Asianet Suvarna News Asianet Suvarna News

ಗಂಟೆಗೆ 150 ಕಿ.ಮೀ. ವೇಗ​ದಲ್ಲಿ ‘ಬಿ​ಪೊ​ರ್‌​ಜೊ​ಯ್‌’ ಚಂಡ​ಮಾ​ರು​ತದ ಅಬ್ಬ​ರ: ಸಂಜೆ ಅಪ್ಪ​ಳಿ​ಸ​ಲಿದೆ ಡೆಡ್ಲಿ ಸೈಕ್ಲೋನ್‌

ಗಂಟೆಗೆ ಸುಮಾರು 75 ಕಿ.ಮೀ. ಗಾಳಿ ಬೀಸು​ತ್ತಿ​ರುವ ಕಾರಣ ಬುಧ​ವಾ​ರವೇ ರಾಜ್ಯದ ಸೌರಾಷ್ಟ್ರ ಹಾಗೂ ಕಛ್‌​ನಲ್ಲಿ ವ್ಯಾಪಕ ಮಳೆ ಸುರಿ​ದಿದೆ. ದೇವ​ಭೂಮಿ ದ್ವಾರಕಾ, ಜಾಮ​ನ​ಗರ, ಪೋರ​ಬಂದರ್‌ ಹಾಗೂ ರಾಜ​ಕೋಟ್‌ ಜಿಲ್ಲೆ​ಗಳ 9 ತಾಲೂ​ಕು​ಗಳು ಕನಿಷ್ಠ 5 ಸೆಂ.ಮೀ.​ನಿಂದ ಗರಿಷ್ಠ 12 ಸೆಂ.ಮೀ.​ವ​ರೆಗೂ ಮಳೆ ಸುರಿ​ದಿ​ದೆ.

cyclone biparjoy to make landfall today live updates gujarat ash
Author
First Published Jun 15, 2023, 7:27 AM IST

ಅಹ​ಮ​ದಾ​ಬಾ​ದ್‌ (ಜೂನ್ 15, 2023): ಕಳೆದ ಹಲವು ದಿನ​ಗ​ಳಿಂದ ಭೀತಿ ಸೃಷ್ಟಿ​ಸಿ​ರುವ ‘ಬಿ​ಪೊ​ರ್‌​ಜೊ​ಯ್‌’ ಚಂಡ​ಮಾ​ರುತ ಗುರು​ವಾರ ಗುಜ​ರಾ​ತ್‌​ನ ಕಛ್‌ ಜಿಲ್ಲೆಯ ಜಖಾವು ಬಂದ​ರಿಗೆ ಅಪ್ಪ​ಳಿ​ಸಲಿದೆ. ಈ ಹಿನ್ನೆ​ಲೆ​ಯಲ್ಲಿ ಸಂಭಾವ್ಯ ಅನಾ​ಹು​ತ ನಿಯಂತ್ರಿ​ಸುವ ಉದ್ದೇ​ಶ​ದಿಂದ 50 ಸಾವಿರ ಜನ​ರನ್ನು ಸುರ​ಕ್ಷಿತ ಸ್ಥಳ​ಗ​ಳಿಗೆ ಸ್ಥಳಾಂತ​ರಿ​ಸ​ಲಾ​ಗಿ​ದೆ.

ಇನ್ನು ಗಂಟೆಗೆ ಸುಮಾರು 75 ಕಿ.ಮೀ. ಗಾಳಿ ಬೀಸು​ತ್ತಿ​ರುವ ಕಾರಣ ಬುಧ​ವಾ​ರವೇ ರಾಜ್ಯದ ಸೌರಾಷ್ಟ್ರ ಹಾಗೂ ಕಛ್‌​ನಲ್ಲಿ ವ್ಯಾಪಕ ಮಳೆ ಸುರಿ​ದಿದೆ. ದೇವ​ಭೂಮಿ ದ್ವಾರಕಾ, ಜಾಮ​ನ​ಗರ, ಪೋರ​ಬಂದರ್‌ ಹಾಗೂ ರಾಜ​ಕೋಟ್‌ ಜಿಲ್ಲೆ​ಗಳ 9 ತಾಲೂ​ಕು​ಗಳು ಕನಿಷ್ಠ 5 ಸೆಂ.ಮೀ.​ನಿಂದ ಗರಿಷ್ಠ 12 ಸೆಂ.ಮೀ.​ವ​ರೆಗೂ ಮಳೆ ಸುರಿ​ದಿ​ದೆ.

