ಕನ್ನಮೇಡಿ ಬೆಟ್ಟದಲ್ಲಿ ಚಿರತೆ ಮೃತದೇಹ ಪತ್ತೆ
ಕಾಲು ಮತ್ತು ಬಾಯಿ ಕತ್ತರಿಸಿದ ಗಂಡು ಚಿರತೆಯ ಮೃತ ದೇಹವೊಂದು ಸೋಮವಾರ ತಾಲೂಕಿನ ಕನ್ನಮೇಡಿ ಗ್ರಾಮದ ದೊಡ್ಡ ಬೆಟ್ಟದಲ್ಲಿ ಪತ್ತೆಯಾಗಿದೆ. ಗಂಡು ಚಿರತೆಯ ಮೃತ ದೇಹವೊಂದು ಪತ್ತೆಯಾಗಿದ್ದು ಇದನ್ನು ನೋಡಿ ಭಯಾಬೀತರಾದ ಕುರಿಗಾಹಿಗಳು ಕೂಡಲೇ ಬೆಟ್ಟದಿಂದ ಗ್ರಾಮಕ್ಕೆ ವಾಪಸ್ಸಾಗಿದ್ದಾರೆ.
ತುಮಕೂರು(ಡಿ.03): ಕಾಲು ಮತ್ತು ಬಾಯಿ ಕತ್ತರಿಸಿದ ಗಂಡು ಚಿರತೆಯ ಮೃತ ದೇಹವೊಂದು ಸೋಮವಾರ ತಾಲೂಕಿನ ಕನ್ನಮೇಡಿ ಗ್ರಾಮದ ದೊಡ್ಡ ಬೆಟ್ಟದಲ್ಲಿ ಪತ್ತೆಯಾಗಿದೆ.
ಕನ್ನಮೇಡಿ ಗ್ರಾಮದ ದೊಡ್ಡ ಬೆಟ್ಟಬೃಹತ್ ಕಾಡಿನಿಂದ ಅವರಿಸಿದ್ದು ಕರಡಿ, ಚಿರತೆ, ಜಿಂಕೆ, ನವಿಲು ಸೇರಿದಂತೆ ಇತರೆ ಕಾಡುಪ್ರಾಣಿಗಳು ಸಂಖ್ಯೆ ಹೆಚ್ಚಿದೆ. ಬೆಳಗ್ಗೆ ಮೇವು ತರುವ ಸಲುವಾಗಿ ಗ್ರಾಮದ ಸುತ್ತಮುತ್ತಲಿನ ಕುರಿಗಾಹಿಗಳು ಬೆಟ್ಟಕ್ಕೆ ಹೋದ ವೇಳೆ ಕಾಲು ಮತ್ತು ಮೂತಿ ಕತ್ತರಿಸಿದ ಸುಮಾರು ಮೂರು ನಾಲ್ಕು ವಷರ್ದ ಗಟ್ಟುಮುಟ್ಟಿನ ಗಂಡು ಚಿರತೆಯ ಮೃತ ದೇಹವೊಂದು ಪತ್ತೆಯಾಗಿದ್ದು ಇದನ್ನು ನೋಡಿ ಭಯಾಬೀತರಾದ ಕುರಿಗಾಹಿಗಳು ಕೂಡಲೇ ಬೆಟ್ಟದಿಂದ ಗ್ರಾಮಕ್ಕೆ ವಾಪಸ್ಸಾಗಿದ್ದಾರೆ.
ತುಮಕೂರು: ಸದ್ದಿಲ್ಲದೆ ಸಂಚರಿಸುತ್ತಿದೆ ‘ನರಹಂತಕ’ ಚಿರತೆ!
ಅಲ್ಲದೇ ಮಟ ಮಂತ್ರದ ಸಲುವಾಗಿ ಸಂಚು ರೂಪಿಸಿದ ಮಂತ್ರವಾದಿಗಳು ಮನೆಯಿಂದ ತೆಗೆದುಕೊಂಡು ಹೋಗಿ ಬೆಟ್ಟದಲ್ಲಿ ಇಟ್ಟಿದ್ದ ಪರಿಣಾಮ ವಿಷ ಪೂರಿತ ಮಾಂಸದ ಆಹಾರ ಸೇವನೆ ಮಾಡಿದ ಚಿರತೆ ಸ್ಥಳದಲ್ಲಿಯೆ ಮೃತಪಟ್ಟಿದ್ದು, ಚಿರತೆ ಸಾವನ್ನಪ್ಪಿರುವ ಬಗ್ಗೆ ಖಚಿತ ಪಡಿಸಿಕೊಂಡ ಮಂತ್ರವಾದಿಗಳು ಆದರ ನಾಲ್ಕು ಕಾಲು ಮತ್ತು ಬಾಯಿ ಕತ್ತರಿಸಿಕೊಂಡು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ತುಮಕೂರು: ಇಲ್ಲಿ 1 ಕೆಜಿ ಈರುಳ್ಳಿಗೆ ಅರುವತ್ತೇ ರೂಪಾಯಿ..!
ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಬೇಕು. ಚಿರತೆ ಸಾವಿಗೆ ಕಾರಣರಾದ ದುಷ್ಕಮಿರ್ಗಳ ವಿರುದ್ಧ ಕಾನೂನು ಕ್ರಮ ಜರಿಗಿಸುವ ಮೂಲಕ ಕಾಡು ಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.