MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Women
  • ಸಮಾಜಕ್ಕೆ ಸೂರ್ತಿಯಾಗಿರುವ ಆಸಿಡ್ ದಾಳಿಯಿಂದ ಬದುಕುಳಿದವರು!

ಸಮಾಜಕ್ಕೆ ಸೂರ್ತಿಯಾಗಿರುವ ಆಸಿಡ್ ದಾಳಿಯಿಂದ ಬದುಕುಳಿದವರು!

ಭಾರತದಲ್ಲಿ ಆಸಿಡ್ ದಾಳಿಗಳು (Acid Attacks) ಸಾಮಾನ್ಯವಾಗಿದೆ ಮತ್ತು ಈ ದಾಳಿಗಳಲ್ಲಿ ಹೆಚ್ಚಿನವು ಮದುವೆಗೆ ನಿರಾಕರಣೆ, ಲೈಂಗಿಕ ಪ್ರಸ್ತಾಪ, ಪ್ರೇಮ ಪ್ರಸ್ತಾಪ ಅಥವಾ ವರದಕ್ಷಿಣೆ ಭಿನ್ನಾಭಿಪ್ರಾಯದಿಂದ ಉಂಟಾಗುತ್ತದೆ. ಕೆಲವರು ಆಸಿಡ್ ದಾಳಿಯಿಂದ ಸಾಯುತ್ತಾರೆ ಮತ್ತು ಹೆಚ್ಚಿನ ಬದುಕುಳಿದವರು ಅವಮಾನದ ಭಯದಿಂದ ಸಾರ್ವಜನಿಕವಾಗಿ ಕಾಣಿಸಿಕೊಳುವುದಿಲ್ಲ. ಆದರೆ ಆಸಿಡ್ ದಾಳಿಯಿಂದ ಬದುಕುಳಿದ (Acid Attack Survivors) ಕೆಲವರು ಮೌನ ಮುರಿದು ಹೊರಬಂದು ಸಮಾಜಕ್ಕೆ ಸ್ಫೂರ್ತಿಯಾಗಿದ್ದಾರೆ.

3 Min read
Suvarna News
Published : Mar 11 2022, 05:34 PM IST
Share this Photo Gallery
  • FB
  • TW
  • Linkdin
  • Whatsapp
16

ರೇಷ್ಮಾ ಖುರೇಷಿ:

ಮೇ 2014 ರಲ್ಲಿ, ರೇಷ್ಮಾ ಖುರೇಷಿ 17 ವರ್ಷದವಳಿದ್ದಾಗ, ಆಕೆಯ ಸಹೋದರಿಯ ಪತಿ ಸೇರಿದಂತೆ ನಾಲ್ವರು ಆಸಿಡ್ ದಾಳಿ ಮಾಡಿದರು. ಈ ಘಟನೆ ನಡೆದಾಗ ಆಕೆ ಪರೀಕ್ಷೆ ಬರೆಯಲು ಅಲಹಾಬಾದ್‌ನಲ್ಲಿದ್ದರು.ಅವರು ತನ್ನನ್ನು ಮತ್ತು ತನ್ನ ಸಹೋದರಿಯನ್ನು ಉಳಿಸುವ ಪ್ರಯತ್ನದಲ್ಲಿ ಪುರುಷರಿಂದ ಆಸಿಡ್ ಅನ್ನು ಕಸಿದುಕೊಂಡರು. ಆದರೆ ಪುರುಷರು ಅವರ ಮೇಲೆ ಆಸಿಡ್ ಸುರಿದರು ಮತ್ತು ಅವರ ಒಂದು ಕಣ್ಣು ಶಾಶ್ವತವಾಗಿ ಹಾನಿಯಾಗಿದೆ. ಆದರೆ ರೇಷ್ಮಾ ಛಲ ಬಿಡಲಿಲ್ಲ ಮತ್ತು #TakeBeautyBack ಅಭಿಯಾನವನ್ನು ಪ್ರಚಾರ ಮಾಡಲು 2016 ರಲ್ಲಿ ನ್ಯೂಯಾರ್ಕ್ ಫ್ಯಾಷನ್ ವೀಕ್‌ನಲ್ಲಿ ರ‍್ಯಾಂಪ್ ವಾಕ್ ಮಾಡಿದರು.


