Asianet Suvarna News Asianet Suvarna News

ಆ.15ರ ಬಳಿಕ ಜನರ ಸ್ವಾತಂತ್ರ್ಯಕ್ಕೆ ನಿರ್ಬಂಧ, ಮಳೆ ಮಡುವೆ ಟೆಸ್ಟ್ ಪಂದ್ಯ ಆರಂಭ; ಆ.12ರ ಟಾಪ್ 10 ಸುದ್ದಿ!

ಸ್ವಾತಂತ್ರ್ಯ ದಿನಾಚರಣೆ ಬಳಿಕ ಕರ್ನಾಟಕದಲ್ಲಿ ಜನರು ಸ್ವಾತಂತ್ರ್ಯಕ್ಕೆ ಬ್ರೇಕ್ ಬೀಳುವ ಸಾಧ್ಯತೆ ದಟ್ಟವಾಗಿದೆ. ಕೊರೋನಾ ಹೆಚ್ಚಳ ಕಾರಣ ಲಾಕ್‌ಡೌನ್ ಕುರಿತು ಸರ್ಕಾರ ಚಿಂತಿಸುತ್ತಿದೆ. ಮಾರ್ಷಲ್ ಜೊತೆ ಜಟಾಪಟಿ, ಅಧಿವೇಶನ ಸ್ಥಗಿತದ ಮೂಲಕ ಸಂಸತ್ ಕಲಾಪ ಮತ್ತೆ ವ್ಯರ್ಥವಾಗಿದೆ. ಮಳೆ ನಡುವೆ 2ನೇ ಟೆಸ್ಟ್ ಪಂದ್ಯ ಆರಂಭಗೊಂಡಿದೆ. ಮೋದಿ ಭೇಟಿಯಾಗಲು ಬಂದ 10ರ ಪೋರಿ, ಸ್ಯಾಂಡಲ್‌ವುಡ್‌ನಲ್ಲಿ ಜಾಕ್ವಲಿನ್ ಸವಾರಿ ಸೇರಿದಂತೆ ಆಗಸ್ಟ್ 12ರ ಟಾಪ್ 10 ಸುದ್ದಿ ಇಲ್ಲಿವೆ.

Karnataka coronavirus cases to India England test top 10 News of August 12 ckm
Author
Bengaluru, First Published Aug 12, 2021, 5:04 PM IST

ಮೋದಿ ಭೇಟಿಯಾಗಲು ಸಂಸತ್ತಿಗೆ ಬಂದ 10 ವರ್ಷದ ಪೋರಿ: ಪ್ರಶ್ನೆ ಕೇಳಿ ನಕ್ಕ ಪ್ರಧಾನಿ!

Karnataka coronavirus cases to India England test top 10 News of August 12 ckm

ಪ್ರಧಾನಿ ಮೋದಿ 10 ವರ್ಷದ ಪುಟ್ಟ ಹುಡುಗಿಯನ್ನು ಭೇಟಿಯಾಘಿದ್ದಾರೆ. ಈ ಬಾಲಕಿ ಬೇರಾರೂ ಅಲ್ಲ ಅಹ್ಮದ್ ನಗರ ಸಂಸದ ಡಾ.ಸುಜಯ್ ವಿ. ಕೆ ಪಾಟೀಲ್ ಅವರ ಪುತ್ರಿ ಅನಿಶಾ. ಮಾಧ್ಯಮ ವರದಿಗಳ ಪ್ರಕಾರ, ಅನಿಶಾ ತನ್ನ ತಂದೆಯ ಲ್ಯಾಪ್ ಟಾಪ್ ನಿಂದ ಪಿಎಂ ಮೋದಿಗೆ ಮೇಲ್ ಕಳುಹಿಸಿದ್ದಳು. ಈಕೆ ಈ ಮೇಲ್‌ನಲ್ಲಿ ಹಲೋ ಸರ್. ನಾನು ಅನಿಶಾ ಮತ್ತು ನಾನು ನಿಮ್ಮನ್ನು ಭೇಟಿಯಾಗಲು ಬಯಸುತ್ತೇನೆ ಎಂದಿದ್ದಾರೆ

ಪ್ರಜಾಪ್ರಭುತ್ವದ ಕೊಲೆ: ಸಂಸತ್ ಅಧಿವೇಶನ ಹಠಾತ್ ಸ್ಥಗಿತ, ರಾಹುಲ್ ಪ್ರತಿಕ್ರಿಯೆ!

Karnataka coronavirus cases to India England test top 10 News of August 12 ckm

ಸಂಸತ್ತಿನ ಮಳೆಗಾಲದ ಅಧಿವೇಶನ ಹಠಾತ್ ಅಂತ್ಯಗೊಂಡ ಹಾಗೂ ರಾಜ್ಯಸಭೆಯಲ್ಲಿ ಕೆಲ ಮಹಿಳಾ ಸದಸ್ಯರ ಮೇಲೆ ದಾಳಿ ನಡೆದ ಆರೋಪ ಕೇಳಿ ಬಂದಿತ್ತು. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇನ್ನಿತರ ವಿಪಕ್ಷ ನಾಯಕರು ಸಂಸತ್‌ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. 

ಏರಿದ ಕೊರೋನಾ : ಆಗಸ್ಟ್ 15ರ ಬಳಿಕ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್?

Karnataka coronavirus cases to India England test top 10 News of August 12 ckm

ಕೇರಳದಲ್ಲಿ ಸೋಂಕು ಏರಿದೆ. ಗಡಿ ಜಿಲ್ಲೆಗಳಲ್ಲೂ ಏರುತ್ತಲಿದೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡುವ ಸಾಧ್ಯತೆ ಇದೆ. ಈ ಬಾರಿಯೂ ಲಾಕ್‌ಡೌನ್‌ ಮಾಡೋದು ಫಿಕ್ಸ್ ಎನ್ನುವ ಮಾತು ಸಚಿವ ಆರ್.ಅಶೋಕ್ ಅವರ ಮಾತಿನಿಂದ  ತಿಳಿದು ಬಂದಿದೆ. ಆಗಸ್ಟ್ 15ರ ಬಳಿಕ ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ. 

INDvsENG 2ನೇ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್; ಟೀಂ ಇಂಡಿಯಾದಲ್ಲಿ 1 ಬದಲಾವಣೆ!

Karnataka coronavirus cases to India England test top 10 News of August 12 ckm

 ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ಆರಂಭಗೊಂಡಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಮೊದಲ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ್ದ ಇಂಗ್ಲೆಂಡ್, ಇದೀಗ ಲಂಡನ್ ಟೆಸ್ಟ್ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡೋ ವಿಶ್ವಾಸದಲ್ಲಿದೆ.

ಕೋಟ್ಯಂತರ ರೂಪಾಯಿ ವಂಚನೆ: ಶಿಲ್ಪಾ ಮನೆಗೆ ಬಂದ UP ಪೊಲೀಸ್

Karnataka coronavirus cases to India England test top 10 News of August 12 ckm

ಪತಿಯನ್ನು ಜೈಲಿನಿಂದ ಹೊರ ಕರೆತರಲು ಶಿಲ್ಪಾ ಶಟ್ಟಿ ಕಷ್ಟಪಡುತ್ತಿರುವಾಗಲೇ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದ ಆರೋಪವನ್ನು ಎದುರಿಸುತ್ತಿದ್ದಾರೆ ಬಾಲಿವುಡ್ ನಟಿ

ಜಾಕ್ವೆಲಿನ್ ಪಾತ್ರ ರಿವೀಲ್; 'ವಿಕ್ರಾಂತ್ ರೋಣ'ನ ಗಡಂಗ್ ರಕ್ಕಮ್ಮ ಹೇಗಿದ್ದಾಳೆ ನೋಡಿ!

