MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Viral News
  • ಚಿಕ್ಕಪುಟ್ಟ ಕಾರಣಕ್ಕೆಲ್ಲಾ ಆತ್ಮ*ಹತ್ಯೆ ಮಾಡಿಕೊಳ್ಳಲ್ಲ, ಹೇಳಲಾಗದ್ದೇ ಇತ್ತು; ನೆಟ್ಟಿಗರು ಯಾಕೆ ಹೀಗಂತಿದಾರೆ ಗೊತ್ತಾ?

ಚಿಕ್ಕಪುಟ್ಟ ಕಾರಣಕ್ಕೆಲ್ಲಾ ಆತ್ಮ*ಹತ್ಯೆ ಮಾಡಿಕೊಳ್ಳಲ್ಲ, ಹೇಳಲಾಗದ್ದೇ ಇತ್ತು; ನೆಟ್ಟಿಗರು ಯಾಕೆ ಹೀಗಂತಿದಾರೆ ಗೊತ್ತಾ?

ಮೊನ್ನೆ, ಜನವರಿ 30ರಂದು ಕೂಡ ಆದಾಯ ಇಲಾಖೆ ಅಧಿಕಾರಿಗಳು ಸಿಜೆ ರಾಯ್ ಅವರ ಕಚೇರಿಯಲ್ಲಿ ಲೆಕ್ಕಪತ್ರ ತಪಾಸಣೆ ನಡೆಸುತ್ತಿದ್ದಾಗ, ಸಿಜೆ ರಾಯ್ ಅವರು ಅತ್ಮ*ಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಅದಕ್ಕೆ ನಿಖರ ಕಾರಣ ಇನ್ನೂವರೆಗೆ ಗೊತ್ತಾಗಿಲ್ಲ. ಆದರೆ ಈ ಬಗ್ಗೆ ಸೋಷಿಯಲ್ ಮೀಡಿಯಾ ಚರ್ಚೆ ಜೋರಾಗಿದೆ.

2 Min read
Author : Shriram Bhat
Published : Feb 01 2026, 02:52 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Instagram

ಪ್ರತಿಷ್ಠಿತ ಉದ್ಯಮಿ, ಕೇರಳ ಹಾಗೂ ಕರ್ನಾಟಕ ಎರಡೂ ಕಡೆಗಳಲ್ಲಿ ರಿಯಲ್ ಎಸ್ಟೇಟ್ ಬಿಸಿನೆಸ್ ಸೇರಿದಂತೆ ಹಲವು ಉದ್ಯಮಗಳನ್ನು ನಡೆಸುತ್ತಿರುವ ಸಿಜೆ ರಾಯ್ (CJ Roy) ಅವರು ಮೊನ್ನೆ (30 ಜನವರಿ 2026) ಸಾವಿಗೆ ಶರಣಾಗಿದ್ದು ಗೊತ್ತೇ ಇದೆ.

27
Image Credit : Instagram

ಕೇರಳ ಮೂಲದ ಉದ್ಯಮಿ ಸಿಜೆ ರಾಯ್ ಅವರ ಕಚೇರಿ ಬೆಂಗಳೂರು ನಗರದ ಹೊಸೂರು ರಸ್ತೆಯ ಲ್ಯಾಂಗ್‌ಫೋರ್ಡ್‌ ರಸ್ತೆಯಲ್ಲಿ ಇದೆ. ಅಲ್ಲಿ ಅನೇಕ ವರ್ಷಗಳಲ್ಲಿ ಆಗಾಗ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದರು. ಕಾರಣ, ಉದ್ಯಮಿ ಸಿಜೆ ರಾಯ್ ಅವರು ಆದಾಯಕ್ಕೆ ಮೀರಿದ ಗಳಿಕೆ ಅನುಭವಿಸುತ್ತಿರುವುದು ಎನ್ನಲಾಗಿದೆ.

Related Articles

Related image1
Yash-CJ Roy: ನಟ ಯಶ್ & ಸಿಜೆ ರಾಯ್ ನಡುವೆ ಮುಂಬೈನಲ್ಲಿ ಬಿಸಿನೆಸ್ ಡೀಲ್? ಸೋಷಿಯಲ್ ಮೀಡಿಯಾ ಸುದ್ದಿ ನಿಜವೇ?
Related image2
ವಿಶ್ವ ಸುಂದರಿ ಮಾತ್ರವಲ್ಲ, ಗಾನ ಕೋಗಿಲೆಯೂ ಹೌದು; ಐಶ್ವರ್ಯಾ ರೈ ಈ ಟ್ಯಾಲೆಂಟ್‌ ಬೆಳಕಿಗೆ ಬಂದಿದ್ದು ಹೇಗೆ?
37
Image Credit : Instagram