 

26

ಅನ್ಮೋಲ್ ರೋಡ್ರಿಗಸ್:

ಅನ್ಮೋಲ್‌ಗೆ ಕೇವಲ ಎರಡು ತಿಂಗಳ ಮಗುವಾಗಿದ್ದಾಗ ಆಕೆಯ ತಂದೆ ತಾಯಿಯ ಮೇಲೆ ಆಸಿಡ್ ಎರಚಿದರು. ಅವರು ಸುಟ್ಟಗಾಯಗಳಿಂದ ಸಾವನ್ನಪ್ಪಿದರು. ಮಡಿಲಲ್ಲಿದ್ದ ಅನ್ಮೋಲ್ ಕೂಡ ಆ ಸಮಯದಲ್ಲಿ ಮುಖ ಕಳೆದುಕೊಂಡು ಒಂದು ಕಣ್ಣಿನ ದೃಷ್ಟಿಯನ್ನೂ ಕಳೆದುಕೊಂಡಿದ್ದಾನೆ. ಅವರು ಅನಾಥಾಶ್ರಮದಲ್ಲಿ ಬೆಳೆದರು, ಅನ್ಮೋಲ್  ತಾರತಮ್ಯವನ್ನು ಎದುರಿಸಿದ ಕಾರಣ ತನ್ನ ಕೆಲಸವನ್ನು ತ್ಯಜಿಸಬೇಕಾಯಿತು. ನಂತರ ಅವರು ಇತರ ಬದುಕುಳಿದವರಿಗೆ ಸಹಾಯ ಮಾಡಲು ಆಸಿಡ್ ಅಟ್ಯಾಕ್ ಸರ್ವೈವರ್ ಸಾಹಸ್ ಫೌಂಡೇಶನ್ ಎಂಬ ಎನ್‌ಜಿಒವನ್ನು ಪ್ರಾರಂಭಿಸಿದರು. ಈಗ ಆಕೆ ಫ್ಯಾಷನ್ ಐಕಾನ್ ಆಗಿದ್ದಾರೆ. ಅವರು ಹಲವಾರು Instagram ಮತ್ತು YouTube ಚಾನಲ್‌ಗಳಿಗೆ ಮಾಡೆಲಿಂಗ್ ಮಾಡಿದ್ದಾರೆ.


 

36

ದೌಲತ್ ಬಿ ಖಾನ್:

ಮೇಕಪ್ ಕಲಾವಿದೆ ದೌಲತ್ ಬಿ ಖಾನ್ (26) ಸೋಫಾದಲ್ಲಿ ಕುಳಿತಿದ್ದಾಗ ಆಕೆಯ ಸಹೋದರಿ ಮತ್ತು ಮೈದುನ  ಆಕೆಯ ಮೇಲೆ ಆಸಿಡ್ ಎರಚಿದ್ದಾರೆ. ಕೌಟುಂಬಿಕ ಕಲಹದಿಂದ ಆಕೆಯ ಮುಖದ ಮೇಲೆ ಆಸಿಡ್ ಎರಚಿದ್ದಾರೆ.ಈ ಘಟನೆಯ ನಂತರ, ದೌಲತ್ ಇತರ ಬದುಕುಳಿದವರಿಗೆ ಸಹಾಯ ಮಾಡಲು ನಿರ್ಧರಿಸಿದರು ಮತ್ತು NGO ಆಸಿಡ್ ಅಟ್ಯಾಕ್ ಸರ್ವೈವರ್ ಸಾಹಸ್ ಫೌಂಡೇಶನ್ ಅನ್ನು ತೆರೆದರು. ಮುಂಬೈ ಮೂಲದ ಈ ಎನ್‌ಜಿಒ ಆಸಿಡ್ ದಾಳಿಗೆ ಒಳಗಾದ 26 ಕ್ಕೂ ಹೆಚ್ಚು ಸಂತ್ರಸ್ತರಿಗೆ ಸಮಾಲೋಚನೆ, ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ.


