userpic
user icon
0 Min read

ತಿಂಡಿಗಿಂತ ಹೆಚ್ಚು ಮಾತ್ರೆ ಸೇವನೆ ಮಾಡ್ತಿದ್ರಂತೆ ನಟಿ ಕಲ್ಪನಾ.. ಇದು ಅಸಲಿ ಕಥೆ..?!

Minugutare kalpana take tablets more than tiffin: Is it true

Synopsis

ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರೊಂದಿಗೆ ಜಗಳ ಮಾಡಿಕೊಂಡ ಮೇಲೆ ನಟಿ ಕಲ್ಪನಾ ಸ್ಟಾರ್‌ಡಂ ಕುಸಿಯತೊಡಗಿತ್ತು. ಅದೇ ವೇಳೆ ನಟಿ ಆರತಿಯ ಆಗಮನ ಕೂಡ ಆಗಿತ್ತು. ಕಲ್ಪನಾ ವಿರುದ್ಧ ಆರತಿಯನ್ನು ಬೆಳೆಸುತ್ತ ಹೋದರು ಪುಟ್ಟಣ್ಣ..

ನಟಿ ಕಲ್ಪನಾ (Minugutare Kalpana) ಅವ್ರ ಬಗ್ಗೆ ಹೇಳಿದಷ್ಟೂ ಕಡಿಮೆಯೇ. ಅವರ ಜೀವನ, ಸ್ಟಾರ್‌ ಗಿರಿ ಹಾಗೂ ಅವರ ಲಕ್ಸುರಿ ಲೈಫ್ ಎಲ್ಲವೂ ಇಂದು ದಂತಕಥೆ ಎಂಬಂತೆ ಚಾಲ್ತಿಯಲ್ಲಿದೆ. ಕಪ್ಪು-ಬಿಳುಪು ಯುಗದಿಂದ ಸಿನಿಮಾ ನಟನೆ ಮಾಡಿಕೊಂಡು ಬಂದಿದ್ದ ನಟಿ ಕಲ್ಪನಾ ಅವರು, ರಂಗಭೂಮಿ ಹಿನ್ನೆಲೆಯಿಂದ ಬಂದವರು. ಅವರು ಸಿನಿಮಾಗಿಂತ ಮೊದಲು, ಸಿನಿಮಾದ ಜೊತೆ ಕೂಡ ನಾಟಕಗಳಲ್ಲಿ ಅಭಿನಯ ಮಾಡಿದ್ದಾರೆ. ಪುಟ್ಟಣ್ಣ ಕಣಗಾಲ್ ಮನಸ್ತಾಪವಾದ ಬಳಿಕ ನಟಿ ಕಲ್ಪನಾ ಅವರಿಗೆ ಚಿತ್ರರಂಗದಲ್ಲಿ ಅವಕಾಶ ಕಡಿಮೆ ಆಗತೊಡಗಿತು. ಅದೇ ಸಮಯದಲ್ಲಿ ಅವರು ಬ್ಯಾಂಕ್‌ನಲ್ಲಿ ಸಾಲ ಮಾಡಿ ಹೊಸ ಮನೆ ಕಟ್ಟಿಸಿದ್ದರು. ಹೀಗಾಗಿ, ಹಣದ ಅಗತ್ಯಕ್ಕೆ ಅವರು ಮತ್ತೆ ಕಲ್ಪನಾ ನಾಟಕಗಳಲ್ಲಿ ಅಭಿನಯಿಸತೊಡಗಿದರು.

