ಭಾರತದಲ್ಲಿ ಜನರು ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ, ಅವುಗಳಲ್ಲಿ ಕೆಲವು ಮಾರಕ ಮತ್ತು ಜೀವಕ್ಕೆ ಅಪಾಯಕಾರಿ. ಇವುಗಳಲ್ಲಿ ಕ್ಯಾನ್ಸರ್ ಅಪಾಯಕಾರಿಯಾಗಿದ್ದು, ಜನರಿಗೆ ಮುಖ್ಯವಾಗಿ ಈ ಕಾಯಿಲೆ ಆತಂಕವನ್ನುಂಟು ಮಾಡುತ್ತದೆ. ಇದನ್ನು ನಾವು ಹೇಳುತ್ತಿಲ್ಲ, ಇಪ್ಸೊಸ್ ಹೆಲ್ತ್ ಸರ್ವೀಸಸ್ನ ಇತ್ತೀಚಿನ ವರದಿಯ ಪ್ರಕಾರ, ಭಾರತ ಸೇರಿದಂತೆ 31 ದೇಶಗಳಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ 47% ಭಾರತೀಯರು ಕ್ಯಾನ್ಸರ್ನ್ನು ತಮ್ಮ ಮುಖ್ಯ ಆರೋಗ್ಯ ಸಮಸ್ಯೆ ಎಂದು ಗುರುತಿಸಿದ್ದಾರೆ. ಇದರ ನಂತರ ಕ್ರಮವಾಗಿ ಬೊಜ್ಜು (28%), ಮಾನಸಿಕ ಆರೋಗ್ಯ (26%), ಮಾದಕ ದ್ರವ್ಯ ಸೇವನೆ (16%), ಮತ್ತು ಒತ್ತಡ (14%) ಕಾಯಿಲೆಗಳಾಗಿವೆ.
ಭಾರತದಲ್ಲಿ ಜನರು ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ, ಅವುಗಳಲ್ಲಿ ಕೆಲವು ಮಾರಕ ಮತ್ತು ಜೀವಕ್ಕೆ ಅಪಾಯಕಾರಿ. ಇವುಗಳಲ್ಲಿ ಕ್ಯಾನ್ಸರ್ ಅಪಾಯಕಾರಿಯಾಗಿದ್ದು, ಜನರಿಗೆ ಮುಖ್ಯವಾಗಿ ಈ ಕಾಯಿಲೆ ಆತಂಕವನ್ನುಂಟು ಮಾಡುತ್ತದೆ. ಇದನ್ನು ನಾವು ಹೇಳುತ್ತಿಲ್ಲ, ಇಪ್ಸೊಸ್ ಹೆಲ್ತ್ ಸರ್ವೀಸಸ್ನ ಇತ್ತೀಚಿನ ವರದಿಯ ಪ್ರಕಾರ, ಭಾರತ ಸೇರಿದಂತೆ 31 ದೇಶಗಳಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ 47% ಭಾರತೀಯರು ಕ್ಯಾನ್ಸರ್ನ್ನು ತಮ್ಮ ಮುಖ್ಯ ಆರೋಗ್ಯ ಸಮಸ್ಯೆ ಎಂದು ಗುರುತಿಸಿದ್ದಾರೆ. ಇದರ ನಂತರ ಕ್ರಮವಾಗಿ ಬೊಜ್ಜು (28%), ಮಾನಸಿಕ ಆರೋಗ್ಯ (26%), ಮಾದಕ ದ್ರವ್ಯ ಸೇವನೆ (16%), ಮತ್ತು ಒತ್ತಡ (14%) ಕಾಯಿಲೆಗಳಾಗಿವೆ.
ಕ್ಯಾನ್ಸರ್ ಮತ್ತು ಬೊಜ್ಜಿನ ಬಗ್ಗೆ ಚಿಂತೆ
2023ರ ಸಂಶೋಧನೆಗಳಿಗೆ ಹೋಲಿಸಿದರೆ, ಕ್ಯಾನ್ಸರ್ಗೆ ಸಂಬಂಧಿಸಿದ ಕಾಯಿಲೆ ಶೇ.12ರಷ್ಟು ಕಡಿಮೆಯಾಗಿದೆ. ಆದರೆ, ಬೊಜ್ಜು 10% ಹೆಚ್ಚಳವಾಗಿದ್ದು, ಮಾನಸಿಕ ಆರೋಗ್ಯ (7%) ಮತ್ತು ಮಾದಕ ವ್ಯಸನ (2%) ಕೂಡ ಏರಿಕೆ ಕಂಡಿವೆ. ಈ ಅಂಕಿಅಂಶಗಳು ಜನರಲ್ಲಿ ಬೊಜ್ಜು ಮತ್ತು ಇತರ ಆರೋಗ್ಯ ಸಮಸ್ಯೆಗಳ ಹೆಚ್ಚುತ್ತಿರುವುದು ತೋರಿಸುತ್ತದೆ.
ಜಾಗೃತಿಯ ಅವಶ್ಯಕತೆ
ಇಪ್ಸೊಸ್ ಇಂಡಿಯಾದ ಆರೋಗ್ಯ ಸಂಶೋಧನಾ ಮುಖ್ಯಸ್ಥೆ ಗೌರಿ ಪಾಠಕ್ ಅವರ ಪ್ರಕಾರ, 'ಕ್ಯಾನ್ಸರ್ ಭಾರತದಲ್ಲಿ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಬೊಜ್ಜಿನ ಬಗ್ಗೆ ಚಿಂತೆಯ ಹೆಚ್ಚಳವು ಅಪಾಯಗಳ ಕುರಿತಾದ ಭಯದಿಂದ ಕೂಡಿರಬಹುದು. ಜನರಲ್ಲಿಸ್ಥಿರವಾದ ಜೀವನಶೈಲಿಯ ಬದಲಾವಣೆಗಳನ್ನು ಮಾಡುವ ಮೂಲಕ ಈ ಸಮಸ್ಯೆಗಳನ್ನು ನಿವಾರಿಸಬಹುದು ಎಂಬ ಅರಿವು ಜನರಲ್ಲಿ ಮೂಡಿಸುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.'
ಇದನ್ನೂ ಓದಿ: ಹೆಚ್ಚು ತಿನ್ನೋದ್ರಿಂದ ಬೊಜ್ಜು ಬರೋಲ್ಲ, ನೀವು ಮಾಡುವ ಈ ತಪ್ಪುಗಳೇ ಕಾರಣ!
ಆರೋಗ್ಯ ಸೇವೆ ಸವಾಲುಗಳು
ವರದಿಯ ಪ್ರಕಾರ, 63% ಭಾರತೀಯರು ದೇಶದಲ್ಲಿ ಉತ್ತಮ ಚಿಕಿತ್ಸಾ ಸೌಲಭ್ಯಗಳಿವೆ ಎಂದು ನಂಬುತ್ತಾರೆ. ಆದರೆ, 62% ಜನರು ಉತ್ತಮ ಆರೋಗ್ಯ ಸೇವೆಗಳು ತಮ್ಮ ವ್ಯಾಪ್ತಿಗೆ ಮೀರಿದೆ ಎಂದು ಭಾವಿಸುತ್ತಾರೆ. ಗೌರಿ ಪಾಠಕ್ ಹೇಳುವಂತೆ, ಗುಣಮಟ್ಟದ ಮತ್ತು ಆರಾಮದಾಯಕ ಆರೋಗ್ಯ ಸೇವೆಗಳ ವೆಚ್ಚ ತುಂಬಾ ದುಬಾರಿಯಾಗಿದೆ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಕೆಲವು ಪರಿಹಾರ ನೀಡಿದೆ, ಆದರೆ ಚಿಕಿತ್ಸೆಯ ವೆಚ್ಚವು ಸಾಮಾನ್ಯ ಜನರಿಗೆ ತುಂಬಾ ಕಷ್ಟದ್ದು ಎಂದಿದ್ದಾರೆ.
ಇದನ್ನೂ ಓದಿ: ಜಿಮ್ಗೆ ಹೋಗದೇ ಹೊಟ್ಟೆಯ ಕೊಬ್ಬು ಇಳಿಸಲು ಇಷ್ಟು ಮಾಡಿ ಸಾಕು!
ಒಟ್ಟಿನಲ್ಲಿ ಭಾರತದಲ್ಲಿ ಕ್ಯಾನ್ಸರ್ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ, ಬೊಜ್ಜು ಮತ್ತು ಮಾನಸಿಕ ಆರೋಗ್ಯದಂತಹ ಇತರ ಸಮಸ್ಯೆಗಳೂ ಗಮನಾರ್ಹವಾಗಿವೆ. ಈ ಸಮಸ್ಯೆಗಳನ್ನು ಎದುರಿಸಲು ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಕೈಗೆಟುಕುವ ಆರೋಗ್ಯ ಸೇವೆಗಳನ್ನು ಒದಗಿಸುವುದು ಅತ್ಯಗತ್ಯ. ಸರಕಾರಿ ಯೋಜನೆಗಳು ಮತ್ತು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಈ ಸವಾಲುಗಳನ್ನು ಎದುರಿಸಬಹುದು. ಜನರು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಮತ್ತು ಸಕಾಲದಲ್ಲಿ ಚಿಕಿತ್ಸೆ ಪಡೆದರೆ, ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳ ಪರಿಣಾಮವನ್ನು ಕಡಿಮೆ ಮಾಡಬಹುದು.
ಗಮನಿಸಿ: ಈ ಲೇಖನವು ಇಪ್ಸೊಸ್ ವರದಿಯ ಆಧಾರದದ ಮೇಲೆ ತಿಳಿಸಲಾಗಿದೆ
