Asianet Suvarna News Asianet Suvarna News

ಜೂ.30ರ ವರೆಗೆ ಕರ್ನಾಟಕ ಲಾಕ್‌ಡೌನ್?ದುಬೈಗೆ ಶಿಫ್ಟ್ ಆಯ್ತು IPL;ಮೇ.29ರ ಟಾಪ್ 10 ಸುದ್ದಿ!

ಕೊರೋನಾ ನಿಯಂತ್ರಣಕ್ಕೆ ಜೂನ್ 30ರ ವರೆಗೆ ಲಾಕ್‌ಡೌನ್ ವಿಸ್ತರಿಸಲು ಕರ್ನಾಟಕ ಸರ್ಕಾರ ಚಿಂತಿಸುತ್ತಿದೆ. ಇನ್ನು ಸ್ಥಗಿತಗೊಂಡಿರುವ ಐಪಿಎಲ್ ಟೂರ್ನಿ ಮುಂದಿನ ಭಾಗವನ್ನು ದುಬೈನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ನಡು ರಸ್ತೆಯಲ್ಲಿ ವೈದ್ಯ ದಂಪತಿಯ ಹತ್ಯೆ, ಸುಮ್ ಸುಮ್ಮನೆ ಬೋಲ್ಡ್ ಸೀನ್ ಸೇರಿಸ್ತಾರೆ ಎಂದ ನಟಿ ಸೇರಿದಂತೆ ಮೇ.29ರ ಟಾಪ್ 10 ಸುದ್ದಿ ವಿವರ ಇಲ್ಲಿವೆ

Karnataka Lockdown to IPL 2021 top 10 News of May 29 ckm
Author
Bengaluru, First Published May 29, 2021, 4:38 PM IST | Last Updated May 29, 2021, 4:47 PM IST

ನಡು ರಸ್ತೆಯಲ್ಲಿ ವೈದ್ಯ ದಂಪತಿಯ ಹತ್ಯೆ, CCTVಯಲ್ಲಿ ದಾಖಲಾಯ್ತು ದೃಶ್ಯ!...

Karnataka Lockdown to IPL 2021 top 10 News of May 29 ckm

ಜಸ್ಥಾನದ ಭರತ್‌ಪುರದಲ್ಲಿ ವೈದ್ಯ ದಂಪತಿಯನ್ನು ದುಷ್ಕರ್ಮಿಗಳ ತಂಡವೊಂದು ಹಾಡಹಗಲೇ ರಸ್ತೆಯಲ್ಲಿ ಭೀಕರವಾಗಿ ಹತ್ಯೆಗೈದಿದೆ. ನಗರದ ಹೀರಾದಾಸ್‌ ಬಸ್‌ ನಿಲ್ದಾಣದ ಸಮೀಪದ ಜನದಟ್ಟಣೆ ಇದ್ದ ರಸ್ತೆಯಲ್ಲಿ ಬೈಕ್‌ನಲ್ಲಿ ಬಂದಿದ್ದ, ಶಸ್ತ್ರಾಸ್ತ್ರ ಹೊಂದಿದ್ದ ಇಬ್ಬರು ದುಷ್ಕರ್ಮಿಗಳು ವೈದ್ಯ ದಂಪತಿಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

ಪುಲ್ವಾಮಾ ಹುತಾತ್ಮ ಮೇ| ದೌಂಡಿಯಾಲ್ ಪತ್ನಿ ನಿಖಿತಾ ಭಾರತೀಯ ಸೇನೆಗೆ ಸೇರ್ಪಡೆ!...

Karnataka Lockdown to IPL 2021 top 10 News of May 29 ckm

 2019ರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಮೇಜರ್ ವಿಭೂತಿ ಶಂಕರ್ ದೌಂಡಿಯಾಲ್ ಹಾದಿಯಲ್ಲೇ ಸಾಗಿದ ಅವರ ಪತ್ನಿ ನಿಕಿತಾ ಕೌಲ್ ಶನಿವಾರ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದಾರೆ. 

ಜೂನ್‌ 2ನೇ ವಾರದಿಂದ ಸ್ಪುಟ್ನಿಕ್‌ ಲಸಿಕೆ ಲಭ್ಯ: ಪ್ರತೀ ಡೋಸ್‌ಗೆ 1,195 ರೂ.!...

Karnataka Lockdown to IPL 2021 top 10 News of May 29 ckm

ರಷ್ಯಾದ ಸ್ಪುಟ್ನಿಕ್‌-5 ಲಸಿಕೆಯು ಜೂನ್‌ 2ನೇ ವಾರದಿಂದಲೇ ದೇಶದ ಅಪೋಲೋ ಸಮೂಹದ ಆಸ್ಪತ್ರೆಗಳಲ್ಲಿ ಲಭ್ಯವಾಗಲಿದೆ. ಈ ಲಸಿಕೆಯ ಪ್ರತೀ ಡೋಸ್‌ಗೆ 1,195 ರು. ದರವಾಗಬಹುದು ಎಂದು ಅಪೋಲೋ ಆಸ್ಪತ್ರೆಗಳ ಸಮೂಹ ಗುರುವಾರ ಘೋಷಣೆ ಮಾಡಿದೆ.

ಗ್ಯಾಂಗ್ ರೇಪ್ ಬೆನ್ನತ್ತಿದಾಗ ಬಯಲಾದ ಸತ್ಯಗಳು...!...

Karnataka Lockdown to IPL 2021 top 10 News of May 29 ckm

ರಾಮಮೂರ್ತಿನಗರ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಬಯಲಾದ ಸತ್ಯಗಳು....

ಗುಡ್ ನ್ಯೂಸ್‌: ಐಪಿಎಲ್‌ 2021 ಭಾಗ-2 ಆತಿಥ್ಯ ಎಲ್ಲಿ? ಗೊಂದಲಗಳಿಗೆ ಬಿಸಿಸಿಐ ತೆರೆ...

Karnataka Lockdown to IPL 2021 top 10 News of May 29 ckm

ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ಯುಎಇ ಆತಿಥ್ಯ ವಹಿಸಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಖಚಿತಪಡಿಸಿದ್ದಾರೆ. ಈ ಮೂಲಕ ಬಿಸಿಸಿಐ ಹಲವು ಊಹಾಪೋಹಗಳಿಗೆ ತೆರೆ ಎಳೆದಿದೆ.

ಬೇಕು ಬೇಕೆಂದೇ ಬೋಲ್ಡ್ ಸೀನ್ ಸೇರಿಸ್ತಾರೆ ಎಂದ 'ನಿನಗಾಗಿ' ನಟಿ ಎರಿಕಾ...

Karnataka Lockdown to IPL 2021 top 10 News of May 29 ckm

ಟಿವಿ ನಟಿ ಎರಿಕಾ ಫರ್ನಾಂಡಿಸ್ ಅವರು ಬೋಲ್ಡ್ ಪಾತ್ರ ಮಾಡುವುದು ಸರಿಯಾಗುವುದಿಲ್ಲ ಎಂದಿದ್ದಾರೆ.

ಕೇಂದ್ರದ ಎಚ್ಚರಿಕೆಗೆ ಫೇಸ್‌ಬುಕ್, ವ್ಯಾಟ್ಸ್ಆ್ಯಪ್ ಥಂಡಾ; ಹೊಸ ನಿಯಮಕ್ಕೆ ಸಮ್ಮತಿ!...

Karnataka Lockdown to IPL 2021 top 10 News of May 29 ckm

ಕಳೆದ ಕೆಲ ದಿನಗಳಲ್ಲಿ ಕೇಂದ್ರ ಸರ್ಕಾರ ಹಾಗೂ ಸಾಮಾಜಿಕ ಜಾಲತಾಣಗಳ ನಡುವೆ ಜಟಾಪಟಿ ನಡೆಯುತ್ತಿದೆ. ಕೇಂದ್ರ ಸರ್ಕಾರದ ತಂದಿರುವ ಹೊಸ ಡಿಜಿಟಲ್ ನಿಯಮ ಅನುಸರಿಸಲು ಟ್ವಿಟರ್, ವ್ಯಾಟ್ಸ್ಆ್ಯಪ್ ಸೇರಿದಂತೆ ಕೆಲ ಸಾಮಾಜಿಕ ಮಾಧ್ಯಮಗಳು ನಿರಾಕರಿಸಿತ್ತು. ಖಡಕ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇದೀಗ ಫೇಸ್‌ಬುಕ್ ಹಾಗೂ ವ್ಯಾಟ್ಸ್ಆ್ಯಪ್ ಹೊಸ ನಿಯಮ ಅನುಸರಿಸಲು ಸಮ್ಮತಿಸಿದೆ.

