ರಾಜಧರ್ಮ ಪಾಲಿಸಿ, ಇಂಧನ ಬೆಲೆ ಇಳಿಸಿ ಕೇಂದ್ರಕ್ಕೆ ಸೋನಿಯಾ ಪತ್ರ| 3 ಪುಟಗಳ ಪತ್ರದಲ್ಲಿ ದೇಶದ ಜನರ ಸಂಕಷ್ಟ ಅನಾವರಣ| ಆರ್ಥಿಕತೆ ಕುಸಿತ, ಉದ್ಯೋಗ ನಷ್ಟ, ವೇತನ ಕಡಿತದ ಬಗ್ಗೆ ಉಲ್ಲೇಖ
ನವದೆಹಲಿ(ಫೆ.22): ದೇಶಾದ್ಯಂತ ಜನ ಸಾಮಾನ್ಯರ ಸಂಕಷ್ಟಕ್ಕೆ ಕಾರಣವಾಗಿರುವ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ದರ ಇಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ರಾಜಧರ್ಮ ಪಾಲನೆ ಮಾಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಒತ್ತಾಯಿಸಿದ್ದಾರೆ.
ತನ್ಮೂಲಕ ಆರ್ಥಿಕತೆಯ ಮಹಾಕುಸಿತ, ನಿರುದ್ಯೋಗದಿಂದ ತತ್ತರಿಸಿರುವ ಮಧ್ಯಮವರ್ಗ, ಕೂಲಿ ಕಾರ್ಮಿಕರು, ರೈತರು ಮತ್ತು ಬಡವರ ನೆರವಿಗೆ ನಿಲ್ಲಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಮುಖೇನ ಒತ್ತಾಯಿಸಿದ್ದಾರೆ.
'ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಈ ಕ್ಷಣದಿಂದ ಅಧಿಕಾರ'
ಈ ಸಂಬಂಧ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ 3 ಪುಟಗಳ ಪತ್ರ ಬರೆದಿರುವ ಸೋನಿಯಾ ಅವರು, ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ದರವು ಅನಿಯಂತ್ರಿತವಾಗಿ ಏರಿಕೆಯಾಗುತ್ತಿದೆ. ಆದರೆ ದೇಶದ ಜಿಡಿಪಿ ಮಾತ್ರ ಪಾತಾಳಕ್ಕೆ ಕುಸಿಯುತ್ತಿದೆ ಎಂಬುದು ಮಾತ್ರವೇ ವಾಸ್ತವ. ದರ ಏರಿಕೆಯ ಹೊಡೆತದಿಂದ ದೇಶದ ಜನತೆ ಅತೀವ ಸಂಕಷ್ಟಮತ್ತು ಕಳವಳಕ್ಕೆ ಸಿಲುಕಿದ್ದಾರೆ.
ಒಂದೆಡೆ ಉದ್ಯೋಗಗಳು, ವೇತನ ಕಡಿತ ಮತ್ತು ಕುಟುಂಬದ ಆದಾಯವು ವ್ಯವಸ್ಥಿತವಾಗಿ ಕುಸಿಯುತ್ತಿವೆ. ಮಧ್ಯಮ ವರ್ಗ ಮತ್ತು ಹಿಂದುಳಿದ ವರ್ಗಗಳ ಜೀವನ ನಿರ್ವಹಣೆಯೂ ದುಸ್ತರವಾಗಿದೆ. ಇಂಥ ಸಂದರ್ಭದಲ್ಲಿ ಜನರಿಗೆ ನೆರವಾಗಬೇಕಿದ್ದ ಸರ್ಕಾರ ತನ್ನ ಲಾಭಕ್ಕಾಗಿ ಜನರ ಮೇಲೆ ಮತ್ತಷ್ಟುಹೊರೆ ಹಾಕುತ್ತಿರುವುದು ಮಾತ್ರ ಬೇಸರದ ಸಂಗತಿ ಎಂದು ಉಲ್ಲೇಖಿಸಿದ್ದಾರೆ.
ರಾಷ್ಟ್ರೀಯತೆಯ ಸರ್ಟಿಫಿಕೇಟ್ ಹಂಚುವವರ ಮುಖವಾಡ ಕಳಚಿದೆ: ಸೋನಿಯಾ ಕಿಡಿ!
ದೇಶಾದ್ಯಂತ ಪೆಟ್ರೋಲ್ ದರ 100ರ ಗಡಿ ವ್ಯಾಪ್ತಿಗೆ ತಲುಪಿರುವ ಬೆನ್ನಲ್ಲೇ, ಸೋನಿಯಾ ಅವರ ಈ ಪತ್ರವು ಮಹತ್ವ ಪಡೆದಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 22, 2021, 2:06 PM IST