ಆಗ ಪ್ರಸಿದ್ಧಿ ಪಡೆದಿದ್ದ ನಾಟ ಕಂಪನಿ ಎಂದರೆ, ಅದು ಗುಡಿಗೇರಿ ಬಸವರಾಜ್ ಅವರದು. ಅಲ್ಲಿ ನಾಟಕಗಳಲ್ಲಿ ಅಭಿನಯಸುತ್ತಲೇ ಕಂಪನಿ ಮಾಲೀಕರಾಗಿದ್ದ ಗುಡಗೇರಿ ಬಸವರಾಜ್ ಅವರನ್ನೇ ,ಮದಿವೆ ಮಾಡಿಕೊಂಡರು ನಟಿ ಕಲ್ಪನಾ. ಆದರೆ, ಅವರಿಬ್ಬರ ಮಧ್ಯೆ ಸರಸಕ್ಕಿಂತ ವಿರಸವೇ ಹೆಚ್ಚಾಗಿತ್ತು ಎಂಬ ಮಾತಿಗೆ. ಕೊನೆಗೆ ಸ್ಟೇಜ್‌ನಲ್ಲೇ ಕಿತ್ತಾಡಿಕೊಂಡ ಕಲ್ಪನಾ ಹಾಗೂ ಗುಡಿಗೇರಿ ಬಸವರಾಜು ಅವರಿಬ್ಬರ ದಾಂಪತ್ಯ ನಟಿ ಕಲ್ಪನಾ ಸಾವಿನೊಂದಿಗೆ ಅಂತ್ಯವಾಯಿತು. ಕಲ್ಪನಾ-ಗುಡಗೇರಿ ಬಸವರಾಜು ಅವರಿಬ್ಬರಲ್ಲಿ ತಪ್ಪು ಯಾರದು ಎಂಬುದು ಇನ್ನೂ ಚರ್ಚೆಯ ಸಂಗತಿಯೇ ಆಗಿದೆ. ಆದರೆ, ಕನ್ನಡದ ಅಮೋಘ ಅಭಿನೇತ್ರಿ ಕಲ್ಪನಾ ಸಾವಿನಿಂದ ಕನ್ನಡ ಚಿತ್ರರಂಗಕ್ಕೆ ಆದ ನಷ್ಟ ಅಪಾರ. 

ಗುಡಿಗೇರಿ ಬಸವರಾಜ್ ಜೊತೆ ಮದುವೆಯಾಗಿದ್ದ ಕಲ್ಪನಾಗೆ ಸಾವು ಬಂದಿದ್ದು ಹೀಗೆ!

ನಟಿ ಕಲ್ಪನಾ ಬಗ್ಗೆ ಹಲವಾರು ಕಥೆಗಳಿವೆ. ಆದರೆ, ಅವುಗಳಲ್ಲಿ ಅದೆಷ್ಟು ನಿಜ, ಅದೆಷ್ಟು ಸುಳ್ಳು ಎಂಬುದು ಇಂದಿಗೂ ಕೂಡ ಬಗೆಹರಿಯದ ಕಗ್ಗಂಟಾಗಿಯೇ ಉಳಿದಿದೆ. ಆದರೆ, ಅದೊಂದು ಮಾತಿದೆ, ನಟಿ ಕಲ್ಪನಾ ತಿಂಡಿಗಿಂತ ಹೆಚ್ಚು ಮಾತ್ರೆ ತಿಂತಾ ಇದ್ದರು ಅನ್ನೋದು. ಹಲವರು ಈ ಮಾತನ್ನು ನೋಡಿದ್ದಾಗೆ ಕೇಇದ್ದಾಗಿ ಹೇಳುವ ಮೂಲಕ ಅದು ನಿಜ ಸಂಗತಿ ಎಂದು ಸಾಕ್ಷಿ ಸಮೇತ ಹೇಳುತ್ತಾರೆ. ನಟಿ ಕಲ್ಪನಾ ಅವರಿಗೆ ಚರ್ಮಕ್ಕೆ ಸಂಬಂಧಪಟ್ಟ ಕಾಯಿಲೆ ಇತ್ತು, ಜೊತೆಗೆ ಅವರು ಡಿಪ್ರೆಶನ್‌ಗೂ ಹೋಗಿದ್ದರು ಎನ್ನಲಾಗುತ್ತದೆ. ಈ ಎಲ್ಲಾ ಕಾರಣಗಳಿಂದ ನಟಿ ಕಲ್ಪನಾ ಅವರು ಅಪಾರ ಪ್ರಮಾಣದಲ್ಲಿ ಮಾತ್ರೆ ಸೇವಿಸುತ್ತಿದ್ದರು ಎನ್ನಲಾಗಿದೆ. 

