MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Vaastu
  • ಈ ಕಾಯಿಲೆಗಳಿದ್ದರೆ ವಾಸ್ತು ಶಾಸ್ತ್ರದ ಪ್ರಕಾರ ಈ ಅಭ್ಯಾಸಗಳನ್ನು ಬದಲಾಯಿಸಿ

ಈ ಕಾಯಿಲೆಗಳಿದ್ದರೆ ವಾಸ್ತು ಶಾಸ್ತ್ರದ ಪ್ರಕಾರ ಈ ಅಭ್ಯಾಸಗಳನ್ನು ಬದಲಾಯಿಸಿ

ಆರೋಗ್ಯವೇ ಭಾಗ್ಯ (health is wealth) ಎನ್ನುವ ಗಾದೆ ಮಾತನ್ನು ನೀವು ಕೇಳಿರುತ್ತೀರಿ. ಇದು ಶೇಕಡe ನೂರರಷ್ಟು ಸತ್ಯ.  ಯಾಕೆಂದರೆ ನಾವು ಆರೋಗ್ಯದಿಂದ (health) ಇದ್ದರಷ್ಟೇ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಾಗೋದು. ಈ ಆರೋಗ್ಯ ಸಮಸ್ಯೆಗೂ ವಾಸ್ತು ಶಾಸ್ತ್ರಕ್ಕೂ ಸಂಬಂಧ ಇದೆ ಅನ್ನೋದು ಗೊತ್ತಾ ನಿಮಗೆ. ಹೌದು, `ವಾಸ್ತು ಸರಿಯಾಗಿರದೆ ಇದ್ದರೆ ಹಲವು ರೋಗಗಳು ದೇಹವನ್ನು ಬಾಧಿಸುತ್ತವೆ.  

2 Min read
Suvarna News | Asianet News
Published : Oct 08 2021, 07:19 PM IST
Share this Photo Gallery
  • FB
  • TW
  • Linkdin
  • Whatsapp
17

ರೋಗಿಗಳ ಬಗ್ಗೆ ವಾಸ್ತುಶಾಸ್ತ್ರದ ಈ ವಿಷಯ ತಿಳಿಯಿರಿ
ಕೆಲವೊಮ್ಮೆ ರೋಗಕ್ಕೆ (health problem) ಕಾರಣ ನಮ್ಮ ನಡತೆ. ವಾಸ್ತುಶಾಸ್ತ್ರದಲ್ಲಿ ಇದರ ಬಗ್ಗೆ ಮತ್ತು ಶಾಸ್ತ್ರಗಳ ಮೂಲಕ ತಿಳಿದು ಬರುತ್ತದೆ. ಅಷ್ಟೇ ಅಲ್ಲ, ಯಾವ ಅಭ್ಯಾಸಗಳು ರೋಗಕ್ಕೆ ಕಾರಣವಾಗಬಹುದು ಎಂಬುದನ್ನು ಶಾಸ್ತ್ರಗಳು ತಿಳಿಸುತ್ತವೆ. ಅವುಗಳ ಬಗ್ಗೆ ತಿಳಿಯೋಣ... 

27

ಇವುಗಳನ್ನು ತಪ್ಪಿಸಿ
ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ ಅಥವಾ ವಾಯುವ್ಯ ದಿಕ್ಕಿನಲ್ಲಿ ಮಲಗಿದರೆ (sleeping), ಸೋರುವ ನೀರಿನ ಮೂಲ ಮನೆಯಲ್ಲಿ ಇದ್ದರೆ, ಅದನ್ನು ಸಾಧ್ಯವಾದಷ್ಟು ತಪ್ಪಿಸಿ. ಈ ಪರಿಸ್ಥಿತಿಗಳು ಒಂದೇ ಸಮಯದಲ್ಲಿ ಅನೇಕ ರೋಗಗಳನ್ನು ತರುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ.

37

ಈ ಅಭ್ಯಾಸವು ಭಯಾನಕ ನೋವಿಗೆ ಕಾರಣವಾಗುತ್ತೆ
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ  ಕೊಳೆ ಇದ್ದರೆ. ಅಥವಾ ಈ ದಿಕ್ಕಿನಲ್ಲಿ ನೀವು ಬಳಸದ ಗೃಹೋಪಯೋಗಿ ವಸ್ತುಗಳನ್ನು (waste things) ಇಟ್ಟುಕೊಂಡರೆ, ಅವುಗಳನ್ನು ತಕ್ಷಣವೇ ಸರಿಪಡಿಸಿ. ಪರಿಸ್ಥಿತಿಯನ್ನು ತೀವ್ರ ನೋವಿನಿಂದ ಕೂಡಿದ ಸಮಸ್ಯೆ ಎದುರಿಸಬೇಕಾಗುತ್ತದೆ. 

47

ಈ ಅಭ್ಯಾಸವು ಬಿಪಿಯನ್ನು ಹೆಚ್ಚಿಸಬಹುದು (High blood pressure)
ವಾಸ್ತು ಶಾಸ್ತ್ರದ ಪ್ರಕಾರ ಅಗ್ನಿ ಕೋನದಲ್ಲಿ ಮಲಗುವ ಅಭ್ಯಾಸವಿದ್ದರೆ ತಕ್ಷಣ ಬದಲಾಯಿಸಿ. ಈ ಅಭ್ಯಾಸವು ಬಿಪಿ ಕಾಯಿಲೆಯನ್ನು ಹೆಚ್ಚಿಸಬಹುದು. ಯಾವುದೇ ವ್ಯಕ್ತಿ ಹೀಗೆ ಮಾಡಿದರೆ ಬಿಪಿ ಕಾಯಿಲೆಯಿಂದ ಬಳಲುತ್ತಾ ಇರಬಹುದು.
 

57

ಈ ಅಭ್ಯಾಸವನ್ನು ತ್ವರಿತವಾಗಿ ಬದಲಿಸಿ 
ವಾಸ್ತು ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಮಗುವಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಅವನು ಮನೆಯ ಮಧ್ಯದಲ್ಲಿ ಮಲಗ ಬೇಕು. ಹಾಗೆ ಮಾಡುವವರ ಮಕ್ಕಳ ಸಮಸ್ಯೆಗಳು ಪರಿಹಾರವಾಗುತ್ತದೆ .

67

ದಕ್ಷಿಣ ವಲಯದಲ್ಲಿ ನೆಲಮಾಳಿಗೆ, ನೀರಿನ ಟ್ಯಾಂಕ್ (Water tank), ಮುಖ್ಯ ಬಾಗಿಲು ಕಡಿಮೆ ಎತ್ತರದ ನಿರ್ಮಾಣವಿದ್ದರೆ ಆ ಮನೆಯಲ್ಲಿ ವಾಸಿಸುವ ಹೆಣ್ಣು ಮಕ್ಕಳು ವಿವಿಧ ರೋಗಗಳಿಂದ ಬಳಲುತ್ತಿರಬಹುದು. ಆದುದರಿಂದ ಅವುಗಳನ್ನೆಲ್ಲಾ ಸರಿಯಾದ ಸ್ಥಾನದಲ್ಲಿರುವಂತೆ ನೋಡಿ. 

77

ಮನೆಯ ನೈಋತ್ಯ ವಲಯದಲ್ಲಿ ಸ್ವಲ್ಪ ವಾಸ್ತು ದೋಷ
ದೋಷವಿದ್ದರೆ ಮಾಲೀಕ ಹೃದಯಾಘಾತಕ್ಕೆ (heart attack)  ಒಳಗಾಗಬಹುದು. ಅದೇ ರೀತಿ ಈಶಾನ್ಯ ಮತ್ತು ನೈಋತ್ಯ ವಲಯಗಳಲ್ಲಿ ವಾಸ್ತು ದೋಷವಿದ್ದರೆ ಅದು ಪಾರ್ಶ್ವವಾಯು ದಾಳಿ ಅಥವಾ ಮೆದುಳಿನ ರಕ್ತಸ್ರಾವಕ್ಕೆ (Bleeding) ಕಾರಣವಾಗಬಹುದು. ಮನೆಯ ಮಕ್ಕಳು ಸಹ ಅನಾರೋಗ್ಯಕ್ಕೆ ಒಳಗಾಗಬಹುದು ಮತ್ತು ಗರ್ಭಿಣಿ (Pregnancy) ಮಹಿಳೆಯರು ತಮ್ಮ ಮಗುವನ್ನು ಕಳೆದುಕೊಳ್ಳಬಹುದು.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved