Asianet Suvarna News Asianet Suvarna News

ಪ್ರಧಾನಿ ಮೋದಿಯಿಂದ ಮೆಗಾ ರೋಡ್‌ಶೋ: ದೆಹಲಿಯಲ್ಲಿ 2 ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆರಂಭ

ಸಭೆಯಲ್ಲಿ ರಾಜಕೀಯ ಮತ್ತು ಆರ್ಥಿಕ ವಿಷಯಗಳ ಬಗ್ಗೆಯೂ ಚರ್ಚಿಸಲಾಗುವುದು ಮತ್ತು ಕರ್ನಾಟಕ ಸೇರಿ ಚುನಾವಣೆಗೆ ಒಳಪಡುವ ರಾಜ್ಯಗಳಲ್ಲಿನ ಸಾಂಸ್ಥಿಕ ಸಮಸ್ಯೆಗಳನ್ನು ಪರಿಶೀಲಿಸಲಾಗುತ್ತದೆ ಎಂದೂ ತಿಳಿದುಬಂದಿದೆ. 

top bjp meet begins today after prime ministers road show in delhi ash
Author
First Published Jan 16, 2023, 5:02 PM IST

ಪ್ರಧಾನಿ ಮೋದಿ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೆಗಾ ರೋಡ್‌ಶೋ ನಡೆಸಿದ್ದಾರೆ. ಪಟೇಲ್ ಚೌಕ್‌ನಿಂದ ಸೆಂಟ್ರಲ್ ದೆಹಲಿಯ ಎನ್‌ಡಿಎಂಸಿ ಕೇಂದ್ರ ಕಚೇರಿವರೆಗೆ ಸುಮಾರು ಒಂದು ಕಿಲೋಮೀಟರ್‌ವರೆಗೆ ಪ್ರಧಾನಿ ಮೋದಿ ರೋಡ್‌ ಶೋ ನಡೆಸಿದ್ದಾರೆ. ಈ ವೇಳೆ, ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು, ಜನತೆ ರಸ್ತೆಯ ಎರಡೂ ಬದಿಗಳಲ್ಲಿ ಕಿಕ್ಕಿರಿದು ತುಂಬಿದ್ದರು. ಇನ್ನು, ರೋಡ್‌ಶೋದಲ್ಲಿ ಪ್ರಧಾನಿ ಮೋದಿ ಮಾತ್ರವಲ್ಲದೆ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ರಾಜನಾಥ್‌ ಸಿಂಗ್ ಹಾಗೂ ಜೈಶಂಕರ್‌ ಸಹ ಭಾಗಿಯಾಗಿದ್ದರು. ಮಧ್ಯಾಹ್ನ 3: 30ಕ್ಕೆ ರೋಡ್‌ಶೋ ಆರಂಭವಾಗಿದ್ದು, ಈ ವೇಳೆ ಸಾಕಷ್ಟು ಜನಸ್ತೋಮ ನೆರೆದಿತ್ತು. ಇನ್ನೊಂದೆಡೆ, ರೋಡ್‌ಶೋ ಮುಗಿದ ಬಳಿಕ 2 ದಿನಗಳ ಬಿಜೆಪಿಯ ಪ್ರಮುಖ ಕಾರ್ಯಕಾರಿಣಿ ಸಭೆ ಆರಂಭವಾಗಿದ್ದು, ಪ್ರಧಾನಿ ಮೋದಿ ರೋಡ್‌ ಶೋ ಮುಗಿಸಿದ ಬಳಿಕ ಸಭೆಗೆ ಹಾಜರಾದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ (BJP National President) ಜೆ.ಪಿ. ನಡ್ಡಾ (J.P. Nadda) ಅವರಾಧಿಕಾರಾವಧಿ ಜನವರಿ ಅಂತ್ಯಕ್ಕೆ ಮುಗಿಯಲಿದ್ದು, ಈ ಹಿನ್ನೆಲೆ 2 ದಿನಗಳ ಈ ಕಾರ್ಯಕಾರಿಣಿ ಸಭೆಯಲ್ಲಿ ಅವರ ಅಧಿಕಾರಾವಧಿ ವಿಸ್ತರಣೆಯನ್ನು ಅನುಮೋದಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಮುಂದಿನ ಲೋಕಸಭೆ ಚುನಾವಣೆಯವರೆಗೆ (Lok Sabha Election) ಅವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎನ್ನಲಾಗಿದೆ. ಜತೆಗೆ, ವಿಧಾನಸಭೆ (Vidhan Sabha) ಮತ್ತು ಸಾರ್ವತ್ರಿಕ ಚುನಾವಣೆಗಳಿಗೆ ಅದರ ಕಾರ್ಯತಂತ್ರದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಲಾಗಿದೆ.  ಸಭೆ ಆರಂಭವಾದ ಬೆನ್ನಲ್ಲೇ ಜೆ.ಪಿ. ನಡ್ಡಾ ಅವರು ದೇಶಾದ್ಯಂತದ ಉಸ್ತುವಾರಿಗಳು ಮತ್ತು ಸಹ-ಪ್ರಭಾರಿಗಳೊಂದಿಗೆ ಸಭೆ ನಡೆಸಿದರು.

