Asianet Suvarna News Asianet Suvarna News

ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದ ಪ.ಬಂಗಾಳ ವಿಧಾನಸಭೆ!

ಸಿಎಎ ವಿರುದ್ಧ ಪ.ಬಂಗಾಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀರಕಾರ| ಕೇರಳ, ಪಂಜಾಬ್, ರಾಜಸ್ಥಾನ ಬಳಿಕ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದ ನಾಲ್ಕನೇ ರಾಜ್ಯ| ಸಿಎಎ ಜಾರಿ ಅಸಾಂವಿಧಾನಿಕ ಎಂದ ಪ.ಬಂಗಾಳ ವಿಧಾನಸಭೆ| ಜೀವ ಇರುವವರೆಗೂ ಸಿಎಎ ನಿರ್ಣಯ ಜಾರಿಯಿಲ್ಲ ಎಂದ ಮಮತಾ ಬ್ಯಾನರ್ಜಿ| 

West Bengal Assembly Passes resolution Against Citizenship Act
Author
Bengaluru, First Published Jan 28, 2020, 12:41 PM IST

ನವದೆಹಲಿ(ಜ.28): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ನಿರ್ಣಯ ಕೈಗೊಂಡ ರಾಜ್ಯಗಳ ಸಾಲಿಗೆ ಇದೀಗ ಪ.ಬಂಗಾಳ ಸೇರ್ಪಡೆಗೊಂಡಿದೆ.

ಕೇರಳ, ಪಂಜಾಬ್ ಮತ್ತು ರಾಜಸ್ಥಾನ ರಾಜ್ಯಗಳ ಬಳಿಕ, ಇದೀಗ ಮಮತಾ ಬ್ಯಾನರ್ಜಿ ನೇತೃತ್ವದ ಪ.ಬಂಗಾಳ ಸರ್ಕಾರ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದೆ. 

ಕೇರಳ , ಪಂಜಾಬ್ ಬಳಿಕ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದ ರಾಜಸ್ಥಾನ!

ಸಿಎಎ ವಿರುದ್ಧ ಪ. ಬಂಗಾಳದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ, ವಿಧಾನಸಭೆಯಲ್ಲಿ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಲಾಗಿದೆ.

ಸಿಎಎ ಜಾರಿ ಅಸಾಂವಿಧಾನಿಕವಾಗಿದ್ದು, ಇದು ಸಮಾಜವನ್ನು ಧರ್ಮದ ಆಧಾರದಲ್ಲಿ ಒಡೆಯುವ ಕ್ರೂರ ಕಾನೂನು ಎಂದು ಪ.ಬಂಗಾಳ ವಿಧಾನಸಭೆ ಅಭಿಪ್ರಾಯಪಟ್ಟಿದೆ.

CAA ವಿರೋಧಿಸಿ ಸುಪ್ರೀಂ ಕದ ತಟ್ಟಿದ ಕೇರಳ: ಕೇಂದ್ರಕ್ಕೆ ಸೆಡ್ಡು ಹೊಡೆದ ಮೊದಲ ರಾಜ್ಯ!

ಈ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ರಾಜ್ಯದಲ್ಲಿ ಸಿಎಎ, ಎನ್’ಪಿಆರ್ ಮತ್ತು NRC ಜಾರಿಗೆ ಅವಕಾಶ ಕೊಡುವುದಿಲ್ಲ ಎಂದು ಗುಡುಗಿದರು.

ಕೇಂದ್ರ ಸರ್ಕಾರದ ಈ ಕ್ರೂರ ಕಾನೂನುಗಳ ವಿರುದ್ಧ ಶಾಂತಿಯುತ ಹೋರಾಟ ಮುಂದುವರೆಯಲಿದ್ದು, ಜೀವ ಇರುವವರೆಗೂ ರಾಜ್ಯದಲ್ಲಿ ಸಿಎಎ ಜಾರಿಗೆ ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೇರಳ ಬೆನ್ನಲ್ಲೇ ಕೇಂದ್ರಕ್ಕೆ ಸೆಡ್ಡು ಹೊಡೆದ ಮತ್ತೊಂದು ರಾಜ್ಯ!

Follow Us:
Download App:
  • android
  • ios