ಮೊನ್ನೆ ಜನವರಿ 30ರಂದು ಕೂಡ ಆದಾಯ ಇಲಾಖೆ ಅಧಿಕಾರಿಗಳು ಸಿಜೆ ರಾಯ್ ಅವರ ಕಚೇರಿಯಲ್ಲಿ ಲೆಕ್ಕಪತ್ರ ತಪಾಸಣೆ ನಡೆಸುತ್ತಿದ್ದಾಗ, ಸಿಜೆ ರಾಯ್ ಅವರು ಅತ್ಮ*ಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಅದಕ್ಕೆ ನಿಖರ ಕಾರಣ ಇನ್ನೂವರೆಗೆ ಗೊತ್ತಾಗಿಲ್ಲ. ಆದರೆ, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಬಹುದು.

47
Image Credit : Social Media

ಆದರೆ, ಅವರ ಆಪ್ತರಲ್ಲಿ ಹಲವರು ಹೇಳುವ ಪ್ರಕಾರ, ಸಿಜೆ ರಾಯ್ ಅವರು ಚಿಕ್ಕಪುಟ್ಟ ಕಾರಣಗಳಿಗೆಲ್ಲಾ ಸಾವಿಗೆ ಶರಣಾಗುವಷ್ಟು ವೀಕ್ ಮೈಡೆಂಡ್ ವ್ಯಕ್ತಿ ಅಲ್ಲವೇ ಅಲ್ಲ. ಅಂಥವರು ಸಡನ್ನಾಗಿ ಸಾಯುವ ನಿರ್ಧಾರ ಮಾಡಿದ್ದಾರೆ ಎಂದರೆ, ಅದು ಖಂಡಿತವಾಗಿಯೂ ದೊಡ್ಡ ಕಾರಣವೇ ಆಗಿರುತ್ತದೆ. ಕುಬೇರನಂತೆ ಬದುಕು ಸಾಗಿಸುತ್ತಿದ್ದ ವ್ಯಕ್ತಿ ಸಿಜೆ ರಾಯ್ ಅವರು ಆತ್ಮ*ಹತ್ಯೆ ಮಾಡಿಕೊಳ್ಳುವಂತಹ ಕಾರಣ ಅದೇನು ಆಗಿರಬಹುದು ಎಂದು ಜನಸಾಮಾನ್ಯರು ಚರ್ಚೆ ಮಾಡತೊಡಗಿದ್ದಾರೆ.

57
Image Credit : Instagram

ಪೊಲೀಸ್ ತನಿಖೆ ಮೂಲಕ ಸತ್ಯಾಂಶ ಯಾವತ್ತೋ ಹೊರಗೆ ಬರಬಹುದು. ಆದರೆ, ಖಂಡಿತವಾಗಿಯೂ ಅವರಯ ತಮ್ಮ ಜೀವಕ್ಕೇ ಸಂಚಕಾರ ಆಗುವಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರೆ ಅಲ್ಲೇನೋ ಬಹುದೊಡ್ಡ ಸಮಸ್ಯೆಗೇ ಸಿಲುಕಿದ್ದಾರೆ ಸಿಜೆ ರಾಯ್. ಇಲ್ಲ ಅಂದರೆ, ಅವರ ಕುಟುಂಬಕ್ಕೂ ಗೊತ್ತಿಲ್ಲದೇ ಅವರು ಆ ನಿರ್ಧಾರ ಕೈಗೊಂಡಿದ್ದಾರೆ ಎಂದರೆ ಏನರ್ಥ?

67
Image Credit : Asianet News

ಸಿಜೆ ರಾಯ್ ಕುಟುಂಬದವರಿಗೆ ಅವರು ಎದುರಿಸುತ್ತಿರುವ ಸಮಸ್ಯೆ ಗೊತ್ತಿಲ್ಲದಿರಬಹುದು ಅಥವಾ ಗೊತ್ತಿದ್ದರೂ ಹೊರಜಗತ್ತಿಗೆ ಹೇಳಲು ಅಸಾಧ್ಯ ಎಂಬಂತಿರಬಹುದು. ಆದರೆ, ಅಷ್ಟು ಸುಲಭವಾಗಿ ಪರಿಹಾರ ಸಾಧ್ಯವಿಲ್ಲ ಎಂಬಂತೆ ಆ ಪ್ರಾಬ್ಲಂ ಇರುವ ಕಾರಣಕ್ಕೇ ಸಿಜೆ ರಾಯ್ ಅವರು ಅಂಥಹ ಕಠಿಣ ಎನ್ನಬಹುದಾದ ನಿರ್ಧಾರ ತೆಗೆದುಕೊಂಡಿದ್ದಂತೂ ಸ್ಪಷ್ಟ.

