Russia-Ukraine War: ಸರ್ಕಾರ ಏನೂ ಮಾಡ್ತಿಲ್ಲ, ಕೇವಲ ಪೋಸ್ ಕೊಡ್ತಿದೆ ಅಷ್ಟೇ: ವಿದ್ಯಾರ್ಥಿಗಳ ಆಕ್ರೋಶ
* ಉಕ್ರೇನ್ನಲ್ಲಿ ನಮ್ಮವರಿಗೆ ಯಾವ ಸೌಲಭ್ಯವೂ ಸಿಗ್ತಿಲ್ಲ
* ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ
* 700 ಕಿ.ಮೀ. ಪ್ರಯಾಣಕ್ಕೆ 6 ಸಾವಿರ ವೆಚ್ಚ ಭರಿಸಿದ ವಿದ್ಯಾರ್ಥಿಗಳು
ನವದೆಹಲಿ(ಮಾ.03): ಉಕ್ರೇನ್ನಿಂದ(Ukraine) ವಿಶೇಷ ವಿಮಾನದ ಮೂಲಕ ಬುಧವಾರ ನವದೆಹಲಿಯಲ್ಲಿ ಬಂದಿಳಿದ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ(Central Government) ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಕ್ರೇನ್ನಲ್ಲಿ ಭಾರತೀಯ ರಾಯಭಾರ ಕಚೇರಿ(Indian Embassy) ಮಾಡಲಾಗಿದೆ, ಸರ್ಕಾರ ಕೇವಲ ಪೋಸ್ ಅಷ್ಟೇ ಕೊಡುತ್ತಿದೆ ಎಂದು ಆರೋಪಿಸಿದ್ದಾರೆ.
ಉಕ್ರೇನ್ನಲ್ಲಿ ಸಂಕಷ್ಟಕ್ಕೆ ಸಿಲುಕಿರೋ ವಿದ್ಯಾರ್ಥಿಗಳಿಗೆ(Students) ಸರ್ಕಾರ ಯಾವುದೇ ರೀತಿಯ ನೆರವು ನೀಡುತ್ತಿಲ್ಲ. ಖಾರ್ಕೀವ್ ಮತ್ತು ಸುಮಿ ನಗರದಲ್ಲಿರುವ ಭಾರತೀಯರಿಗೆ(Indians) ತುಂಬಾ ತೊಂದರೆ ಆಗುತ್ತಿದೆ. ಭಾರತೀಯ ರಾಯಭಾರ ಕಚೇರಿ ಕೂಡ ಖಾಲಿ ಮಾಡಿರುವ ಹಿನ್ನೆಲೆಯಲ್ಲಿ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ. ಕರೆ ಮಾಡಿದರೆ ಸರಿಯಾದ ಮಾಹಿತಿ ಕೂಡ ಕೊಡುತ್ತಿಲ್ಲ ಅಂತ ಹೇಳಿದ್ದಾರೆ.
Russia Ukraine War: ಖಾರ್ಕೀವ್ ತೊರೆಯುವಂತೆ ಸೂಚನೆ: ಕಾಲ್ನಡಿಗೆಯಲ್ಲೇ ಗಡಿಯತ್ತ ಸಾಗಿದ ವಿದ್ಯಾರ್ಥಿಗಳು !
ನಾವು 700 ಕಿ.ಮೀ. ಪ್ರಯಾಣಕ್ಕೆ 6 ಸಾವಿರ ವೆಚ್ಚ ಭರಿಸಿದ್ದೇವೆ. ನೈಜೀರಿಯಾ ಪ್ರಜೆಗಳು ಭಾರತೀಯರಿಗೆ ಗಡಿಯಲ್ಲಿ ಸಾಕಷ್ಟು ತೊಂದರೆ ಕೊಡುತ್ತಿದ್ದಾರೆ. ಹಂಗೇರಿ ಗಡಿಯಲ್ಲೂ ಸರಿಯಾಗಿ ಊಟ, ವಸತಿ ಸೌಲಭ್ಯ ಇಲ್ಲ. ಎಂಟ್ಹತ್ತು ದಿನ ಉಪವಾಸ ಮಾಡಿದ್ದೇವೆ. ಸ್ಥಳೀಯ ಚಾರಿಟಬಲ್ ಟ್ರಸ್ಟ್ ಮಾತ್ರ ಸಹಾಯಕ್ಕೆ ಬರುತ್ತಿವೆ. ಕರ್ನಾಟಕ ಸರ್ಕಾರ ದೆಹಲಿಗೆ ಬಂದ ಬಳಿಕವಷ್ಟೇ ಸಹಕಾರ ನೀಡುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಬುಡಾಪೆಸ್ಟ್ನಿಂದ ಸ್ಟೈಸ್ಜೆಟ್ ವಿಮಾನದ ಮೂಲಕ ಈ ವಿದ್ಯಾರ್ಥಿಗಳು ದೆಹಲಿ ವಿಮಾನ ನಿಲ್ದಾಣಕ್ಕೆ ರಾತ್ರಿ ಬಂದಿಳಿದಿದ್ದಾರೆ.
ದಾಳಿ ತೀವ್ರಗೊಳ್ಳುತ್ತಿದ್ದಂತೆ ರಕ್ಷಣಾ ಕಾರ್ಯ ಚುರುಕು: ಈವರೆಗೆ 3389 ಭಾರತೀಯರ ಏರ್ಲಿಫ್ಟ್!
