Asianet Suvarna News Asianet Suvarna News

Tumakuru: ಶಿಕ್ಷಣಕ್ಕೆ ಬಜೆಟ್‌ನಲ್ಲಿ 500 ಕೋಟಿ ಮೀಸಲು ಸಾಲದು: ಶಾಸಕ ಶ್ರೀನಿವಾಸ್‌

ಮುಂದುವರೆದ ದೇಶಕ್ಕೆ ಶಿಕ್ಷಣ ರಂಗವೇ ಭದ್ರ ಬುನಾದಿ. ಇಂತಹ ಶಿಕ್ಷಣ ರಂಗಕ್ಕೆ ಬಜೆಟ್‌ನಲ್ಲಿ ಕೇವಲ 500 ಕೋಟಿ ರು. ಮೀಸಲು ಸಾಲದು. ಮಾನವ ಸಂಪನ್ಮೂಲ ಉತ್ಪತ್ತಿಯ ಈ ಇಲಾಖೆ ಸಾಕಷ್ಟು ಹಣ ನೀಡಬೇಕಿದೆ ಎಂದು ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ತಿಳಿಸಿದರು.

500 crore is not enough in the budget for education says mla sr srinivas gvd
Author
First Published Sep 7, 2022, 7:24 AM IST

ಗುಬ್ಬಿ (ಸೆ.07): ಮುಂದುವರೆದ ದೇಶಕ್ಕೆ ಶಿಕ್ಷಣ ರಂಗವೇ ಭದ್ರ ಬುನಾದಿ. ಇಂತಹ ಶಿಕ್ಷಣ ರಂಗಕ್ಕೆ ಬಜೆಟ್‌ನಲ್ಲಿ ಕೇವಲ 500 ಕೋಟಿ ರು. ಮೀಸಲು ಸಾಲದು. ಮಾನವ ಸಂಪನ್ಮೂಲ ಉತ್ಪತ್ತಿಯ ಈ ಇಲಾಖೆ ಸಾಕಷ್ಟು ಹಣ ನೀಡಬೇಕಿದೆ ಎಂದು ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ತಿಳಿಸಿದರು.

ಪಟ್ಟಣದ ಹೊರವಲಯದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಹಾಗೂ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ಸಹಯೋಗದಲ್ಲಿ ನಡೆದ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರ 135 ನೇ ಜಯಂತ್ಯುತ್ಸವ ಅಂಗವಾಗಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Tumakuru Rain: ಮಳೆಗೆ ಕುಸಿದ ಮನೆ ಗೋಡೆ, ಮುರಿದ ವಿದ್ಯುತ್‌ ಕಂಬ

ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ ಮಾಡದ ಸಂದರ್ಭದಲ್ಲಿ ಶಿಕ್ಷಕ ದಂಪತಿ ಪರಿಪಾಡು ಹೇಳತೀರದು. ವರ್ಗಾವಣೆ ನೀತಿ ಸಡಿಲಗೊಳಿಸುವ ಕೆಲಸ ಆಗಬೇಕು, ಖಾಲಿ ಹುದ್ದೆ ಭರ್ತಿ ಸಹ ಇಲಾಖೆ ಮಾಡಬೇಕು, ಹೊಡೆದು ತಿನ್ನುವ ಇಲಾಖೆಗಳ ಮಧ್ಯೆ ನಿಸ್ವಾರ್ಥ ಸೇವೆ ಮಾಡುವ ಶಿಕ್ಷಕರ ಪಿಂಚಣಿ ರಹಿತ ನೇಮಕಾತಿ ಬಗ್ಗೆ ಸದನದಲ್ಲಿ ಚರ್ಚಿಸುತ್ತೇನೆ. ಸಾಕ್ಷರತೆಯಲ್ಲಿ ನಾವು ಇನ್ನೂ ಸಾಧಿಸಬೇಕಿದೆ. ಶೇಕಡಾ 87ರಷ್ಟುಸಾಧಿಸಿದ್ದು, ನೂರರಷ್ಟು ಮುಟ್ಟಬೇಕು ಎಂದರು.

ಬಿಇಒ ಸೋಮಶೇಖರ್‌ ಮಾತನಾಡಿ, ಶಿಕ್ಷಕ ಸ್ಥಾನಕ್ಕೆ ಇರುವ ಗೌರವ ಉಳಿಸುವಂತೆ ನಮ್ಮಗಳ ನಡವಳಿಕೆ ಇರಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ವೃತ್ತಿಯ ಮೂಲಕ ಉತ್ತಮ ನಾಗರಿಕರನ್ನು ಸೃಷ್ಟಿಸಿ ಎಂದು ಕರೆ ನೀಡಿದರು.ಪಪಂ ಸದಸ್ಯ ಶಿವಕುಮಾರ್‌ ಮಾತನಾಡಿದರು. ಈ ಸಂದರ್ಭದಲ್ಲಿ ಉತ್ತಮ ಶಿಕ್ಷಕರು, ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಆರ್‌ಸಿ ಮಧುಸೂದನ್‌, ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್‌, ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಉಮಾಮಹೇಶ್ವರ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್‌.ಟಿ.ಪ್ರಕಾಶ್‌, ಜಿಲ್ಲಾ ಸಹ ಕಾರ್ಯದರ್ಶಿ ಭೈರಯ್ಯ, ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್‌, ಕಸಾಪ ಅಧ್ಯಕ್ಷ ಯತೀಶ್‌ ಹಾಗೂ ಪಟ್ಟಣ ಪಂಚಾಯಿತಿ ಎಲ್ಲಾ ಸದಸ್ಯರು ಇತರರು ಇದ್ದರು.

ಹಳೆಯ ಶಿಕ್ಷಣ ವ್ಯವಸ್ಥೆ ಬದಲಾಗಲಿ: ಶಾಸಕ ಜ್ಯೋತಿ ಗಣೇಶ್‌

ಗುರು ಕುಲ ಶಿಕ್ಷಣಕ್ಕೂ ಇಂದಿನ ಆಧುನಿಕ ಶಿಕ್ಷಣಕ್ಕೂ ಬಹಳಷ್ಟುವ್ಯತ್ಯಾಸವಿದೆ. ತಂತ್ರಜ್ಞಾನ ಬೆಳೆದಂತೆ ಶಿಕ್ಷಣ ಜೊತೆಗೆ ಹಾದಿ ತಪ್ಪಿಸುವ ಲಕ್ಷಣಗಳು ಸಹ ಹೆಚ್ಚಾಗಿದೆ. ಶಿಕ್ಷಕ ಪದದಲ್ಲಿ ಶಿ ಎಂದರೆ ಶಿವ ಸ್ವರೂಪ, ಕ್ಷ ಅಕ್ಷರದಲ್ಲಿ ಕ್ಷಮಾಗುಣ ಹಾಗೂ ಕ ಅಕ್ಷರದಲ್ಲಿ ಕರುಣಾಮಯಿ ಎನ್ನುವ ಅರ್ಥ ಕೊಡುತ್ತದೆ.
-ಕಾರದ ವೀರಬಸವ ಸ್ವಾಮೀಜಿ ಬೆಳ್ಳಾವಿ ಮಠ

Follow Us:
Download App:
  • android
  • ios