Asianet Suvarna News Asianet Suvarna News

ರಾಷ್ಟ್ರೀಯ ತನಿಖಾ ಸಂಸ್ಥೆಯ ನೂತನ ಮುಖ್ಯಸ್ಥರಾಗಿ ದಿನಕರ್ ಗುಪ್ತಾ ನೇಮಕ

ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆಯ ನೂತನ ಮುಖ್ಯಸ್ಥರಾಗಿ ಪಂಜಾಬ್‌ನ ಮಾಜಿ ಡಿಜಿಪಿ ಮತ್ತು 1987ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ದಿನಕರ್ ಗುಪ್ತಾ ಅವರನ್ನು  ನೇಮಕ ಮಾಡಲಾಗಿದೆ.

Former Punjab DGP Dinkar Gupta appointed as new NIA chief akb
Author
Bangalore, First Published Jun 23, 2022, 9:48 PM IST

ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆಯ ನೂತನ ಮುಖ್ಯಸ್ಥರಾಗಿ ಪಂಜಾಬ್‌ನ ಮಾಜಿ ಡಿಜಿಪಿ ಮತ್ತು 1987ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ದಿನಕರ್ ಗುಪ್ತಾ ಅವರನ್ನು  ನೇಮಕ ಮಾಡಲಾಗಿದೆ. ದಿನಕರ್ ಗುಪ್ತಾ ಅವರು ಮಾರ್ಚ್ 31, 2024 ರವರೆಗೆ ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. 1987-ಬ್ಯಾಚ್ IPS ಅಧಿಕಾರಿಯಾಗಿದ್ದ  ದಿನಕರ್ ಗುಪ್ತಾ ಅವರನ್ನು ಈ ಹಿಂದೆ ಪಂಜಾಬ್‌ನಲ್ಲಿ ಅಧಿಕಾರದಲ್ಲಿದ್ದ ಚನ್ನಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯ ಪೊಲೀಸ್ ಮುಖ್ಯಸ್ಥ ಸ್ಥಾನದಿಂದ ತೆಗೆದು ಹಾಕಿತು ಮತ್ತು ನಂತರ ಪಂಜಾಬ್ ಪೋಲಿಸ್ ಹೌಸಿಂಗ್ ಕಾರ್ಪೊರೇಷನ್ (PPHC) ನ ಅಧ್ಯಕ್ಷರನ್ನಾಗಿ ನೇಮಿಸಿತ್ತು.

“ಸಚಿವ ಸಂಪುಟದ ನೇಮಕಾತಿ ಸಮಿತಿಯು (Appointments Commitee)  ದಿನಕರ್ ಗುಪ್ತಾ (Dinkar Gupta), IPS (PB: 87) ಅವರನ್ನು ಹುದ್ದೆಯ ಹಂತ-17 ರಲ್ಲಿ ಮತ್ತು 31.03.2024 ರವರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ (National Investigative Agency) ಡೈರೆಕ್ಟರ್ ಜನರಲ್ ಆಗಿ ನೇಮಕ ಮಾಡಲು ಗೃಹ ವ್ಯವಹಾರಗಳ ಸಚಿವಾಲಯದ ಪ್ರಸ್ತಾವನೆಯನ್ನು ಅನುಮೋದಿಸಿದೆ. ಅಂದರೆ ಅವರ ನಿವೃತ್ತಿಯ ದಿನಾಂಕ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲು ನಡೆಯುತ್ತದೆ ಅಲ್ಲಿಯವರೆಗೆ ಅವರು ಅಧಿಕಾರದಲ್ಲಿರಲಿದ್ದಾರೆ ಎಂದು ಆದೇಶ ಪತ್ರದಲ್ಲಿದೆ. 

ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಕುರಿತಾಗಿ CBI, NIA ತನಿಖೆಗೆ ಆಗ್ರಹಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ!