ಇದನ್ನು ಓದಿ: ನಾಳೆ ಅಪ್ಪಳಿಸಲಿದೆ ಬಿಪೊರ್‌ಜೊಯ್‌ ಚಂಡಮಾರುತ: ಗುಜರಾತ್‌ಗೆ ಗಂಡಾಂತರ; 90 ರೈಲು ಸಂಚಾರ ರದ್ದು

‘ಬುಧ​ವಾರ ಕಛ್‌​ನಿಂದ 290 ಕಿ.ಮೀ. ದೂರ​ದಲ್ಲಿ ಚಂಡ​ಮಾ​ರುತ ಕೇಂದ್ರೀ​ಕೃ​ತ​ವಾ​ಗಿದೆ. ಅದು ವಾಯವ್ಯ ಭಾಗ​ದತ್ತ ಮುನ್ನು​ಗ್ಗು​ತ್ತಿದ್ದು, ಗಂಟೆಗೆ 150 ಕಿ.ಮೀ. ವೇಗದ ಬಿರು​ಗಾ​ಳಿ​ಯೊಂದಿಗೆ ಗುರು​ವಾರ ಸಂಜೆ ಜಖಾವು ಬಂದ​ರಿಗೆ ಅಪ್ಪ​ಳಿ​ಸ​ಲಿದೆ’ ಎಂದು ಹವಾ​ಮಾನ ಇಲಾಖೆ ಹೇಳಿ​ದೆ.

ರಕ್ಷಣಾ ಕಾರ್ಯ ತೀವ್ರ​ಗ​ತಿ:
ಚಂಡ​ಮಾ​ರುತ ಅಬ್ಬ​ರಿ​ಸು​ತ್ತಿ​ರುವ ಕಾರಣ ರಕ್ಷಣಾ ಕಾರ್ಯ ಭರ​ದಿಂದ ಸಾಗಿದೆ. ರಕ್ಷಣಾ ಸಚಿವ ರಾಜ​ನಾಥ್‌ ಸಿಂಗ್‌ ಅವರು, ‘ಎಲ್ಲ ಸೇನಾ​ಪ​ಡೆ​ಗಳು ಸನ್ನದ್ಧ ಸ್ಥಿತಿ​ಯ​ಲ್ಲಿ​ರ​ಬೇ​ಕು. ರಕ್ಷ​ಣೆಗೆ ಧಾವಿ​ಸ​ಬೇ​ಕು’ ಎಂದು ಮೂರೂ ರಕ್ಷಣಾ ಮುಖ್ಯ​ಸ್ಥ​ರಿಗೆ ಸೂಚಿ​ಸಿ​ದ್ದಾ​ರೆ. ಇದರ ಬೆನ್ನನ್ನೇ ಸೇನೆ, ನೌಕಾ​ಪಡೆ ಹಾಗೂ ಬಿಎ​ಸ್‌ಎಫ್‌ ತಂಡ​ಗ​ಳನ್ನು ನಿಯೋ​ಜಿ​ಸ​ಲಾ​ಗಿ​ದೆ.

ಇದನ್ನೂ ಓದಿ: ಗುಜರಾತ್‌ಗೆ ಅಪ್ಪಳಿಸಲಿದೆ ಭೀಕರ ಚಂಡಮಾರುತ; ಹಲವೆಡೆ ಆರೆಂಜ್‌ ಅಲರ್ಟ್‌: ಪ್ರಧಾನಿ ಮೋದಿಯಿಂದ ಉನ್ನತ ಮಟ್ಟದ ಸಭೆ

