Asianet Suvarna News Asianet Suvarna News

ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಕುರಿತಾಗಿ CBI, NIA ತನಿಖೆಗೆ ಆಗ್ರಹಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ!

ಕಾಶ್ಮೀರದಲ್ಲಿ ಪಂಡಿತರ ಮೇಲೆ ಹಿಂಸಾಚಾರ ಘಟನೆ

ಸಿಬಿಐ ಅಥವಾ ಎನ್ ಐಎ ತನಿಖೆಗೆ ಆಗ್ರಹಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ

ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದ ಕಾಶ್ಮೀರ ಪಂಡಿತರ ಸಂಸ್ಥೆ

Kashmiri Pandit organisation has moved the Supreme Court seeking probe by CBI or NIA on 1990 massacre of Pandits in Kashmir san
Author
Bengaluru, First Published Mar 24, 2022, 4:20 PM IST

ನವದೆಹಲಿ (ಮಾ. 24): 1990ರಲ್ಲಿ ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯಾಕಾಂಡದ (massacre of Pandits in Kashmir)  ಕುರಿತು ಕೇಂದ್ರೀಯ ತನಿಖಾ ದಳ (ಸಿಬಿಐ) ಅಥವಾ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುವಂತೆ ಕೋರಿ ಕಾಶ್ಮೀರಿ ಪಂಡಿತ್ ಸಂಘಟನೆಯೊಂದು (Kashmiri Pandits Organization) ಸುಪ್ರೀಂ ಕೋರ್ಟ್ ಗೆ (Supreme Court ) ಕ್ಯುರೇಟಿವ್ ಅರ್ಜಿ(curative petition) ಸಲ್ಲಿಕೆ ಮಾಡಿದೆ. ರೂಟ್ ಇನ್ ಕಾಶ್ಮೀರ (Root In Kashmir) ಸಂಸ್ಥೆಯು ಈ ಅರ್ಜಿಯನ್ನು ಸಲ್ಲಿಸಿದ್ದು, 2017ರಲ್ಲಿ ಹಿಂಸಾಚಾರದ ಕುರಿತಾದ ತನಿಖೆಯ ಮನವಿಯನ್ನು ವಜಾ ಮಾಡಿದ ಉನ್ನತ ಕೋರ್ಟ್ ನ ಆದೇಶವನ್ನು ಪ್ರಶ್ನೆ ಮಾಡಿದೆ.

ಏಪ್ರಿಲ್ 27, 2017 ರಂದು ರೂಟ್ಸ್ ಇನ್ ಕಾಶ್ಮೀರ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ್ದ ಸುಪ್ರೀಂ ಕೋರ್ಟ್,  "ಅರ್ಜಿಯಲ್ಲಿ ಉಲ್ಲೇಖಿಸಲಾದ ನಿದರ್ಶನಗಳು 1989-90 ವರ್ಷಕ್ಕೆ ಸಂಬಂಧಿಸಿದೆ. ಅದು ಘಟಿಸಿ ಈಗಾಗಲೇ 27ಕ್ಕಿಂತ ಅಧಿಕ ವರ್ಷಗಳು ಕಳೆದಿವೆ' ಎಂದು ಹೇಳಿತ್ತು. ಇದರಿಂದ ಯಾವುದೇ ಫಲಪ್ರದವಾದ ಉದ್ದೇಶವೂ ಈಡೇರುವುದಿಲ್ಲ. ಈ ಘಟನೆ ನಡೆದು ಸಾಕಷ್ಟು ವರ್ಷವಾಗಿರುವ ಹಿನ್ನಲೆಯಲ್ಲಿ ಪುರಾವೆಗಳು ಸಿಗುವ ಸಾಧ್ಯತೆಗಳೂ ಕಡಿಮೆ ಇದೆ ಎಂದು ಕೋರ್ಟ್ ಅಭಿಪ್ರಾಯಪಟ್ಟು ಅರ್ಜಿಯನ್ನು ತಳ್ಳಿ ಹಾಕಿತ್ತು. ಏನಾಗಿದೆಯೂ ಅದು ಹೃದಯವಿದ್ರಾವಕ, ಆದರೆ, ಮರು ತನಿಖೆಗೆ  ಆದೇಶ ನೀಡಲು ಸಾಧ್ಯವಿಲ್ಲ ಎಂದು ಮುಖ್ಯನ್ಯಾಯಮೂರ್ತಿ ಜೆಎಸ್ ಕೆಹರ್ ಹಾಗೂ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಇದ್ದ ಪೀಠ ಅಭಿಪ್ರಾಯಪಟ್ಟಿತ್ತು. ಈ ಆದೇಶದ ವಿರುದ್ಧ 2017ರ ಅಕ್ಟೋಬರ್ 24 ರಂದು ಆದೇಶ ಮರುಪರಿಶೀಲನೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತಾದರೂ ಇದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಯೋತ್ಪಾದಕರ ವಿರುದ್ಧದ ಅಪರಾಧಗಳನ್ನು ತನಿಖೆ ಮಾಡಲು ವಿಫಲರಾಗಿದ್ದಾರೆ ಮತ್ತು ನೂರಾರು ಎಫ್‌ಐಆರ್‌ಗಳಲ್ಲಿ ಯಾವುದೇ ಪ್ರಗತಿ ಸಾಧಿಸಲು ವಿಫಲರಾಗಿದ್ದಾರೆ ಮತ್ತು ಅದನ್ನು ಸಿಬಿಐ ಅಥವಾ ಎನ್‌ಐಎಗೆ ಹಸ್ತಾಂತರಿಸಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ. ಕ್ಯುರೇಟಿವ್ ಅರ್ಜಿ ಸಲ್ಲಿಸಲು ಪ್ರಮಾಣಪತ್ರವನ್ನು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕಾಸ್ ಸಿಂಗ್ ಅವರು ನೀಡಿದ್ದಾರೆ.
 


