Asianet Suvarna News Asianet Suvarna News

BSY ಕಾಲಬುಡದಲ್ಲಿ ಕೊರೋನಾ, ಈ ವರ್ಷ IPL ಸಾಧ್ಯಾನಾ? ಜು.10ರ ಟಾಪ್ 10 ಸುದ್ದಿ!

ಕೇಂದ್ರ ಸರ್ಕಾರ ನೌಕರರಿಗೆ ಕನಿಷ್ಠ ವೇತನ ನಗಿದಿ ಮಾಡಲು ಮುಂದಾಗಿದೆ. ಈ ಮೂಲಕ 50 ಕೋಟಿ ನೌಕರರಿಗೆ ನೆರವಾಗಲಿದೆ. ತಾಯಿ ತನ್ನ ಮಗುವನ್ನು ಕಟ್ಟಡದ ಮೇಲಿಂದ ಎಸೆದಾಗ ಯುವಕನೋರ್ವ ಓಡೋಡಿ ಬಂದು ಮಗುವಿನ ಪ್ರಾಣ ಉಳಿಸಿದ್ದಾನೆ. ಸಿಎಂ ಬಿಎಸ್ ಯಡಿಯೂಪ್ಪ ಕಾರು ಚಾಲಕನಿಗೆ ಕೊರೋನಾ ದೃಢಪಟ್ಟ ಹಿನ್ನಲೆಯಲ್ಲಿ ಬಿಎಸ್‌ವೈ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಚೀನಾ ಉತ್ಪನ್ನ ಜಾಹೀರಾತು ರದ್ದು ಮಾಡಿದ ನಟ, ಐಪಿಎಲ್ ಆಯೋಜನೆ ತಯಾರಿಯಲ್ಲಿ ಬಿಸಿಸಿಐ ಸೇರಿದಂತೆ ಜುಲೈ 10ರ ಟಾಪ್ 10 ನ್ಯೂಸ್ ಇಲ್ಲಿವೆ.

bs yeddyurappa Quarantine to IPL 2020 top 10 news of July 10
Author
Bengaluru, First Published Jul 10, 2020, 4:55 PM IST

ಕೊರೋನಾ ಸಂಕಷ್ಟದ ನಡುವೆ ಮೋದಿಯಿಂದ ಬಂಪರ್ ಗಿಫ್ಟ್; ನೌಕರರಿಗೆ ಕನಿಷ್ಠ ವೇತನ ನಿಗದಿ?

bs yeddyurappa Quarantine to IPL 2020 top 10 news of July 10

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಕಾರ್ಮಿಕರ ನಿಯಮದಲ್ಲಿ ಮಹತ್ತರ ತಿದ್ದುಪಡಿ ಮಾಡುತ್ತಿದೆ. ತಿದ್ದುಪಡಿಯಲ್ಲಿನ ಪ್ರಮುಖ ಅಂಶ ತಿಂಗಳ ಸಂಬಳ ಪಡೆಯುವ ನೌಕರರಿಗೆ ಕನಿಷ್ಠ ವೇತನ ನಿಗದಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಚೀನಾ ಉತ್ಪನ್ನದೊಂದಿಗೆ ಒಪ್ಪಂದ ಕ್ಯಾನ್ಸಲ್ ಮಾಡಿಕೊಂಡ ಮೊದಲ ಭಾರತೀಯ ನಟ

bs yeddyurappa Quarantine to IPL 2020 top 10 news of July 10

ಚೀನಾ ವಸ್ತುಗಳನ್ನು ಭಾರತೀಯರು ನಿಷೇಧಿಸುತ್ತಿರುವ ಬೆನ್ನಲ್ಲೇ ಇದೀಗ ಬಾಲಿವುಡ್ ಯುವನಟ ಕಾರ್ತಿಕ್ ಆರ್ಯನ್ ಚೈನೀಸ್ ಫೋನ್‌ ಜೊತೆಗಿನ ಕೋಟಿ ಬೆಲೆ ಬಾಳುವ ಡೀಲ್ ಒಂದನ್ನು ಕ್ಯಾನ್ಸಲ್ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.