ಇದೇ ವೇಳೆ, ಗುಜ​ರಾತ್‌ ಸರ್ಕಾ​ರ ಸತತ 3ನೇ ದಿನವೂ ಕರಾ​ವ​ಳಿ​ಯಿಂದ 10 ಕಿ.ಮೀ. ಅಂತ​ರ​ದ​ಲ್ಲಿನ ಅಪಾ​ಯ​ಕಾರಿ ವಲ​ಯ​ಗ​ಳಲ್ಲಿ ರಕ್ಷಣಾ ಕಾರ್ಯ ಮುಂದು​ವ​ರಿ​ಸಿದೆ. ‘ಬುಧ​ವಾ​ರ​ದ​ವ​ರೆಗೆ 50 ಸಾವಿರ ಜನ​ರನ್ನು ಸುರ​ಕ್ಷಿತ ಶಿಬಿ​ರ​ಗ​ಳಿ​ಗೆ ಸ್ಥಳಾಂತ​ರಿ​ಸ​ಲಾ​ಗಿ​ದೆ. ಇನ್ನೂ 5 ಸಾವಿರ ಜನರನ್ನು ಗುರು​ವಾರ ಬೆಳ​ಗ್ಗೆ​ಯೊ​ಳಗೆ ಸ್ಥಳಾಂತ​ರಿ​ಸು​ತ್ತೇ​ವೆ​’ ಎಂದು ಅಧಿ​ಕಾ​ರಿ​ಗಳು ಹೇಳಿ​ದ್ದಾ​ರೆ.

18 ಎನ್‌​ಡಿ​ಆ​ರ್‌​ಎಫ್‌ ತಂಡಗಳು, 12 ಎಸ್‌​ಡಿ​ಆ​ರ್‌​ಎಫ್‌, 115 ರಾಜ್ಯ ರಸ್ತೆ ಹಾಗೂ ನಿರ್ಮಾಣ ಕೇಂದ್ರದ ತಂಡ​ಗಳು, 397 ವಿದ್ಯುತ್‌ ಇಲಾ​ಖೆಯ ತಂಡ​ಗ​ಳನ್ನು ರಕ್ಷಣಾ ಕೆಲಸಕ್ಕೆ ನಿಯೋ​ಜಿ​ಸ​ಲಾ​ಗಿದೆ. ಈಗಾ​ಗಲೇ ಹಲವು ಭಾಗ​ಗ​ಳಲ್ಲಿ ಬಿರು​ಗಾಳಿ ಕಾರಣ ವಿದ್ಯುತ್‌ ಸಂಪರ್ಕ ಕಡಿ​ತ​ಗೊಂಡಿದ್ದು, ಅಲ್ಲಿ ವಿದ್ಯುತ್‌ ಇಲಾಖೆ ತಂಡ​ಗಳು ಮರು ವಿದ್ಯುತ್‌ ಸಂಪ​ರ್ಕಕ್ಕೆ ಶ್ರಮಿ​ಸು​ತ್ತಿವೆ. ಮೊಬೈಲ್‌ ಹಾಗೂ ಸ್ಥಿರ ದೂರ​ವಾಣಿ ಸಂಪರ್ಕ ವ್ಯತ್ಯಯ ಆಗುವ ಸಾಧ್ಯತೆ ಇದೆ. ಹೀಗಾಗಿ ಸ್ಯಾಟ​ಲೈಟ್‌ ಫೋನ್‌​ಗ​ಳನ್ನು ರಕ್ಷಣಾ ತಂಡ​ಗ​ಳಿಗೆ ನೀಡ​ಲಾ​ಗಿ​ದೆ.

ಇದನ್ನೂ ಓದಿ: ಗುಜರಾತ್‌ಗೆ ಅಪ್ಪಳಿಸಲಿದೆ ಅತಿ ಭೀಕರ ಚಂಡಮಾರುತ: ಡೆಡ್ಲಿ ಸೈಕ್ಲೋನಾಗಿ ಪರಿವರ್ತನೆಯಾದ ಬಿಪೊರ್‌ಜೊಯ್‌

ಶಾಲೆ​ಗಳು ಹಾಗೂ ಕೆಲವು ಕಟ್ಟ​ಡ​ಗಳಲ್ಲಿ ಆಶ್ರಯ ಶಿಬಿರ ನಿರ್ಮಿ​ಸ​ಲಾ​ಗಿದೆ. ವೈದ್ಯ​ಕೀಯ ತಂಡ​ಗ​ಳನ್ನು ನಿಯೋ​ಜಿ​ಸ​ಲಾ​ಗಿದ್ದು, ಜನರ ಆರೋ​ಗ್ಯ ಸ್ಥಿತಿ ಮೇಲೆ ನಿಗಾ ವಹಿ​ಸಿ​ವೆ. ಆಸ್ಪ​ತ್ರೆ​ಗ​ಳಲ್ಲೂ ಸಾಕಷ್ಟು ವೈದ್ಯ​ರನ್ನು ನಿಯೋ​ಜಿ​ಸ​ಲಾ​ಗಿದೆ. ಔಷಧ ದಾಸ್ತಾನು ಮಾಡಿ​ಟ್ಟುಕೊ​ಳ್ಳ​ಲಾ​ಗಿ​ದೆ.

ಸಮು​ದ್ರದ ಉಬ್ಬ​ರ:
ಚಂಡ​ಮಾ​ರು​ತದ ಕಾರಣ ಸಮು​ದ್ರ​ ಪ್ರಕ್ಷುಬ್ಧವಾ​ಗಿದೆ. ಸೌರಾ​ಷ್ಟ್ರ ಹಾಗೂ ಕಛ್‌​ನಲ್ಲಿ 2-3 ಮೀ. ಎತ್ತ​ರದ ಅಲೆ​ಗಳು ಬುಧ​ವಾರ ಏಳುತ್ತಿವೆ. ಗುರು​ವಾರ 3-6 ಅಡಿ ಎತ್ತ​ರದ ಅಲೆ​ಗಳು ಏಳ​ಬ​ಹುದು ಎಂದು ಹವಾ​ಮಾನ ಇಲಾಖೆ ಹೇಳಿ​ದೆ.

ಇದನ್ನೂ ಓದಿ: ಮೋಖಾ ಚಂಡಮಾರುತಕ್ಕೆ ಮ್ಯಾನ್ಮಾರ್‌ ತತ್ತರ: 80 ಕ್ಕೂ ಹೆಚ್ಚು ಸಾವು, ನೂರಾರು ಮಂದಿ ನಾಪತ್ತೆ

ರಕ್ಷಣೆಗೆ 33 ಎನ್‌ಡಿಆರ್‌ಎಫ್‌ ತಂಡ
ನವದೆಹಲಿ: ಬಿಪೊರ್‌ಜೊಯ್‌ ಚಂಡಮಾರುತದಿಂದ ಆಗಬಹುದಾದ ಅನಾಹುತ ಎದುರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್‌)ನ 33 ತುಕಡಿಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಪ್ರತಿ ತಂಡವೂ 35 - 40 ಜನರನ್ನು ಒಳಗೊಂಡಿದ್ದು, ಮರ ಕಡಿಯುವ ತಂತ್ರ, ಬೋಟ್‌, ಔಷಧ, ಪರಿಹಾರ ಸಾಮಗ್ರಿಗಳೊಂದಿಗೆ ಸಜ್ಜಾಗಿವೆ ನಿಂತಿವೆ.

ಹಲವು ರಾಜ್ಯಗಳಲ್ಲಿ ಮಳೆ ಸಂಭವ
ಬಿಪೊರ್‌ಜೊಯ್‌ ಚಂಡಮಾರುತದ ಪರಿಣಾಮ ಮುಂದಿನ 4 ದಿನಗಳ ಕಾಲ ರಾಜಸ್ಥಾನ, ಪಂಜಾಬ್‌, ಹರ್ಯಾಣ, ದೆಹಲಿ ಮತ್ತು ಉತ್ತರಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಬೆಂಗಳೂರು ಜನತೆಯನ್ನು ನಡುಗಿಸುತ್ತಿರುವ Cyclone Mandous ಹೆಸರು ಬಂದಿದ್ದೇಗೆ..? ಅರ್ಥ ಏನು ನೋಡಿ..

Follow Us:
Download App:
  • android
  • ios