Karnataka coronavirus cases to India England test top 10 News of August 12 ckm

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಬಿಗ್ ಬಜೆಟ್  ಚಿತ್ರದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅಭಿನಯಿಸಿದ್ದಾರೆ. ನಟಿ ಜಾಕ್ವೆಲಿನ್‌ ಫೆರ್ನಾಂಡಿಸ್‌ ಹುಟ್ಟುಹಬ್ಬದ ಪ್ರಯುಕ್ತ ‘ವಿಕ್ರಾಂತ್‌ ರೋಣ’ ಸಿನಿಮಾದ ಹೊಸ ಪೋಸ್ಟರ್‌ ರಿಲೀಸ್‌ ಆಗಿದೆ. 

ಲೋಕಲ್ ರಾಂಚೋ ಇನ್ನಿಲ್ಲ.. ಪ್ರಾಣ ಬಲಿಪಡೆದ  ಸಿಂಗಲ್ ಸೀಟರ್ ಹೆಲಿಕಾಪ್ಟರ್ ತಯಾರಿ!

Karnataka coronavirus cases to India England test top 10 News of August 12 ckm

 ಹೆಲಿಕಾಪ್ಟರ್ ಮಾದರಿ ಮಾಡಿ ಅದಕ್ಕೆ ಅಳವಡಿಸಿದ್ದ ಬ್ಲೇಡ್ ಒಂದು ಸಂಶೋಧಕನ ಕುತ್ತಿಗೆಯನ್ನೇ ಕತ್ತರಿಸಿದೆ. ಸ್ಥಳದಲ್ಲಿಯೇ ಪ್ರಾಣ ಹೋಗಿದ್ದು ಸ್ನೇಹಿತರು ಓಡಿ ಹೋಗಿ ನೋಡಿದರೂ ಏನು ಮಾಡಲಾಗದ ಸ್ಥಿತಿಯಲ್ಲಿದ್ದರು.  ಸೋಶಿಯಲ್ ಮೀಡಿಯಾದಲ್ಲಿಯೂ ಈ ವಿಡಿಯೋ ವೈರಲ್ ಆಗುತ್ತಿದೆ.

ಈಗ ಕಾಂಗ್ರೆಸ್‌ ಸರದಿ: ಐವರು ಪ್ರಮುಖ ನಾಯಕರ ಟ್ವಿಟರ್‌ ಖಾತೆ ರದ್ದು!

Karnataka coronavirus cases to India England test top 10 News of August 12 ckm

 ರಾಹುಲ್ ಗಾಂಧಿ ಖಾತೆಯನ್ನು ಟ್ವಿಟರ್ ಅಮಾನತುಗೊಳಿಸಿತ್ತು. ಇದರ ಬೆನ್ನಲ್ಲೇ ಈಗ ಇನ್ನೂ ಐವರು ಪ್ರಮುಖ ನಾಯಕರ ಖಾತೆಗಳನ್ನು ಅಮಾನತುಗೊಳಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ಸಿಗರು ಈ ಬಗ್ಗೆ ತಮ್ಮ ಕೋಪ ಹೊರಹಾಕಲಾರಂಭಿಸಿದ್ದಾರೆ. 

ಕೊನೇ ದಿನ ಮಾರ್ಷಲ್‌ಗಳ ಜತೆ ವಿಪಕ್ಷ ‘ಸಂಘರ್ಷ’!

Karnataka coronavirus cases to India England test top 10 News of August 12 ckm

 ಸಂಸತ್‌ ಕಲಾಪದ ಕೊನೆಯ ದಿನ ಕೂಡ ವಿಪಕ್ಷಗಳು ರಾಜ್ಯಸಭೆಯಲ್ಲಿ ತೀವ್ರ ಕೋಲಾಹಲ ಎಬ್ಬಿಸಿ, ಮಾರ್ಷಲ್‌ಗಳೊಂದಿಗೆ ಸಂಘರ್ಷ ನಡೆಸಿದ ಘಟನೆ ನಡೆದಿದೆ. ಕಾಗದಪತ್ರಗಳನ್ನು ವಿಪಕ್ಷ ಸದಸ್ಯರು ಹರಿದು ತೂರಾಡಿದ್ದಾರೆ.
 

Follow Us:
Download App:
  • android
  • ios