Asianet Suvarna News Asianet Suvarna News

ಕೈ ಮುಗಿದು ಪ್ರಾರ್ಥಿಸುವೆ, ಬಾಲ​ಕೃಷ್ಣರ ಸೋಲಿಸಬೇಡಿ: ಸಿದ್ದ​ರಾ​ಮಯ್ಯ

ಶಾಸ​ಕರಾ​ಗಿ​ದ್ದ​ವರು ಕೆಲಸ ಮಾಡದೆ ಸೋತರೆ ನೋವಾ​ಗಲ್ಲ. ಕೆಲಸ ಮಾಡಿಯೂ ಜನರು ಕೈ ಹಿಡಿ​ಯ​ದಿ​ದ್ದರೆ ನೋವಾ​ಗು​ತ್ತದೆ. ನಿಮ್ಮಲ್ಲಿ ಕೈ ಮುಗಿದು ಪ್ರಾರ್ಥನೆ ಮಾಡು​ತ್ತೇನೆ ಜನ ಪರ ಕಾಳಜಿ ಇಟ್ಟು​ಕೊಂಡಿ​ರುವ ಬಾಲಕೃಷ್ಣ ಅವ​ರನ್ನು ಸೋಲಿ​ಸುವ ತಪ್ಪನ್ನು ಮತ್ತೆ ಮಾಡ​ಬೇಡಿ ಎಂದು ಮಾಜಿ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಮನವಿ ಮಾಡಿ​ದ​ರು. 

Former CM Siddaramaiah Talks About HC Balakrishna At Ramanagara gvd
Author
First Published Jan 30, 2023, 8:09 PM IST

ರಾಮ​ನ​ಗರ (ಜ.30): ಶಾಸ​ಕರಾ​ಗಿ​ದ್ದ​ವರು ಕೆಲಸ ಮಾಡದೆ ಸೋತರೆ ನೋವಾ​ಗಲ್ಲ. ಕೆಲಸ ಮಾಡಿಯೂ ಜನರು ಕೈ ಹಿಡಿ​ಯ​ದಿ​ದ್ದರೆ ನೋವಾ​ಗು​ತ್ತದೆ. ನಿಮ್ಮಲ್ಲಿ ಕೈ ಮುಗಿದು ಪ್ರಾರ್ಥನೆ ಮಾಡು​ತ್ತೇನೆ ಜನ ಪರ ಕಾಳಜಿ ಇಟ್ಟು​ಕೊಂಡಿ​ರುವ ಬಾಲ​ಕೃಷ್ಣ ಅವ​ರನ್ನು ಸೋಲಿ​ಸುವ ತಪ್ಪನ್ನು ಮತ್ತೆ ಮಾಡ​ಬೇಡಿ ಎಂದು ಮಾಜಿ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಮನವಿ ಮಾಡಿ​ದ​ರು. 

ಮಾಗಡಿ ಪಟ್ಟ​ಣದಲ್ಲಿ ಮಾಜಿ ಶಾಸಕ ಎಚ್‌.ಸಿ.​ಬಾ​ಲ​ಕೃ​ಷ್ಣ​ ತಾಯಿ ಶಾರ​ದಮ್ಮ ಮತ್ತು ತಂದೆ ಮಾಜಿ ಸಚಿವ ದಿ.ಚ​ನ್ನ​ಪ್ಪ​ರ​ವರ ಸ್ಮರಣಾರ್ಥ ನಿರ್ಮಿ​ಸಿ​ರುವ ಎಚ್‌ಕೆಜಿ​ಎನ್‌ ಶಾದಿ ಮಹಲ್‌ ಅನ್ನು ಲೋಕಾ​ರ್ಪಣೆಗೊಳಿಸಿದ ನಂತರ ವೇದಿಕೆ ಸಮಾ​ರಂಭ​ದಲ್ಲಿ ಮಾತ​ನಾ​ಡಿದರು. ಸಾಮಾ​ನ್ಯ​ವಾಗಿ ಸೋತ​ವರು ಮನೆ ಸೇರು​ತ್ತಾರೆ. ಕಳೆದ ಬಾರಿ ಬಾಲ​ಕೃ​ಷ್ಣ ವಿನಾ​ ಕಾ​ರಣ ಸೋತರು. ಆದರೂ ಧೃತಿ​ಗೆ​ಡದೆ ಜನರ ಕಷ್ಟಸುಖ​ಗ​ಳಲ್ಲಿ ಭಾಗಿ​ಯಾಗುತ್ತಿ​ದ್ದಾರೆ. ಅವರ ತಂದೆ ಚನ್ನಪ್ಪ ನಮ್ಮೊಂದಿಗೆ ಶಾಸ​ಕ​ರಾ​ಗಿ​ದ್ದರು. ಅವರು ರೈತರು, ಬಡ​ವರ ಪರ​ವಾಗಿ ಕೆಲಸ ಮಾಡು​ತ್ತಿದ್ದ ವ್ಯಕ್ತಿ. ಆ ಪರಂಪ​ರೆ​ಯನ್ನು ಬಾಲ​ಕೃಷ್ಣ ಮುಂದು​ವ​ರೆ​ಸಿ​ದ್ದಾರೆಂದರು. 

