ಪ್ಯಾನ್ ವರ್ಲ್ಡ್ ಚಿತ್ರದಲ್ಲಿ ವಿಷ್ಣುವರ್ಧನ್ ಇದ್ರು, ಆದ್ರೆ, ಬ್ರಿಟನ್ ಕಡ್ಡಿ ಅಲ್ಲಾಡಿಸಿ ನಿಂತೇ ಹೋಯ್ತು!

Synopsis
ಆ ಸಿನಿಮಾ ತೆರೆಗೆ ಬರಲಿಲ್ಲ. ಅದಿರಲಿ, ಆ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡೋದಕ್ಕೂ ಆಗಲಿಲ್ಲ. ಈ ಮೂಲಕ, ಭಾರತದ ಮಹತ್ವಾಕಾಂಕ್ಷೆಯ ಸಿನಿಮಾವೊಂದು ಸದ್ದಿಲ್ಲದೇ ಮಾಯವಾಗಿಹೋಯ್ತು. ನಟ ವಿಷ್ಣುವರ್ಧನ್ ಹಾಗೂ..
ಭಾರತದ ಅತಿ ದೊಡ್ಡ ಬಜೆಟ್ ಸಿನಿಮಾ 1997 ರಲ್ಲೇ ಸೆಟ್ಟೇರಿತ್ತು. ಕಮಲ್ ಹಾಸನ್ ಈ ಚಿತ್ರಕ್ಕೆ ನಾಯಕನಟರಾಗಿದ್ದರು. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕನ್ನಡದ ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ ಅವರು ನಟಿಸಿದ್ದರು. ನಾಯಕಿಯಾಗಿ ಹಾಲಿವುಡ್ ನಟಿ ಕೇಟ್ ವಿನ್ಸ್ಲೆಟ್ ನಟಿಸಿದ್ದರು. ಆದರೆ, ಆ ಸಿನಿಮಾ ಅರ್ಧಕ್ಕೇ ನಿಂತುಬಿಟ್ಟಿತ್ತು. ಬಳಿಕ, ಅದೆಷ್ಟೇ ಪ್ರಯತ್ನಪಟ್ಟರೂ ಆ ಸಿನಿಮಾ ಮುಂದುವರೆಯಲೇ ಇಲ್ಲ. ಈ ಸಿನಿಮಾಗೆ ಹೆಸರು 'ಮರುಧನಯಾಗಂ' ಎಂದು ಇಡಲಾಗಿತ್ತು. ಸ್ವಾತಂತ್ರವೀರ ಹೋರಾಟಗಾರನ ಕಥೆ ಇದಾಗಿತ್ತು. ಈ ಸಿನಿಮಾ 90ರ ದಶಕದ ಬಿಗ್ ಬಜೆಟ್ ಸಿನಿಮಾ ಆಗಲಿತ್ತು. ಭಾರತ, ಫ್ರಾನ್ಸ್ ಹಾಗೂ ಬ್ರಿಟನ್ ಈ ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತಿತ್ತು. ಆದರೆ..
ಆ ಸಿನಿಮಾ ತೆರೆಗೆ ಬರಲಿಲ್ಲ. ಅದಿರಲಿ, ಆ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡೋದಕ್ಕೂ ಆಗಲಿಲ್ಲ. ಈ ಮೂಲಕ, ಭಾರತದ ಮಹತ್ವಾಕಾಂಕ್ಷೆಯ ಸಿನಿಮಾವೊಂದು ಸದ್ದಿಲ್ಲದೇ ಮಾಯವಾಗಿಹೋಯ್ತು. ನಟ ವಿಷ್ಣುವರ್ಧನ್ ಹಾಗೂ ಕಮಲ್ ಹಾಸನ್ ಅವರನ್ನು ಒಟ್ಟಿಗೇ ನೋಡುವ ಭಾಗ್ಯ ಸಿನಿಪ್ರೇಮಿಗಳಿಗೆ ಸಿಗಲಿಲ್ಲ. ಜೊತೆಗೆ, 'ಟೈಟಾನಿಕ್' ಖ್ಯಾತಿಯ ನಟಿ ಕೇಟ್ ಅವರನ್ನು ಭಾರತದ ಸ್ಟಾರ್ ನಟರುಗಳ ಜೊತೆ ನೋಡುವ ಭಾಗ್ಯ ಕೂಡ ಸಿನಿಮಾಪ್ರಿಯರಿಗೆ ಲಭಿಸಲಿಲ್ಲ.
ವಿಷ್ಣುವರ್ಧನ್ಗೆ 'ಕೈ ಕಡಗ' ಸಿಕ್ಕಿದ್ದು ಎಲ್ಲಿ? ಅದರ ಹಿಂದಿದೆ ಬಲು ರೋಚಕ ಕಹಾನಿ!
