Asianet Suvarna News Asianet Suvarna News

ಸೂರ್ಯಂಗೆ ಟಾರ್ಚ್‌ ಹಿಡಿಯೋಕೋಗಿ ನೋ ಬಾಲ್‌ ಎಸೆದ ಕಾರ್ಯಕರ್ತರು: ಬಿಗ್‌ಬಾಸ್‌ ಆದೇಶಕ್ಕೆ ಸಚಿವರು ಕಂಗಾಲು!

ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ಆಗಾಗ್ಗೆ ತೆರೆ ಹಿಂದೆ ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ಬೆಳಕಿಗೆ ಬರೋದೇ ಇಲ್ಲ, ಕೇವಲ ಗುಸುಗುಸು ಪಿಸುಪಿಸು ಎಂಬಂತೆ ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ..

from the india gate gossip rajasthan congress minister and son kerala cpm jayasurya ash
Author
First Published Sep 3, 2023, 1:41 PM IST

ಹೆಸರಿನ ಸಮಸ್ಯೆ!
ಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯಗೂ ಕೇರಳದ ಸಿಪಿಎಂ ಸೈಬರ್ ಗುಂಪುಗಳಿಗೂ ಸಂಬಂಧವೇನು? ಇದೆಂತ ಪ್ರಶ್ನೆ ಅಂತೀರಾ.. ನಿವೃತ್ತ  ಕ್ರಿಕೆಟಿಗನ ಇನ್‌ಬಾಕ್ಸ್ ಇತ್ತೀಚೆಗೆ ಸೈಬರ್ ಗುಂಪಿನ ದ್ವೇಷ ಸಂದೇಶಗಳಿಂದ ತುಂಬಿತ್ತು. ಅವರು ನಿಂದನೆಗಳನ್ನು ಮಾಡಿದ ಕಾರಣವು ಅಂತಹ ಗುಂಪುಗಳಲ್ಲಿ ಶೂನ್ಯ ಜಾಗೃತಿಯನ್ನು ಬಹಿರಂಗಪಡಿಸುತ್ತದೆ.

ಕೇರಳದ ರೈತರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಎಡ ಸರ್ಕಾರ ವಿಫಲವಾಗಿದೆ ಎಂದು ಮಲಯಾಳಂ ನಟ ಜಯಸೂರ್ಯ ಕಟುವಾಗಿ ಟೀಕಿಸಿದ್ದರು. ಸಾವಿರಾರು ರೈತರಿಂದ ಖರೀದಿಸಿದ ಭತ್ತಕ್ಕೆ ಸರಿಯಾದ ಬೆಲೆ ನೀಡಿಲ್ಲ. ಇದರಿಂದ ರೈತರು ಕಂಗಾಲಾಗಿ ಜೀವನ ನಡೆಸುತ್ತಿದ್ದು, ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಯಸೂರ್ಯ ಹೇಳಿದ್ದರು. 

ಇದನ್ನು ಓದಿ: ಬಡತನ ನಿವಾರಣೆಗೆ ಸಿಪಿಎಂ ಹೊಸ ಪ್ಲ್ಯಾನ್‌; ವಿಷ ಕಾರಿದ ಈ ರಾಜ್ಯದ ರಾಜಕಾರಣಿ! ರಿಯಲ್ 'ಜೈಲರ್' ಸ್ಟೋರಿ ಹೀಗಿದೆ..

ಶೀಘ್ರದಲ್ಲೇ ಸೈಬರ್ ಗುಂಪುಗಳು ನಟನನ್ನು ಸಂಘಿ ಎಂದು ಕರೆಯಲು ಪ್ರಾರಂಭಿಸಿದವು. ಆದರೆ, ಅವರು ಮಾಜಿ ಕ್ರಿಕೆಟಿಗ ಜಯಸೂರ್ಯನ ವಿರುದ್ಧ ಟೀಕೆ ಮಾಡಿದ್ದಾರೆ. ಬಳಿಕ, ಇದು ಅರಿವಾಗ್ತಿದ್ದಂತೆ ಸಿಪಿಎಂ ಟೀಕೆ ಮಾಡುವುದನ್ನು ಕಡಿಮೆ ಮಾಡಿದೆ.

ಬಾಳೆಹಣ್ಣು ತಂದ ಎಡವಟ್ಟು
ಅವರ ತಂದೆ ರಾಜಸ್ಥಾನ ಸರ್ಕಾರದ ಅತ್ಯಂತ ಶಕ್ತಿಶಾಲಿ ಮಂತ್ರಿ. ಆದರೆ ಮಗ ಆಗೊಮ್ಮೆ ಈಗೊಮ್ಮೆ ಮುಜುಗರಕ್ಕೀಡಗೋದು ಮಾತ್ರವಲ್ಲದೆ ತನ್ನ ತಂದೆಯನ್ನೂ ಮುಜುಗರಕ್ಕೀಡು ಮಾಡುತ್ತಾನೆ. ಇತ್ತೀಚೆಗೆ ನಡೆದ ಘಟನೆಯಲ್ಲಿ ಸರಕರಿ ಆಸ್ಪತ್ರೆಯಲ್ಲಿ ದಾನ ಮಾಡಲು ಹೋಗಿದ್ದಾರೆ. ಸಚಿವರ ಪುತ್ರ ತನ್ನ ಹುಟ್ಟುಹಬ್ಬವನ್ನು ಆಚರಿಸಲು ಬೆಂಬಲಿಗರ ಜತೆ ಹೋಗಿದ್ದಾರೆ. 

ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ 100 ರನ್‌ ಹೊಡೆಯಲು ಕಾಂಗ್ರೆಸ್‌ ಹರಸಾಹಸ: ವಿಪಕ್ಷಗಳಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗು ಗುರು!

ಆದರೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ರೋಗಿಯೊಬ್ಬರು ಹೆಚ್ಚುವರಿ ಬಾಳೆಹಣ್ಣು ಬಯಸಿದಾಗ ಅವರ ಡ್ರಾಮಾ ಎಡವಟ್ಟಾಗಿ ಹೋಗಿದೆ. ಏಕೆಂದರೆ, ರಾಜಕುಮಾರ ತನ್ನೊಂದಿಗೆ ಕೆಲವೇ ಬಾಳೆಹಣ್ಣನ್ನು ತಂದಿದ್ದರು. ಈ ಹಿನ್ನೆಲೆ ಹೆಚ್ಚು ಕೇಳಿದ್ದಕ್ಕೆ ಸಚಿವರ ಮಗ ಕೆರಳಿದ್ದು,  ಅಂತಿಮವಾಗಿ ಅದು ಗಲಾಟೆಯಲ್ಲಿ ಕೊನೆಗೊಂಡಿತು. ಕೂಡಲೇ ರೋಗಿಗಳ ಸಂಬಂಧಿಕರು ಆಸ್ಪತ್ರೆಗೆ ಜಮಾಯಿಸಿ ಸಚಿವರ ಪುತ್ರನನ್ನು ಹೊರಹೋಗದಂತೆ ತಡೆದರು.

ನಂತರ, ``ಶಕ್ತಿಶಾಲಿ'' ತಂದೆ ಆಸ್ಪತ್ರೆಗೆ ಧಾವಿಸಿ ರೋಗಿಯ ಬಳಿ ಕ್ಷಮೆಯಾಚಿಸಿದ ನಂತರವೇ ಬಿಕ್ಕಟ್ಟು ಶಮನವಾಯ್ತು. ಆಸ್ಪತ್ರೆ ತನ್ನ ಕ್ಷೇತ್ರದಲ್ಲೇ ಇದ್ದುದರಿಂದ ತಂದೆಯ ಆತಂಕಕ್ಕೆ ಎಲ್ಲ ಕಾರಣಗಳೂ ಇದ್ದವು!

ಇದನ್ನೂ ಓದಿ: ಕೇರಳ ಮಾಜಿ ಸಿಎಂ ಸಮಾಧಿ ನೋಡೋಕೆ 2 ದಿನ ಪ್ಯಾಕೇಜ್: ಲೋಕಲ್‌ ಪ್ರಶಾಂತ್‌ ಕಿಶೋರರಿಂದ ಸೋತ ರಾಜ್ಯ ಬಿಜೆಪಿ ನಾಯಕರು!
 
ಬಿಗ್‌ಬಾಸ್‌ ಆದೇಶ
ಬಿಗ್ ಬಾಸ್ ವಿಶಿಷ್ಟ ಆದೇಶ ಹೊರಡಿಸಿದ ನಂತರ ರಾಜಸ್ಥಾನದ ಕಾಂಗ್ರೆಸ್ ನಾಯಕರು ದಿಕ್ಕಾಪಾಲಾಗಿ ಓಡಿಹೋಗಲು ಸಿದ್ಧವಾಗಿದ್ದಾರೆ. ಯಾಕೆಂದರೆ, ಸಮಾವೇಶಕ್ಕೆ ಗರಿಷ್ಠ ಬೆಂಬಲಿಗರನ್ನು ಕರೆತರುವ ನಾಯಕನಿಗೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗುವುದು ಎಂಬ ಆದೇಶ ನೀಡಲಾಗಿದೆ. 

ಶಕ್ತಿ ಪ್ರದರ್ಶನದ ಈ ಬೇಡಿಕೆ ಕಾಂಗ್ರೆಸ್ ನಾಯಕರಲ್ಲಿ ಗೊಂದಲ ಮೂಡಿಸಿದೆ. ಗೆಹ್ಲೋಟ್ ಕ್ಯಾಬಿನೆಟ್‌ನಲ್ಲಿರುವ ಮಂತ್ರಿಗಳು ಹೆಚ್ಚು ಚಿಂತಿತರಾಗಿದ್ದಾರೆ. ಏಕೆಂದರೆ, ಅವರಲ್ಲಿ ಹಲವರು ಸಾರ್ವಜನಿಕ ಸಂಪರ್ಕವನ್ನು ಕಳೆದುಕೊಂಡಿದ್ದಾರೆ. ಮತ್ತು ಸ್ವಾಭಾವಿಕವಾಗಿ, ಅಂತಹ ವಿನಂತಿಗೆ ತಮ್ಮ ಮತದಾರರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಅವರಿಗೆ ಸಂಪೂರ್ಣವಾಗಿ ಖಚಿತವಾಗಿಲ್ಲ.

ಇದನ್ನೂ ಓದಿ: ಎಡ ಪಕ್ಷದವರಿಗೆ 'ಗಣೇಶ'ನಿಗಿಂತ ಮಿಡತೆ ಮೇಲೆ ಗೌರವ: ಪೈಲಟ್‌ಗಿಲ್ಲ ಕೃತಜ್ಞತೆ; ‘ಪವರ್’ ಕಳ್ಳರ ಮೇಲೆ ಗೆಹ್ಲೋಟ್‌ ಪ್ರೇಮ!

Follow Us:
Download App:
  • android
  • ios