ನನ್ನ ಹೆಣವೂ ಬಿಜೆಪಿ, ಆರೆಸ್ಸೆಸ್‌ಗೆ ಹೋಗಲ್ಲ: ಸಿದ್ದ​ರಾ​ಮಯ್ಯ

ಬಾಲ​ಕೃ​ಷ್ಣನ ಆಶೀ​ರ್ವ​ದಿಸಿ ನಮಗೆ ಶಕ್ತಿ ತುಂಬಿ: ಕ್ಷೇತ್ರದ ಅಭಿ​ವೃ​ದ್ಧಿ​ಗಾಗಿ ಅವರ ಕುಟುಂಬ ಸಾಕಷ್ಟುಶ್ರಮ ವಹಿ​ಸಿದೆ. ಅಂತಹ ಕುಟುಂಬ​ದ​ವ​ರನ್ನು ಸೋಲಿ​ಸಿದ್ದು ನ್ಯಾಯವೇ. ಜನ​ಪ​ರ ಹಾಗೂ ಎಲ್ಲಾ ಜಾತಿ ಧರ್ಮ​ದ​ವರ ಪರ​ವಾ​ಗಿ​ರುವ ವ್ಯಕ್ತಿ​ಗಳು ನಿಮ್ಮ ಪ್ರತಿ​ನಿಧಿ ಆಗಿ​ರ​ಬೇಕು. ಆವಾಗ ಮಾತ್ರ ಕ್ಷೇತ್ರ ಅಭಿ​ವೃದ್ಧಿ ಹೊಂದಲು ಸಾಧ್ಯ​ವಿ​ದೆ ಎಂದ​ರು. ನಿಮ್ಮ ಪರ​ವಾಗಿ ಕೆಲಸ ಮಾಡುವ ಬಾಲ​ಕೃಷ್ಣ ಅವ​ರನ್ನು ಕೈಬಿ​ಡ​ಬೇಡಿ. ಜಾತಿ-ಹಣ ಜನರ ಕಷ್ಟಸುಖ​ಗ​ಳಿಗೆ ಬರು​ವು​ದಿಲ್ಲ. ಜಾತಿ ಇದ್ದರೆ ನಂಟ​ಸ್ಥನ ಮಾಡೋಣ. ಮತ ಹಾಕು​ವಾಗ ಜಾತಿ ಅಡ್ಡಿ ಬರ​ಬಾ​ರದು. 

ಯಾರು ಜನರ ಪರ​ವಿದ್ದು, ಕೆಲಸ ಮಾಡು​ತ್ತಾರೊ ಅವ​ರಿಗೆ ಶಕ್ತಿ ತುಂಬುವ ಕೆಲಸ ಮಾಡ​ಬೇಕು ಎಂದು ಹೇಳಿ​ದ​ರು. ಈಗ ಬಾಲ​ಕೃ​ಷ್ಣ​ರ​ವರು ಶಾಸ​ಕ​ರಲ್ಲ, ಅವ​ರಿ​ರುವ ಪಕ್ಷ ಅಧಿ​ಕಾ​ರ​ದಲ್ಲೂ ಇಲ್ಲ. ಆದರೂ ಅಲ್ಪ​ಸಂಖ್ಯಾ​ತರ ಅನು​ಕೂಲಕ್ಕಾಗಿ ತಮ್ಮ ತಂದೆ ತಾಯಿ ಹೆಸ​ರಿ​ನಲ್ಲಿ 15 ಗುಂಟೆ ಜಮೀನು ಖರೀ​ದಿಸಿ ಶಾದಿ ಮಹಲ್‌ ಕಟ್ಟಿ​ಸಿ​ದ್ದಾರೆ. ಜನ ಸೇವೆ ಮಾಡು​ವ​ ವ್ಯಕ್ತಿಗೆ ಜನರ ಕಷ್ಟಸುಖ​ಗ​ಳಲ್ಲಿ ಭಾಗಿ​ಯಾ​ಗು​ವುದು ಮುಖ್ಯ​ವಾ​ಗು​ತ್ತದೆ. ಆ ಕೆಲಸ ಮಾಡು​ತ್ತಿ​ರುವ ಬಾಲ​ಕೃಷ್ಣ ಅವ​ರಿಗೆ ಆಶೀ​ರ್ವಾದ ಮಾಡು​ವಂತೆ ಸಿದ್ದ​ರಾ​ಮಯ್ಯ ಮನವಿ ಮಾಡಿ​ದರು.