ಮಗುವನ್ನು ಕಟ್ಟಡದ ಮೇಲಿಂದ ಎಸೆದ ತಾಯಿ, ಓಡಿ ಬಂದು ಕ್ಯಾಚ್ ಹಿಡಿದ ಯುವಕ...

bs yeddyurappa Quarantine to IPL 2020 top 10 news of July 10

ಬರಿಗಾಲಲ್ಲಿ ಓಡಿ ಬಂದ ಯುವಕ ತಾಯಿ ಮಗುವನ್ನು ಕಟ್ಟಡದ ಮೇಲಿಂದ ಎಸೆಯುವಾಗ ಸರಿಯಾದ ಸಮಯಕ್ಕೆ ಬಂದು ಮಗುವನ್ನು ಹಿಡಿದುಕೊಂಡಿದ್ದಾನೆ.

ಕೊರೋನಾ ಔಷಧ ಕಂಡು ಹಿಡಿಯುವ ಪೈಪೋಟಿ ಮಧ್ಯೆ ಸಿಕ್ತು ಏಡ್ಸ್‌ಗೆ ಮದ್ದು!.

bs yeddyurappa Quarantine to IPL 2020 top 10 news of July 10

ಮಹಾಮಾರಿ ಕೊರೋನಾಗೆ ಔಷಧ ಕಂಡು ಹಿಡಿಯುವಲ್ಲಿ ತಲ್ಲೀನರಾಗಿದ್ದಾರೆ. ಆದರೀಗ ಈ ಎಲ್ಲಾ ಪೈಪೋಟಿ ನಡುವೆ ಕೊರೋನಾಗೆ ಔ‍ಷಧಿ ಹುಡುಕುವ ವೇಳೆ ಏಡ್ಸ್‌ ಗುಣಪಡಿಸುವ ಔಷಧ ಸಿದ್ಧವಾಗಿದ್ದು, ಸದ್ಯ ಇದನ್ನು ಮಾನವರ ಮೇಲೆ ಪ್ರಯೋಗ ನಡೆಸಲಾಗುತ್ತದೆ.

ಫ್ಲಿಪ್ ಕಾರ್ಟ್‌ ಡಿಲೆವರಿಗೆ ಕೊಟ್ಟಿದ್ದ ಅಡ್ರೆಸ್ ಕಂಡು ದಂಗಾದವರು ಒಬ್ರಾ..ಇಬ್ರಾ!

bs yeddyurappa Quarantine to IPL 2020 top 10 news of July 10

ಡಿಲೆವರಿ ಮಾಡುವ ಹುಡುಗರು ಅಡ್ರೆಸ್ ತಪ್ಪಿಸಿಕೊಳ್ಳುವುದು, ಆರ್ಡರ್ ಮಾಡಿದ್ದು ಒಂದು ಬಂದಿದ್ದು ಒಂದು... ಸಾಮಾನ್ಯ ಬಾಡಿಲೋಶನ್ ಗೆ ದುಬಾರಿ ವಸ್ತುವೊಂದು ಬಂದು ಅದನ್ನು ನೀವೇ ಇಟ್ಟುಕೊಳ್ಳಿ ಎಂದು  ಹೇಳಿದ್ದು ಎಲ್ಲವನ್ನು ಕೇಳಿದ್ದೇವೆ. ಆದರೆ ಇದು ಅದೆಲ್ಲದಕ್ಕಿಂತ ಭಿನ್ನವಾದ ಸ್ಟೋರಿ

ಸಿಎಂ ಬದಲಿ ಕಾರು ಚಾಲಕನಿಗೆ ವಕ್ಕರಿಸಿದ ಕೊರೋನಾ;  BSY ಸೆಲ್ಫ್ ಕ್ವಾರಂಟೈನ್

bs yeddyurappa Quarantine to IPL 2020 top 10 news of July 10

ಸಿಎಂ ಯಡಿಯೂರಪ್ಪ ಅವರಿಗೆ ಕೊರೋನಾ ಕಂಟಕ ಕಾಡತೊಡಗಿದೆ. ಬಿಎಸ್‌ ಯಡಿಯೂರಪ್ಪ ಸುತ್ತಲಿರುವವರಿಗೆ ಕೊರೋನಾ ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.