ಕಲ್ಪನಾ ಅವರು ಆ ಕಾಲದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರೊಂದಿಗೆ ಜಗಳ ಮಾಡಿಕೊಂಡ ಮೇಲೆ ನಟಿ ಕಲ್ಪನಾ ಸ್ಟಾರ್‌ಡಂ ಕುಸಿಯತೊಡಗಿತ್ತು. ಅದೇ ವೇಳೆ ನಟಿ ಆರತಿಯ ಆಗಮನ ಕೂಡ ಆಗಿತ್ತು. ಕಲ್ಪನಾ ವಿರುದ್ಧ ಆರತಿಯನ್ನು ಬೆಳೆಸುತ್ತ ಹೋದರು ಪುಟ್ಟಣ್ಣ ಕಣಗಾಲ್. ಆರತಿ-ಪುಟ್ಟಣ್ಣ ಸಂಬಂಧ ಅದೆಷ್ಟು ಗಾಢವಾಗಿತ್ತು ಎಂದರೆ, ಕೊನೆಗೆ ಆರತಿ-ಪುಟ್ಟಣ್ಣ ಮದುವೆಯಾಗಿದ್ದರು.. ಆದರೆ, ಅದು ಬಹಳಷ್ಟ ಕಾಲ ನಿಲ್ಲಲಿಲ್ಲ ಎಂಬುದು ಬೇರೆ ಮಾತು!

ತೇಲುತಾ ಸಾಗಿದ ಹಾದಿಯಲ್ಲಿ ನೂರಾರು ನೆನಪು.. ಇದು ಕನ್ನಡದ ಹೊಸ ಸ್ಟೈಲ್ ಆಲ್ಬಂ..!

ಒಟ್ಟಿನಲ್ಲಿ ಹೇಳಬೇಕು ಎಂದರೆ, ಯಾಕೋ ಏನೋ, ನಟಿ ಕಲ್ಪನಾ ಸಾವು ಮಾತ್ರವಲ್ಲ, ನಿಜ ಜೀವನ ಕೂಡ ಭಾರೀ ದುರಂತಮಯವೇ ಆಗಿತ್ತು. ಪ್ರೇಮ, ವಿವಾಹ, ವೃತ್ತಿ ಹೀಗೆ ಎಲ್ಲಾ ಕಡೆ ನಟಿ ಕಲ್ಪನಾರಿಗೆ ನಿರೀಕ್ಷೆಗೆ ತಕ್ಕ ಪ್ರತಿಫಲ ಸಿಗಲೇ ಇಲ್ಲ. ಅವರು ನಿರೀಕ್ಷಿಸಿದ್ದೆಲ್ಲಕ್ಕೂ ನಿರಾಸೆಯೇ ಎದುರಾಗಿ ನಿಲ್ಲುತ್ತಿತ್ತು. ಈ ಎಲ್ಲ ಕಾರಣಗಳಿಂದ ಕಲ್ಪನಾ ಅವರು ಹೆಚ್ಚುಹೆಚ್ಚು ಮಾತ್ರೆ ನುಂಗುತ್ತಿದ್ದರು. ಆದ್ದರಿಂದ ಅವರ ಸಹಾಯಕರು ಕಲ್ಪನಾ ಬಗ್ಗೆ ಹೇಳುವಾಗ, 'ಅವರು ತಿಂಡಿಗಿಂತ ಹೆಚ್ಚಾಗಿ ಮಾತ್ರೆಯನ್ನೇ ಹೊಟ್ಟೆಗೆ ಹಾಕುತ್ತಿದ್ದರು; ಎನ್ನುತ್ತಿದ್ದರಂತೆ. ಆ ಕಾಲದಲ್ಲಿ ಈಗಿನಂತೆ ಎಲ್ಲವೂ ವೈರಲ್ ಆಗಲು ಸೋಷಿಯಲ್ ಮೀಡಿಯಾಗಳು ಇರಲಿಲ್ಲ. ಆದರೆ, ಅಂದು ನೋಡಿದ್ದವರು, ಕೇಳಿದ್ದವರು ಈಗಲೂ ಹೇಳುತ್ತಾರೆ.

Download App

Latest Videos