ಹೌದು.. ಈಗಲ್ಲ, 90 ದಶಕದಲ್ಲೇ ಪ್ಯಾನ್ ಇಂಡಿಯಾ, ಅದಕ್ಕಿಂತ ಹೆಚ್ಚಾಗಿ ಪ್ಯಾನ್ ವರ್ಲ್ಡ್ ಸಿನಿಮಾ ಮಾಡಲಿಕ್ಕೆ ಪ್ಲಾನ್ ಮಾಡಲಾಗಿತ್ತು. ಆದರೆ, ಅದು ಕೈಗೂಡಲಿಲ್ಲ ಅಷ್ಟೇ. ಅದಕ್ಕೇ ಹೇಳೊದು, ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಅಂತ.. ಆ ಸಿನಿಮಾ ಆಗಿದ್ರೆ ಅಂದೇ ಭಾರತದ ಕೀರ್ತಿ ಪತಾಕೆ ವಿಶ್ವದೆಲ್ಲೆಡೆ ಪಸರಿಸಲಿತ್ತು. ಆದರೆ, ಅದಕ್ಕೆ ಟೈಮ್ ಬರಲಿಲ್ಲ ಅಷ್ಟೇ. ಈಗ ನಟ ವಿಷ್ಣುವರ್ಧನ್ ಅವರು ನಮ್ಮೊಂದಿಗಿಲ್ಲ. ನಟ ಕಮಲ್ ಹಾಸನ್ ಅವರು ರಾಜಕೀಯದಲ್ಲಿ ತೊಡಗಿಸಿಕೊಂಡು ಸಿನಿಮಾರಂಗದಲ್ಲಿ ಈ ಮೊದಲಿನಷ್ಟು ಸಕ್ರಿಯರಾಗಿಲ್ಲ. ನಟಿ ಕೇಟ್ ಅವರ ಕಥೆ ಅವರಿಗೇ ಗೊತ್ತು! ಈ ಸಿನಿಮಾ ನಿರ್ಮಾಣದಿಂದ ಬ್ರಿಟನ್ ಸಹ-ನಿರ್ಮಾಪಕರು ಹಿಂದೆ ಸರಿದಿದ್ದು, ಚಿತ್ರವು ನಿಂತುಹೋಗಲು ಕಾರಣ ಎನ್ನಲಾಗುತ್ತಿದೆ. ಸುದ್ದಿ ನಿಜವೇ? ನಿಖರವಾಗಿ ಗೊತ್ತಿಲ್ಲ..
ಒಟ್ಟಿನಲ್ಲಿ ಹೇಳಬೇಕು ಎಂದರೆ, 'ಮರುಧನಯಾಗಂ' ಸಿನಿಮಾ ಬಗ್ಗೆ ಭಾರತ ಹಾಗೂ ವಿಶ್ವಮಟ್ಟದಲ್ಲಿ ಮೂಡಿದ್ದ ನಿರೀಕ್ಷೆ ನಿಜವಾಗಲಿಲ್ಲ. ಒಮ್ಮೆ ಆ ಸಿನಿಮಾ ಆಗಿದ್ದರೆ ಹಾಲಿವುಡ್ ಸಿನಿಮಾಗಳಂತೆ ಅದು ಕೂಡ ವಿಶ್ವಮಟ್ಟದಲ್ಲಿ ತೆರೆಗೆ ಬರಲಿತ್ತು. ಆದರೆ ಮಿಸ್ ಆಯ್ತು ಬಿಡಿ. ಈಗ ಮತ್ತೆ ಆ ಸಿನಿಮಾ ಬೇರೆ ನಟರುಗಳ ಮೂಲಕ ತೆರೆಗೆ ಬರಬಹುದೇ? ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಒಂದಂತೂ ಸತ್ಯ. ಮತ್ತೆ ಆ ಸಿನಿಮಾ ಶುರುವಾದರೂ ಕೂಡ ಅದರಲ್ಲಿ ನಮ್ಮ ಕನ್ನಡದ ಸಾಹಸಸಿಂಹ ಇರೋದಿಲ್ಲ. ಅಷ್ಟರಮಟ್ಟಿಗಿನ ಬೇಸರವಂತೂ ಖಂಡಿತ ಇದ್ದೇ ಇರುತ್ತದೆ.
ತಿಂಡಿಗಿಂತ ಹೆಚ್ಚು ಮಾತ್ರೆ ಸೇವನೆ ಮಾಡ್ತಿದ್ರಂತೆ ನಟಿ ಕಲ್ಪನಾ.. ಇದು ಅಸಲಿ ಕಥೆ..?!