ಅಮೆರಿಕ ಹೊರಟ್ಟಿದ್ದ ವಿಮಾನದ ಮಾರ್ಗ ಬದಲಿಸಿದ ಬಾವಲಿ; ವಾಪಸ್ ದೆಹಲಿಯಲ್ಲಿ ಲ್ಯಾಂಡ್!...

Karnataka Lockdown to IPL 2021 top 10 News of May 29 ckm

ತಾಂತ್ರಿಕ ಸೇರಿದಂತೆ ಹಲವು ಕಾರಣಗಳಿಂದ ಟೇಕ್ ಆಫ್ ಆದ ವಿಮಾನ ಮತ್ತೆ ಲ್ಯಾಂಡಿಂಗ್ ಆದ ಊದಾಹರಣೆಗಳಿವೆ.  ಆದರೆ ಟೇಕ್ ಆಫ್ ಆದ ವಿಮಾನದೊಳಗೆ ಬಾವಲಿ ಪ್ರತ್ಯಕ್ಷವಾಗಿದೆ. ವಿಮಾನದೊಳಗೆ ಹಾರಾಟ ನಡೆಸಿದ ಬಾವಲಿ ಕಾರಣ ಪೈಲೆಟ್ ಅಮೆರಿಕ ನೆವಾರ್ಕ್‌ಗೆ ಹೊರಟಿದ್ದ ವಿಮಾನವನ್ನು ಮತ್ತೆ ವಾಪಸ್ ತಿರುಗಿಸಿ ದೆಹಲಿಯಲ್ಲಿ ಲ್ಯಾಂಡ್ ಮಾಡಿದ್ದಾರೆ. 

ಜೂನ್ 30ರ ವರೆಗೆ ಕರ್ನಾಟಕದಲ್ಲಿ ಲಾಕ್‌ಡೌನ್ ವಿಸ್ತರಣೆ; ಸಚಿವರ ಸಭೆ ಬಳಿಕ ಅಂತಿಮ ನಿರ್ಧಾರ!...

Karnataka Lockdown to IPL 2021 top 10 News of May 29 ckm

ಕೊರೋನಾ ವೈರಸ್ ನಿಯಂತ್ರಣಕ್ಕೆ ಕರ್ನಾಟಕದಲ್ಲಿ ಲಾಕ್‌ಡೌನ್ ಹೇರಲಾಗಿದೆ. ಜೂನ್ 7ರ ವರೆಗಿರುವ ಲಾಕ್‌ಡೌನ್ ಇದೀಗ ಜೂನ್ 30ರ ವರೆಗೆ ವಿಸ್ತರಿಸಲು ಸರ್ಕಾರ ಮುಂದಾಗಿದೆ. ಕೇಂದ್ರ ಗೃಹ ಇಲಾಖೆ ಕೊರೋನಾ ನಿಯಂತ್ರಣಕ್ಕೆ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಇದರ ಪ್ರಕಾರ ಸಚಿವರ ಸಭೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸಲು ಸಿಎಂ ಬಿಎಸ್ ಯಡಿಯೂರಪ್ಪ ನಿರ್ಧರಿಸಿದ್ದಾರೆ. 

ಅಪ್ಪಂದಿರನ್ನು ಮದುವೆಯಾಗುವ ಹೆಣ್ಣು ಮಕ್ಕಳು: ಹೀಗೊಂದು ಸಂಪ್ರದಾಯ!...

Karnataka Lockdown to IPL 2021 top 10 News of May 29 ckm

ಬಾಂಗ್ಲಾ- ಭಾರತ ಗಡಿಪ್ರದೇಶದಲ್ಲಿರುವ ಒಂದು ಬುಡಕಟ್ಟಿನಲ್ಲಿ ಮಗಳೇ ಅಪ್ಪನನ್ನು ಮದುವೆಯಾಗುವ ವಿಲಕ್ಷಣ ಸಂಪ್ರದಾಯವಿದೆ.

Latest Videos
Follow Us:
Download App:
  • android
  • ios