ಕಾಸರಗೋಡಿನಲ್ಲಿ ಮದುವೆ ನಿಲ್ಲಲು ವರನೇ ಕಾರಣ. ಮುಹೂರ್ತದ ಸಮಯಕ್ಕೆ ವಧು ಮತ್ತು ಆಕೆಯ ಸಂಬಂಧಿಕರು ದೇವಸ್ಥಾನಕ್ಕೆ ಬಂದರೂ ವರ ಮಾತ್ರ ಬರಲಿಲ್ಲ. ಇದರಿಂದ ಮದುವೆ ರದ್ದಾಗಿದೆ.
ಕಾಸರಗೋಡು (ಮೇ.15): ಕಾಸರಗೋಡಿನ ಬಳಾಲ್ ಬಳಿ ನಡೆಯಬೇಕಿದ್ದ ಮದುವೆಯೊಂದು ವರ ಬಾರದ ಕಾರಣಕ್ಕೆ ನಿಂತುಹೋಗಿದೆ. ವಧು ಮತ್ತು ಆಕೆಯ ಕುಟುಂಬಸ್ಥರು ದೇವಸ್ಥಾನಕ್ಕೆ ಬಂದು ಕಾಯುತ್ತಿದ್ದರು. ಆದರೆ, ಮುಹೂರ್ತದ ಸಮಯವಾದರೂ ವರ ಮತ್ತು ಆತನ ಕಡೆಯವರು ಬರಲೇ ಇಲ್ಲ.

ಮದುವೆ ಮಂಟಪಕ್ಕೆ ಬಂದ ಯುವತಿ ನೇರ ಪೊಲೀಸ್ ಠಾಣೆಗೆ!
ಇದರಿಂದ ಬೇಸತ್ತ ಯುವತಿ, ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಹಿಂದೆ ಪ್ರೀತಿಸುತ್ತಿದ್ದಾಗ ಯುವಕ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ವರನಾಗಬೇಕಿದ್ದ ಯುವಕನನ್ನು ಬಂಧಿಸಿದ್ದಾರೆ.
ವಿಷ್ಣು ನಾರಾಯಣನ್ ಬಂಧಿತ ಆರೋಪಿ
ಕಾಸರಗೋಡಿನ ಬಳಾಲ್ ಸಮೀಪದ ವಿಷ್ಣು ನಾರಾಯಣನ್ ಬಂಧಿತ ಆರೋಪಿ. ವೆಳ್ಳರಿಕುಂಡ್ ಪೊಲೀಸರು ನಾರಾಯಣನ್ನ ಅರೆಸ್ಟ್ ಮಾಡಿದ್ದಾರೆ. ವಿಷ್ಣು ನಾರಾಯಣನ್ ಮತ್ತು ಯುವತಿ ಈ ಹಿಂದೆ ಪ್ರೀತಿಸುತ್ತಿದ್ದರು. ಮದುವೆಗಾಗಿ ವಧು ಮತ್ತು ಆಕೆಯ ಸಂಬಂಧಿಕರು ದೇವಸ್ಥಾನಕ್ಕೆ ಬಂದಿದ್ದರು. ಆದರೆ, ವರನ ಕಡೆಯಿಂದ ಯಾರೂ ಬರಲಿಲ್ಲ.