2021ರ ಜೂನ್‌ವರೆಗೂ ಏಷ್ಯಾ​ಕಪ್‌ ಮುಂದೂ​ಡಿ​ಕೆ..! ಐಪಿಎಲ್ ಆಯೋಜನೆಗೆ ಮರುಜೀವ.

bs yeddyurappa Quarantine to IPL 2020 top 10 news of July 10

ನಿರೀಕ್ಷೆಯಂತೆ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಜೂನ್ 2021ರವರೆಗೆ ಮುಂದೂಡಲ್ಪಟ್ಟಿದೆ. ಗುರುವಾರವಷ್ಟೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಬಗ್ಗೆ ತುಟಿಬಿಚ್ಚಿದ್ದರು. ಇದೀಗ ಎಸಿಬಿ ಅಧಿಕೃತ ಹೇಳಿಕೆ ನೀಡಿದೆ. 

ಸುಶಾಂತ್ ಆತ್ಮಹತ್ಯೆ: ಕರಣ್, ಸಲ್ಮಾನ್ ಖಾನ್ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾ

bs yeddyurappa Quarantine to IPL 2020 top 10 news of July 10

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಲ್ಮಾನ್‌ ಖಾನ್ ಹಾಗೂ ಕರಣ್ ಜೋಹರ್ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಬಿಹಾರ ಹೈಕೋರ್ಟ್ ವಜಾಗೊಳಿಸಿದೆ.

8 ಪೊಲೀಸರ ಹತ್ಯೆಗೈದಿದ್ದ ವಿಕಾಸ್ ದುಬೆ ಎನ್‌ಕೌಂಟರ್‌ಗೆ ಬಲಿ! 

bs yeddyurappa Quarantine to IPL 2020 top 10 news of July 10

ಉತ್ತರ ಪ್ರದೇಶದ ಕಾನ್ಪುರದಲ್ಲಿ ಡಿವೈ ಎಸ್​ಪಿ ಸೇರಿದಂತೆ 8 ಮಂದಿ ಪೊಲೀಸರ ಹತ್ಯೆಗೈದು ತಲೆ ಮರೆಸಿಕೊಂಡಿದ್ದ ಗ್ಯಾಂಗ್‌ಸ್ಟರ್  ವಿಕಾಸ್ ದುಬೆ| ಕಾರು ಪಲ್ಟಿಯಾಗಿ ವಿಕಾಸ್‌ ದುಬೆ ಮತ್ತೆ ಪರಾರಿಯಾಗಲು ಯತ್ನ| ವಿಕಾಸ್‌ ದುಬೆ ಎನ್​ಕೌಂಟರ್‌ಗೆ ಬಲಿ

ನಾನು ವೇಶ್ಯಾವಾಟಿಕೆ ನಡೆಸುತ್ತೇನೆ, ಏನೀವಾಗ? ಮಹಿಳೆ ಆವಾಜ್

bs yeddyurappa Quarantine to IPL 2020 top 10 news of July 10

ಮುಂಬೈ-ಪುಣೆಯಿಂದ ಯುವತಿಯರನ್ನು ಕರೆಸಿಕೊಂಡು ಮಹಿಳೆಯೊಬ್ಬರು ಮಾಂಸದಂಧೆ ಮಾಡುತ್ತಿದ್ದಾರೆ. ವಿಜಯಪುರದ ಗಾಂಧಿನಗರದಲ್ಲಿ ಇಂತಹದ್ದೊಂದು ಅನೈತಿಕ ಚಟುವಟಿಕೆ ನಡೆಯುತ್ತಿದೆ. ಪ್ರಶ್ನಿಸಲು ಹೋದ ಸ್ಥಳೀಯರ ವಿರುದ್ಧವೇ ಮಹಿಳೆ ಆವಾಜ್ ಹಾಕಿದ್ದಾಳೆ. 

Follow Us:
Download App:
  • android
  • ios