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಚರಂಜಿತ್ ಸಿಂಗ್ ಚನ್ನಿ (Charanjit Singh Channi) ನೇತೃತ್ವದ ಕಾಂಗ್ರೆಸ್ ಸರ್ಕಾರವು (Congress government) 1987 ರ ಬ್ಯಾಚ್ ಐಪಿಎಸ್ ಅಧಿಕಾರಿಯನ್ನು (IPS officer) ರಾಜ್ಯ ಪೊಲೀಸ್ ಮುಖ್ಯಸ್ಥ ಸ್ಥಾನದಿಂದ ತೆಗೆದು ಹಾಕಿತು ಮತ್ತು ಪಂಜಾಬ್ ಪೋಲಿಸ್ ಹೌಸಿಂಗ್ ಕಾರ್ಪೊರೇಷನ್ (ಪಿಪಿಹೆಚ್‌ಸಿ) ಅಧ್ಯಕ್ಷರನ್ನಾಗಿ ನೇಮಿಸಿತು. ಚನ್ನಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಗುಪ್ತಾ ಅವರು ಒಂದು ತಿಂಗಳು ರಜೆಯ ಮೇಲೆ ಹೋಗಲು ನಿರ್ಧರಿಸಿದ್ದರು. ನಂತರ ರಾಜ್ಯ ಸರ್ಕಾರವು 1988-ಬ್ಯಾಚ್‌ನ ಅಧಿಕಾರಿ ಇಕ್ಬಾಲ್ ಪ್ರೀತ್ ಸಿಂಗ್ ಸಹೋಟಾ (Iqbal Preet Singh Sahota) ಅವರನ್ನು ಪಂಜಾಬ್‌ ಪೊಲೀಸ್ ಮಹಾ ನಿರ್ದೇಶಕನಾಗಿ ನೇಮಿಸಿತ್ತು.

ವೈಯಕ್ತಿಕ ಕಾರಣಗಳಿಂದ ಹರ್ಷ ಕೊಲೆಯಾಗಿಲ್ಲ ಎಂದು NIA ದೃಢೀಕರಿಸಿದೆ : ಸಿಟಿ ರವಿ

ಆದರೆ ರಾಷ್ಟ್ರೀಯ ತನಿಖಾ ಸಂಸ್ಥೆಯ ನಿರ್ದೇಶಕರಾಗಿ ದಿನಕರ್‌ ಗುಪ್ತಾ ಆಯ್ಕೆಗೆ ಎಲ್ಲೆಡೆ ಅಚ್ಚರಿ ವ್ಯಕ್ತವಾಗುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೊದಲ ಹಾಗೂ ಎರಡನೇ ಅವಧಿಯಲ್ಲಿ ದಿನಕರ್‌ ಗುಪ್ತಾ ಕಾಂಗ್ರೆಸ್‌ ಸಾಮೀಪ್ಯವನ್ನು ಸಂಭ್ರಮಿಸಿದ್ದರು. ಮೊದಲಿಗೆ ದೆಹಲಿಯಲ್ಲಿ ಗುಪ್ತಚರ ಇಲಾಖೆಯಲ್ಲಿ ಹಾಗೂ ನಂತರ ಪಂಜಾಬ್‌ ಡಿಜಿಪಿಯಾಗಿ ಉನ್ನತ ಅಧಿಕಾರವನ್ನು ಅನುಭವಿಸಿದ್ದರು. ಆದರೆ ಈಗ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅವರನ್ನು ಎನ್‌ಐಎ ಮುಖ್ಯಸ್ಥರಾಗಿ ಮಾಡಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. 


ಮತ್ತೊಂದು ಆದೇಶದಲ್ಲಿ, ಸ್ವಾಗತ್ ದಾಸ್ (Swagat Das) ಅವರನ್ನು ಕೇಂದ್ರ ಗೃಹ ಸಚಿವಾಲಯದಲ್ಲಿ ವಿಶೇಷ ಕಾರ್ಯದರ್ಶಿಯಾಗಿ (ಆಂತರಿಕ ಭದ್ರತೆ) ನೇಮಿಸಲಾಯಿತು. ಛತ್ತೀಸ್‌ಗಢ ಕೇಡರ್‌ನ (Chhattisgarh cadre) 1987ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಸ್ವಾಗತ್ ದಾಸ್ (Swagat Das) ಪ್ರಸ್ತುತ ಗುಪ್ತಚರ ಇಲಾಖೆಯಲ್ಲಿ (Intelligence Bureau) ವಿಶೇಷ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದೇಶದ ಪ್ರಕಾರ ಅವರ ನಿವೃತ್ತಿಯ ದಿನಾಂಕವಾದ ನವೆಂಬರ್ 30, 2024 ರವರೆಗೆ ಅವರಿಗೆ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
 

Follow Us:
Download App:
  • android
  • ios