77
Image Credit : Instagram

ಇಲ್ಲ ಅಂದರೆ. ಕೆಲವರು ಹೇಳುತ್ತಿರುವಂತೆ ಅದು 'ಕರ್ಮ ಫಲ' ಇರಬಹುದು. ಅಥವಾ, ಆ ಕ್ಷಣದ ಆಕಸ್ಮಿಕ ನಿರ್ಧಾರವೂ ಆಗಿರಬಹುದು. ಆದರೆ, ಹೋಗಿರುವ ಜೀವ ಮತ್ತೆ ಮರಳಿ ಬರಲಂತೂ ಸಾಧ್ಯವಿಲ್ಲ. ಸಾವಿನ ಜೊತೆಗೆ ಕಾರಣ ಕೂಡ ಮಣ್ಣಾಗಿ ಹೋದರೂ ಅಚ್ಚರಿಯೇನಿಲ್ಲ. ಆದರೆ, ರಿಯಲ್ ಎಸ್ಟೇಟ್ ಮೂಲಕ ಅಷ್ಟೊಂದು ಹಣ ಗಳಿಸಿ, ಎಲ್ಲೆಲ್ಲೋ ಹೂಡಿಕೆ ಮಾಡಿ, ಸಾಕಷ್ಟು ಬಿಸಿನೆಸ್‌ಗಳಿಗೆ ಬಂಡವಾಳ ಹಾಕಿ ನಡೆಸುತ್ತ, ಹಲವು ಸಿನಿಮಾ-ಕಿರುತೆರೆ ಶೋಗಳಿಗೆ ಪ್ರಾಯೋಜಕತ್ವ ಮಾಡುತ್ತ ಬಾಳಿ ಬದುಕಿದವರು ಇದ್ದಕ್ಕಿದ್ದಂತೆ ತಮ್ಮ ಜೀವನಕ್ಕೆ ಅಂತ್ಯ ಹಾಡುತ್ತಾರೆ ಎಂದರೆ ಶಾಕಿಂಗ್ ಸಂಗತಿಯೇ ಸರಿ. ಆದರೆ, ಸದ್ಯಕ್ಕಂತೂ ಸಿಜೆ ರಾಯ್ ಅವರ ಸಾವು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಸುದ್ದಿ
ವೈರಲ್ ಸುದ್ದಿ
ಬೆಂಗಳೂರು ನಗರ
ಕ್ರೈಮ್ ನ್ಯೂಸ್

Latest Videos
Budget 2026 : SIP Calculator
Monthly Investment
₹
Expected Annual Return
%
Investment Duration
Yr
Recommended Stories
Recommended image1
Yash-CJ Roy: ನಟ ಯಶ್ & ಸಿಜೆ ರಾಯ್ ನಡುವೆ ಮುಂಬೈನಲ್ಲಿ ಬಿಸಿನೆಸ್ ಡೀಲ್? ಸೋಷಿಯಲ್ ಮೀಡಿಯಾ ಸುದ್ದಿ ನಿಜವೇ?
Recommended image2
ನಿರ್ದೇಶಕ ರೋಹಿತ್ ಶೆಟ್ಟಿ ಜುಹು ನಿವಾಸದ ಮೇಲೆ ಗುಂಡಿನ ದಾಳಿ: ಈ ದಾಳಿ ಹಿಂದೆ ಯಾರ ಕೈವಾಡವಿದೆ?
Recommended image3
ವಿಡಿಯೋ: ನೀವು ಈ ರೀತಿಯ ಅಪಘಾತವನ್ನು ಇದುವರೆಗೆ ನೋಡಿಲ್ಲ!
Related Stories
Recommended image1
Yash-CJ Roy: ನಟ ಯಶ್ & ಸಿಜೆ ರಾಯ್ ನಡುವೆ ಮುಂಬೈನಲ್ಲಿ ಬಿಸಿನೆಸ್ ಡೀಲ್? ಸೋಷಿಯಲ್ ಮೀಡಿಯಾ ಸುದ್ದಿ ನಿಜವೇ?
Recommended image2
ವಿಶ್ವ ಸುಂದರಿ ಮಾತ್ರವಲ್ಲ, ಗಾನ ಕೋಗಿಲೆಯೂ ಹೌದು; ಐಶ್ವರ್ಯಾ ರೈ ಈ ಟ್ಯಾಲೆಂಟ್‌ ಬೆಳಕಿಗೆ ಬಂದಿದ್ದು ಹೇಗೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved