* ಅನಾರೋಗ್ಯದಿಂದ ಸಾವನ್ನಪ್ಪಿದ 11 ವರ್ಷದ ಸಿಂಹ ಯಶವಂತ * ಪ್ರೋಟೋಸ್ವೊನ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಯಶವಂತ * ಕಳೆದ ವರ್ಷ ಕೂಡ ಸಫಾರಿಯ ಸಿಂಹವೊಂದು ಸಾವು ಕಂಡಿತ್ತು
ಶಿವಮೊಗ್ಗ(ಜು.08): ಶಿವಮೊಗ್ಗದ ತಾವರೆಕೊಪ್ಪದ ಟೈಗರ್ ಅಂಡ್ ಲಯನ್ ಸಫಾರಿಯ 11 ವರ್ಷದ ಸಿಂಹ ಯಶವಂತ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಪ್ರೋಟೋಸ್ವೊನ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಯಶವಂತನ ಸಾವಿಗೆ ರಕ್ತಕಣದ ಕೊರತೆ ಕಾರಣದಿಂದಾಗಿ ಸಾವು ಸಂಭವಿಸಿದೆ ಎನ್ನಲಾಗಿದೆ.
BENGALURU CRIME NEWS: ಹರ್ಷ ಕೊಲೆ ಪ್ರಕರಣ: ವಿಚಾರಣಾ ಖೈದಿಗಳಿಂದ ವಿಡಿಯೋ ಕಾಲ್: FIR ದಾಖಲು
ಬೆಂಗಳೂರಿನ ಬನ್ನೇರುಘಟ್ಟದಿಂದ 10 ತಿಂಗಳ ಹಿಂದಷ್ಟೆ ಯಶವಂತ ನನ್ನು ಶಿವಮೊಗ್ಗದ ತಾವರೆಕೊಪ್ಪದ ಸಫಾರಿಗೆ ಕರೆತರಲಾಗಿತ್ತು. ಕಳೆದ ವರ್ಷ ಕೂಡ ಸಫಾರಿಯ ಸಿಂಹವೊಂದು ಸಾವು ಕಂಡಿತ್ತು. ಇದೀಗ ಯಶವಂತನ ಸಾವಿನಿಂದ ಸಿಂಹದಾಮದಲ್ಲಿ ಸಿಂಹಗಳ ಸಂಖ್ಯೆ 4 ಕ್ಕೆ ಇಳಿಕೆ ಕಂಡಿದೆ. ಸಫಾರಿಯ ಬಹು ಆಕರ್ಷಣೆಯ ಯಶವಂತನ ಸಾವು ಪ್ರಾಣಿ ಪ್ರಿಯರಲ್ಲಿ ನೋವುಂಟು ಮಾಡಿದೆ.
