಹಾಲಿಗೆ 6 ರುಪಾ​ಯಿ ಪ್ರೋತ್ಸಾಹ ಧನ​ ನೀಡುವ ಭರ​ವಸೆ ನೀಡಿ​ದ್ದೇವೆ. ಪರ​ಮೇ​ಶ್ವರ್‌ ಅಧ್ಯ​ಕ್ಷ​ತೆ​ಯಲ್ಲಿ ಪ್ರಣಾ​ಳಿಕೆ ಸಮಿತಿ ರ​ಚಿ​ಸಿದ್ದು, ಇನ್ನೂ ಅನೇಕ ಕಾರ್ಯ​ಕ್ರ​ಮ​ಗ​ಳನ್ನು ರೂಪಿ​ಸು​ತ್ತೇವೆ. ಇದೆ​ಲ್ಲ​ವನ್ನು ಜನರ ತೆರಿಗೆ ಹಣ​ದಿಂದಲೇ ನೀಡು​ತ್ತೇವೆ. ನಾವು ಜನರ ಕಲ್ಯಾ​ಣ​ಕ್ಕಾಗಿ ಅಧಿ​ಕಾ​ರಕ್ಕೆ ಬರು​ತ್ತೇ​ವೆಯೇ ಹೊರತು ಮಜಾ ಮಾಡಲು ಅಲ್ಲ ಎಂದು ಸಿದ್ದ​ರಾ​ಮ​ಯ್ಯ ತಿಳಿ​ಸಿ​ದರು.

Follow Us:
Download App:
  • android
  • ios