 

46

ಡಾಲಿ:

ಡಾಲಿಗೆ 12 ವರ್ಷ ವಯಸ್ಸಾಗಿತ್ತು, ಆಗ ಅವಳ ಎರಡು ಪಟ್ಟು ವಯಸ್ಸಿನ ವ್ಯಕ್ತಿ ಅವಳನ್ನು ಫಾಲೋ ಮಾಡಲು ಪ್ರಾರಂಭಿಸಿದನು ಮತ್ತು ಅವರು ಒಟ್ಟಿಗೆ ಮಲಗಬೇಕು ಎಂದು ಅಸಹ್ಯವಾದ ಕಾಮೆಂಟ್‌ಗಳನ್ನು ಮಾಡಿದ.ಅವಳು ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ, ಆ ವ್ಯಕ್ತಿ ಅವಳ ಮುಖದ ಮೇಲೆ ಆಸಿಡ್ ಎರಚಿದನು. ಈ ಘಟನೆಯು ಆಕೆಯ ಮುಖದ ಹೆಚ್ಚಿನ ಭಾಗ  ಮತ್ತು ಅವಳ ಮೂಗು ಹಾನಿಗೊಳಿಸಿತು ಮತ್ತು ಆಕೆಗೆ ಇನ್ನೂ ಉಸಿರಾಟದ ತೊಂದರೆ ಇದೆ. ದಾಳಿ ನಡೆದು ಒಂದು ವರ್ಷವಾದರೂ ಮನೆಯಿಂದ ಹೊರ ಬಂದಿರಲಿಲ್ಲ. ಸ್ವಲ್ಪ ಸಮಯದ ನಂತರ, ಅವಳು ಆಗ್ರಾದಲ್ಲಿನ ಶೆರೋಸ್ ಕೆಫೆಯ ಬಗ್ಗೆ ತಿಳಿದುಕೊಂಡಳು ಮತ್ತು ಕೆಫೆಯಲ್ಲಿ ಇತರ ಆಸಿಡ್ ದಾಳಿಯಿಂದ ಬದುಕುಳಿದವರೊಂದಿಗೆ ಕೆಲಸ ಮಾಡುತ್ತಾಳೆ. 

56

ಪ್ರಜ್ಞಾ ಸಿಂಗ್:

2006 ರಲ್ಲಿ, ಮದುವೆಯಾದ 12 ದಿನಗಳ ನಂತರ, 23 ವರ್ಷದ ಪ್ರಜ್ಞಾ ಸಿಂಗ್ ತನ್ನ ತವರು ವಾರಣಾಸಿಯಿಂದ ದೆಹಲಿಗೆ ವೃತ್ತಿಜೀವನವನ್ನು ಮುಂದುವರಿಸಲು ರೈಲಿನಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದಳು. ಆಕೆ ನಿದ್ರೆಯಲ್ಲಿದ್ದಾಗ, ಆಕೆಯ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ ವ್ಯಕ್ತಿಯೊಬ್ಬ ಆಕೆಯ ಮುಖದ ಮೇಲೆ ಆಸಿಡ್ ಎರಚಿದ್ದಾನೆ. ಘಟನೆಯಲ್ಲಿ ಅವರು ಒಂದು ಕಣ್ಣನ್ನು ಕಳೆದುಕೊಂಡರು ಮತ್ತು ಸುಮಾರು ಹದಿನೈದು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. 7 ವರ್ಷಗಳ ನಂತರ, ಪ್ರಜ್ಞಾ, ತನ್ನ ಪತಿ ಮತ್ತು ಸ್ನೇಹಿತರ ಬೆಂಬಲದೊಂದಿಗೆ, ಅತಿಜೀವನ್ ಫೌಂಡೇಶನ್ ಅನ್ನು ಪ್ರಾರಂಭಿಸಲು ರೂ 30,000 ಸಂಗ್ರಹಿಸಿದರು. ಇದು ಶಸ್ತ್ರಚಿಕಿತ್ಸೆಯ ನಂತರದ ಕೌನ್ಸೆಲಿಂಗ್ ಮತ್ತು ಕೌಶಲ್ಯ-ಅಭಿವೃದ್ಧಿ ಜೊತೆಗೆ ಆಸಿಡ್ ದಾಳಿ ಮತ್ತು ಸುಟ್ಟಗಾಯಗಳಿಂದ ಬದುಕುಳಿದವರಿಗೆ ಉಚಿತ ಸಹಾಯಗಳನ್ನು ಒದಗಿಸುತ್ತದೆ. 