ಕಾರ‍್ಯಕ್ರಮದಲ್ಲಿ ಚಾಮ​ರಾ​ಜ​ಪೇಟೆ ಕ್ಷೇತ್ರ ಶಾಸಕ ಜಮೀರ್‌ ಅಹ​ಮದ್‌ ಖಾನ್‌, ವಿಧಾನ ಪರಿ​ಷತ್‌ ಸದಸ್ಯ ಸಿ.ಎಂ.ಲಿಂಗಪ್ಪ, ಎಸ್‌.ರವಿ, ಬಮೂಲ್‌ ಅಧ್ಯಕ್ಷ ನರ​ಸಿಂಹಯ್ಯ, ಮಾಜಿ ಶಾಸಕ ಕೆ.ರಾ​ಜು, ನಗ​ರ​ಸಭೆ ಸದಸ್ಯ ಕೆ.ಶೇ​ಷಾದ್ರಿ (ಶ​ಶಿ​), ಜಿಪಂ ಮಾಜಿ ಅಧ್ಯಕ್ಷ ಎಚ್‌.ಎನ್‌.ಅ​ಶೋಕ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗಾಣ​ಕಲ್‌ ನಟ​ರಾಜ್‌, ಜಿಲ್ಲಾ ಕಾಂಗ್ರೆಸ್‌ ಎಸ್ಸಿ ಘಟಕ ಅಧ್ಯಕ್ಷ ನರ​ಸಿಂಹಯ್ಯ, ವಾಸೀಂ ಆಲಿ ಖಾನ್‌, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ದೀಪಾ ಮುನಿ​ರಾಜು, ಮುಖಂಡ​ರಾದ ದುಂತೂರು ವಿಶ್ವ​ನಾಥ್‌, ಆಸಿಫ್‌ ಖಾನ್‌, ಫೈರೋಜ್‌ ಖಾನ್‌ ಉಪ​ಸ್ಥಿ​ತ​ರಿ​ದ್ದರು.

ಬಡವರ ಕಲ್ಯಾಣಕ್ಕಾಗಿ ಕಾಂಗ್ರೆಸ್‌: ವಿಧಾನ ಪರಿ​ಷತ್‌ ಸದಸ್ಯ ಎಸ್‌.ರವಿ ಮಾತ​ನಾಡಿ, ಬಿಜೆಪಿ ಸರ್ಕಾರ ಜನರ ಭಾವ​ನೆ​ಗ​ಳೊಂದಿಗೆ ಚೆಲ್ಲಾ​ಟ​ವಾಡಿ ಜಾತಿ-ಧರ್ಮ​ಗಳ ನಡುವೆ ಜನ​ರನ್ನು ಇಬ್ಬಾಗ ಮಾಡುವ ಕೆಲಸ ಮಾಡು​ತ್ತಿದೆ. ಆದರೆ, ಕಾಂಗ್ರೆಸ್‌ ಪಕ್ಷ ಬಡ​ವ​ರು, ದೀನ ದಲಿ​ತರು, ಅಲ್ಪ​ಸಂಖ್ಯಾ​ತರು ಸೇರಿ​ದಂತೆ ಎಲ್ಲ ವರ್ಗದ ಬಡವರ ಕಲ್ಯಾ​ಣ​ಕ್ಕಾಗಿ ಕಾರ್ಯ​ಕ್ರಮ ನೀಡ​ಬೇ​ಕೆಂದು ಆಲೋ​ಚನೆ ಮಾಡು​ತ್ತಿ​ದೆ. ಜನರೇ ಯಾವುದು ಬೇಕೆಂದು ತೀರ್ಮಾನ ಮಾಡ​ಬೇಕು. ಸಿದ್ದರಾ​ಮಯ್ಯ ಮತ್ತು ಡಿ.ಕೆ.​ಶಿ​ವ​ಕು​ಮಾರ್‌ ನೇತೃ​ತ್ವದಲ್ಲಿ ಕಾಂಗ್ರೆಸ್‌ ಪಕ್ಷ 140ಕ್ಕೂ ಹೆಚ್ಚು ಸ್ಥಾನ​ಗ​ಳಲ್ಲಿ ಗೆಲುವು ಸಾಧಿ​ಸು​ವುದು ಸೂರ್ಯ ಚಂದ್ರರು ಇರು​ವಷ್ಟೇ ಸತ್ಯ. 

