Asianet Suvarna News Asianet Suvarna News

Russia-Ukraine War: ಸರ್ಕಾರ ಏನೂ ಮಾಡ್ತಿಲ್ಲ, ಕೇವಲ ಪೋಸ್‌ ಕೊಡ್ತಿದೆ ಅಷ್ಟೇ: ವಿದ್ಯಾರ್ಥಿಗಳ ಆಕ್ರೋಶ

*    ಉಕ್ರೇನ್‌ನಲ್ಲಿ ನಮ್ಮವರಿಗೆ ಯಾವ ಸೌಲಭ್ಯವೂ ಸಿಗ್ತಿಲ್ಲ
*   ಕೇಂದ್ರ ಸರ್ಕಾ​ರದ ವಿರುದ್ಧ ತೀವ್ರ ಆಕ್ರೋಶ 
*   700 ಕಿ.ಮೀ. ಪ್ರಯಾ​ಣಕ್ಕೆ 6 ಸಾವಿರ ವೆಚ್ಚ ಭರಿ​ಸಿ​ದ ವಿದ್ಯಾರ್ಥಿಗಳು 

Indian Students Slams On Central Government grg
Author
Bengaluru, First Published Mar 3, 2022, 11:05 AM IST

ನವ​ದೆ​ಹ​ಲಿ(ಮಾ.03): ಉಕ್ರೇ​ನ್‌​ನಿಂದ(Ukraine) ವಿಶೇಷ ವಿಮಾ​ನದ ಮೂಲಕ ಬುಧ​ವಾರ ನವ​ದೆ​ಹಲಿಯಲ್ಲಿ ಬಂದಿ​ಳಿದ ವಿದ್ಯಾ​ರ್ಥಿ​ಗಳು ಕೇಂದ್ರ ಸರ್ಕಾ​ರದ(Central Government) ವಿರುದ್ಧ ತೀವ್ರ ಆಕ್ರೋಶ ವ್ಯಕ್ತ​ಪ​ಡಿ​ಸಿ​ದ್ದಾ​ರೆ. ಉಕ್ರೇ​ನ್‌ನಲ್ಲಿ ಭಾರ​ತೀಯ ರಾಯ​ಭಾರ ಕಚೇರಿ(Indian Embassy) ಮಾಡ​ಲಾ​ಗಿದೆ, ಸರ್ಕಾರ ಕೇವಲ ಪೋಸ್‌ ಅಷ್ಟೇ ಕೊಡು​ತ್ತಿದೆ ಎಂದು ಆರೋ​ಪಿ​ಸಿ​ದ್ದಾ​ರೆ.

ಉಕ್ರೇ​ನ್‌​ನ​ಲ್ಲಿ ಸಂಕ​ಷ್ಟಕ್ಕೆ ಸಿಲು​ಕಿರೋ ವಿದ್ಯಾ​ರ್ಥಿ​ಗ​ಳಿಗೆ(Students) ಸರ್ಕಾರ ಯಾವುದೇ ರೀತಿಯ ನೆರವು ನೀಡು​ತ್ತಿಲ್ಲ. ಖಾರ್ಕೀವ್‌ ಮತ್ತು ಸುಮಿ ನಗ​ರ​ದ​ಲ್ಲಿ​ರುವ ಭಾರ​ತೀ​ಯ​ರಿಗೆ(Indians) ತುಂಬಾ ತೊಂದರೆ ಆಗು​ತ್ತಿದೆ. ಭಾರ​ತೀಯ ರಾಯ​ಭಾರ ಕಚೇರಿ ಕೂಡ ಖಾಲಿ ಮಾಡಿ​ರುವ ಹಿನ್ನೆ​ಲೆ​ಯಲ್ಲಿ ಸಂಪರ್ಕ ಸಾಧಿ​ಸಲು ಸಾಧ್ಯ​ವಾ​ಗು​ತ್ತಿಲ್ಲ. ಕರೆ ಮಾಡಿ​ದರೆ ಸರಿ​ಯಾದ ಮಾಹಿತಿ ಕೂಡ ಕೊಡು​ತ್ತಿಲ್ಲ ಅಂತ ಹೇಳಿದ್ದಾರೆ. 

Russia Ukraine War: ಖಾರ್ಕೀವ್‌ ತೊರೆಯುವಂತೆ ಸೂಚನೆ: ಕಾಲ್ನಡಿಗೆಯಲ್ಲೇ ಗಡಿಯತ್ತ ಸಾಗಿದ ವಿದ್ಯಾರ್ಥಿಗಳು !