 

66

ಚಂದ್ರಹಾಸ್ ಮಿಶ್ರಾ:

ಭಾರತದಲ್ಲಿ ಆಸಿಡ್ ದಾಳಿಗೆ ಮಹಿಳೆಯರಷ್ಟೇ ಅಲ್ಲ ಪುರುಷರೂ ಬಲಿಯಾಗುತ್ತಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, ಭಾರತದಲ್ಲಿ ಆಸಿಡ್ ದಾಳಿಗೆ ಒಳಗಾದವರಲ್ಲಿ ಸುಮಾರು 40 ಪ್ರತಿಶತ ಪುರುಷರು. ಹೆಚ್ಚಿನ ಸಂದರ್ಭಗಳಲ್ಲಿ, ಪುರುಷರು ಮನೆಯ ವಿವಾದ ಅಥವಾ ವೃತ್ತಿಪರ ಪೈಪೋಟಿಯ ಸಮಯದಲ್ಲಿ ಆಸಿಡ್ ದಾಳಿಯನ್ನು ಅನುಭವಿಸಿದ್ದಾರೆ. ಮೀರತ್‌ನ ನಿವಾಸಿ ಚಂದ್ರಹಾಸ್ ಮಿಶ್ರಾ ಅವರು 27 ನೇ ವಯಸ್ಸಿನಲ್ಲಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡುವ ಪ್ರಯತ್ನವನ್ನು ತಡೆದಾಗ ದಾಳಿಗೊಳಗಾದರು.  ಜಮೀನುದಾರನ ಮಗ ರಸ್ತೆಯಲ್ಲಿ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಸಮಯದಲ್ಲಿ ತಡೆದ ಚಂದ್ರಹಾಸ್‌ ಮೇಲೆ ಆಸಿಡ್ ತುಂಬಿದ ಬಕೆಟ್ ಅನ್ನು ಎಸೆದನು, ಇದರಿಂದ ಅವನಿಗೆ 40% ಕ್ಕಿಂತ ಹೆಚ್ಚು ಸುಟ್ಟ ಗಾಯಗಳಾಗಿವೆ. ಈ ದಾಳಿಯ ನಂತರ ಚಂದ್ರಹಾಸ್ ಪುರುಷ ಆಸಿಡ್ ದಾಳಿಯಿಂದ ಬದುಕುಳಿದವರಿಗೆ ಕಾರ್ಯಕರ್ತರಾಗಿ. ಅವರು ಎನ್‌ಜಿಒಗಳ ಆಸಿಡ್ ಸರ್ವೈವರ್ಸ್ ಮತ್ತು ವುಮೆನ್ ವೆಲ್‌ಫೇರ್ ಫೌಂಡೇಶನ್‌ನ ಸಂಯೋಜಕರಾಗಿದ್ದಾರೆ.

 

About the Author

SN
Suvarna News
ಮಹಿಳೆಯರು
ಭಾರತ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved