Asianet Suvarna News Asianet Suvarna News

ಗುಜರಾತ್‌ಗೆ ಅಪ್ಪಳಿಸಲಿದೆ ಭೀಕರ ಚಂಡಮಾರುತ; ಹಲವೆಡೆ ಆರೆಂಜ್‌ ಅಲರ್ಟ್‌: ಪ್ರಧಾನಿ ಮೋದಿಯಿಂದ ಉನ್ನತ ಮಟ್ಟದ ಸಭೆ

ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್ ಕರಾವಳಿಯಲ್ಲಿ ಹವಾಮಾನ ಇಲಾಖೆ ಚಂಡಮಾರುತದ ಎಚ್ಚರಿಕೆ ನೀಡಿದೆ. ಬುಧವಾರ ಹಾಗೂ ಗುರುವಾರ ತೀವ್ರ ಎಚ್ಚರಿಕೆಯಿಂದ ಇರುವಂತೆಯೂ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

cyclone bijarpoy pm narendra modi to hold a meeting to review the situation ash
Author
First Published Jun 12, 2023, 12:12 PM IST

ನವದೆಹಲಿ (ಜೂನ್ 12, 2023): ‘ಬಿ​ಪೊ​ರ್‌ಜೊ​ಯ್‌’ ಚಂಡ​ಮಾ​ರುತ ಗುಜರಾತ್‌ನಲ್ಲಿ ಜೂನ್ 15 ರಂದು ಅಪ್ಪಳಿಸಲಿದೆ ಎಂದು ತಿಳಿದುಬಂದಿದ್ದು, ಅಲ್ಲದೆ, ಈ ಚಂಡಮಾರುತ ಭೀಕರವಾಗಿರಲಿದೆ ಎಂದೂ ಹೇಳಲಾಗ್ತಿದೆ. ಈ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮಧ್ಯಾಹ್ನ 1 ಗಂಟೆಗೆ ಈ ಸಂಬಂಧ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಲಿದ್ದಾರೆ. ಈಗಾಗಲೇ, ಈ ಚಂಡಮಾರುತ ತೀವ್ರಗೊಂಡಿದ್ದು, ಈ ಹಿನ್ನೆಲೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಬೆಳಗ್ಗೆ ಚಂಡಮಾರುತದ ಬಗ್ಗೆ ಎಚ್ಚರಿಕೆ ನಿಡಿದೆ.

ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್ ಕರಾವಳಿಯಲ್ಲಿ ಹವಾಮಾನ ಇಲಾಖೆ ಚಂಡಮಾರುತದ ಎಚ್ಚರಿಕೆ ನೀಡಿದೆ. ಬುಧವಾರ ಹಾಗೂ ಗುರುವಾರ ತೀವ್ರ ಎಚ್ಚರಿಕೆಯಿಂದ ಇರುವಂತೆಯೂ ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಅಲ್ಲದೆ, ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್ ಕರಾವಳಿಯಲ್ಲಿ ಸೈಕ್ಲೋನಿಕ್ ಚಂಡಮಾರುತ ಹಿನ್ನೆಲೆ ‘ಆರೆಂಜ್’ ಎಚ್ಚರಿಕೆಯನ್ನು ನೀಡಿದೆ ಮತ್ತು ಮುಂದಿನ ದಿನಗಳಲ್ಲಿ ಗುಜರಾತ್‌ ಹಾಗೂ ಪಾಕಿಸ್ತಾನದ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಜೂನ್ 15 ರ ಮಧ್ಯಾಹ್ನ ಗುಜರಾತ್‌ಗೆ ಕಾಲಿಡಬಹುದು ಎಂದೂ ಸೋಮವಾರ ಬೆಳಗ್ಗೆ ಟ್ವೀಟ್ ಮಾಡಿದೆ.

ಇದನ್ನು ಓದಿ: ಗುಜರಾತ್‌ಗೆ ಅಪ್ಪಳಿಸಲಿದೆ ಅತಿ ಭೀಕರ ಚಂಡಮಾರುತ: ಡೆಡ್ಲಿ ಸೈಕ್ಲೋನಾಗಿ ಪರಿವರ್ತನೆಯಾದ ಬಿಪೊರ್‌ಜೊಯ್‌

ಅರಬ್ಬಿ ಸಮು​ದ್ರ​ದಲ್ಲಿ ಸೃಷ್ಟಿ​ಯಾ​ಗಿರುವ ‘ಬಿ​ಪೊ​ರ್‌ಜೊ​ಯ್‌’ ಚಂಡ​ಮಾ​ರುತ ಗುಜ​ರಾ​ತ್‌ನ ಕಛ್‌ ಹಗೂ ಪಾಕಿ​ಸ್ತಾ​ನದ ಕರಾಚಿ ನಡುವೆ ಜೂನ್ 15ರ ವೇಳೆಗೆ ಅಪ್ಪ​ಳಿ​ಸುವ ಸಾಧ್ಯತೆ ಇದೆ ಎಂದು ಭಾರ​ತೀ​ಯ ಹವಾ​ಮಾನ ಇಲಾಖೆ ಭಾನು​ವಾರ ಹೇಳಿ​ದೆ. ಇದೇ ವೇಳೆ ಬಿಪೊ​ರ್‌​ಜೊಯ್‌ ಅತಿ ತೀವ್ರ ಸ್ವರೂ​ಪದ ಚಂಡಮಾ​ರು​ತ​ವಾಗಿ ಪರಿ​ವ​ರ್ತನೆ​ಗೊಂಡಿದೆ ಎಂದಿ​ರುವ ಹವಾ​ಮಾನ ಇಲಾಖೆ ಸೌರಾ​ಷ್ಟ್ರ ಹಾಗೂ ಕಛ್‌ ಕರಾ​ವ​ಳಿ​ಯಲ್ಲಿ ಕಟ್ಟೆ​ಚ್ಚರ ಸಾರಿ​ದೆ.

ಬಂಗಾಳಿ ಭಾಷೆ​ಯಲ್ಲಿ ಚಂಡ​ಮಾ​ರು​ತ​ಕ್ಕೆ ‘ಬಿ​ಪೊ​ರ್‌​ಜೊ​ಯ್‌’ (ವಿ​ಪ​ತ್ತು) ಎಂದು ಹೆಸ​ರಿ​ಡ​ಲಾ​ಗಿದೆ. ಭಾನು​ವಾರ ಅದು ಗುಜ​ರಾ​ತ್‌ನ ಪೋರ​ಬಂದ​ರ್‌​ನಿಂದ 480 ಕಿ.ಮೀ. ದೂರದ ನೈಋತ್ಯ ಭಾಗ​ದಲ್ಲಿ ಕೇಂದ್ರೀ​ಕೃ​ತ​ವಾ​ಗಿ​ತ್ತು. ಇನ್ನು ಅದು ಉತ್ತರ ಭಾಗ​ದತ್ತ ಚಲಿ​ಸ​ಲಿದ್ದು, ಜೂನ್ 15ರ ವೇಳೆಗೆ ಸೌರಾಷ್ಟ್ರ ಹಾಗೂ ಕಛ್‌ ಮತ್ತು ಪಾಕಿ​ಸ್ತಾನದ ಕರಾಚಿ ಕರಾ​ವ​ಳಿ​ಗಳ ಮಧ್ಯ ಗಂಟೆಗೆ 125ರಿಂದ 150 ಕಿ.ಮೀ. ವೇಗದ ಬಿರು​ಗಾ​ಳಿ​ಯೊಂದಿ​ಗೆ ಅಪ್ಪ​ಳಿ​ಸ​ಲಿದೆ. ನಿರ್ದಿಷ್ಟ ಸ್ಥಳವು ಅದು ಸಮೀ​ಪಕ್ಕೆ ಬಂದಾಗ ಗೊತ್ತಾ​ಗು​ತ್ತದೆ ಎಂದು ಹವಾ​ಮಾನ ಇಲಾ​ಖೆಯ ಹಿರಿಯ ವಿಜ್ಞಾನಿ ಡಿ.ಎ​ಸ್‌.ಪೈ ಹೇಳಿ​ದ್ದಾ​ರೆ.

ಇದನ್ನೂ ಓದಿ: ಮೋಖಾ ಚಂಡಮಾರುತಕ್ಕೆ ಮ್ಯಾನ್ಮಾರ್‌ ತತ್ತರ: 80 ಕ್ಕೂ ಹೆಚ್ಚು ಸಾವು, ನೂರಾರು ಮಂದಿ ನಾಪತ್ತೆ

ಭಾನು​ವಾ​ರ​ದಿಂದ 3 ದಿನ ಅದು ಗಂಟೆ​ಗೆ 40 ರಿಂದ 70 ಕಿ.ಮೀ. ವೇಗ​ದ ಬಿರು​ಗಾಳಿ ಎಬ್ಬಿ​ಸ​ಲಿ​ದ್ದು, ಗುಜ​ರಾತ್‌ ಕರಾ​ವಳಿ ಪ್ರಕ್ಷು​ಬ್ಧ​ಗೊಂಡಿದೆ. ಮೀನು​ಗಾ​ರ​ರಿಗೆ ಸಮು​ದ್ರ​ಕ್ಕೆ ಇಳಿ​ಯ​ದಂತೆ ಎಚ್ಚ​ರಿ​ಸ​ಲಾ​ಗಿ​ದೆ. ಜೂನ್‌ 6 ರಂದೇ ಚಂಡ​ಮಾ​ರುತ ಸೃಷ್ಟಿ​ಯಾ​ಗಿದ್ದು, ನಿಖ​ರ​ವಾಗಿ ಒಂದೇ ದಿಕ್ಕಿ​ನತ್ತ ಸಾಗದೆ ಈ ಚಂಡ​ಮಾ​ರುತ ಸಾಕಷ್ಟು ಗೊಂದ​ಲ ಮೂಡಿ​ಸಿ​ದೆ.

ಇದನ್ನೂ ಓದಿ: ಬೆಂಗಳೂರು ಜನತೆಯನ್ನು ನಡುಗಿಸುತ್ತಿರುವ Cyclone Mandous ಹೆಸರು ಬಂದಿದ್ದೇಗೆ..? ಅರ್ಥ ಏನು ನೋಡಿ..

Follow Us:
Download App:
  • android
  • ios