ಇದನ್ನು ಓದಿ: ಇಂದು, ನಾಳೆ ಬಿಜೆಪಿ ರಾಷ್ಟ್ರೀಯ ಕಾರ‍್ಯಕಾರಿಣಿ: ರಾಜ್ಯ ಸೇರಿ 9 ಅಸೆಂಬ್ಲಿ ಚುನಾವಣೆ ಬಗ್ಗೆ ಚರ್ಚೆ

ಇದಕ್ಕೂ ಮುನ್ನ, ದೆಹಲಿಯ ಹೊಸ ದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಕನ್ವೆನ್ಷನ್ ಸೆಂಟರ್‌ನಲ್ಲಿ ಹಲವಾರು ವಿಷಯಗಳನ್ನು ಒಳಗೊಂಡ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಜೆಪಿ ನಡ್ಡಾ ಅವರು ಉದ್ಘಾಟಿಸಿದ್ದರು. ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪ್ರಧಾನಮಂತ್ರಿಯವರೊಂದಿಗೆ 35 ಕೇಂದ್ರ ಸಚಿವರು, 12 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು 37 ಪ್ರಾದೇಶಿಕ ಮುಖ್ಯಸ್ಥರು ಭಾಗಿಯಾಗುತ್ತಿದ್ದು, ಜತೆಗೆ ಪಕ್ಷದ 350 ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಸೇವೆ, ಸಂಸ್ಥೆ ಮತ್ತು ಸಮರ್ಪಣೆ ಈ ಕಾರ್ಯಕಾರಿಣಿ ಸಭೆಯ ಪ್ರಮುಖ ವಿಷಯವಾಗಿದೆ ಎಂದು ತಿಳಿದುಬಂದಿದೆ. ಜತೆಗೆ, ವಿಶ್ವ ಗುರು ಭಾರತ - ಎರಡನೆ ಥೀಮ್‌ ಆಗಿದೆ. ಕೋವಿಡ್ ವಿರುದ್ಧದ ಜಾಗತಿಕ ಹೋರಾಟದಲ್ಲಿ ಭಾರತದ ಕೊಡುಗೆ ಮತ್ತು G20 ಅಧ್ಯಕ್ಷ ಸ್ಥಾನವನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ. ಇನ್ನು, ಉತ್ತಮ ಆಡಳಿತ ಮೊದಲು ಎಂಬುದು ಮೂರನೇ ವಿಷಯವಾಗಿದೆ. ಉತ್ತಮ ಆಡಳಿತವನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಂಡ ಕ್ರಮಗಳನ್ನು ಬಿಜೆಪಿ ಈ ವೇಳೆ ಪ್ರದರ್ಶಿಸುತ್ತದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಸಂಪುಟ ವಿಸ್ತರಣೆ ಚರ್ಚೆಗೆ ಮರುಜೀವ: ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸದ ಗುಟ್ಟು ಏನು?

ಇದಲ್ಲದೆ, ವಂಚಿತ, ಅಂತರ್ಗತ ಮತ್ತು ಬಲಿಷ್ಠ ಭಾರತವನ್ನು ಸಬಲೀಕರಣಗೊಳಿಸುವುದು ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ಪ್ರಪಂಚದಾದ್ಯಂತ ಸನಾತನ ಧರ್ಮದ ಉದಯದಂತಹ ಪ್ರಾಚೀನ ಐಕಾನ್‌ಗಳನ್ನು ಸಂರಕ್ಷಿಸುವುದು ಮುಂತಾದ ಇತರ ಉಪಕ್ರಮಗಳು ಬಿಜೆಪಿ ಕಾರ್ಯಕಾರಿಣಿಯಲ್ಲಿ ಚರ್ಚೆಯಾಗುವ ಇತರೆ ವಿಚಾರಗಳು ಎಂದೂ ಹೇಳಲಾಗಿದೆ. 

ಅಲ್ಲದೆ, ರಾಜಕೀಯ ಮತ್ತು ಆರ್ಥಿಕ ವಿಷಯಗಳ ಬಗ್ಗೆಯೂ ಚರ್ಚಿಸಲಾಗುವುದು ಮತ್ತು ಕರ್ನಾಟಕ ಸೇರಿ ಚುನಾವಣೆಗೆ ಒಳಪಡುವ ರಾಜ್ಯಗಳಲ್ಲಿನ ಸಾಂಸ್ಥಿಕ ಸಮಸ್ಯೆಗಳನ್ನು ಪರಿಶೀಲಿಸಲಾಗುತ್ತದೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಬಿಜೆಪಿಯಿಂದ ವಿಜಯ್ ಸಂಕಲ್ಪ ಯಾತ್ರೆ: ಸಂಘಟನೆ ಬಲಗೊಳಿಸಲು ಕಸರತ್ತು

ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಅವರ ಮೂರು ವರ್ಷಗಳ ಅವಧಿಯು ಈ ತಿಂಗಳಿಗೆ ಕೊನೆಗೊಳ್ಳುತ್ತದೆ. ಆದರೆ, 2024ರ ಲೋಕಸಭೆ ಚುನಾವಣೆ ಮುಗಿಯುವವರೆಗೆ ಅವರು ಪಕ್ಷವನ್ನು ಮುನ್ನಡೆಸುವ ಸಾಧ್ಯತೆ ಇದೆ.

Follow Us:
Download App:
  • android
  • ios