ಕಾಸರಗೋಡಿನಲ್ಲಿ ಮದುವೆ ನಿಲ್ಲಲು ವರನೇ ಕಾರಣ. ಮುಹೂರ್ತದ ಸಮಯಕ್ಕೆ ವಧು ಮತ್ತು ಆಕೆಯ ಸಂಬಂಧಿಕರು ದೇವಸ್ಥಾನಕ್ಕೆ ಬಂದರೂ ವರ ಮಾತ್ರ ಬರಲಿಲ್ಲ. ಇದರಿಂದ ಮದುವೆ ರದ್ದಾಗಿದೆ.

ಕಾಸರಗೋಡು (ಮೇ.15): ಕಾಸರಗೋಡಿನ ಬಳಾಲ್ ಬಳಿ ನಡೆಯಬೇಕಿದ್ದ ಮದುವೆಯೊಂದು ವರ ಬಾರದ ಕಾರಣಕ್ಕೆ ನಿಂತುಹೋಗಿದೆ. ವಧು ಮತ್ತು ಆಕೆಯ ಕುಟುಂಬಸ್ಥರು ದೇವಸ್ಥಾನಕ್ಕೆ ಬಂದು ಕಾಯುತ್ತಿದ್ದರು. ಆದರೆ, ಮುಹೂರ್ತದ ಸಮಯವಾದರೂ ವರ ಮತ್ತು ಆತನ ಕಡೆಯವರು ಬರಲೇ ಇಲ್ಲ.

Add Asianetnews Kannada as a Preferred SourcegooglePreferred

ಮದುವೆ ಮಂಟಪಕ್ಕೆ ಬಂದ ಯುವತಿ ನೇರ ಪೊಲೀಸ್ ಠಾಣೆಗೆ!

ಇದರಿಂದ ಬೇಸತ್ತ ಯುವತಿ, ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಹಿಂದೆ ಪ್ರೀತಿಸುತ್ತಿದ್ದಾಗ ಯುವಕ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ವರನಾಗಬೇಕಿದ್ದ ಯುವಕನನ್ನು ಬಂಧಿಸಿದ್ದಾರೆ.

ವಿಷ್ಣು ನಾರಾಯಣನ್ ಬಂಧಿತ ಆರೋಪಿ

ಕಾಸರಗೋಡಿನ ಬಳಾಲ್ ಸಮೀಪದ ವಿಷ್ಣು ನಾರಾಯಣನ್ ಬಂಧಿತ ಆರೋಪಿ. ವೆಳ್ಳರಿಕುಂಡ್ ಪೊಲೀಸರು ನಾರಾಯಣನ್‌ನ ಅರೆಸ್ಟ್ ಮಾಡಿದ್ದಾರೆ. ವಿಷ್ಣು ನಾರಾಯಣನ್ ಮತ್ತು ಯುವತಿ ಈ ಹಿಂದೆ ಪ್ರೀತಿಸುತ್ತಿದ್ದರು. ಮದುವೆಗಾಗಿ ವಧು ಮತ್ತು ಆಕೆಯ ಸಂಬಂಧಿಕರು ದೇವಸ್ಥಾನಕ್ಕೆ ಬಂದಿದ್ದರು. ಆದರೆ, ವರನ ಕಡೆಯಿಂದ ಯಾರೂ ಬರಲಿಲ್ಲ.

YouTube video player