71ನೇ ಗಣರಾಜ್ಯೋತ್ಸವಕ್ಕೆ ಅಧಿಕೃತ ತೆರೆ| ನವದೆಹಲಿಯ ರಾಜಪಥದಲ್ಲಿ ಕೊನೆಗೊಂಡ ಪಥಸಂಚಲನ| ವೇದಿಕೆಯಿಂದ ಕೆಳಗಿಳಿದು ಬಂದು ಜನರತ್ತ ಕೈಬೀಸಿದ ಪ್ರಧಾನಿ| ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ| ಪ್ರಧಾನಿ ಮೋದಿಗೆ ಭದ್ರತಾ ಸಿಬ್ಬಂದಿ ಸಾಥ್|

ನವದೆಹಲಿ(ಜ.26): 71ನೇ ಗಣರಾಜ್ಯೋತ್ಸವಕ್ಕೆ ಅಧಿಕೃತ ತೆರೆ ಬಿದ್ದಿದ್ದು, ನವದೆಹಲಿ ರಾಜಪಥದಲ್ಲಿ ನಡೆಯುತ್ತಿದ್ದ ಪಥಸಂಚಲನ ಮುಕ್ತಾಯ ಕಂಡಿದೆ.

Add Asianetnews Kannada as a Preferred SourcegooglePreferred

ಪಥಸಂಚಲನ ಮುಕ್ತಾಯವಾಗುತ್ತಿದ್ದಂತೇ ವೇದಿಕೆ ಮೇಲಿದ್ದ ಪ್ರಧಾನಿ ಮೋದಿ, ಕೆಳಗಿಳಿದು ಬಂದು ಜನರತ್ತ ಕೈ ಬೀಸಿ ಗಣರಾಜ್ಯೋತ್ಸವದ ಶುಭಾಶಯ ಕೋರಿದರು.

ಹಿಮ ಪರ್ವತ ಗೆದ್ದ ಯೋಧರು: 17 ಸಾವಿರ ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಿದರು!

ಪಥಸಂಚಲನ ಮುಗಿದ ಬಳಿಕ ವೇದಿಕೆ ಮೇಲಿದ್ದ ಗಣ್ಯರನ್ನು ಬೀಳ್ಕೊಟ್ಟ ಪ್ರಧಾನಿ ಮೋದಿ, ಬಳಿ ರಾಜಪಥ್’ದಲ್ಲಿ ನೆರೆದಿದ್ದ ಜನಸಮೂಹದ ಬಳಿ ನಡೆದುಕೊಂಡು ಹೋದರು.

Scroll to load tweet…

ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದಿದ್ದ ಜನತೆಯತ್ತ ಕೈಬೀಸಿದ ಪ್ರಧಾನಿ ಮೋದಿ, ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದರು. ಈ ವೇಳೆ ಜನ ಮೋದಿ ಮೋದಿ ಎಂದು ಕೂಗಿ ಸಂಭ್ರಮಿಸಿದರು.

ಈ ಸಲದ ಗಣರಾಜ್ಯೋತ್ಸವದ ಪ್ರಥಮಗಳು..!

ರಾಜಪಥ್’ದಲ್ಲಿ ಕೆಲವು ಕಾಲ ನಡೆದುಕೊಂಡು ಹೋದ ಪ್ರಧಾನಿ ಮೋದಿ ಅವರಿಗೆ ಭದ್ರತಾ ಸಿಬ್ಬಂದಿ ಸಾಥ್ ನೀಡಿದರು.

ಜನವರಿ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