ನವದೆಹಲಿ: ಯುದ್ಧಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ‘ಆಪರೇಷನ್ ಗಂಗಾ’ ಕಾರ್ಯಾಚರಣೆ ನಡೆಸುತ್ತಿರುವ ಭಾರತ ಸರ್ಕಾರ, ಬುಧವಾರವೂ ತನ್ನ ಅವಿಶ್ರಾಂತ ಕಾಯಕ ಮುಂದುವರಿಸಿದೆ. ಈವರೆಗೆ 15 ವಿಮಾನಗಳಲ್ಲಿ 3389 ಜನರನ್ನು ಕರೆತರಲಾಗಿದೆ ಹಾಗೂ ಇನ್ನು ಕೆಲವು ದಿನಗಳಲ್ಲಿ 31 ವಿಮಾನದಲ್ಲಿ 6300 ಜನರನ್ನು ಕರೆತರುವ ಮಹದೋದ್ದೇಶ ಇರಿಸಿಕೊಂಡಿದೆ.ಯುದ್ಧಕ್ಕೂ ಮೊದಲು ಭಾರತ ಸರ್ಕಾರ ಸೂಚನೆ ನೀಡಿ ‘ಬೇಗ ಉಕ್ರೇನ್ನಿಂದ ಹೊರಡಬೇಕು’ ಎಂದು ಭಾರತೀಯರಿಗೆ ಸೂಚನೆ ನೀಡಿತ್ತು ಹಾಗೂ ಯುದ್ಧದ ಬಳಿಕ ವಿಮಾನದ ಮೂಲಕ ರಕ್ಷಣಾ ಕಾರಾರಯಚರಣೆ ನಡೆಸಿದೆ. ಈ ಎರಡೂ ಕಾರ್ಯಗಳಿಂದ ಈವರೆಗೆ ಉಕ್ರೇನ್ನಲ್ಲಿದ್ದ 20 ಸಾವಿರ ಜನರ ಪೈಕಿ ಶೇ.60ರಷ್ಟುಜನರು (ಅಂದಾಜು 12 ಸಾವಿರ ಜನ) ಭಾರತಕ್ಕೆ ಮರಳಿದ್ದಾರೆ ಎಂದು ಖುದ್ದು ಕೇಂದ್ರ ಸರ್ಕಾರ ಹೇಳಿದೆ.
Operation Ganga: ಉಕ್ರೇನಿಂದ ವಿದ್ಯಾರ್ಥಿಗಳ ತರಲು ಕೇಂದ್ರದ ಶ್ರಮ: ದೇವೇಗೌಡ ಮೆಚ್ಚುಗೆ
15 ವಿಮಾನದಲ್ಲಿ ಈವರೆಗೆ 3389 ಜನರು ವಾಪಸ್: ಈವರೆಗೆ 15 ವಿಮಾನಗಳಲ್ಲಿ 3,389 ಜನರನ್ನು ಭಾರತಕ್ಕೆ ಕರೆತಂದಿದೆ. ಕಾರಾರಯಚರಣೆ ಆರಂಭವಾದ ಮೊದಲ ದಿನ ಶನಿವಾರ 219 ಮಂದಿ, ಭಾನುವಾರ 688 ಮಂದಿ, ಸೋಮವಾರ 489, ಮಂಗಳವಾರ 616 ಮತ್ತು ಬುಧವಾರ ಒಂದೇ ದಿನ 6 ವಿಮಾನಗಳಲ್ಲಿ 1377 ಮಂದಿ ಭಾರತಕ್ಕೆ ತಲುಪಿದ್ದಾರೆ. ರೊಮೆನಿಯಾ, ಪೋಲಂಡ್, ಹಂಗೇರಿ ಸೇರಿದಂತೆ ಉಕ್ರೇನ್ ನೆರೆಯ ದೇಶಗಳಿಂದ ಏರಿಂಡಿಯಾ, ಇಂಡಿಗೋ, ಸ್ಪೈಸ್ ಜೆಟ್ ಮತ್ತು ಭಾರತೀಯ ವಾಯುಪಡೆಯ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.
ಮುಂದಿನ 31 ವಿಮಾನದಲ್ಲಿ 6300 ಜನ:
ಮಾರ್ಚ್ 8ರ ವರೆಗೂ ಈ ಕಾರಾರಯಚರಣೆ ಮುಂದುವರೆಯಲಿದ್ದು, 31 ವಿಮಾನಗಳು ಮುಂದಿನ ದಿನಗಳಲ್ಲಿ 6,300 ಭಾರತೀಯರನ್ನು ಸ್ವದೇಶಕ್ಕೆ ಮರಳಿ ಕರೆತರಲಿವೆ. ರೊಮೇನಿಯಾದ ಬುಕಾರೆಸ್ಟ್ನಿಂದ 21 ವಿಮಾನಗಳು, ಹಂಗೇರಿಯ ಬುಡಾಪೆಸ್ಟ್ನಿಂದ 4, ಪೋಲಂಡ್ನ ಝೇಜವ್ನಿಂದ 4, ಸ್ಲೋವೋಕಿಯಾದ ಕೋಶಿಟ್ಸದಿಂದ 1 ವಿಮಾನ ಕಾರ್ಯಾಚರಣೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಒಂದು ಬಾರಿಗೆ ಏರಿಂಡಿಯಾ ಎಕ್ಸ್ಪ್ರೆಸ್ ಮತ್ತು ಸ್ಪೈಸ್ಜೆಟ್ ವಿಮಾನಗಳು 180 ಜನರನ್ನು ಹಾಗೂ ಏರಿಂಡಿಯಾ 250 ಮತ್ತು ಇಂಡಿಗೋ 216 ಜನರನ್ನು ಕರೆತರಲಿವೆ.