ದಸರೆಗೆ ಬಂದವರು ನೀರು ಪಾಲಾದರು
ಜನವಾಡ ರಸ್ತೆಯಲ್ಲಿರುವ ಕೃಷಿಹೊಂಡದಲ್ಲಿ ಈಜಾಡಲು ಹೋಗಿ ನೀರುಪಾಲಾಗಿದ್ದಾರೆ.
ಬೀದರ್(ಸೆ.29): ದಸರಾ ರಜೆ ನಿಮಿತ್ತ ಹಳ್ಳಿಗೆ ಬಂದ ಇಬ್ಬರು ಬಾಲಕರು ಕೃಷಿ ಹೊಂಡದಲ್ಲಿ ಈಜಾಡಲು ಹೋಗಿ ನೀರು ಪಾಲಾದ ಘಟನೆ ಬೀದರ್ ತಾಲೂಕಿನ ಸಂಗೊಳಗಿ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ(10) ಮತ್ತು ಅಭಿಷೇಕ(12) ನೀರುಪಾಲಾದ ದುರ್ದೈವಿಗಳು. ನಿನ್ನೆ ಸಂಜೆ ಮನೆಯಿಂದ ಹೊರ ಹೋದ ಈ ಬಾಲಕರು ನೇರವಾಗಿ ಜನವಾಡ ರಸ್ತೆಯಲ್ಲಿರುವ ಕೃಷಿಹೊಂಡದಲ್ಲಿ ಈಜಾಡಲು ಹೋಗಿ ನೀರುಪಾಲಾಗಿದ್ದಾರೆ. ಮೃತ ಬಾಲಕರಿಬ್ಬರು ಕೃಷಿ ಇಲಾಖೆ ಅಧಿಕಾರಿ ಬಸವರಾಜ ಬಿರಾದರ ಅವರ ಪುತ್ರರು.
ಘಟನಾ ಸ್ಥಳಕ್ಕೆ ಬೀದರ್ ಡಿವೈಎಸ್ಫಿ ಹುನಚಿಕಟ್ಟೆ ಭೇಟಿ ನೀಡಿದ್ದು, ಜನವಾಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.