ನಾವು 700 ಕಿ.ಮೀ. ಪ್ರಯಾ​ಣಕ್ಕೆ 6 ಸಾವಿರ ವೆಚ್ಚ ಭರಿ​ಸಿ​ದ್ದೇ​ವೆ. ನೈಜೀ​ರಿಯಾ ಪ್ರಜೆ​ಗಳು ಭಾರ​ತೀ​ಯ​ರಿಗೆ ಗಡಿ​ಯಲ್ಲಿ ಸಾಕಷ್ಟು ತೊಂದರೆ ಕೊಡು​ತ್ತಿ​ದ್ದಾರೆ. ಹಂಗೇರಿ ಗಡಿ​ಯಲ್ಲೂ ಸರಿ​ಯಾಗಿ ಊಟ, ವಸ​ತಿ ಸೌಲಭ್ಯ ಇಲ್ಲ. ಎಂಟ್ಹತ್ತು ದಿನ ಉಪ​ವಾಸ ಮಾಡಿ​ದ್ದೇವೆ. ಸ್ಥಳೀಯ ಚಾರಿ​ಟ​ಬಲ್‌ ಟ್ರಸ್ಟ್‌ ಮಾತ್ರ ಸಹಾ​ಯಕ್ಕೆ ಬರು​ತ್ತಿವೆ. ಕರ್ನಾ​ಟಕ ಸರ್ಕಾರ ದೆಹ​ಲಿಗೆ ಬಂದ ಬಳಿ​ಕ​ವಷ್ಟೇ ಸಹ​ಕಾರ ನೀಡು​ತ್ತಿದೆ ಎಂದು ವಿದ್ಯಾ​ರ್ಥಿ​ಗಳು ಆರೋ​ಪಿ​ಸಿ​ದ್ದಾ​ರೆ. ಬುಡಾಪೆಸ್ಟ್‌​ನಿಂದ ಸ್ಟೈಸ್‌​ಜೆಟ್‌ ವಿಮಾ​ನದ ಮೂಲಕ ಈ ವಿದ್ಯಾ​ರ್ಥಿ​ಗಳು ದೆಹಲಿ ವಿಮಾನ ನಿಲ್ದಾ​ಣಕ್ಕೆ ರಾತ್ರಿ ಬಂದಿಳಿ​ದಿ​ದ್ದಾ​ರೆ.

ದಾಳಿ ತೀವ್ರಗೊಳ್ಳುತ್ತಿದ್ದಂತೆ ರಕ್ಷಣಾ ಕಾರ್ಯ ಚುರುಕು: ಈವರೆಗೆ 3389 ಭಾರತೀಯರ ಏರ್‌ಲಿಫ್ಟ್‌!

ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ‘ಆಪರೇಷನ್‌ ಗಂಗಾ’ ಕಾರ್ಯಾಚರಣೆ ನಡೆಸುತ್ತಿರುವ ಭಾರತ ಸರ್ಕಾರ, ಬುಧವಾರವೂ ತನ್ನ ಅವಿಶ್ರಾಂತ ಕಾಯಕ ಮುಂದುವರಿಸಿದೆ. ಈವರೆಗೆ 15 ವಿಮಾನಗಳಲ್ಲಿ 3389 ಜನರನ್ನು ಕರೆತರಲಾಗಿದೆ ಹಾಗೂ ಇನ್ನು ಕೆಲವು ದಿನಗಳಲ್ಲಿ 31 ವಿಮಾನದಲ್ಲಿ 6300 ಜನರನ್ನು ಕರೆತರುವ ಮಹದೋದ್ದೇಶ ಇರಿಸಿಕೊಂಡಿದೆ.ಯುದ್ಧಕ್ಕೂ ಮೊದಲು ಭಾರತ ಸರ್ಕಾರ ಸೂಚನೆ ನೀಡಿ ‘ಬೇಗ ಉಕ್ರೇನ್‌ನಿಂದ ಹೊರಡಬೇಕು’ ಎಂದು ಭಾರತೀಯರಿಗೆ ಸೂಚನೆ ನೀಡಿತ್ತು ಹಾಗೂ ಯುದ್ಧದ ಬಳಿಕ ವಿಮಾನದ ಮೂಲಕ ರಕ್ಷಣಾ ಕಾರಾರ‍ಯಚರಣೆ ನಡೆಸಿದೆ. ಈ ಎರಡೂ ಕಾರ್ಯಗಳಿಂದ ಈವರೆಗೆ ಉಕ್ರೇನ್‌ನಲ್ಲಿದ್ದ 20 ಸಾವಿರ ಜನರ ಪೈಕಿ ಶೇ.60ರಷ್ಟುಜನರು (ಅಂದಾಜು 12 ಸಾವಿರ ಜನ) ಭಾರತಕ್ಕೆ ಮರಳಿದ್ದಾರೆ ಎಂದು ಖುದ್ದು ಕೇಂದ್ರ ಸರ್ಕಾರ ಹೇಳಿದೆ.

