Asianet Suvarna News Asianet Suvarna News

ರಾಜ್ಯ ಸರ್ಕಾರದಿಂದ ಮನೆಗಳಿಗೆ ಕೊರೋನಾ ವಿತರಣೆ: ಯು.ಟಿ.ಖಾದರ್‌

ಕೊರೋನಾ ನಿಯಂತ್ರಣಕ್ಕೆ ವಿಫಲವಾಗಿರುವ ರಾಜ್ಯ ಸರ್ಕಾರ ಇದೀಗ ಕ್ವಾರಂಟೈನ್‌ಗೆ ಸಂಬಂಧಿಸಿ ಹೊಸ ಮಾರ್ಗಸೂಚಿಯನ್ನು ಅನುಸರಿಸುವ ಮೂಲಕ ಮನೆಗಳಿಗೆ ಕೊರೋನಾ ವಿತರಣೆಗೆ ಕಾರ್ಯಕ್ರಮ ರೂಪಿಸಿದಂತಿದೆ ಎಂದು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್‌ ಆರೋಪಿಸಿದ್ದಾರೆ.

State govt spreading covid19 to each home says ut khader
Author
Bangalore, First Published Jun 2, 2020, 7:20 AM IST

ಮಂಗಳೂರು(ಜೂ. 02): ಕೊರೋನಾ ನಿಯಂತ್ರಣಕ್ಕೆ ವಿಫಲವಾಗಿರುವ ರಾಜ್ಯ ಸರ್ಕಾರ ಇದೀಗ ಕ್ವಾರಂಟೈನ್‌ಗೆ ಸಂಬಂಧಿಸಿ ಹೊಸ ಮಾರ್ಗಸೂಚಿಯನ್ನು ಅನುಸರಿಸುವ ಮೂಲಕ ಮನೆಗಳಿಗೆ ಕೊರೋನಾ ವಿತರಣೆಗೆ ಕಾರ್ಯಕ್ರಮ ರೂಪಿಸಿದಂತಿದೆ ಎಂದು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್‌ ಆರೋಪಿಸಿದ್ದಾರೆ.

ಸೋಮವಾರ ನಗರದ ಸಕ್ರ್ಯೂಟ್‌ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದ ಅವರು, ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿ ಜನರು ಸಂಪೂರ್ಣ ಸಹಕಾರ ನೀಡಿದ್ದಾರೆ. ಸಂಪೂರ್ಣ ಲಾಕ್‌ಡೌನ್‌ ಇದ್ದ ಸಂದರ್ಭ ಹಿಂದೆ ಹೊರ ರಾಜ್ಯ, ವಿದೇಶಗಳಿಂದ ಬರುವವರಿಗೆ ಆರಂಭದಲ್ಲಿ 28 ದಿನ, 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿತ್ತು.

ಮಂಗಳೂರು ಖಾಸಗಿ ಬಸ್‌ನಲ್ಲಿ ಡಿಜಿಟಲ್ ಕಾರ್ಡ್; ರಾಜ್ಯದಲ್ಲೇ ಮೊದಲು!

2 ಬಾರಿ ತಪಾಸಣೆ ವ್ಯವಸ್ಥೆ ಇತ್ತು. ಆಗ ಕೊರೋನಾ ಸೋಂಕು ಬೇಗ ಪತ್ತೆಯ ಜೊತೆಗೆ ಹರಡುವಿಕೆಯೂ ನಿಯಂತ್ರಣದಲ್ಲಿತ್ತು. ಹೊಸ ಮಾರ್ಗಸೂಚಿ ಪ್ರಕಾರ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌. ಅದೂ ಸೋಂಕಿನ ಗುಣಲಕ್ಷಣವಿದ್ದಲ್ಲಿ ಮಾತ್ರವೇ ತಪಾಸಣೆ. ಈ ಮಾರ್ಗಸೂಚಿ ಅನುಸರಿಸಿದರೆ ಕೊರೋನಾ ಸೋಂಕು ರಾಜ್ಯದಲ್ಲಿ ಗಂಭೀರ ಸ್ವರೂಪವನ್ನು ತಾಳಲಿದೆ ಎಂದು ಅವರು ಎಚ್ಚರಿಸಿದರು.

ಬೊಳಿಯಾರುವಿನ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಪತ್ತೆಯಾದ ಪ್ರಕರಣ ಉಲ್ಲೇಖಿಸಿ ಮಾತನಾಡಿದ ಅವರು, ಅವರನ್ನು ಸಾಂಸ್ಥಿಕವಾಗಿ ಕ್ವಾರಂಟೈನ್‌ಗೊಳಪಡಿಸಿ ತಪಾಸಣೆ ಮಾಡುವುದು ಬಿಟ್ಟು ಹೋಂ ಕ್ವಾರಂಟೈನ್‌ಗೆ ಕಳುಹಿಸಿದ ಕಾರಣ ಎರಡು ದಿನಗಳಲ್ಲಿ ಪಾಸಿಟಿವ್‌ ಆಗಿರುವುದು ಕಂಡು ಬಂದಿದೆ. ಇದರಿಂದ ಊರಲ್ಲೆಲ್ಲಾ ಆತಂಕಕ್ಕೆ ಕಾರಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ರೀತಿಯ ಮಾರ್ಗಸೂಚಿ ಇದ್ದರೂ ಜಿಲ್ಲಾಡಳಿತ ಈ ಬಗ್ಗೆ ಕಾಳಜಿ ವಹಿಸಬೇಕು. ಹೊರ ರಾಜ್ಯ, ದೇಶÜಗಳಿಂದ ಬರುವವರಿಗೆ ತಪಾಸಣೆ ಕಡ್ಡಾಯಗೊಳಿಸಬೇಕು ಎಂದು ಶಾಸಕ ಖಾದರ್‌ ಆಗ್ರಹಿಸಿದರು.

ದಕ್ಷಿಣ ಕನ್ನಡ: ಒಂದು ದಿನ ‘ಬ್ರೇಕ್‌’ ಬಳಿಕ 14 ಪಾಸಿಟಿವ್‌!

ವೆನ್‌ಲಾಕ್‌ನಲ್ಲಿ ತಪಾಸಣೆಗೆ ಲ್ಯಾಬ್‌ನಲ್ಲಿ ಹೆಚ್ಚುವರಿ ಯಂತ್ರಗಳನ್ನು ಅಳವಡಿಸಲಿ. ನಗರದ ಎಂಜಿನಿಯರಿಂಗ್‌ ಕಾಲೇಜುಗಳಲ್ಲೂ ಪಿಸಿಆರ್‌ ಯಂತ್ರಗಳಿದ್ದು, ಅದನ್ನು ಬಳಸಿಕೊಳ್ಳುವ ವ್ಯವಸ್ಥೆ ಮಾಡಲಿ ಎಂದು ಅವರು ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.

ಮಾಜಿ ಶಾಸಕ ಜೆ.ಆರ್‌. ಲೋಬೋ, ಮುಖಂಡರಾದ ಎ.ಸಿ. ವಿನಯರಾಜ್‌, ಪ್ರವೀಣ್‌ ಚಂದ್ರ ಆಳ್ವ, ಮುಹಮ್ಮದ್‌ ಮೋನು, ಸಂತೋಷ್‌ ಶೆಟ್ಟಿ, ಮುಸ್ತಫಾ, ಸುಧೀರ್‌ ಟಿ.ಕೆ., ವಿಶ್ವಾಸ್‌ ಕುಮಾರ್‌ ದಾಸ್‌, ಪ್ರಕಾಶ್‌ ಸಾಲಿಯಾನ್‌ ಇದ್ದರು.

Follow Us:
Download App:
  • android
  • ios