ಕಾಂಗ್ರೆಸ್‌ ಸರ್ಕಾ​ರ​ದಲ್ಲಿ ಘೋಷ​ಣೆ​ಯಾದ ಕಾರ್ಯ​ಕ್ರ​ಮ​ಗ​ಳಿಗೆ ಪೂಜೆ ಮಾಡಿ​ದರೆ ಪ್ರಯೋ​ಜ​ನ​ವಿಲ್ಲ. ಹೊಸ ಕಾರ್ಯ​ಕ್ರ​ಮ​ಗ​ಳ​ನ್ನು​ ತಂದು ಕೆಲಸ ಮಾಡಿ ತೋರಿ​ಸ​ಬೇಕೆಂದು ಪರೋ​ಕ್ಷ​ವಾಗಿ ಶಾಸಕ ಎ.ಮಂಜು​ನಾಥ್‌ರನ್ನು ಟೀಕಿಸಿದರು. 2023ರಲ್ಲಿ ಕಾಂಗ್ರೆಸ್‌ ಅಧಿ​ಕಾ​ರಕ್ಕೆ ಬರ​ಲಿದೆ. ಆಗ ಮಾಗಡಿ ಕ್ಷೇತ್ರಕ್ಕೆ ಅನ್ಯಾ​ಯ​ವಾ​ಗುವುದು ಬೇಡ. ಆದ್ದ​ರಿಂದ ಬಾಲ​ಕೃಷ್ಣ ಅವ​ರಿಗೆ ಆಶೀ​ರ್ವಾದ ಮಾಡು​ವಂತೆ ಮನವಿ ಮಾಡಿ​ದ​ರು.

ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಶಕ್ತಿ ತುಂಬಿದಂತೆ: ಜಮೀರ್‌ ಅಹ​ಮದ್‌

ಕೃಷಿ ಭೂಮಿ​ಯನ್ನು ಕೈಗಾ​ರಿಕಾ ಉದ್ದೇ​ಶಕ್ಕೆ ನೋಟಿ​ಫಿ​ಕೇ​ಷನ್‌ ಆದಾಗ ಬಾಲ​ಕೃ​ಷ್ಣ​ರ​ವರು ನಿಲ್ಲಿ​ಸು​ವ​ ಕೆ​ಲಸ ಮಾಡಿ​ದ್ದರು. ಇದೀಗ ಮತ್ತೆ ಕೈಗಾ​ರಿಕಾ ಉದ್ದೇ​ಶ​ಗ​ಳಿಗೆ ರೈತರ ಜಮೀನು ಸ್ವಾಧೀನ ಮಾಡ​ಬೇಡಿ ಅಂದರು ಕೇಳು​ತ್ತಿಲ್ಲ. ರೈತರ ಅಭಿ​ಪ್ರಾಯ ಕೇಳದೆ ಸ್ವಾಧೀನ ಪಡಿ​ಸಿ​ಕೊ​ಳ್ಳು​ವುದು ಸರಿ​ಯಲ್ಲ. ನಾವು ಅಧಿ​ಕಾ​ರಕ್ಕೆ ಬಂದ ಮೇಲೆ ನೋೕಟಿಫಿಕೇ​ಷನ್‌ ರದ್ದು ಮಾಡಿ ಡಿ ನೋಟಿಫೈ ಮಾಡು​ತ್ತೇವೆ.
-ಸಿದ್ದ​ರಾ​ಮಯ್ಯ, ಮಾಜಿ ಮುಖ್ಯ​ಮಂತ್ರಿ

ರಾಜ್ಯಾ​ದ್ಯಂತ ಶೀಘ್ರ​ದ​ಲ್ಲಿಯೇ ನಾನು ಪ್ರವಾಸ ಮಾಡು​ತ್ತೇನೆ. ಈಗಾ​ಗಲೇ ಜನರು 2013ರಿಂದ 2018ರವ​ರೆಗೆ ಕಾಂಗ್ರೆಸ್‌ ಸರ್ಕಾ​ರದ ಕಾರ್ಯ​ಕ್ರ​ಮ​ಗ​ಳನ್ನು ಜನರು ನೆನೆ​ಯು​ತ್ತಿ​ದ್ದಾರೆ. ಎಲ್ಲಾ ಸಮಾ​ಜದವರಿಗೆ ಒಳ್ಳೆ​ಯ​ದಾ​ಗ​ಬೇ​ಕಾ​ದರೆ ಕಾಂಗ್ರೆಸ್‌ ಅಧಿ​ಕಾ​ರಕ್ಕೆ ಬರ​ಬೇ​ಕೆಂದು ಜನರು ಬಯ​ಸು​ತ್ತಿ​ದ್ದಾರೆ.
-ಜಮೀರ್‌ ಅಹ​ಮದ್‌ ಖಾನ್‌, ಶಾಸ​ಕರು

Follow Us:
Download App:
  • android
  • ios