ಕ್ಯುರೇಟಿವ್ ಅರ್ಜಿಯು ತಪ್ಪು ಆದೇಶಗಳ ಪರಿಹಾರಕ್ಕಾಗಿ ಲಭ್ಯವಿರುವ ಕೊನೆಯ ನ್ಯಾಯಾಂಗದ ಆಶ್ರಯವಾಗಿದೆ. ಇದು ರೂಪಾ ಅಶೋಕ್ ಹುರ್ರಾ ವಿರುದ್ಧ ಅಶೋಕ್ ಹುರ್ರಾ ತೀರ್ಪಿನ ಮೂಲಕ ಸುಪ್ರೀಂ ಕೋರ್ಟ್ ಸ್ಥಾಪಿಸಿದ ಪರಿಹಾರವಾಗಿದೆ ಮತ್ತು ನ್ಯಾಯಾಧೀಶರು ಇನ್-ಚೇಂಬರ್ ನಿರ್ಧರಿಸುತ್ತಾರೆ. ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಲು ಹಿರಿಯ ವಕೀಲರ ಪ್ರಮಾಣಪತ್ರ ಅಗತ್ಯವಾಗಿರುತ್ತದೆ.

Pandit Genocide ಕಾಶ್ಮೀರ ಪಂಡಿತರ ಹತ್ಯೆಗೆ ನಾನು ಕಾರಣವಾದರೆ ಗಲ್ಲಿಗೇರಿಸಿ, ಬದಲಾಯ್ತು ಫಾರುಖ್ ಅಬ್ದುಲ್ಲಾ ವರಸೆ!

"ಗೌರವಾನ್ವಿತ ನ್ಯಾಯಾಲಯವು ಜಾರಿಗೊಳಿಸಿದ ಆದೇಶಗಳು ಸ್ಪಷ್ಟವಾಗಿ ತಪ್ಪಾಗಿದೆ ಮತ್ತು ಕಾನೂನಿನಲ್ಲಿ ತಪ್ಪಾಗಿದೆ, ವಿಳಂಬವು ಸಂತ್ರಸ್ತ ಕುಟುಂಬಗಳಿಗೆ ಕಾರಣವಾಗುವುದಿಲ್ಲ, ಅವರಲ್ಲಿ ಅನೇಕರು ನಿರಂತರವಾಗಿ ನ್ಯಾಯಕ್ಕಾಗಿ ಹೋರಾಡಲು ಲಭ್ಯವಿರುವ ಎಲ್ಲಾ ವೇದಿಕೆಗಳನ್ನು ಬಳಸಲು ಪ್ರಯತ್ನಿಸಿದ್ದಾರೆ. ಹಿಂಸಾಚಾರದ ಬಲಿಪಶುಗಳಾಗಿರುವ ಕೆಲವರು, ಭಯ ಮತ್ತು ಅಪಾಯದ ಕಾರಣದಿಂದ  ಪ್ರಕರಣಗಳನ್ನು ಮುಂದುವರಿಸಿಲ್ಲ" ಎಂದು ಅರ್ಜಿಯಲ್ಲಿ ಹೇಳಲಾಗಿದೆ.

Belgaum Files ಟ್ವೀಟ್ ಮಾಡಿ ಸ್ವಾಭಿಮಾನಿ ಕನ್ನಡಿಗರನ್ನು ಕೆಣಕಿದ ಶಿವಸೇನೆಯ ಸಂಜಯ್ ರಾವತ್

1989 ರಿಂದ 1998 ರ ಅವಧಿಯಲ್ಲಿ 700 ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರ ಹತ್ಯೆಯಾಗಿದೆ ಮತ್ತು 200 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಸಲ್ಲಿಸಲಾಗಿದೆ, ಆದರೆ ಒಂದೇ ಒಂದು ಎಫ್‌ಐಆರ್ ಸಹ ಚಾರ್ಜ್ ಶೀಟ್ ಅಥವಾ ಶಿಕ್ಷೆಯ ಹಂತಕ್ಕೆ ತಲುಪಿಲ್ಲ ಎಂದು ಕ್ಯುರೇಟಿವ್ ಅರ್ಜಿಯಲ್ಲಿ ತಿಳಿಸಲಾಗಿದೆ. ಸಿಖ್ ವಿರೋಧಿ ದಂಗೆಯನ್ನು ಮೂರು ದಶಕದ ಬಳಿಕವೂ ಸುಪ್ರೀಂ ಕೋರ್ಟ್ ವಿಚಾರಣೆ ಮಾಡಿತ್ತು. ಒಟ್ಟಾರೆ ನ್ಯಾಯವನ್ನು ಸಲ್ಲಿಸವುದು ನಮ್ಮ ಕರ್ತವ್ಯ ಎಂದು ಹೇಳಲಾಗಿದೆ.

Follow Us:
Download App:
  • android
  • ios