Operation Ganga: ಉಕ್ರೇನಿಂದ ವಿದ್ಯಾರ್ಥಿಗಳ ತರಲು ಕೇಂದ್ರದ ಶ್ರಮ: ದೇವೇಗೌಡ ಮೆಚ್ಚುಗೆ

15 ವಿಮಾನದಲ್ಲಿ ಈವರೆಗೆ 3389 ಜನರು ವಾಪಸ್‌: ಈವರೆಗೆ 15 ವಿಮಾನಗಳಲ್ಲಿ 3,389 ಜನರನ್ನು ಭಾರತಕ್ಕೆ ಕರೆತಂದಿದೆ. ಕಾರಾರ‍ಯಚರಣೆ ಆರಂಭವಾದ ಮೊದಲ ದಿನ ಶನಿವಾರ 219 ಮಂದಿ, ಭಾನುವಾರ 688 ಮಂದಿ, ಸೋಮವಾರ 489, ಮಂಗಳವಾರ 616 ಮತ್ತು ಬುಧವಾರ ಒಂದೇ ದಿನ 6 ವಿಮಾನಗಳಲ್ಲಿ 1377 ಮಂದಿ ಭಾರತಕ್ಕೆ ತಲುಪಿದ್ದಾರೆ. ರೊಮೆನಿಯಾ, ಪೋಲಂಡ್‌, ಹಂಗೇರಿ ಸೇರಿದಂತೆ ಉಕ್ರೇನ್‌ ನೆರೆಯ ದೇಶಗಳಿಂದ ಏರಿಂಡಿಯಾ, ಇಂಡಿಗೋ, ಸ್ಪೈಸ್‌ ಜೆಟ್‌ ಮತ್ತು ಭಾರತೀಯ ವಾಯುಪಡೆಯ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.

ಮುಂದಿನ 31 ವಿಮಾನದಲ್ಲಿ 6300 ಜನ: 

ಮಾರ್ಚ್ 8ರ ವರೆಗೂ ಈ ಕಾರಾರ‍ಯಚರಣೆ ಮುಂದುವರೆಯಲಿದ್ದು, 31 ವಿಮಾನಗಳು ಮುಂದಿನ ದಿನಗಳಲ್ಲಿ 6,300 ಭಾರತೀಯರನ್ನು ಸ್ವದೇಶಕ್ಕೆ ಮರಳಿ ಕರೆತರಲಿವೆ. ರೊಮೇನಿಯಾದ ಬುಕಾರೆಸ್ಟ್‌ನಿಂದ 21 ವಿಮಾನಗಳು, ಹಂಗೇರಿಯ ಬುಡಾಪೆಸ್ಟ್‌ನಿಂದ 4, ಪೋಲಂಡ್‌ನ ಝೇಜವ್‌ನಿಂದ 4, ಸ್ಲೋವೋಕಿಯಾದ ಕೋಶಿಟ್ಸದಿಂದ 1 ವಿಮಾನ ಕಾರ್ಯಾಚರಣೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಒಂದು ಬಾರಿಗೆ ಏರಿಂಡಿಯಾ ಎಕ್ಸ್‌ಪ್ರೆಸ್‌ ಮತ್ತು ಸ್ಪೈಸ್‌ಜೆಟ್‌ ವಿಮಾನಗಳು 180 ಜನರನ್ನು ಹಾಗೂ ಏರಿಂಡಿಯಾ 250 ಮತ್ತು ಇಂಡಿಗೋ 216 ಜನರನ್ನು ಕರೆತರಲಿವೆ.
 

Follow Us:
Download App:
  • android
  • ios