MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Women
  • ಶಿಕ್ಷಣಕ್ಕಾಗಿ ಕೋಟಿ ಮೌಲ್ಯದ ಭೂಮಿ ದಾನ ಮಾಡಿದ ಹುಚ್ಚಮ್ಮ ಚೌದ್ರಿಗೆ ‘ಕಲರ್ಸ್ ಕನ್ನಡಿಗ ಪ್ರಶಸ್ತಿ’

ಶಿಕ್ಷಣಕ್ಕಾಗಿ ಕೋಟಿ ಮೌಲ್ಯದ ಭೂಮಿ ದಾನ ಮಾಡಿದ ಹುಚ್ಚಮ್ಮ ಚೌದ್ರಿಗೆ ‘ಕಲರ್ಸ್ ಕನ್ನಡಿಗ ಪ್ರಶಸ್ತಿ’

ಕಲರ್ಸ್ ಕನ್ನಡದ ಅತ್ಯಂತ ದೊಡ್ಡ ಹಬ್ಬವಾದ ಅನುಬಂಧ ಕಾರ್ಯಕ್ರಮದಲ್ಲಿ ಶಿಕ್ಷಣಕ್ಕಾಗಿ ತನ್ನ ಜಾಗವನ್ನೇ ದಾನ ಮಾಡಿದ ಹುಚ್ಚಮ್ಮ ಬಸಪ್ಪ ಚೌದ್ರಿಯವರಿಗೆ ಪ್ರಸಸ್ತಿ ನೀಡಿ ಸನ್ಮಾನಿಸಲಾಗಿದೆ.  

1 Min read
Suvarna News
Published : Sep 24 2023, 05:13 PM IST
Share this Photo Gallery
  • FB
  • TW
  • Linkdin
  • Whatsapp
17

ಕಲರ್ಸ್ ಕನ್ನಡದಲ್ಲಿ (Colors Kannada) ಅನುಬಂಧ ಅವಾರ್ಡ್ಸ್ 2023 ಅದ್ಧೂರಿಯಾಗಿ ನಡೆಯುತ್ತಿದ್ದು, ಈ ಶುಭ ಸಂದರ್ಭದಲ್ಲಿ ಕೊಡು ಗೈ ದಾನಿ 75 ವರ್ಷದ ಹುಚ್ಚಮ್ಮ ಬಸಪ್ಪ ಚೌದ್ರಿ ಅವರಿಗೆ ಕಲರ್ಸ್ ಕನ್ನಡಿಗೆ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. 
 

27

ಹುಚ್ಚಮ್ಮನಿಗೆ (Hucchamma Basappa Chowdry) 75 ವರ್ಷವಾದರೂ ಶಿಕ್ಷಣಕ್ಕಾಗಿ ಅವರು ನೀಡಿದ ಕೊಡುಗೆ, ಅವರ ಪರಿಸ್ಥಿತಿ, ತಾನು ತನ್ನದು ಎಂದು ಹೇಳುವ ಜನರ ಮಧ್ಯೆ ಹುಚ್ಚಮ್ಮ ತನ್ನಲ್ಲಿ ಇದ್ದ ಎಲ್ಲವನ್ನೂ ಶಿಕ್ಷಣಕ್ಕಾಗಿ ದಾನ ನೀಡಿ ಕೊಡುಗೈ ದಾನಿ ಎನಿಸಿಕೊಂಡರು. 
 

37

ಹುಚ್ಚಮ್ಮ ಕೊಪ್ಪಳ ತಾಲೂಕಿನ ಕುಣಿಕೇರಿಯವರು. ಇವರು ತಮ್ಮ ನಿಸ್ವಾರ್ಥ ಸೇವೆಯಿಂದ ಮನೆಮಾತಾಗಿದ್ದಾರೆ. ಇವರು ತನ್ನೂರಿನ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹುಚ್ಚಮ್ಮ ತನ್ನ ಜೀವನಕ್ಕಾಗಿ ಇದ್ದ 2 ಎಕರೆ ಭೂಮಿ ದಾನ ಮಾಡಿದ್ದರು. 
 

47

ಚಿಕ್ಕ ವಯಸ್ಸಿನಲ್ಲೇ ಕುಣಿಕೇರಿಯ ಬಸಪ್ಪ ಚೌದ್ರಿ ಜೊತೆ ಮದುವೆಯಾದ ಹುಚ್ಚಮ್ಮನಿಗೆ ಮಕ್ಕಳಿರಲಿಲ್ಲ. ಅವರ ಬಳಿ ಇದ್ದದ್ದು 2 ಎಕರೆ ಕೃಷಿ ಭೂಮಿ. 30 ವರ್ಷಗಳ ಹಿಂದೆ ಬಸಪ್ಪ ಚೌದ್ರಿ ನಿಧನರಾದರು. ಏಕಾಂಗಿಯಾಗಿದ್ದ ಇವರು ಕೃಷಿ ಮಾಡುತ್ತಾ ಜೀವನ ಸಾಗಿಸಿದರು. 
 

57

ಈ ಸಮಯದಲ್ಲಿ ಕುಣಿಕೇರಿ ಗ್ರಾಮದಲ್ಲಿರುವ ಶಾಲೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಜಾಗದ ಅವಶ್ಯಕತೆಯಿತ್ತು, ಆದರೆ, ಊರಿನಲ್ಲಿ ಜಮೀನು ನೀಡುವವರು ಯಾರು ಇರಲಿಲ್ಲ. ಈ ಸಂದರ್ಭದಲ್ಲಿ, ಹುಚ್ಚಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಒಂದು ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದಳು. 
 

67

ಇದಾಗಿ ಸ್ವಲ್ಪ ಸಮಯದ ನಂತರ ಮೈದಾನ ನಿರ್ಮಾಣಕ್ಕಾಗಿ ಮತ್ತೊಂದು ಎಕರೆ ಭೂಮಿಯನ್ನು ಕೂಡ ದಾನ ಮಾಡಿದ್ದಾಳೆ. ಈ ಜಾಗದಲ್ಲಿ ಇದೀಗ ಭವ್ಯವಾದ ಶಾಲಾ ಕಟ್ಟಡ ನಿರ್ಮಾಣವಾಗಿದೆ. ಈಗ ಹುಚ್ಚಮ್ಮ ಅದೇ ಶಾಲೆಯಲ್ಲಿ ಅಡುಗೆ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. 
 

77

ಕೋಟಿ ಕೋಟಿ ಹಣವಿದ್ದರೂ ಒಂದು ರೂಪಾಯಿ ದಾನ ಮಾಡಲು ಹಿಂದೆ ಮುಂದೆ ನೋಡುವ ಈ ಕಾಲದಲ್ಲಿ ತನ್ನ  ತನ್ನಲ್ಲಿದ್ದದ್ದ ಸುಮಾರು ಒಂದು ಕೋಟಿ ಮೌಲ್ಯದ ಭೂಮಿ ದಾನ ಮಾಡಿ, ಶಾಲೆಯ ಮಕ್ಕಳನ್ನೆ ತನ್ನ ಮಕ್ಕಳೆಂದು ತಿಳಿದು ಜೀವಿಸುವ ಹುಚ್ಚಮ್ಮನಿಗೆ ಒಂದು ದೊಡ್ಡ ಸಲಾಮ್. 
 

About the Author

SN
Suvarna News
ಶಿಕ್ಷಣ
ಕನ್ನಡಿಗ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved