Asianet Suvarna News Asianet Suvarna News

ಆನೆಕಲ್'ನ ಈ ಕೆರೆಗೆ ಪೊಲೀಸರ ಕೆರೆ ಎಂದು ನಾಮಕರಣ..! ಇಲ್ಲಿದೆ ಕಾರಣ

ನಶಿಸುತ್ತಿದ್ದ ಕೆರೆಯನ್ನು ರಕ್ಷಿಸಿ  ಪರಿಸರ ಪ್ರಜ್ಞೆ ಮೆರೆದ ಆನೇಕಲ್ ಪೊಲೀಸರು

ಬೆಂಗಳೂರು ಬೆಳೆವಣಿಗೆಯಾಗುತ್ತಿರುವಂತೆ ಹಲವು ಕೆರೆಗಳು ಒತ್ತುವರಿಯಾಗಿ ಕಣ್ಮರೆಯಾಗಿದ್ದು ಇಂದು ಕೂಡ ಹಲವು ಕೆರೆಗೆಗಳು ಒತ್ತುವರಿಯಾಗಿದ್ದು ಅವುಗಳನ್ನು ತೆರವುಗೊಳಿಸಲು  ಸರ್ಕಾರವು ಪ್ರಯತ್ನಿಸುತ್ತಿದೆ . ಅದೇ ರೀತಿ ಇಲ್ಲೊಂದು ಕೆರೆ ಒತ್ತುವರಿಯಾಗುವ ಪ್ರಯತ್ನದಲ್ಲಿದ್ದಾಗಲೇ ಪೊಲೀಸರು ಕೆರೆಗೆ ಮರುಜೀವ ನೀಡಿ ಸುಂದರವಾಗಿ ಕಾಣುವಂತೆ ಮಾಡಿದ್ದಾರೆ . ಬನ್ನಿ ಪೊಲೀಸರು ಕೆರೆ ಉಳಿಸಲು ಮಾಡಿದ ಕೆಲಸ ಏನು ಪೊಲೀಸರಿಂದ ನಳನಳಿಸುತ್ತಿರುವ ಕೆರೆ ಯಾವುದು ಅಂತೀರಾ ಈ ಸ್ಟೋರಿ ನೋಡಿ.